ಉಳಿದಮೇಲೆ………..
ಹಾವೇರಿ: “ಬರ” ಈ ಬಾರಿಯ ಗಣೇಶನ ಹಬ್ಬದ ಮೇಲೆ ತೀವೃ ಪರಿಣಾಮ ಬೀರಿದೆ. ಜನರಲ್ಲಿ ಅಂತ ಹೇಳಿಕೊಳ್ಳವಂತ ಉತ್ಸಾಹ ಕಂಡುಬರಲಿಲ್ಲ. ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಬಾಳೆ ಕಂಬಗಳನ್ನು ಈ ಸಾರಿ ಕೇಳುವವರೆ ಇರಲಿಲ್ಲ. ಕಾರಣ “ಬರ” ಜನರ ಕೈಯಲ್ಲಿ ದುಡ್ಡಿರಲಿಲ್ಲ. ಅದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಜನರು ಈ ಬಾರಿ ಗಣೇಶ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಿದರು.
ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಹೆಸರು, ಅಲಸಂದೆ, ಸೋಯಾಬಿನ್, ಮೆಕ್ಕೆಜೋಳದ ಪೈರುಗಳು ರೈತರ ಕೈ ಬರುತ್ತಿದ್ದವು, ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ರೈತಾಪಿ ಜನರು, ಕೃಷಿಕರು ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ಪ್ರಸಕ್ತ ವರ್ಷದ “ಬರ” ಗಣೇಶನ ಹಬ್ಬದ ಸಡಗರವನ್ನು ಕಿತ್ತುಕೊಂಡಿದೆ. ಹೊಲದಲ್ಲಿ ಪೈರುಗಳು ಒಣಗಿಹೋಗಿದ್ದು, ರೈತರಿಗೆ ಪೈರುಗಳಿಂದ ನಯಾಪೈಸೆಯು ಬಂದಿಲ್ಲ. ಹೀಗಾಗಿ ಮಾರುಕಟ್ಟೆಗೆ ತಂದಿದ್ದ ಹತ್ತಾರು ಟ್ಯಾಕ್ಟರ್ನಷ್ಟು ಬಾಳೆ ಕಂಬಗಳು ಮಾರಾಟವಾಗದೇ ಹಾಗೆ ಉಳಿದವು.
ಬಾಳೆ ಕಂಬಗಳನ್ನು ಮಲೆನಾಡ ಪ್ರದೇಶದಿಂದ ಮಾರಾಟಕ್ಕೆ ತಂದಿದ್ದ ಮಾರಾಟಗಾರು ಇವುಗಳನ್ನು ಮಾರಾಟಕ್ಕಿಟ್ಟ ಸ್ಥಳದಲ್ಲಿಯೇ ಬಿಟ್ಟುಹೋಗಿದ್ದರು. ಮಂಗಳವಾರ ಬೆಳಿಗ್ಗೆ ಹಾವೇರಿನಗರದ ಮೈಲಾರ ಮಹೇವಪ್ಪನವರ ವೃತ್ತದಬಳಿ ರಾಶಿ ರಾಶಿಯಾಗಿದ್ದ ಬಿದ್ದಿದ್ದ ಬಾಳೆಕಂಬಗಳನ್ನು ಹಾವೇರಿ ನಗರಸಭೆಯ ಪೌರಕಾರ್ಮಿರು ನಗರಸಭೆಯ ಕಸಾಗಿಸುವ ವಾಹನಗಳಲ್ಲಿ ಬಾಳೆ ಕಂಬಗಳನ್ನು ಕಸ ವಿಲೇವಾರಿ ಸ್ಥಳಕ್ಕೆ ಸಾಗಿಸಿದರು.
ಉಳಿದಮೇಲೆ………..
Date:
ಉಳಿದಮೇಲೆ………..
ಹಾವೇರಿ: “ಬರ” ಈ ಬಾರಿಯ ಗಣೇಶನ ಹಬ್ಬದ ಮೇಲೆ ತೀವೃ ಪರಿಣಾಮ ಬೀರಿದೆ. ಜನರಲ್ಲಿ ಅಂತ ಹೇಳಿಕೊಳ್ಳವಂತ ಉತ್ಸಾಹ ಕಂಡುಬರಲಿಲ್ಲ. ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಬಾಳೆ ಕಂಬಗಳನ್ನು ಈ ಸಾರಿ ಕೇಳುವವರೆ ಇರಲಿಲ್ಲ. ಕಾರಣ “ಬರ” ಜನರ ಕೈಯಲ್ಲಿ ದುಡ್ಡಿರಲಿಲ್ಲ. ಅದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಜನರು ಈ ಬಾರಿ ಗಣೇಶ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಿದರು.
ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಹೆಸರು, ಅಲಸಂದೆ, ಸೋಯಾಬಿನ್, ಮೆಕ್ಕೆಜೋಳದ ಪೈರುಗಳು ರೈತರ ಕೈ ಬರುತ್ತಿದ್ದವು, ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ರೈತಾಪಿ ಜನರು, ಕೃಷಿಕರು ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ಪ್ರಸಕ್ತ ವರ್ಷದ “ಬರ” ಗಣೇಶನ ಹಬ್ಬದ ಸಡಗರವನ್ನು ಕಿತ್ತುಕೊಂಡಿದೆ. ಹೊಲದಲ್ಲಿ ಪೈರುಗಳು ಒಣಗಿಹೋಗಿದ್ದು, ರೈತರಿಗೆ ಪೈರುಗಳಿಂದ ನಯಾಪೈಸೆಯು ಬಂದಿಲ್ಲ. ಹೀಗಾಗಿ ಮಾರುಕಟ್ಟೆಗೆ ತಂದಿದ್ದ ಹತ್ತಾರು ಟ್ಯಾಕ್ಟರ್ನಷ್ಟು ಬಾಳೆ ಕಂಬಗಳು ಮಾರಾಟವಾಗದೇ ಹಾಗೆ ಉಳಿದವು.
ಬಾಳೆ ಕಂಬಗಳನ್ನು ಮಲೆನಾಡ ಪ್ರದೇಶದಿಂದ ಮಾರಾಟಕ್ಕೆ ತಂದಿದ್ದ ಮಾರಾಟಗಾರು ಇವುಗಳನ್ನು ಮಾರಾಟಕ್ಕಿಟ್ಟ ಸ್ಥಳದಲ್ಲಿಯೇ ಬಿಟ್ಟುಹೋಗಿದ್ದರು. ಮಂಗಳವಾರ ಬೆಳಿಗ್ಗೆ ಹಾವೇರಿನಗರದ ಮೈಲಾರ ಮಹೇವಪ್ಪನವರ ವೃತ್ತದಬಳಿ ರಾಶಿ ರಾಶಿಯಾಗಿದ್ದ ಬಿದ್ದಿದ್ದ ಬಾಳೆಕಂಬಗಳನ್ನು ಹಾವೇರಿ ನಗರಸಭೆಯ ಪೌರಕಾರ್ಮಿರು ನಗರಸಭೆಯ ಕಸಾಗಿಸುವ ವಾಹನಗಳಲ್ಲಿ ಬಾಳೆ ಕಂಬಗಳನ್ನು ಕಸ ವಿಲೇವಾರಿ ಸ್ಥಳಕ್ಕೆ ಸಾಗಿಸಿದರು.