ಎಫ್.ಡಿ ಬಾಂಡ್ ಪೂರೈಸಲು ಲಂಚ, ಹಾವೇರಿ ಸಮಾಜ ಕಲ್ಯಾಣ ಇಲಾಖೆ ಕೇಸ್ ವರ್ಕರ್ ಬಂಧನ
ಹಾವೇರಿ: ಎಫ್.ಡಿ ಬಾಂಡ್ ಪೂರೈಸಲು ಲಂಚ ಸ್ವೀಕಾರಿಸುತ್ತಿದ್ದ ಹಾವೇರಿ ಸಮಾಜ ಕಲ್ಯಾಣ ಇಲಾಖೆ ಕೇಸ್ ವರ್ಕರ್ ಪೀರಸಾಬ್ ದೇವಿಹೊಸೂರನನ್ನುಹಾವೇರಿ
ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಗಳ ತಂಡ ಬುಧವಾರ ದಾಳಿ
ನಡೆಸಿ ಬಂಧಿಸಿದೆ.
ಹಾವೇರಿ ತಾಲ್ಲೂಕಿನ ಹಿರೇಲಿಂಗದಳ್ಳಿಯ
ಮಂಜಪ್ಪ ಚನ್ನಬಸಪ್ಪ ಬಂಕಾಪುರ ಮತ್ತು ರುದ್ರಪ್ಪ ಶಿರಸಂಗಿ ಇವರು ಸಮಾಜ ಕಲ್ಯಾಣ ಇಲಾಖೆಗೆ ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನ ನೀಡುವ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಸದರಿಯವರ ಬ್ಯಾಂಕ್ ಖಾತೆಗೆ ತಲಾ ರೂ 1,50,000/- ಗಳ ಪ್ರೋತ್ಸಾಹ ಧನವನ್ನು ನೇರವಾಗಿ ಸದರಿಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತಾರೆ,.
ಉಳಿದಂತೆ ರೂ 1,50,000/- ಗಳ ಎಫ್.ಡಿ ಬಾಂಡ್ ಪೂರೈಸಲು ಸಮಾಜ ಕಲ್ಯಾಣ ಇಲಾಖೆ ಕೇಸ್ ವರ್ಕರ್ ಪೀರಸಾಬ್ ದೇವಿಹೊಸೂರ ರೂ 15,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಜೂನ್. 05- ರಂದು ರೂ 10,000/- ಗಳ ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತರು
ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ. ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ
ಡಿವೈಎಸ್ಪಿಬಿ.ಪಿ ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕ ಆಂಜನೇಯ ಎನ್.ಎಚ್. ಹಾಗೂ ಸಿಬ್ಬಂದಿ ಎಸ್. ಸಿ. ಮುಗದೂರ, ಬಿ. ಎಮ್. ಕರ್ಜಗಿ, ಎಮ್ .ಕೆ. ಲಕ್ಷ್ಮೀಶ್ವರ, ಆನಂದ ಶಳಕಲ್ಲ, ಎಸ್.ಎನ್. ಕಡಕೋಳ, ಬಿ. ಎಸ್. ಸಂಕಣ್ಣನವರ, ಶೆಟ್ಟರ್ ಅವರು ಕಾರ್ಯಾಚರಣೆಯಲ್ಲಿ ಭಾಗವಾಗಿದ್ದರು.
ಆರೋಪಿತನನ್ನು ಹಾವೇರಿ ಪ್ರವಾಸಿ ಮಂದಿರದಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.