ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ
ಹಾವೇರಿ: ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ರಚಿತವಾಗಿರುವ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿಗೆ ೬ಜನ ಸದಸ್ಯರನ್ನಾಗಿ ನೇಮಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹಾವೇರಿ ತಾಲೂಕಿನ ಬಸವರಾಜ ಹೆಡಿಗೊಂಡ, ಸಂಜಯಗಾಂಧಿ ಸಂಜೀವಣ್ಣನವರ, ಅಜ್ಜಪ್ಪ ಗೋಣೆಮ್ಮನವg, ಹಾನಗಲ್ತಾಲೂಕಿನ ಜಗದೀಶ ನಾಗಪ್ಪ ಹರಿಜನ, ಎನ್.ಎನ್.ಗಾಳೆಮ್ಮನವರ, ಹಿರೇಕೆರೂರು ತಾಲೂಕಿನ ಶಿವರಾಜ ಹರಿಜನ, ರಾಣೆಬೆನ್ನೂರು ತಾಲೂಕಿನ ರಮೇಶ ಹನುಮಂತಪ್ಪ ಕೊರವರ, ಶಿಗ್ಗಾಂವಿ ತಾಲೂಕಿನ ಮಲ್ಲೇಶ ಬಸವಂತಪ್ಪ ದೇವಗಿರಿ ಅವರು ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿಗೆ ನೇಮಕಗೊಂಡಿರುವ ಸದಸ್ಯರಾಗಿದ್ದಾರೆ.