ಏ.೨೧ ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ-೨೦೨೩-೨೪-25ನೇ ಸಾಲಿಗೆ ೩೦ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಕಟ
ಹಾವೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಹಾವೇರಿ ಶಾಖೆ ಸಹಯೋಗದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಸಮಾರಂಭ ಏಪ್ರಿಲ್ ೨೧ ರಂದು ಸಾಯಂಕಾಲ ೪-೩೦ ಗಂಟೆಗೆ ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಜರುಗಲಿದೆ. ೨೦೨೩ ಹಾಗೂ ೨೦೨೪ ಮತ್ತು ೨೫ ನೇಸಾಲಿನ ಎರಡು ವರ್ಷಗಳ ೩೦ ನೌಕರರನ್ನು ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
೨೦೨೩ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದವರ ವಿವರ: ಹಾವೇರಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ರಾಣೆಬೆನ್ನೂರು ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಡಾ. ನಾಗರಾಜ್ ಎಲ್, ಹಾನಗಲ್ ತಾಲೂಕ ಪಂಚಾಯತಿ ಸಿಇಓ ಪರಶುರಾಮ್ ಪೂಜಾರ, ಜಿಲ್ಲಾಡಳಿತ ಭವನದ ಭೂ ದಾಖಲೆಗಳ ಉಪ ನಿರ್ದೇಶಕ ರೂಪಕುಮಾರ, ಹಾನಗಲ್ ಗ್ರೇಡ್ ೨ ತಹಶೀಲ್ದಾರ್ ರವಿ ಕುಮಾರ್, ಜಿಲ್ಲಾಧಿಕಾರಿಗಳ ಕಚೇರಿಯ ಸಿರಸ್ತೇದಾರ ಪ್ರಕಾಶ್ ಎಸ್.ಎಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶಾಂತವ್ವ ರಾಮಪ್ಪ ತಿಮ್ಮಜ್ಜಿ, ಜಿಲ್ಲಾಧಿಕಾರಿಗಳ ಕಚೇರಿಯ ವಾಹನ ಚಾಲಕ ಪರಮೇಶಿ ಲಮಾಣಿ, ಶಿಗ್ಗಾಂವ್ ತಾಲೂಕಿನ ಅಂದಲಗಿ ಗ್ರಾಮ ಪಂಚಾಯಿತಿ ಪಿ ಡಿ ಓ ರಾಜು ಹರಿಜನ್, ಜಿಲ್ಲಾ ಆಸ್ಪತ್ರೆಯ ಹಿರಿಯ ಫಾರ್ಮಸಿ ವಿರೂಪಾಕ್ಷ ಲಬಾಣಿ, ಜಿಲ್ಲಾಡಳಿತ ಭವನದ ಸಹಕಾರ ಇಲಾಖೆಯ ಡಿ ವೃಂದದ ನೌಕರ ಸಂಗಪ್ಪ ಅರಳಿ ಅವರುಗಳನ್ನು ೨೦೨೩ ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2023ನೇ ಸಾಲಿನ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿಏಶಕರ ಕಚೇರಿಯ ಪರಿವೀಕ್ಷಣಾಧಿಕಾರಿ ಮೋಹನ ಚೂರಿ ಅವರ ಹೆಸರನ್ನು ಶಿಪಾರಸು ಮಾಡಲಾಗಿದೆ.
೨೦೨೪ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದವರ ವಿವರ: ಹಾನಗಲ್ ತಹಶೀಲ್ದಾರ್ ರೇಣುಕಮ್ಮ, ಜಿ.ಪಂ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ವಿ.ಕೆ, ಯುಟಿಪಿ ಎಇಇ ರಾಮಕೃಷ್ಣ ಕೆ, ಎಸ್.ಪಿ ಕಚೇರಿಯ ಅಧಿಕ್ಷಕಪರಮೇಶ್ವರ್ ಬಾಳಿಕಾಯಿ, ಡಿ ಎಚ್ ಓ ಕಚೇರಿ ಅಧಿಕ್ಷಕ ಶಶಿಧರ್ ಎ.ಜಿ, ಜಿಲ್ಲಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಜಿ.ಎಸ್. ಪಾಟೀಲ್, ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶ್ರೀಪಾದ್ ಬ್ಯಾಳಿಯವರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹೊನ್ನಮ್ಮ ಬಸವ ನಾಯಕ್, ಡಿಸಿ ಕಚೇರಿಯ ಡಿ ದರ್ಜೆ ನೌಕರ ಮುರುಗೇಶ್ ಜವಳಿ, ಸಮಾಜ ಕಲ್ಯಾಣ ಇಲಾಖೆಯ ಡಿ ದರ್ಜೆ ನೌಕರ ಬಸಪ್ಪ ಸುಣಗಾರ ೨೦೨೪ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
೨೦೨೫ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದವರ ವಿವರಇಂತಿದ್ದು, ಜಿಲ್ಲಾ ಪಂಚಾಯತ್ ಹಾವೇರಿಯ ಸಿಏಓ ವಸಂತಕುಮಾರ್ ಎ, ಹಾನಗಲ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸರಿತಾ ಎಂ, ಹಿರೇಕೆರೂರು ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ನಾಗರಾಜಪ್ಪ ಹಡಗಲಿ, ಬ್ಯಾಡಗಿ ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಪ್ಪಗೋಳ್, ಹಾವೇರಿ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಎಲ್. ಹಿರೇಬಿದರಿ, ಹಾವೇರಿ ಜಿಲ್ಲಾ ಪಂಚಾಯತ್ ಅಧಿಕ್ಷಕ ಬಾಪುಗೌಡ ಪಾಟೀಲ್, ರಟ್ಟಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವಾಹನ ಚಾಲಕ ದೀಪಕ್ ಎಸ್.ಕೆ, ಜಿಲ್ಲಾ ಸತ್ರ ನ್ಯಾಯಾಲಯದ ವಾಹನ ಚಾಲಕ ರಾಜು ಹಾವಣಗಿ, ಡಿಸಿ ಕಚೇರಿಯ ಡಿ ದರ್ಜೆ ನೌಕರ ಪರಮೇಶ್ ಗಚ್ಚಿನ್ ಅವರನ್ನು ಆಯ್ಕೆಮಾಡಲಾಗಿ.
ರಾಜ್ಯ ಸರ್ವೋತ್ತಮ ಪ್ರಶಸ್ತಿಗೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಅವರ ಹೆಸರನ್ನು ಶಿಪಾರಸು ಮಾಡಲಾಗಿದೆ. ಜಿಲ್ಲಾಜಿಲ್ಲಾ ಗುರುಭವನದಲ್ಲಿ ನಡೆಯುವ ಸಮಾರಂಭವನ್ನು ಕೇಂದ್ರ ಗ್ರಾಹಕರ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ, ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯ ಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ, ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.ಜಿಲ್ಲೆಯನ್ನು ಪ್ರತಿನಿಧಿಸುವ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲೆಯ ಶಾಸಕರು,ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.