ಏ.13ರಂದು ದಿವ್ಯಾ ನಾಯ್ಕರ ಭರತನಾಟ್ಯ “ರಂಗ ಪ್ರವೇಶ” ಕಾರ್ಯಕ್ರಮ
ಹಾವೇರಿ:ವಿದುಷಿ ದಿವ್ಯಾ ನಾಯ್ಕ ಇವರ ಭರತನಾಟ್ಯ “ರಂಗ ಪ್ರವೇಶ ಕಾರ್ಯಕ್ರಮವನ್ನು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಶಿರಸಿ, ಶಾಖೆ ಹಾವೇರಿ ವತಿಯಿಂದ ಏ.೧೩ರಂದು ಮಧ್ಯಾಹ್ನ 4:30 ಘಂಟೆಗೆ ಗೆಳೆಯರ ಬಳಗ ಪ್ರಾಥಮಿಕ ಶಾಲೆ ಕಲಾಭವನ,
ವನ್ನು ಏರ್ಪಡಿಸಲಾಗಿದೆ ಎಂದು ಪ್ರದೀಪ್ ಭಟ್ಟ ತಿಳಿಸಿದರು.
ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದುಷಿ ದಿವ್ಯಾ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ವರ್ಣ, ದೇವರನಾಮ, ತಿಲ್ಲಾನ ಹಾಗೂ ವಿಶೇಷ ಏಕವ್ಯಕ್ತಿ ರೂಪಕ “ಗಂಗಾ” ವನ್ನು ಪ್ರದರ್ಶಿಸಲಿದ್ದಾಳೆ. ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಡಾ.ಎನ್.ಆರ್ ಬಿರಸಾಲ, ನಿವೃತ್ತ ಪ್ರಾಧ್ಯಾಪಕರು, ಹನುಮಂತಗೌಡ ಗೊಲ್ಲರ, ಸಾಹಿತಿಗಳು, ವಿಜಯ್ ಹೂಗಾರ, ಮುಖ್ಯ ವರದಿಗಾರರು, ವಿಜಯ ಕರ್ನಾಟಕ, ಹುಬ್ಬಳ್ಳಿ, ಡಾ. ವೆಂಕನಗೌಡ ಆರ್. ಪಾಟೀಲ, ಮುಖ್ಯಸ್ಥರು, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ, ಕರ್ನಾಟಕ ಜನಪದ ವಿಶ್ವವಿದ್ಯಾಲಯ, ಗೊಟಗೋಡಿ ಆಗಮಿಸಲಿದ್ದಾರೆ. ಗುರು ಡಾ. ಸಹನಾ ಭಟ್ಟ, ಹುಬ್ಬಳ್ಳಿ ಇವರ ನಿರ್ದೇಶನದಲ್ಲಿ ಸಂಪೂರ್ಣ ಕಾರ್ಯಕ್ರಮ ಮೂಡಿಬರಲಿದೆ.
ಹಿಮ್ಮೇಳದಲ್ಲಿ ಬಾಲಸುಬ್ರಹ್ಮಣ್ಯ ಶರ್ಮ, ಡಾ. ಸಹನಾ ಭಟ್ಟ, ಪಂಚಮ್ ಉಪಾಧ್ಯಾಯ, ಜಯರಾಮ ಅವರು ಸಾಥ್ ನೀಡಲಿದ್ದಾರೆ. ಶ್ರೀ ಸತೀಶ ಮುರೂರು ಕರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ವಿದುಷಿ ದಿವ್ಯಾ ಹಲವಾರು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾಳೆ. ಗುರು ಸೀಮಾ ಭಾಗ್ವತ್, ಕೆ.ಜಿ. ಕುಲಕರ್ಣಿ, ವಿನುತಾ ಹೆಗಡೆ ಅವರಲ್ಲಿ ನೃತ್ಯದ ಪ್ರಥಮ ಹಂತಗಳನ್ನು ಪೂರೈಸಿ ಇದೀಗ ಡಾ. ಸಹನಾ ಭಟ್ಟ ಅವರಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ. ವಿದ್ವತ ಪರೀಕ್ಷೆಯನ್ನು ಅತ್ಯುತ್ತಮ ಅಂಕಗಳೊಂದಿಗೆ ಪೂರೈಸಿರುತ್ತಾಳೆ. ನೃತ್ಯವನ್ನು ಆರಾಧಿಸುವ ವಿದುಷಿ. ದಿವ್ಯಾ ಶಿರಸಿಯ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಹಾವೇರಿಯಲ್ಲಿ ಸೇವೆ ಸಲ್ಲಿಸಿರುವ ಹನುಮಂತ ನಾಯ್ಕ ಮತ್ತು ಲಕ್ಷ್ಮೀ ನಾಯ್ಕ ಇವರ ಸುಪುತ್ರಿಯಾಗಿದ್ದಾಳೆ.