ಒಂದೇ ಜಾತಿಯವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ- ಡಿಎಸ್ಎಸ್ ರಾಜ್ಯ ಸದಸ್ಯ ಉಡಚಪ್ಪ ಮಾಳಗಿ ಖಂಡನೆ
ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಿಎಂ ಆದಿಯಾಗಿ ಸಚಿವರು ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕೊಡ ಮಾಡಲ್ಪಡುವ ಅಂಬೇಡ್ಕರ್ ಪ್ರಶಸ್ತಿ ಶೇ.೯೦ ಒಂದೇ ಜಾತಿಯ ನಾಯಕರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಇದು ಖಂಡನೀಯ, ತಾರತಮ್ಯವನ್ನು ಎಸಗಿರುವವರ ವಿರುದ್ಧ ತನಿಖೆಯಾಗಬೇಕು ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಆಗ್ರಹಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ದಲಿತರ ಪರವಾದ ಹೋರಾಟಗಾರರಿಗೆ ನ್ಯಾಯ ಕೊಡದೇ ತಮ್ಮ ಪಕ್ಷದ ಕಾರ್ಯಕರ್ತರನ್ನ ಮತ್ತು ಮುಖಂಡರನ್ನು ಗುರುತಿಸಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಪ್ರಾಮಾಣಿಕ ದಲಿತ ಪರ ಹೋರಾಟಗಾರರಿಗೆ ನೋವುನ್ನುಂಟು ಮಾಡಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ರಾಜೀನಾಮೆ ನೀಡಬೇಕು.
ಡಾ. ಅಂಬೇಡ್ಕರ್ ಪ್ರಶಸ್ತಿ ಅಷ್ಟೇ ಅಲ್ಲದೇ ಡಾ. ಬಾಬು ಜಗಜೀವರಾಮ್ ಪ್ರಶಸ್ತಿ ಕೂಡಾ ಇದೇ ವಿಧಾನ ಅನುಸರಿಸಲಾಗಿದೆ. ಎರಡು ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಎಲ್ಲ ಜಿಲ್ಲೆಯವರಿಗೂ ಹಾಗೂ ಎಲ್ಲ ಜಾತಿಯ ನಾಯಕರಿಗೆ ಆಧ್ಯತೆ ನೀಡದೇ ಅನ್ಯಾಯ ಮಾಡಿದ್ದಾರೆ. ದಲಿತ ಸಚಿವರಿಂದ ದಲಿತರಿಗೆ ಅನ್ಯಾಯವಾಗಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪಕ್ಷಪಾತ, ಜಾತೀಯತೆ ಮಾಡಿರುವವರ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಡಿಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿಜಾತೀಯತೆಲ
ಒಂದೇ ಜಾತಿಯವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ- ಡಿಎಸ್ಎಸ್ ರಾಜ್ಯ ಸದಸ್ಯ ಉಡಚಪ್ಪ ಮಾಳಗಿ ಖಂಡನೆ
Date:
ಒಂದೇ ಜಾತಿಯವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ- ಡಿಎಸ್ಎಸ್ ರಾಜ್ಯ ಸದಸ್ಯ ಉಡಚಪ್ಪ ಮಾಳಗಿ ಖಂಡನೆ
ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಿಎಂ ಆದಿಯಾಗಿ ಸಚಿವರು ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕೊಡ ಮಾಡಲ್ಪಡುವ ಅಂಬೇಡ್ಕರ್ ಪ್ರಶಸ್ತಿ ಶೇ.೯೦ ಒಂದೇ ಜಾತಿಯ ನಾಯಕರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಇದು ಖಂಡನೀಯ, ತಾರತಮ್ಯವನ್ನು ಎಸಗಿರುವವರ ವಿರುದ್ಧ ತನಿಖೆಯಾಗಬೇಕು ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಆಗ್ರಹಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ದಲಿತರ ಪರವಾದ ಹೋರಾಟಗಾರರಿಗೆ ನ್ಯಾಯ ಕೊಡದೇ ತಮ್ಮ ಪಕ್ಷದ ಕಾರ್ಯಕರ್ತರನ್ನ ಮತ್ತು ಮುಖಂಡರನ್ನು ಗುರುತಿಸಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಪ್ರಾಮಾಣಿಕ ದಲಿತ ಪರ ಹೋರಾಟಗಾರರಿಗೆ ನೋವುನ್ನುಂಟು ಮಾಡಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ರಾಜೀನಾಮೆ ನೀಡಬೇಕು.
ಡಾ. ಅಂಬೇಡ್ಕರ್ ಪ್ರಶಸ್ತಿ ಅಷ್ಟೇ ಅಲ್ಲದೇ ಡಾ. ಬಾಬು ಜಗಜೀವರಾಮ್ ಪ್ರಶಸ್ತಿ ಕೂಡಾ ಇದೇ ವಿಧಾನ ಅನುಸರಿಸಲಾಗಿದೆ. ಎರಡು ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಎಲ್ಲ ಜಿಲ್ಲೆಯವರಿಗೂ ಹಾಗೂ ಎಲ್ಲ ಜಾತಿಯ ನಾಯಕರಿಗೆ ಆಧ್ಯತೆ ನೀಡದೇ ಅನ್ಯಾಯ ಮಾಡಿದ್ದಾರೆ. ದಲಿತ ಸಚಿವರಿಂದ ದಲಿತರಿಗೆ ಅನ್ಯಾಯವಾಗಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪಕ್ಷಪಾತ, ಜಾತೀಯತೆ ಮಾಡಿರುವವರ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಡಿಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿಜಾತೀಯತೆಲ