ಒಳಮೀಸಲಾತಿ ನಿರ್ಣಯ ಕ್ರಾಂತಿಕಾರಿ ನಿರ್ಧಾರ: ಪರಮೇಶ್ವರಪ್ಪ ಮೇಗಳಮನಿ
ಹಾವೇರಿ: ಕಳೆದ ಮೂರು ದಶಕಗಳಿಂದ ಅಖಂಡ ಮಾದಿಗ ಸಮಾಜವು ಒಳಮೀಸಲಾತಿ ಜಾರಿಗೆ ಒಕ್ಕೊರಲಿನಿಂದ ಹೋರಾಟ ನಡೆಸುತ್ತಾ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಂಡಿದೆ. ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಮುಖಂಡ ಪರಮೇಶ್ವರಪ್ಪ ಮೇಗಳಮನಿ ಬಣ್ಣಿಸಿದ್ದಾರೆ.
ಈ ಬಗ್ಗೆ ಪತ್ರಿಕಾಪ್ರಕಟಣ ನೀಡಿರುವ ಅವರು ಒಳಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ, ಸಚಿವರು,ಶಾಸಕರು, ಸಂಸದರು, ಹಾಲಿ ಮಾಜಿ ಶಾಸಸಕರ ಮನೆಯ ಮುಂದೆ , ಡಿಸಿ ಕಚೇರಿ, ತಹಶೀಲ್ದಾರ ಕಚರಿಗಳಿಗೆ ಮುತ್ತಿಗೆ, ಹೆದ್ದಾರಿ ಬಂದ್ ಹೀಗ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಸಮುದಾಯಗಳ ಆಶೋತ್ತರ ಈಡೇರಿಸಲು ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡುವ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡಿದೆ. ಸಮಸ್ತ ಮಾದಿಗ ಸಮಾಜದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಆದಿಜಾಂಬವ ಸಮುದಾಯಕ್ಕೆ ಶೇ ೬ರಷ್ಟು ಮೀಸಲಾತಿ, ಆದಿಕರ್ನಾಟಕ ಸಮುದಾಯಕ್ಕೆ ಶೇ ೫.೫ರಷ್ಟು ಮೀಸಲಾತಿ, ಗುಂಪು ೩ ಬಂಜಾರ, ಬೋವಿ, ಕೊರಚರಿಗೆ ಶೇ ೪.೫ರಷ್ಟು ಮೀಸಲಾತಿ, ಗುಂಪು ೪ರಲ್ಲಿರುವ ಮತ್ತಿತರರಿಗೆ ಶೇ.೧ರಷ್ಟು ಮೀಸಲಾತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಆದಿಜಾಂಬವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹವಾಗಿದ್ದು, ಒಳಮೀಸಲಾತಿ ಜಾರಿ ಮಾಡಿ ಸಾಮಾಜಿಕ ನ್ಯಾಯ ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗ ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ ಜೀ, ನಾರಾಯಣಸ್ವಾಮಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಗುರುಗಳಾದ ಬಸವಮೂರ್ತಿ ಮಾದಾರಚನ್ನಯ್ಯಸ್ವಾಮಿಜಿ, ಸಚಿವರಾದ ಗೋವಿಂದ ಕಾರಜೋಳ,ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಹಾಗೂ ಸಮುದಾಯದ ಮುಖಂಡರಿಗಳಿಗೆ ಪರಮೇಶ್ವರಪ್ಪ ಮೇಗಳಮನಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಒಳಮೀಸಲಾತಿ ನಿರ್ಣಯ ಕ್ರಾಂತಿಕಾರಿ ನಿರ್ಧಾರ: ಪರಮೇಶ್ವರಪ್ಪ ಮೇಗಳಮನಿ
Date:
ಒಳಮೀಸಲಾತಿ ನಿರ್ಣಯ ಕ್ರಾಂತಿಕಾರಿ ನಿರ್ಧಾರ: ಪರಮೇಶ್ವರಪ್ಪ ಮೇಗಳಮನಿ
ಹಾವೇರಿ: ಕಳೆದ ಮೂರು ದಶಕಗಳಿಂದ ಅಖಂಡ ಮಾದಿಗ ಸಮಾಜವು ಒಳಮೀಸಲಾತಿ ಜಾರಿಗೆ ಒಕ್ಕೊರಲಿನಿಂದ ಹೋರಾಟ ನಡೆಸುತ್ತಾ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಂಡಿದೆ. ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಮುಖಂಡ ಪರಮೇಶ್ವರಪ್ಪ ಮೇಗಳಮನಿ ಬಣ್ಣಿಸಿದ್ದಾರೆ.
ಈ ಬಗ್ಗೆ ಪತ್ರಿಕಾಪ್ರಕಟಣ ನೀಡಿರುವ ಅವರು ಒಳಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ, ಸಚಿವರು,ಶಾಸಕರು, ಸಂಸದರು, ಹಾಲಿ ಮಾಜಿ ಶಾಸಸಕರ ಮನೆಯ ಮುಂದೆ , ಡಿಸಿ ಕಚೇರಿ, ತಹಶೀಲ್ದಾರ ಕಚರಿಗಳಿಗೆ ಮುತ್ತಿಗೆ, ಹೆದ್ದಾರಿ ಬಂದ್ ಹೀಗ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಸಮುದಾಯಗಳ ಆಶೋತ್ತರ ಈಡೇರಿಸಲು ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡುವ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡಿದೆ. ಸಮಸ್ತ ಮಾದಿಗ ಸಮಾಜದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಆದಿಜಾಂಬವ ಸಮುದಾಯಕ್ಕೆ ಶೇ ೬ರಷ್ಟು ಮೀಸಲಾತಿ, ಆದಿಕರ್ನಾಟಕ ಸಮುದಾಯಕ್ಕೆ ಶೇ ೫.೫ರಷ್ಟು ಮೀಸಲಾತಿ, ಗುಂಪು ೩ ಬಂಜಾರ, ಬೋವಿ, ಕೊರಚರಿಗೆ ಶೇ ೪.೫ರಷ್ಟು ಮೀಸಲಾತಿ, ಗುಂಪು ೪ರಲ್ಲಿರುವ ಮತ್ತಿತರರಿಗೆ ಶೇ.೧ರಷ್ಟು ಮೀಸಲಾತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಆದಿಜಾಂಬವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹವಾಗಿದ್ದು, ಒಳಮೀಸಲಾತಿ ಜಾರಿ ಮಾಡಿ ಸಾಮಾಜಿಕ ನ್ಯಾಯ ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗ ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ ಜೀ, ನಾರಾಯಣಸ್ವಾಮಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಗುರುಗಳಾದ ಬಸವಮೂರ್ತಿ ಮಾದಾರಚನ್ನಯ್ಯಸ್ವಾಮಿಜಿ, ಸಚಿವರಾದ ಗೋವಿಂದ ಕಾರಜೋಳ,ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಹಾಗೂ ಸಮುದಾಯದ ಮುಖಂಡರಿಗಳಿಗೆ ಪರಮೇಶ್ವರಪ್ಪ ಮೇಗಳಮನಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.