ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ-ಹನಾ ಕಂಪನಿ- ಆಗ್ರೋ ಸೆಂಟರ್ನ ವಿರುದ್ಧ ಕ್ರಮಕ್ಕೆ ಆಗ್ರಹ
ಹಾವೇರಿ : ರೈತರಿಗೆ ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ ಮಾಡಿ ಅಪಾರಹಾನಿಗೆ ಕಾರಣವಾದ ಹನಾ ಕ್ರಾಪ್ ಸೈನ್ಸ್ ಕಂಪನಿಯನ್ನು ಕಪ್ಪು ಪಟ್ಟಿಗಿ ಸೇರಿಸಿ, ರೈತರಿಗೆ ಪರಿಹಾರ ಕೊಡಿಸಬೇಕು. ಬ್ಯಾಡಗಿಯ ವಿನಾಯಕ ಆಗ್ರೋ ಸೆಂಟರ್ನ ಎಲ್ಲಾ ಲೈಸೆನ್ಸ್ರದ್ದು ಮಾಡಲು ಆಗ್ರಹಿಸಿ ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಡಿಸಿ ಡಾ.ವಿಜಯಮಹಾಂತೇಶ ದಾನಮ್ನವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಅರ್ಪಿಸಿ ಆಗ್ರಹಿಸಿದರು.
ಬ್ಯಾಡಗಿ ತಾಲೂಕಿನ ಹಿರೇಹಳ್ಳಿ. ಚಿಕ್ಕಹಳ್ಳಿ, ಬಡಮಲ್ಲಿ. ಭಗತ್ ಸಿಂಗ್ ನಗರ ಗ್ರಾಮಗಳ ರೈತರು ಡಿಸೆಂಬರ್ ೨೦೨೪ ರಲ್ಲಿ ವಿನಾಯಕ ಆಗ್ರೋ ಸೆಂಟರ್ ಬ್ಯಾಡಗಿ ಇವರ ಕಡೆ ಹನಾ ಕ್ರಾಪ್ ಸೈನ್ಸ್ ಕಂಪನಿಯ ಮೆಣಸಿನಕಾಯಿ ಶಂಕರಣ ತಳಿಯ ಬೀಜಗಳನ್ನು ಖರೀದಿಸಿ ಸುಮಾರು ೮-೧೦ ಎಕರೆ ಜಮೀನಿಗೆ ನಾಟಿ ಮಾಡಲು ಸಸಿಗಳನ್ನು ಜನವರಿ ೨೦೨೫ ಎರಡನೇ ವಾರದಲ್ಲಿ ಸಸಿಗಳನ್ನು ರೈತರು ನಾಟಿ ಮಾಡಿರುತ್ತಾರೆ. ಆದರೆ ಬೀಜ ಕಳಪೆ ಆದ ಕಾರಣ ರೈತರಿತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ವಿನಾಯಕ ಆಗ್ರೋ ಸೆಂಟರ್ ಮತ್ತು ಬೀಜದ ಕಂಪನಿ ವಿರುದ್ಧ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ದೂರು ನೀಡಿದ ನಂತರ ತೋಟಗಾರಿಕಾ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಮೇಲೆ ರೈತರ ಜಮೀನಿಗೆ ಬಂದು ಪರಿಶೀಲನೆ ಮಾಡಲಾಗಿ ಮೆಣಸಿನಕಾಯಿ ಬೀಜವು ಕಳಪೆ ಗುಣಮಟ್ಟದ್ದು ಎಂದು ವರದಿ ನೀಡಿದ್ದು ಇದಕ್ಕೆ ಬೀಜದ ಕಂಪನಿಯವರು ಮತ್ತು ವಿನಾಯಕ ಆಗ್ರೋ ಸೆಂಟರ್ ನವರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವ ಕಾರಣ ಸದರಿಯವರ ವಿರುದ್ಧ ಬ್ಯಾಡಿಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ: ೦೩-೦೫-೨೦೨೩ ರಂದು ಪ್ರಕರಣ ದಾಖಲಿಸಲಾಗಿದೆ.
ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಇದಕ್ಕೆ ನೇರವಾಗಿ ಕಳಪೆ ಬೀಜ ತಯಾರಿಸಿದ ಕಂಪನಿಯವರು ಮತ್ತು ಕಳಪೆ ಬೀಜ ಮಾರಾಟ ಮಾಡಿದ ಆಗ್ರೋ ಕೇಂದ್ರದವರು ಹೊಣೆಗಾರರಾಗಿರುತ್ತಾರೆ. ಮುಂದಿನ ತಿಂಗಳಿಂದ ಮುಂಗಾರು ಹಂಗಾಮು ಪ್ರಾರಂಭ ಆಗುತ್ತಿದ್ದು ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜ ಗೊಬ್ಬರ. ಔಷಧಿಗಳನ್ನು ಅನಧಿಕೃತವಾಗಿ ಪರವಾನಿಗೆ ಇಲ್ಲದೆ ಹಲವಾರು ಕಂಪನಿಗಳು ಮತ್ತು ಆಗ್ರೋ ಕೇಂದ್ರದಲ್ಲಿ ಮಾರಾಟ ಮಾಡುವ ಜಾಲ ಬಹಳಷ್ಟು ಇದ್ದು, ಕೂಡಲೇ ಕಳಪೆ ಬೀಜ ಗೊಬ್ಬರ ಔಷಧಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಬೀಜದ ಕಂಪನಿ ಮತ್ತು ಅಂಗಡಿ ಮಾಲಿಕರಿಂದ ತಕ್ಷಣ ಪ್ರತಿ ಎಕರೆಗೆ ೩ ಲಕ್ಷ ರೂಪಾಯಿ ರೈತರಿಗೆ ಪರಿಹಾರ ಕೊಡಿಸಬೇಕು, ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಜಿಲ್ಲೆಯಲ್ಲಿರುವ ಎಲ್ಲಾ ಬೀಜ ವಿಸ್ತರಣಾ ಕಂಪನಿಗಳನ್ನು. ಬೀಜ ಉತ್ಪಾದಕ ಕಂಪನಿಗಳು.ಆಗ್ರೋ ಕೇಂದ್ರಗಳು ಅದರ ಜೊತೆಗೆ ಸಂಬಂಧಸಿದ ಇಲಾಖೆಗಳಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದವರು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿಯನ್ನು ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಗೊವಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಚಂದ್ರಶೇಖರ ತೋಟದ, ವಿ.ಆರ್. ಅಂಗಡಿ, ನಾಗರಾಜ್ ಬನ್ನಿಹಳ್ಳಿ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಬಸವರಾಜ ಹೀರೆಮಠ, ಮಂಜುನಾಥ ದಿಡಗೂರ, ಮಂಜು ಗೌರಾಪುರ. ಮುಂತಾದವರು ಉಪಸ್ಥಿತರಿದ್ದರು.
ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ-ಹನಾ ಕಂಪನಿ- ಆಗ್ರೋ ಸೆಂಟರ್ನ ವಿರುದ್ಧ ಕ್ರಮಕ್ಕೆ ಆಗ್ರಹ
Date:
ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ-ಹನಾ ಕಂಪನಿ- ಆಗ್ರೋ ಸೆಂಟರ್ನ ವಿರುದ್ಧ ಕ್ರಮಕ್ಕೆ ಆಗ್ರಹ
ಹಾವೇರಿ : ರೈತರಿಗೆ ಕಳಪೆ ಮೆಣಸಿನ ಕಾಯಿ ಬೀಜ ವಿತರಣೆ ಮಾಡಿ ಅಪಾರಹಾನಿಗೆ ಕಾರಣವಾದ ಹನಾ ಕ್ರಾಪ್ ಸೈನ್ಸ್ ಕಂಪನಿಯನ್ನು ಕಪ್ಪು ಪಟ್ಟಿಗಿ ಸೇರಿಸಿ, ರೈತರಿಗೆ ಪರಿಹಾರ ಕೊಡಿಸಬೇಕು. ಬ್ಯಾಡಗಿಯ ವಿನಾಯಕ ಆಗ್ರೋ ಸೆಂಟರ್ನ ಎಲ್ಲಾ ಲೈಸೆನ್ಸ್ರದ್ದು ಮಾಡಲು ಆಗ್ರಹಿಸಿ ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಡಿಸಿ ಡಾ.ವಿಜಯಮಹಾಂತೇಶ ದಾನಮ್ನವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಅರ್ಪಿಸಿ ಆಗ್ರಹಿಸಿದರು.
ಬ್ಯಾಡಗಿ ತಾಲೂಕಿನ ಹಿರೇಹಳ್ಳಿ. ಚಿಕ್ಕಹಳ್ಳಿ, ಬಡಮಲ್ಲಿ. ಭಗತ್ ಸಿಂಗ್ ನಗರ ಗ್ರಾಮಗಳ ರೈತರು ಡಿಸೆಂಬರ್ ೨೦೨೪ ರಲ್ಲಿ ವಿನಾಯಕ ಆಗ್ರೋ ಸೆಂಟರ್ ಬ್ಯಾಡಗಿ ಇವರ ಕಡೆ ಹನಾ ಕ್ರಾಪ್ ಸೈನ್ಸ್ ಕಂಪನಿಯ ಮೆಣಸಿನಕಾಯಿ ಶಂಕರಣ ತಳಿಯ ಬೀಜಗಳನ್ನು ಖರೀದಿಸಿ ಸುಮಾರು ೮-೧೦ ಎಕರೆ ಜಮೀನಿಗೆ ನಾಟಿ ಮಾಡಲು ಸಸಿಗಳನ್ನು ಜನವರಿ ೨೦೨೫ ಎರಡನೇ ವಾರದಲ್ಲಿ ಸಸಿಗಳನ್ನು ರೈತರು ನಾಟಿ ಮಾಡಿರುತ್ತಾರೆ. ಆದರೆ ಬೀಜ ಕಳಪೆ ಆದ ಕಾರಣ ರೈತರಿತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ವಿನಾಯಕ ಆಗ್ರೋ ಸೆಂಟರ್ ಮತ್ತು ಬೀಜದ ಕಂಪನಿ ವಿರುದ್ಧ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ದೂರು ನೀಡಿದ ನಂತರ ತೋಟಗಾರಿಕಾ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಮೇಲೆ ರೈತರ ಜಮೀನಿಗೆ ಬಂದು ಪರಿಶೀಲನೆ ಮಾಡಲಾಗಿ ಮೆಣಸಿನಕಾಯಿ ಬೀಜವು ಕಳಪೆ ಗುಣಮಟ್ಟದ್ದು ಎಂದು ವರದಿ ನೀಡಿದ್ದು ಇದಕ್ಕೆ ಬೀಜದ ಕಂಪನಿಯವರು ಮತ್ತು ವಿನಾಯಕ ಆಗ್ರೋ ಸೆಂಟರ್ ನವರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವ ಕಾರಣ ಸದರಿಯವರ ವಿರುದ್ಧ ಬ್ಯಾಡಿಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ: ೦೩-೦೫-೨೦೨೩ ರಂದು ಪ್ರಕರಣ ದಾಖಲಿಸಲಾಗಿದೆ.
ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಇದಕ್ಕೆ ನೇರವಾಗಿ ಕಳಪೆ ಬೀಜ ತಯಾರಿಸಿದ ಕಂಪನಿಯವರು ಮತ್ತು ಕಳಪೆ ಬೀಜ ಮಾರಾಟ ಮಾಡಿದ ಆಗ್ರೋ ಕೇಂದ್ರದವರು ಹೊಣೆಗಾರರಾಗಿರುತ್ತಾರೆ. ಮುಂದಿನ ತಿಂಗಳಿಂದ ಮುಂಗಾರು ಹಂಗಾಮು ಪ್ರಾರಂಭ ಆಗುತ್ತಿದ್ದು ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜ ಗೊಬ್ಬರ. ಔಷಧಿಗಳನ್ನು ಅನಧಿಕೃತವಾಗಿ ಪರವಾನಿಗೆ ಇಲ್ಲದೆ ಹಲವಾರು ಕಂಪನಿಗಳು ಮತ್ತು ಆಗ್ರೋ ಕೇಂದ್ರದಲ್ಲಿ ಮಾರಾಟ ಮಾಡುವ ಜಾಲ ಬಹಳಷ್ಟು ಇದ್ದು, ಕೂಡಲೇ ಕಳಪೆ ಬೀಜ ಗೊಬ್ಬರ ಔಷಧಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಬೀಜದ ಕಂಪನಿ ಮತ್ತು ಅಂಗಡಿ ಮಾಲಿಕರಿಂದ ತಕ್ಷಣ ಪ್ರತಿ ಎಕರೆಗೆ ೩ ಲಕ್ಷ ರೂಪಾಯಿ ರೈತರಿಗೆ ಪರಿಹಾರ ಕೊಡಿಸಬೇಕು, ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಜಿಲ್ಲೆಯಲ್ಲಿರುವ ಎಲ್ಲಾ ಬೀಜ ವಿಸ್ತರಣಾ ಕಂಪನಿಗಳನ್ನು. ಬೀಜ ಉತ್ಪಾದಕ ಕಂಪನಿಗಳು.ಆಗ್ರೋ ಕೇಂದ್ರಗಳು ಅದರ ಜೊತೆಗೆ ಸಂಬಂಧಸಿದ ಇಲಾಖೆಗಳಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದವರು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿಯನ್ನು ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಗೊವಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಚಂದ್ರಶೇಖರ ತೋಟದ, ವಿ.ಆರ್. ಅಂಗಡಿ, ನಾಗರಾಜ್ ಬನ್ನಿಹಳ್ಳಿ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಬಸವರಾಜ ಹೀರೆಮಠ, ಮಂಜುನಾಥ ದಿಡಗೂರ, ಮಂಜು ಗೌರಾಪುರ. ಮುಂತಾದವರು ಉಪಸ್ಥಿತರಿದ್ದರು.