“ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು, ಕಿವಿ,ಮೂಗು, ಬಾಯಿ ಇರುವುದಕ್ಕೆ ಜನಪರಯೋಜನೆಗಳಜಾರಿ”, ಬಿಸಿಪಿ ಹೇಳಿಕೆಗೆ ಸಂಜಯಗಾಂಧಿ ತಿರುಗೇಟು

ಹಾವೇರಿ: ಕಾಂಗ್ರೆಸ್ಪಕ್ಷಕ್ಕೆ ಜನಪರ ಕಾಳಜಿ ಇರುವದರಿಂದ ಜನಪರಯೋಜನೆಗಳಾದ ಅನ್ನಭಾಗ್ಯ, ಶಕ್ತಿಯೋಜನೆ, ೨೦೦ಯುನಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹತ್ತಾರು ಜನಪರ ಕಾರ್ಯಗಳನ್ನು ಜಾರಿಗೆ ತಂದಿದೆ. ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಒಂದೇ ಒಂದು ಜನಪರವಾದ ಕಾರ್ಯಗಳನ್ನು ಜಾರಿಗೆ ಗೊಳಿಸಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷಿಖಾತೆಯ ಸಚಿವರಾಗಿದ್ದ ಬಿ.ಸಿ.ಪಾಟೀಲ ಸ್ವಂತ ಹಾವೇರಿಜಿಲ್ಲೆಗೆ ಒಂದೇ ಒಂದು ಕೊಡುಗೆ ನೀಡದವರು ಇದೀಗ ಕಾಂಗ್ರೆಸ್ ಸರ್ಕಾಕ್ಕೆ ಕಣ್ಣು,ಕಿವಿ, ಮೂಗು,ಬಾಯಿ ಇಲ್ಲ ಎಂದು ಟೀಕಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಬಿ.ಸಿ.ಪಾಟೀಲರಿಗೆ ತಿರುಗೇಟು ನೀಡಿದ್ದಾರೆ.
ಈಬಗ್ಗೆ ಪತ್ರಿಕಾಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾಂರಂಟಿಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿ ಈಗಾಗಲೇ ಹಲವಾರು ಯೋಜನೆಗಳು ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ರಾಜ್ಯದ ಜನತೆಮೆಚ್ಚಿಕೊಂಡಿದ್ದಾರೆ. ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷದ, ಸರ್ಕಾರದ ವರ್ಚಸ್ಸು ಹೆಚ್ಚುತ್ತಿದೆ. ಇದನ್ನು ಸಹಿಸಲಾರದೇ ಬಿ.ಸಿ.ಪಾಟೀಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುತಿಂಗಳಾದರೂ ಸಹ ಬಿಜೆಪಿ ಪಕ್ಷಕ್ಕೆ ವಿರೋಧಪಕ್ಷದ ನಾಯಕನ ಆಯ್ಕೆಮಾಡಲು ಸಾಧ್ಯವಾಗಿಲ್ಲ, ತಮ್ಮ ತಟ್ಟೆಯನ್ನು ಮೊದಲು ಅವರು ಸರಿಪಡಿಸಕೊಳ್ಳುವನಿಟ್ಟಿನಲ್ಲಿ ಗಮನ ಹರಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಗಿಂತ ಪಕ್ಷ ಪೂಜೆ ಇದೆ. ಕಾಂಗ್ರೆಸ್ ಪಕ್ಷದ ಜೇನುಗೂಡುಇದ್ದಹಾಗೆ ಪಾಟೀಲರು ಜೇನುಗೂಡಿಗೆ ಕೈ ಹಾಕುವ ಕಾರ್ಯಕ್ಕೆ ಮುಂದಾಗಬಾರದು. ಬಿಜೆಪಿ ಪಕ್ಷದ ನಾಯಕರಿಗೆ, ತಾವು ಅಧಿಕಾರದಲ್ಲಿ ಇದ್ದಾಗ ಒಳ್ಳೆ ಕೆಲಸಗಳನ್ನು ಮಾಡಲೇ ಇಲ್ಲ.
ಕಣ್ಣು ಕಿವಿ ಬಾಯಿ ಹೃದಯವಂತಿಕೆ ಇಲ್ಲದ ಪಕ್ಷ ಅಂದರೆ ಅದು ಬಿಜೆಪಿ ಪಕ್ಷ. ಮಾಜಿ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರು ಕೃಷಿ ಮಂತ್ರಿ ಇದ್ದಾಗ ಹಾವೇರಿ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಗೊಬ್ಬರವನ್ನು ವಿತರಣೆ ಮಾಡಲಾಗಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಸೋಲಿನ ಹತಾಶೆಯಿಂದ ಬಿ.ಸಿ ಪಾಟೀಲ್ ಅವರು ಹೀಗೆ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಪು ಸಂಜೀವಣ್ಣನವರ ತಿಳಿಸಿದ್ದಾರೆ.