ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಘೋರ ಅನ್ಯಾಯ ಬಿಎಸ್‌ವೈ ಹೇಳಿಕೆ, ಹಾಸ್ಯಾಸ್ಪದ; ಮುಖಂಡರ ತಿರುಗೇಟು

Date:

 

 

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಘೋರ ಅನ್ಯಾಯ ಬಿಎಸ್‌ವೈ ಹೇಳಿಕೆ, ಹಾಸ್ಯಾಸ್ಪದ; ಮುಖಂಡರ ತಿರುಗೇಟು
ಹಾವೇರಿ: ಮಾಜಿ ಮಂತ್ರಿಗಳು, ಶಾಸಕರು ಮತ್ತು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮುಖಂಡರಾದ ಶಾಮನೂರು ಶಿವಶಂಕರಪ್ಪನವರು ಕರ್ನಾಟಕ ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಅಂಗಾಯಿತರಿಗೆ ಘೋರವಾದ ಅನ್ಯಾಯವಾಗಿದ್ದು, ನಾಯಿಪಾಡಾಗಿದೆ ಎಂಬ ಹೇಳಿಕೆ ನೀಡಿದ್ದು, ಈಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡೆಯೂರಪ್ಪ ಅವರು ಬೆಂಬಲಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಸ್‌ಟಿ ಘಟಕದ ಅಧ್ಯಕ್ಷ ಬಸವರಾಜ ತಳವಾರ, ಮುಖಂಡರಾದ ಚಂದ್ರಪ್ಪ ಬ್ಯಾಡರ, ರಾಜು ಮಾದಮ್ಮನವರ, ರವೀಂದ್ರಗೌಡ ಪಾಟೀಲ್, ಶಶಿ ಬಸನಾಯ್ಕರ್, ನಾಗಪ್ಪ ಕಾಡಜಿ ಮತ್ತಿತರರು ತಿಳಿಸಿದ್ದಾರೆ.
ನಿಜವಾಗಿಯೂ ಘೋರವಾದ ಅನ್ಯಾಯವಾಗಿರುವುದು ಎಸ್‌ಸಿ/ಎಸ್‌ಟಿ/ ಹಿಂದುಳಿದ ವರ್ಗದ ಸಮುದಾಯದವರಿಗೆ ಏಕೆಂದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಹೆಚ್ಚಿನ ಮತ ಹಾಕಿದ ಈ ಸಮಾಜಕ್ಕೆ ಮಂತ್ರಿಮಂಡಲದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರುವುದಿಲ್ಲ. ಜೊತೆಗೆ ಪ್ರಭಲ ಖಾತೆಗಳು ಮೇಲ್ದಾತಿ ಮೇಲ್ವರ್ಗಕ್ಕೆ ಅಂದರೆ ಲಿಂಗಾಯತ ಮತ್ತು ಒಕ್ಕಲಗ ಸಮುದಾಯಗಳಿಗೆ ಹಂಚಲಾಗಿದೆ. ಜೊತೆಗೆ ಸರ್ಕಾರದ ಕಾರ್ಯದರ್ಶಿಗೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವರ್ಗದವರಾಗಿದ್ದಾರೆ.
ಕರ್ನಾಟಕದಲ್ಲಿ ಇದೂವರೆಗೂ ೧೩ ಅಂಗಾಯತ ಸಮಾಜದ ಮುಖ್ಯಮಂತ್ರಿಗಳಾಗಿದ್ದಾರೆ. ಮಂತ್ರಿಮಂಡಲದಲ್ಲಿಯೂ ಸಹ ಹೆಚ್ಚು ಪ್ರಭಾವಿ ಇಲಾಖೆಗಳನ್ನು ಈ ಸಮಾಜದ ಸಚಿವರು ಪಡೆದುಕೊಂಡಿದ್ದಾರೆ. ಆ ಮೂಲಕ ರಾಜ್ಯದಲ್ಲ, ಲಿಂಗಾಯತ ಮಠ ಮಾನ್ಯಗಳಿಗೆ ಒಂದು ಸಾವಿರದಿಂದ ಐವತ್ತು ಸಾವಿರ ಎಕರೆವರೆಗೂ ಭೂಮಿಯನ್ನು ಹಂಚಿಕ ಮಾಡಲಾಗಿದೆ. ಅಲ್ಲದೆ ಅಂಗಾಯತ ಸಮಾಜದ ಖಾಸಗಿ ವಿದ್ಯಾಸಂಸ್ಥೆಗಳು, ಮೆಡಿಕಲ್ ಕಾಲೇಜ್‌ಗಳು, ಇಂಜಿನಿಯರಿಂಗ್ ಕಾಲೇಜು, ಡಿಗ್ರಿ ಕಾಲೇಜ್ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಹತ್ತಾರು ಸಾವಿರಾರು ಎಕರೆ ಕೃಷಿ ಜಮೀನನ್ನು ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು, ಗ್ರಾನೈಟ್-ಗಣಿ ಉದ್ದಿಮೆ, ಅಕ್ಕಿ ಗಿರಣಿಗಳು, ಸಾರಿಗೆ ಉದ್ದಿಮೆ, ಸಹಕಾರಿ ಬ್ಯಾಂಕ್‌ಗಳು, ಹಾಲು ಒಕ್ಕೂಟಗಳು, ಎಣ್ಣೆ, ಬೆಣ್ಣೆ ಉತ್ಪಾದನಾ ಫ್ಯಾಕ್ಟರಿಗಳು ಮತ್ತು ಎಲ್ಲಾ ಅಣಿಕಟ್ಟುಗಳ ಕೆಳಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಈ ಸಮಾಜವೇ ಹೊಂದಿರುತ್ತದೆ. ಹೀಗೆ ಸಕಲ ಸಂಪತ್ತನ್ನು ಈ ಸಮಾಜ ಪಡೆದುಕೊಂಡಿದೆ.
೨೦೨೩ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಓಟನ ಪ್ರಮಾಣ ಶೇ. ೩೬%, ಕಾಂಗ್ರೆಸ್ ಪಕ್ಷದ ಓಟನ ಪ್ರಮಾಣ ೪೨.೯%, ಜೆಡಿಎಸ್ ಪಕ್ಷದ ಓಟನ ಪ್ರಮಾಣ ೧೩.೩* ಮತಗಳನ್ನು ಪಡೆದುಕೊಂಡಿರುತ್ತಾರೆ. ೨೦೧೮ ರಲ್ಲಿ ಇದ್ದಷ್ಟೇ ಮತಗಳು ಬಿಜೆಪಿಯಲ್ಲಿ ಈಗಲೂ ಇವೆ, ಅಂದರೆ ಬಿಜೆಪಿಯ ಸಾಂಪ್ರಾದಾಯಕ ಮತಗಳು ಬಿಜೆಪಿಗೆ ಮತಹಾಕಿವೆ ಎಂಬುವುದರಲ್ಲಿ ಸಂಶಯವಿಲ್ಲ.
ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಹೋಗಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ವಾಸ್ತವವಾಗಿ ಕಾಂಗ್ರೆಸ್‌ಗೆ ಓಟು ಹಾಕಿರುವುದು ಪರಿಶಿಷ್ಟ ಜಾತಿಯವರು, ಪರಿಶಿಷ್ಟ ವರ್ಗದವರು, ಹಿಂದುಳಿದವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ಸ್ಪಷ್ಟ ಆದಾಗ್ಯೂ ಅಂಗಾಯಿತರಿಗೆ ೭ ಮಂತ್ರಿ ಸ್ಥಾನಗಳನ್ನು ಕೊಟ್ಟು, ಪ್ರಭಲವಾದ ಇಲಾಖೆಗಳನ್ನು ನೀಡಲಾಗಿದೆ. ಸರ್ಕಾರದ ೩೬ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕೇವಲ ಒಬ್ಬರು ಇದ್ದಾರೆ ಎಂಬುದು ಖೇದದ ಸಂಘತಿ, ಅಲ್ಲದೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಒಬ್ಬರು ಜಿಲ್ಲಾಧಿಕಾರಿ, ಒಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇರುತ್ತಾರೆ, ಬೆಂಗಳೂರು ೧೦ ಡಿಸಿಪಿಗಳ ಪೈಕಿ ಕೇವಲ ಒಬ್ಬರು ಡಿಸಿಪಿ ಪರಿಶಿಷ್ಟ ವರ್ಗದವರು ಇದ್ದಾರೆ. ಅಂದರೆ ಕಾಂಗ್ರೆಸ್ ಸರ್ಕಾರದಲ್ಲಿಯೂ ಆಯಾಕಟ್ಟನ ಸ್ಥಳಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಪ್ರಾತಿನಿಧ್ಯವಿಲ್ಲದೆ ಅನ್ಯಾಯವಾಗಿದೆ.
ಲಿಂಗಾಯಿತ ಸಮಾಜವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಂತ್ರಿಮಂಡಲದಲ್ಲೂ, ಉನ್ನತ ಹುದ್ದೆಗಳಲ್ಲಿ ಅಧಿಕಾರಿಗಳನ್ನು ಹೊಂದಿದ್ದರೂ, ರಾಜ್ಯದಲ್ಲಿ ಎಲ್ಲಾ ರೀತಿಯ ಸಂಪತ್ತನ್ನೂ ಹೊಂದಿದ್ದರೂ ಸಹ ಶಾಮನೂರು ಶಿವಶಂಕರಪ್ಪನವರು ತಮ್ಮ ಸಮಾಜದ ಅಧಿಕಾರಿಗಳ ಪಾಡು ನಾಯಿಪಾಡಾಗಿದೆ ಎಂದು ಹೇಳರುವುದು ದುರಾದೃಷ್ಟಕರ, ಈಹೇಳಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪನವರ ಪ್ರಸ್ತುತ ಸಂದರ್ಭದಲ್ಲಿ ಆತ್ಮವಲೋಕನಮಾಡಿಕೊಳ್ಳಬೇಕಿದೆ. ಅವರು ಈಹಿಂದೆ ೨೦೧೮ರ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ರಚನೆಯಾದ ೨೪ಗಂಟೆಯೋಳಗೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಹಾಗಾದರೇ ಹಿಂದುಳಿದ ವರ್ಗಕ್ಕೆ ಅನ್ಯಾಯಮಾಡಿದವರು ಯಾರು?. ಶ್ರೀರಾಮುಲು ಅವರ ಸಮುದಾಯ ಮತ ನೀಡಲು ಮಾತ್ರ ಬೇಕು. ಆದರೆ ಅಧಿಕಾರ ನೀಡಲು ಮಾತ್ರ ಬೇಡ ಏಕೆ? ಈಪ್ರಶ್ನೆಗೆ ಯಡೆಯೂರಪ್ಪನವರು ಉತ್ತರ ನೀಡಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಎಲ್ಲ ಜಾತಿ-ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಸಣ್ಣ ಸಮುದಾಯಗಳನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಿಗಿರುವಾಗ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮುಖಂಡರಾಗಿ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆಅಗತ್ಯ, ಆದರೆ ಹಿಂದುಳಿದ ವರ್ಗದ ಮುಖಂಡನನ್ನು ಬೆಳಸದೇ ಅನ್ಯಾಯಮಾಡಿ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡುವ ಯಡೆಯೂರಪ್ಪನವರು ಯಾರಿಂದ ಅನ್ಯಾಯವಾಗಿದೆ ಎನ್ನುವದನ್ನು ಆತ್ಮಾವಲೋಕನಮಾಡಿಕೊಳ್ಳಬೇಕೆಂದು ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

 

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಘೋರ ಅನ್ಯಾಯ ಬಿಎಸ್‌ವೈ ಹೇಳಿಕೆ, ಹಾಸ್ಯಾಸ್ಪದ; ಮುಖಂಡರ ತಿರುಗೇಟು
ಹಾವೇರಿ: ಮಾಜಿ ಮಂತ್ರಿಗಳು, ಶಾಸಕರು ಮತ್ತು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮುಖಂಡರಾದ ಶಾಮನೂರು ಶಿವಶಂಕರಪ್ಪನವರು ಕರ್ನಾಟಕ ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಅಂಗಾಯಿತರಿಗೆ ಘೋರವಾದ ಅನ್ಯಾಯವಾಗಿದ್ದು, ನಾಯಿಪಾಡಾಗಿದೆ ಎಂಬ ಹೇಳಿಕೆ ನೀಡಿದ್ದು, ಈಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡೆಯೂರಪ್ಪ ಅವರು ಬೆಂಬಲಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಸ್‌ಟಿ ಘಟಕದ ಅಧ್ಯಕ್ಷ ಬಸವರಾಜ ತಳವಾರ, ಮುಖಂಡರಾದ ಚಂದ್ರಪ್ಪ ಬ್ಯಾಡರ, ರಾಜು ಮಾದಮ್ಮನವರ, ರವೀಂದ್ರಗೌಡ ಪಾಟೀಲ್, ಶಶಿ ಬಸನಾಯ್ಕರ್, ನಾಗಪ್ಪ ಕಾಡಜಿ ಮತ್ತಿತರರು ತಿಳಿಸಿದ್ದಾರೆ.
ನಿಜವಾಗಿಯೂ ಘೋರವಾದ ಅನ್ಯಾಯವಾಗಿರುವುದು ಎಸ್‌ಸಿ/ಎಸ್‌ಟಿ/ ಹಿಂದುಳಿದ ವರ್ಗದ ಸಮುದಾಯದವರಿಗೆ ಏಕೆಂದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಹೆಚ್ಚಿನ ಮತ ಹಾಕಿದ ಈ ಸಮಾಜಕ್ಕೆ ಮಂತ್ರಿಮಂಡಲದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರುವುದಿಲ್ಲ. ಜೊತೆಗೆ ಪ್ರಭಲ ಖಾತೆಗಳು ಮೇಲ್ದಾತಿ ಮೇಲ್ವರ್ಗಕ್ಕೆ ಅಂದರೆ ಲಿಂಗಾಯತ ಮತ್ತು ಒಕ್ಕಲಗ ಸಮುದಾಯಗಳಿಗೆ ಹಂಚಲಾಗಿದೆ. ಜೊತೆಗೆ ಸರ್ಕಾರದ ಕಾರ್ಯದರ್ಶಿಗೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವರ್ಗದವರಾಗಿದ್ದಾರೆ.
ಕರ್ನಾಟಕದಲ್ಲಿ ಇದೂವರೆಗೂ ೧೩ ಅಂಗಾಯತ ಸಮಾಜದ ಮುಖ್ಯಮಂತ್ರಿಗಳಾಗಿದ್ದಾರೆ. ಮಂತ್ರಿಮಂಡಲದಲ್ಲಿಯೂ ಸಹ ಹೆಚ್ಚು ಪ್ರಭಾವಿ ಇಲಾಖೆಗಳನ್ನು ಈ ಸಮಾಜದ ಸಚಿವರು ಪಡೆದುಕೊಂಡಿದ್ದಾರೆ. ಆ ಮೂಲಕ ರಾಜ್ಯದಲ್ಲ, ಲಿಂಗಾಯತ ಮಠ ಮಾನ್ಯಗಳಿಗೆ ಒಂದು ಸಾವಿರದಿಂದ ಐವತ್ತು ಸಾವಿರ ಎಕರೆವರೆಗೂ ಭೂಮಿಯನ್ನು ಹಂಚಿಕ ಮಾಡಲಾಗಿದೆ. ಅಲ್ಲದೆ ಅಂಗಾಯತ ಸಮಾಜದ ಖಾಸಗಿ ವಿದ್ಯಾಸಂಸ್ಥೆಗಳು, ಮೆಡಿಕಲ್ ಕಾಲೇಜ್‌ಗಳು, ಇಂಜಿನಿಯರಿಂಗ್ ಕಾಲೇಜು, ಡಿಗ್ರಿ ಕಾಲೇಜ್ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಹತ್ತಾರು ಸಾವಿರಾರು ಎಕರೆ ಕೃಷಿ ಜಮೀನನ್ನು ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು, ಗ್ರಾನೈಟ್-ಗಣಿ ಉದ್ದಿಮೆ, ಅಕ್ಕಿ ಗಿರಣಿಗಳು, ಸಾರಿಗೆ ಉದ್ದಿಮೆ, ಸಹಕಾರಿ ಬ್ಯಾಂಕ್‌ಗಳು, ಹಾಲು ಒಕ್ಕೂಟಗಳು, ಎಣ್ಣೆ, ಬೆಣ್ಣೆ ಉತ್ಪಾದನಾ ಫ್ಯಾಕ್ಟರಿಗಳು ಮತ್ತು ಎಲ್ಲಾ ಅಣಿಕಟ್ಟುಗಳ ಕೆಳಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಈ ಸಮಾಜವೇ ಹೊಂದಿರುತ್ತದೆ. ಹೀಗೆ ಸಕಲ ಸಂಪತ್ತನ್ನು ಈ ಸಮಾಜ ಪಡೆದುಕೊಂಡಿದೆ.
೨೦೨೩ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಓಟನ ಪ್ರಮಾಣ ಶೇ. ೩೬%, ಕಾಂಗ್ರೆಸ್ ಪಕ್ಷದ ಓಟನ ಪ್ರಮಾಣ ೪೨.೯%, ಜೆಡಿಎಸ್ ಪಕ್ಷದ ಓಟನ ಪ್ರಮಾಣ ೧೩.೩* ಮತಗಳನ್ನು ಪಡೆದುಕೊಂಡಿರುತ್ತಾರೆ. ೨೦೧೮ ರಲ್ಲಿ ಇದ್ದಷ್ಟೇ ಮತಗಳು ಬಿಜೆಪಿಯಲ್ಲಿ ಈಗಲೂ ಇವೆ, ಅಂದರೆ ಬಿಜೆಪಿಯ ಸಾಂಪ್ರಾದಾಯಕ ಮತಗಳು ಬಿಜೆಪಿಗೆ ಮತಹಾಕಿವೆ ಎಂಬುವುದರಲ್ಲಿ ಸಂಶಯವಿಲ್ಲ.
ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಹೋಗಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ವಾಸ್ತವವಾಗಿ ಕಾಂಗ್ರೆಸ್‌ಗೆ ಓಟು ಹಾಕಿರುವುದು ಪರಿಶಿಷ್ಟ ಜಾತಿಯವರು, ಪರಿಶಿಷ್ಟ ವರ್ಗದವರು, ಹಿಂದುಳಿದವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ಸ್ಪಷ್ಟ ಆದಾಗ್ಯೂ ಅಂಗಾಯಿತರಿಗೆ ೭ ಮಂತ್ರಿ ಸ್ಥಾನಗಳನ್ನು ಕೊಟ್ಟು, ಪ್ರಭಲವಾದ ಇಲಾಖೆಗಳನ್ನು ನೀಡಲಾಗಿದೆ. ಸರ್ಕಾರದ ೩೬ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕೇವಲ ಒಬ್ಬರು ಇದ್ದಾರೆ ಎಂಬುದು ಖೇದದ ಸಂಘತಿ, ಅಲ್ಲದೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಒಬ್ಬರು ಜಿಲ್ಲಾಧಿಕಾರಿ, ಒಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇರುತ್ತಾರೆ, ಬೆಂಗಳೂರು ೧೦ ಡಿಸಿಪಿಗಳ ಪೈಕಿ ಕೇವಲ ಒಬ್ಬರು ಡಿಸಿಪಿ ಪರಿಶಿಷ್ಟ ವರ್ಗದವರು ಇದ್ದಾರೆ. ಅಂದರೆ ಕಾಂಗ್ರೆಸ್ ಸರ್ಕಾರದಲ್ಲಿಯೂ ಆಯಾಕಟ್ಟನ ಸ್ಥಳಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಪ್ರಾತಿನಿಧ್ಯವಿಲ್ಲದೆ ಅನ್ಯಾಯವಾಗಿದೆ.
ಲಿಂಗಾಯಿತ ಸಮಾಜವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಂತ್ರಿಮಂಡಲದಲ್ಲೂ, ಉನ್ನತ ಹುದ್ದೆಗಳಲ್ಲಿ ಅಧಿಕಾರಿಗಳನ್ನು ಹೊಂದಿದ್ದರೂ, ರಾಜ್ಯದಲ್ಲಿ ಎಲ್ಲಾ ರೀತಿಯ ಸಂಪತ್ತನ್ನೂ ಹೊಂದಿದ್ದರೂ ಸಹ ಶಾಮನೂರು ಶಿವಶಂಕರಪ್ಪನವರು ತಮ್ಮ ಸಮಾಜದ ಅಧಿಕಾರಿಗಳ ಪಾಡು ನಾಯಿಪಾಡಾಗಿದೆ ಎಂದು ಹೇಳರುವುದು ದುರಾದೃಷ್ಟಕರ, ಈಹೇಳಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪನವರ ಪ್ರಸ್ತುತ ಸಂದರ್ಭದಲ್ಲಿ ಆತ್ಮವಲೋಕನಮಾಡಿಕೊಳ್ಳಬೇಕಿದೆ. ಅವರು ಈಹಿಂದೆ ೨೦೧೮ರ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ರಚನೆಯಾದ ೨೪ಗಂಟೆಯೋಳಗೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಹಾಗಾದರೇ ಹಿಂದುಳಿದ ವರ್ಗಕ್ಕೆ ಅನ್ಯಾಯಮಾಡಿದವರು ಯಾರು?. ಶ್ರೀರಾಮುಲು ಅವರ ಸಮುದಾಯ ಮತ ನೀಡಲು ಮಾತ್ರ ಬೇಕು. ಆದರೆ ಅಧಿಕಾರ ನೀಡಲು ಮಾತ್ರ ಬೇಡ ಏಕೆ? ಈಪ್ರಶ್ನೆಗೆ ಯಡೆಯೂರಪ್ಪನವರು ಉತ್ತರ ನೀಡಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಎಲ್ಲ ಜಾತಿ-ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಸಣ್ಣ ಸಮುದಾಯಗಳನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಿಗಿರುವಾಗ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮುಖಂಡರಾಗಿ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆಅಗತ್ಯ, ಆದರೆ ಹಿಂದುಳಿದ ವರ್ಗದ ಮುಖಂಡನನ್ನು ಬೆಳಸದೇ ಅನ್ಯಾಯಮಾಡಿ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡುವ ಯಡೆಯೂರಪ್ಪನವರು ಯಾರಿಂದ ಅನ್ಯಾಯವಾಗಿದೆ ಎನ್ನುವದನ್ನು ಆತ್ಮಾವಲೋಕನಮಾಡಿಕೊಳ್ಳಬೇಕೆಂದು ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...