ಕಾವೇರಿ ನೀರು ನಿಲುಗಡೆಗೆ ಆಗ್ರಹಿಸಿ ಹಾವೇರಿ ಯಲ್ಲಿ ಪ್ರತಿಭಟನೆ
ಹಾವೇರಿ:ತಮಿಳುನಾಡಿಗೆ ಹರಿಸಲಾಗುತ್ತಿರುವ ಕಾವೇರಿ ನೀರನ್ನು ನಿಲುಗಡೆಗೆ ಆಗ್ರಹಿಸಿ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
. ಬಗ್ಗೆ ತಹಶಿಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದ ಪ್ರತಿಭಟನಾಕಾರರು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದಲ್ಲಿ ಬರ ಬಂದು ರೈತರು, ಜನರು ಸಾಕಷ್ಷು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವ ಅಲ್ಪ ಸ್ವಲ್ಪ ನೀರನ್ನು ತಮಿಳುನಾಡಿಗೆ ಬಿಟ್ಟರೇ ಕಾವೇರಿ ನೀರನ್ನೇ ಅವಲಂಬಿತ ರೈತರು ಹಾಗೂ ಆಭಾಗದ ಜನರಿಗೆ ಕುಡಿಯೋ ನೀರಿಗೆ ತೊಂದರೆ ಆಗುತ್ತದೆ. ಕೂಡಲೇ ನೀರು ಹರಿಸುವುದನ್ನು ರಾಜ್ಯ ಸರಕಾರ ನಿಲ್ಲಿಸಬೇಕು. ನಿಲ್ಲಿಸದೇ ಹೋದರೇ ಹೋರಾಟಗಳು ತೀವ್ರವಾಗುತ್ತವೆ.
ರಾಜ್ಯ ಸರಕಾರ ಇದರ ಬಗ್ಗೆ ನಿಗಾ ವಹಿಸಿಬೇಕು. ಕೇಂದ್ರ ಸರಕಾರ ಕೂಡಾ ಇದರ ಬಗ್ಗೆ ತಕ್ಷಣ ಕ್ರಮ ವಹಿಸಿ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್, ಭೂಮಿ ಪುತ್ರ ಸಂಘಟನೆ ಹಾಗೂ ವಿವಿಧ ಕನ್ನಡ ಪರಸಂಘಟನೆಯ
ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ , ಭೂಮಿಪುತ್ರ ರೈತ ಸಂಘ ಅಧ್ಯಕ್ಷ ಪಕ್ಕೀರಗೌಡ ಗಾಜೀಗೌಡ್ರ, ಅಲೆಮಾರಿ ಸಂಘದ ಅಧ್ಯಕ್ಷ ವಿಬೂತಿ ಶೆಟ್ಟಿ, ದುರಗಪ್ಪ ಮಾದರ, ಆನಂದ ಕುಮಾರಿ, ರಾಜು ಕುಮಾರಿ ಸೇರಿದಂತೆ ಅನೇಕರು ಹಾಜರಿದ್ದರು.