“ಕಿಡಗೇಡಿಗಳ ಇಲ್ಲಸಲ್ಲದ ಆಪಾದನೆಗಳನ್ನು ಹಾವೇರಿ ವಿಧಾನಸಭಾ ಕ್ಷೇತ್ರದ ಜನತೆ ನಂಬುವುದಿಲ್ಲ” ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಪಷ್ಟನೆ

Date:

“ಕಿಡಗೇಡಿಗಳ ಇಲ್ಲಸಲ್ಲದ ಆಪಾದನೆಗಳನ್ನು ಹಾವೇರಿ ವಿಧಾನಸಭಾ ಕ್ಷೇತ್ರದ ಜನತೆ ನಂಬುವುದಿಲ್ಲ”
ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಪಷ್ಟನೆ
ಹಾವೇರಿ: ಕೆಲವು ಕಿಡಗೇಡಿಗಳು “ರುದ್ರಪ್ಪ ಲಮಾಣಿ ಕಾಣೆಯಾಗಿದ್ದಾರೆ. ಅವರು ಕ್ಷೇತ್ರದ ಜನರನ್ನು ಮರೆತಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಕ್ಷೇತ್ರದ ಮತದಾರರ ಹೆಸರಿನಲ್ಲಿ ರೈಲು ಟಿಕೆಟ್ ಬುಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಚಾರವನ್ನು ನಾನು ಗಮನಿಸಿರುವೆ. ನನ್ನ ಬಗ್ಗೆ ಇಲ್ಲ ಸಲ್ಲದ ಆಪಾದನೆಗಳನ್ನು ಮಾಡಿ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ನನ್ನನ್ನು ತೇಜೋವಧೆ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದು ಹಾವೇರಿ ತಾಲೂಕಿನ ಶಾಸಕರು ಹಾಗೂ ವಿಧಾನಸಭೆಯ ಉಪಸಭಾ ಪತಿರುದ್ರಪ್ಪ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು “ದಿನಾಂಕ: ೦೫-೧೦-೨೦೨೪ ರಂದು ಜರ್ಮನಿ ದೇಶಕ್ಕೆ ಮಾನ್ಯ ಸಭಾಧ್ಯಕ್ಷರು ಹಾಗೂ ವಿವಿಧ ಶಾಸಕರುಗಳೊಂದಿಗೆ ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ್ದು, ದಿನಾಂಕ: ೧೫-೧೦-೨೯೨೪ ರಂದು ಮರಳಿ ಬೆಂಗಳೂರಿಗೆ ಬಂದಿರುತ್ತೇನೆ. ಮಾನ್ಯ ಮುಖ್ಯಮಂತ್ರಿಗಳ ಕೋರಿಕೆಯಂತೆ ದಿನಾಂಕ: ೧೬-೧೦-೨೦೨೪ ರಂದು ಕಛೇರಿಯ ಕೆಲಸದೊಂದಿಗೆ ಶಾಸಕರ ಭವನದಲ್ಲಿ ವಾಲ್ಮೀಕಿ ಜಯಂತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ದಿನಾಂಕ: ೧೭- ೧೦-೨೦೨೪ ರಂದು ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಭಾಗಹಿಸಿರುತ್ತೇನೆ.
ಅದರಂತೆ ದಿನಾಂಕ: ೧೮-೧೦-೨೦೨೪ ರಂದು ಮಾನ್ಯ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಭಾಗಹಿಸಿರುತ್ತೇನೆ. ದಿನಾಂಕ : ೧೯-೧೦-೨೦೨೪ ರಂದು ತಮಿಳುನಾಡಿನ ಕೊಯಿಮತ್ತೂರ ಇಲ್ಲಿಗೆ ತೆರಳಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದಿನಾಂಕ : ೨೦-೧೦-೨೦೨೪ ರ ಸಂಜೆ ಬೆಂಗಳೂರಿಗೆ ಬಂದು, ದಿನಾಂಕ: ೨೧-೧೦-೨೦೨೪ ರಂದು ಬೆಂಗಳೂರಿನಲ್ಲಿ ಸಮಿತಿ ಸಭೆಗಳಲ್ಲಿ ಭಾಗವಹಿಸಿ, ನಂತರ ಅದೇ ದಿನ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿರುತ್ತೇನೆ.
ದಿನಾಂಕ: ೨೨-೧೦-೨೦೨೪ ರಂದು ನವದೆಹಲಿಯಲ್ಲಿ ದೇಶದ ಪ್ರಥಮ ಪ್ರಜೆ ಸನ್ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ಬ್ರೌಪದಿ ಮುರ್ಮು ಇವರುಗಳೊಂದಿಗೆ ಠಕ್ಕರ ಪಾಪ ಸ್ಮಾರಕ ಸದನ ಇಲ್ಲಿ ನಡೆದ ಭಾರತೀಯ ಆದಿಮ ಜಾತಿ ಸೇವಕ ಸಂಘ (ಬಿಎಜೆಎಸ್‌ಎಸ್) ಇದರ ೭೫ ವರ್ಷಗಳ ಪ್ಲಾಟಿನಮ್ ಜುಲ್ಲಿ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ದಿನಾಂಕ: ೨೩-೧೦-೨೦೨೪ ರಂದು ಮರಳಿ ಬೆಂಗಳೂರಿಗೆ ಬಂದು ದಿನಾಂಕ: ೨೪- ೧೦-೨೦೨೪ ರಂದು ಬೆಂಗಳೂರಿನಲ್ಲಿ ವಸತಿ ಸಮಿತಿ ಹಾಗೂ ಅರ್ಜಿ ಸಮಿತಿ ಸಭೆಗಳನ್ನು ನಡೆಸಿ ಅದೇ ದಿನ ಪುನಃ ರಾಣೇಬೆನ್ನೂರಿಗೆ ಬಂದು ವಾಸ್ತವ್ಯ ಮಾಡಿರುತ್ತೇನೆ.
ದಿನಾಂಕ: ೨೫-೧೦-೨೦೨೪ ರಂದು ಹಾವೇರಿಯ ನಗರದ ಶಹರ ಪೊಲೀಸ್ ಠಾಣೆಯ ಹತ್ತಿರದ ಚರಂಡಿಯಲ್ಲಿ ದುರ್ಮರಣ ಹೊಂದಿದ ಬಾಲಕ ನಿವೇದನ ಬಸವರಾಜ ಗುಡಗೇರಿ ಇವರ ಮನೆಗೆ ತೆರಳಿ ಸಾಂತ್ವನ ಹೇಳಿರುತ್ತೇನೆ. ಬಾಲಕ ದುರ್ಮರಣ ಹೊಂದಿದ್ದಕ್ಕೆ ಅತೀವ ದುಃಖವಿದೆ. ಕುಟುಂಬಕ್ಕೆ ದೇವರು ದುಃಖವನ್ನು ಮರೆಸುವ ಶಕ್ತಿಯಲ್ಲಿ ನೀಡಲಿ ಎಂದು ಪ್ರಾರ್ಥಿಸುತ್ತಾ, ಘಟನೆ ನಡೆದ ತಕ್ಷಣವೇ ನನ್ನ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು, ನಗರಸಭೆಯ ಸದಸ್ಯರುಗಳು ಘಟನೆ ನಡೆದ ಭೇಟಿ ನೀಡಿ ಕುಟುಂಬವನ್ನು ಸಂತೈಸುವ ಕೆಲಸ ಮಾಡಿರುತ್ತೇನೆ. ನಾನು ಕೂಡ ದೂರವಾಣಿ ಮೂಲಕ ನಿರಂತರವಾಗಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಿರುತ್ತೇನೆ. ಜೊತೆಗೆ ಬಾಲಕರ ಕುಟುಂಬದೊಂದಿಗೆ ಮಾತನಾಡಿ ಪಕ್ಷದ ಮುಖಂಡರನ್ನು ಮನೆಗೆ ಕಳುಹಿಸಿ ಸಂತೈಸುವ ಕೆಲಸ ಮಾಡಿರುತ್ತೇನೆ. ದಿ. ನಿವೇದನ ಕುಟುಂಬ ವರ್ಗಕ್ಕೆ ವೈಯಕ್ತಿಕವಾಗಿ ಧನ ಸಹಾಯ ನೀಡಲಾಗಿದೆ. ಹಾಗೂ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವನ್ನು ಕೊಡಿಸುವ ಪ್ರಯತ್ನ ಮಾಡಿದ್ದೇನೆ.
ಅವರಿಗೆ ವಸತಿಗಾಗಿ ಸರ್ಕಾರದ ವತಿಯಿಂದ ಹಂಚಿಕೆ ಮಾಡುವ ಜಿ+೧ ಮನೆಗಳ ಪೈಕಿ ಮನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತ ಬಾಲಕನ ತಂದೆಗೆ ಸ್ವಾವನೆಂಬ ಸಾರತಿ ಯೋಜನೆಯಡಿ ನಾಲ್ಕು ಚಕ್ರದ ವಾಹನ ಕೊಡಿಸುವ ಭರವಸೆ ನೀಡಿದ್ದೇನೆ.
ತಾಲ್ಲೂಕಿನಾದ್ಯಂತ ಸುರಿದ ಮಳೆಯ ಹಾನಿಯ ವಿಷಯವಾಗಿ ಅಗತ್ಯ ನಿರ್ದೇಶನಗಳನ್ನು ನೀಡಿರುತ್ತೇನೆ. ಅವಶ್ಯಕವಾದ ಕಡೆ ಗಂಜಿ ಕೇಂದ್ರಗಳನ್ನು ತೆರೆಯಲು ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶಗಳನ್ನು ನೀಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ನನ್ನ ಕರ್ತವ್ಯದಿಂದ ವಿಮುಖನಾಗುವ ಪ್ರಶ್ನೆಯೇ ಇಲ್ಲ. ನಾನು ನನ್ನ ಕಚೇರಿಯ ಸಿಬ್ಬಂದಿಗಳು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಕಷ್ಟ ನಷ್ಟಗಳಲ್ಲಿ ಸದಾ ಭಾಗಿಯಾಗುತ್ತಾ ಬಂದಿರುತ್ತೇನೆ. ಮಾನಸಿಕವಾಗಿ ಕ್ಷೇತ್ರದಲ್ಲಿಯೇ ಇದ್ದು ಕಾಲ ಕಾಲಕ್ಕೇ ಕ್ಷೇತ್ರದ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತಾ ಬಂದಿರುತ್ತೇನೆ.
ಯಾರೋ ಕಿಡಗೇಡಿಗಳು ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ತೇಜೋವಧೆ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಕ್ಷೇತ್ರದ ಜನ ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಕ್ಷೇತ್ರದ ಮತದಾರರೂ ಸದಾ ನನ್ನ ಜೊತೆಗಿದ್ದು, ನಾನು ಸಹ ಅವರ ಪ್ರತಿ ಕಷ್ಟ ಸುಖಗಳಲ್ಲಿ ಸದಾಕಾಲ ಭಾಗಿಯಾಗಿರುತ್ತೇನೆ. ಮತದಾರರೂ ಕಿಡಗೇಡಿಗಳ ಮಾತಿಗೆ ಕವಿಗೊಡದೇ ಅಭಿವೃದ್ಧಿ ಕುರಿತು ಸಲಹ ಸೂಚನಗಳನ್ನು ಸ್ವೀಕರಿಸಲು ಸದಾ ಸಿದ್ಧನಿರುತ್ತೇನೆ ಎಂದು ವಿಧಾನಸಭೆಯ ಉಪಸಭಾ ಪತಿರುದ್ರಪ್ಪ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

“ಕಿಡಗೇಡಿಗಳ ಇಲ್ಲಸಲ್ಲದ ಆಪಾದನೆಗಳನ್ನು ಹಾವೇರಿ ವಿಧಾನಸಭಾ ಕ್ಷೇತ್ರದ ಜನತೆ ನಂಬುವುದಿಲ್ಲ”
ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಪಷ್ಟನೆ
ಹಾವೇರಿ: ಕೆಲವು ಕಿಡಗೇಡಿಗಳು “ರುದ್ರಪ್ಪ ಲಮಾಣಿ ಕಾಣೆಯಾಗಿದ್ದಾರೆ. ಅವರು ಕ್ಷೇತ್ರದ ಜನರನ್ನು ಮರೆತಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಕ್ಷೇತ್ರದ ಮತದಾರರ ಹೆಸರಿನಲ್ಲಿ ರೈಲು ಟಿಕೆಟ್ ಬುಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಚಾರವನ್ನು ನಾನು ಗಮನಿಸಿರುವೆ. ನನ್ನ ಬಗ್ಗೆ ಇಲ್ಲ ಸಲ್ಲದ ಆಪಾದನೆಗಳನ್ನು ಮಾಡಿ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ನನ್ನನ್ನು ತೇಜೋವಧೆ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದು ಹಾವೇರಿ ತಾಲೂಕಿನ ಶಾಸಕರು ಹಾಗೂ ವಿಧಾನಸಭೆಯ ಉಪಸಭಾ ಪತಿರುದ್ರಪ್ಪ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು “ದಿನಾಂಕ: ೦೫-೧೦-೨೦೨೪ ರಂದು ಜರ್ಮನಿ ದೇಶಕ್ಕೆ ಮಾನ್ಯ ಸಭಾಧ್ಯಕ್ಷರು ಹಾಗೂ ವಿವಿಧ ಶಾಸಕರುಗಳೊಂದಿಗೆ ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ್ದು, ದಿನಾಂಕ: ೧೫-೧೦-೨೯೨೪ ರಂದು ಮರಳಿ ಬೆಂಗಳೂರಿಗೆ ಬಂದಿರುತ್ತೇನೆ. ಮಾನ್ಯ ಮುಖ್ಯಮಂತ್ರಿಗಳ ಕೋರಿಕೆಯಂತೆ ದಿನಾಂಕ: ೧೬-೧೦-೨೦೨೪ ರಂದು ಕಛೇರಿಯ ಕೆಲಸದೊಂದಿಗೆ ಶಾಸಕರ ಭವನದಲ್ಲಿ ವಾಲ್ಮೀಕಿ ಜಯಂತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ದಿನಾಂಕ: ೧೭- ೧೦-೨೦೨೪ ರಂದು ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಭಾಗಹಿಸಿರುತ್ತೇನೆ.
ಅದರಂತೆ ದಿನಾಂಕ: ೧೮-೧೦-೨೦೨೪ ರಂದು ಮಾನ್ಯ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಭಾಗಹಿಸಿರುತ್ತೇನೆ. ದಿನಾಂಕ : ೧೯-೧೦-೨೦೨೪ ರಂದು ತಮಿಳುನಾಡಿನ ಕೊಯಿಮತ್ತೂರ ಇಲ್ಲಿಗೆ ತೆರಳಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದಿನಾಂಕ : ೨೦-೧೦-೨೦೨೪ ರ ಸಂಜೆ ಬೆಂಗಳೂರಿಗೆ ಬಂದು, ದಿನಾಂಕ: ೨೧-೧೦-೨೦೨೪ ರಂದು ಬೆಂಗಳೂರಿನಲ್ಲಿ ಸಮಿತಿ ಸಭೆಗಳಲ್ಲಿ ಭಾಗವಹಿಸಿ, ನಂತರ ಅದೇ ದಿನ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿರುತ್ತೇನೆ.
ದಿನಾಂಕ: ೨೨-೧೦-೨೦೨೪ ರಂದು ನವದೆಹಲಿಯಲ್ಲಿ ದೇಶದ ಪ್ರಥಮ ಪ್ರಜೆ ಸನ್ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ಬ್ರೌಪದಿ ಮುರ್ಮು ಇವರುಗಳೊಂದಿಗೆ ಠಕ್ಕರ ಪಾಪ ಸ್ಮಾರಕ ಸದನ ಇಲ್ಲಿ ನಡೆದ ಭಾರತೀಯ ಆದಿಮ ಜಾತಿ ಸೇವಕ ಸಂಘ (ಬಿಎಜೆಎಸ್‌ಎಸ್) ಇದರ ೭೫ ವರ್ಷಗಳ ಪ್ಲಾಟಿನಮ್ ಜುಲ್ಲಿ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ದಿನಾಂಕ: ೨೩-೧೦-೨೦೨೪ ರಂದು ಮರಳಿ ಬೆಂಗಳೂರಿಗೆ ಬಂದು ದಿನಾಂಕ: ೨೪- ೧೦-೨೦೨೪ ರಂದು ಬೆಂಗಳೂರಿನಲ್ಲಿ ವಸತಿ ಸಮಿತಿ ಹಾಗೂ ಅರ್ಜಿ ಸಮಿತಿ ಸಭೆಗಳನ್ನು ನಡೆಸಿ ಅದೇ ದಿನ ಪುನಃ ರಾಣೇಬೆನ್ನೂರಿಗೆ ಬಂದು ವಾಸ್ತವ್ಯ ಮಾಡಿರುತ್ತೇನೆ.
ದಿನಾಂಕ: ೨೫-೧೦-೨೦೨೪ ರಂದು ಹಾವೇರಿಯ ನಗರದ ಶಹರ ಪೊಲೀಸ್ ಠಾಣೆಯ ಹತ್ತಿರದ ಚರಂಡಿಯಲ್ಲಿ ದುರ್ಮರಣ ಹೊಂದಿದ ಬಾಲಕ ನಿವೇದನ ಬಸವರಾಜ ಗುಡಗೇರಿ ಇವರ ಮನೆಗೆ ತೆರಳಿ ಸಾಂತ್ವನ ಹೇಳಿರುತ್ತೇನೆ. ಬಾಲಕ ದುರ್ಮರಣ ಹೊಂದಿದ್ದಕ್ಕೆ ಅತೀವ ದುಃಖವಿದೆ. ಕುಟುಂಬಕ್ಕೆ ದೇವರು ದುಃಖವನ್ನು ಮರೆಸುವ ಶಕ್ತಿಯಲ್ಲಿ ನೀಡಲಿ ಎಂದು ಪ್ರಾರ್ಥಿಸುತ್ತಾ, ಘಟನೆ ನಡೆದ ತಕ್ಷಣವೇ ನನ್ನ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು, ನಗರಸಭೆಯ ಸದಸ್ಯರುಗಳು ಘಟನೆ ನಡೆದ ಭೇಟಿ ನೀಡಿ ಕುಟುಂಬವನ್ನು ಸಂತೈಸುವ ಕೆಲಸ ಮಾಡಿರುತ್ತೇನೆ. ನಾನು ಕೂಡ ದೂರವಾಣಿ ಮೂಲಕ ನಿರಂತರವಾಗಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಿರುತ್ತೇನೆ. ಜೊತೆಗೆ ಬಾಲಕರ ಕುಟುಂಬದೊಂದಿಗೆ ಮಾತನಾಡಿ ಪಕ್ಷದ ಮುಖಂಡರನ್ನು ಮನೆಗೆ ಕಳುಹಿಸಿ ಸಂತೈಸುವ ಕೆಲಸ ಮಾಡಿರುತ್ತೇನೆ. ದಿ. ನಿವೇದನ ಕುಟುಂಬ ವರ್ಗಕ್ಕೆ ವೈಯಕ್ತಿಕವಾಗಿ ಧನ ಸಹಾಯ ನೀಡಲಾಗಿದೆ. ಹಾಗೂ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವನ್ನು ಕೊಡಿಸುವ ಪ್ರಯತ್ನ ಮಾಡಿದ್ದೇನೆ.
ಅವರಿಗೆ ವಸತಿಗಾಗಿ ಸರ್ಕಾರದ ವತಿಯಿಂದ ಹಂಚಿಕೆ ಮಾಡುವ ಜಿ+೧ ಮನೆಗಳ ಪೈಕಿ ಮನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತ ಬಾಲಕನ ತಂದೆಗೆ ಸ್ವಾವನೆಂಬ ಸಾರತಿ ಯೋಜನೆಯಡಿ ನಾಲ್ಕು ಚಕ್ರದ ವಾಹನ ಕೊಡಿಸುವ ಭರವಸೆ ನೀಡಿದ್ದೇನೆ.
ತಾಲ್ಲೂಕಿನಾದ್ಯಂತ ಸುರಿದ ಮಳೆಯ ಹಾನಿಯ ವಿಷಯವಾಗಿ ಅಗತ್ಯ ನಿರ್ದೇಶನಗಳನ್ನು ನೀಡಿರುತ್ತೇನೆ. ಅವಶ್ಯಕವಾದ ಕಡೆ ಗಂಜಿ ಕೇಂದ್ರಗಳನ್ನು ತೆರೆಯಲು ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶಗಳನ್ನು ನೀಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ನನ್ನ ಕರ್ತವ್ಯದಿಂದ ವಿಮುಖನಾಗುವ ಪ್ರಶ್ನೆಯೇ ಇಲ್ಲ. ನಾನು ನನ್ನ ಕಚೇರಿಯ ಸಿಬ್ಬಂದಿಗಳು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಕಷ್ಟ ನಷ್ಟಗಳಲ್ಲಿ ಸದಾ ಭಾಗಿಯಾಗುತ್ತಾ ಬಂದಿರುತ್ತೇನೆ. ಮಾನಸಿಕವಾಗಿ ಕ್ಷೇತ್ರದಲ್ಲಿಯೇ ಇದ್ದು ಕಾಲ ಕಾಲಕ್ಕೇ ಕ್ಷೇತ್ರದ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತಾ ಬಂದಿರುತ್ತೇನೆ.
ಯಾರೋ ಕಿಡಗೇಡಿಗಳು ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ತೇಜೋವಧೆ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಕ್ಷೇತ್ರದ ಜನ ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಕ್ಷೇತ್ರದ ಮತದಾರರೂ ಸದಾ ನನ್ನ ಜೊತೆಗಿದ್ದು, ನಾನು ಸಹ ಅವರ ಪ್ರತಿ ಕಷ್ಟ ಸುಖಗಳಲ್ಲಿ ಸದಾಕಾಲ ಭಾಗಿಯಾಗಿರುತ್ತೇನೆ. ಮತದಾರರೂ ಕಿಡಗೇಡಿಗಳ ಮಾತಿಗೆ ಕವಿಗೊಡದೇ ಅಭಿವೃದ್ಧಿ ಕುರಿತು ಸಲಹ ಸೂಚನಗಳನ್ನು ಸ್ವೀಕರಿಸಲು ಸದಾ ಸಿದ್ಧನಿರುತ್ತೇನೆ ಎಂದು ವಿಧಾನಸಭೆಯ ಉಪಸಭಾ ಪತಿರುದ್ರಪ್ಪ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...