ಕೋರಗಲ್ ವಿರೂಪಾಕ್ಷಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಿತ್ತು…

Date:

ಕೋರಗಲ್ ವಿರೂಪಾಕ್ಷಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಿತ್ತು…
ಹಾವೇರಿ ನೆಲದ ಸಾಹಿತಿ, ತಮ್ಮ ಬದುಕು, ಬರಹದ ಮೂಲಕ ಹಾವೇರಿ ಮಣ್ಣಿಗೆ ಗೌರವ, ಘನತೆ ತಂದುಕೊಟ್ಟಿರುವ, ತಮ್ಮ ಈ ಎಂಬತ್ತೈದರ ಇಳಿವಯಸ್ಸಿನಲ್ಲೂ ಜೀವನೋತ್ಸಾಹದಿಂದ ಹೊಸ ಪೀಳಿಗೆಯ ಬರಹಗಾರರಿಗೆ ಮಾದರಿಯಾಗಿರುವ
ಕೋರಗಲ್ ವಿರೂಪಾಕ್ಷಪ್ಪನವರು ಹಾವೇರಿಯ ಜಿ.ಎಚ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ ನಿವೃತ್ತಿಯಾಗಿದ್ದಾರೆ.
ತಮ್ಮ ವೃತ್ತಿಯ ಜೊತೆಗೆ ಕಥೆಗಾರರಾಗಿ ೮೦ -೯೦ ದಶಕದಲ್ಲಿಯೇ ಹೆಸರು ಮಾಡಿದವರು, ಅಂದಿನ “ಸುಧಾ” ಮಯೂರ ” “ಕರ್ಮವೀರ ” “ಕಸ್ತೂರಿ “, “ಪ್ರಜಾಮತ” ಹೀಗೆ ನಾನಾ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾದ ಅವುಗಳನ್ನು ಓದಿದ ನೆ
ನಪು ಇದೆ.
ರಾಜ್ಯದ ಹಾಗೂ ದೇಶದ ಪ್ರಮುಖ ಸಾಹಿತ್ಯ ದಿಗ್ಗಜರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಇವರು ಕೌರವ ದಿನ ಪತ್ರಿಕೆಯಲ್ಲಿ “ಸಿಂಬಳು ಬುರುಕನ ನೆನಪುಗಳು” “ಮೊಗಲಾಯಿ ನಾಡಿನಿಂದ ಏಲಕ್ಕಿನಾಡಿಗೆ” ಎನ್ನುವ ಅಂಕಣಗಳನ್ನು ಬರೆಯುತ್ತಾ ಬರವಣಿಗೆಯ ನಾನಾ ಮಜಲುಗಳನ್ನು ಓದುಗರಲ್ಲಿ ಬಿತ್ತುವ ಮೂಲಕ ಓದುಗರ ಚಿಂತನಾಕ್ರಮವನ್ನು ಬದಲಾಯಿಸಿದ ಶ್ರೇಯಸ್ಸು ಇವರದು.
ಇವರು ಅನೇಕ ಕೃತಿಗಳನ್ನು ಕನ್ನಡ ಸಾರಸತ್ವಲೋಕಕ್ಕೆ ನೀಡಿದ್ದಾರೆ. ಇವರ ಸಾಹಿತ್ಯದ ಬಗ್ಗೆ, ಇವರು “ಎಡಪಂಥೀಯರೋ, ಬಲಪಂಥೀಯರೋ” ಎನ್ನುವ ತಕರಾರುಗಳು ಏನೆ ಇದ್ದರೂ ಇವರ ಅಮೂಲ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆಯಾಗಿವೆ.
ಇವರು ತಮ್ಮ ಈ ಇಳಿವಯಸ್ಸಿನಲ್ಲಿ (ಇಳಿಯವಯಸ್ಸು ಎಂದರೆ ಪ್ರೀತಿಯಿಂದ ಕೋಪಿಸಿಕೊಳ್ಳುತ್ತಾರೆ) ಕಲ್ಯಾಣದಿಂದ ಉಳಿವಿಯತ್ತ ಪ್ರಸ್ಥಾನಗೈದ ಶರಣರ ದಂಡಿನ ದಾರಿಯನ್ನು ಎಂಬತ್ತೈದರ ಪ್ರಾಯದ ದಣಿವನ್ನು ಲೆಕ್ಕಿಸದೆ ಸಂಚರಿಸಿ, ಕ್ಷೇತ್ರ ಕಾರ್ಯ ಕೈಗೊಂಡು ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ.
‘ಬೆಂಕಿಯಲ್ಲಿ ಬೇಯುತ್ತಿತ್ತು ಕಲ್ಯಾಣ’ ಎಂಬ ಶೀರ್ಷಿಕೆಯಿಂದ ಆರಂಭವಾಗುವ ಕಾದಂಬರಿ ಸುಮಾರು ಮೂವತ್ತಾರು ಅಧ್ಯಾಯಗಳ ಹರಿವಿನಲ್ಲಿ ಷಟ್‌ಸ್ಥಲಜ್ಞಾನಿ ಚೆನ್ನಬಸವಣ್ಣನವರ ತಾಯಿ ನಾಗಲಾಂಬಿಕೆ, ಅತ್ತೆ ಗಂಗಾಂಬಿಕೆ, ನೀಲಾಂಬಿಕೆ, ಮಡಿವಾಳ ಮಾಚಿದೇವರು, ಡೋಹರ ಕಕ್ಕಯ್ಯನವರು ಮುಂತಾದ ಅನೇಕ ಶರಣ-ಶರಣೆಯರ ಸಂಘಟಿತ ನೇತೃತ್ವದಲ್ಲಿ ಸುಮಾರು ಇಪ್ಪತ್ತು ಸಾವಿರ ಸಂದೋಹದೊಂದಿಗೆ ಉಳವಿಯತ್ತ ಪಯಣ ಹೊರಡುತ್ತಾರೆ. ಬಹುದೊಡ್ಡ ಸಂಖ್ಯೆಯ ಶರಣ ಸಮುದಾಯದೊಂದಿಗೆ ಆರಂಭವಾದ ಈ ಕಾರವಾನ್ ಸಾಗಲು ಆರಿಸಿಕೊಂಡಿದ್ದು ನದಿಯ ಹರಿವಿನ ಹೆಜ್ಜೆಗಳನ್ನು.
ಹೀಗೆ ನೀರ ಮಾರ್ಗದ ಹೆಜ್ಜೆ ತುಳಿಯುವ ಆನೇಕ ಸಂದರ್ಭಗಳಲ್ಲಿ ಆ ನೀರಿನಲ್ಲಿ ಶರಣರ ಮೈಯೊಳಗಣ ರಕ್ತವು ಸೇರಿ ನೀರು ತನ್ನ ಬಣ್ಣವನ್ನೇ ಬದಲಿಸಿದ ಚಿತ್ರಗಳು ಇಲ್ಲಿ ಚಿತ್ರಿತವಾಗಿವೆ. ದಾರಿಯುದ್ದಕ್ಕೂ ಶರಣರು ಅನುಭವಿಸಿದ ಕಷ್ಟ, ಎದುರಿಸಿದ ಸವಾಲು, ಬದಲಾಯಿಸಿದ ಮಾರ್ಗ, ಜನರಿಂದ ಪಡೆದ ಸಹಾಯ ವಿಶೇಷವಾಗಿ ಸಾಗುವ ಹಾದಿಯಲ್ಲಿ ಬರುವ ಜನಪದರು ಬಸವಣ್ಣನ ಪರಿವಾರ ಹಾಗೂ ಶರಣರ ಕುರಿತಾಗಿ ಕೇಳಿ, ನೋಡಿ ಕಾದಂಬರಿ ರಚಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಯಾವಾಗಲೂ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಆದರೆ ಪ್ರಶಸ್ತಿಗಳನ್ನು ಹೇಗೆ ಪಡೆಯಬೇಕು, ಹೇಗೆ ಹೊಡೆದುಕೊಳ್ಳಬೇಕೆನ್ನುವ ಲಾಭಿಗಳ ನಡುವೆ ಕೋರಗಲ್ ವಿರೂಪಾಕ್ಷಪ್ಪನವರಂತವರು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಿ ಪಡೆಯಬೇಕೆ? ಅರ್ಹತೆ ಇದ್ದರೂ ಪ್ರಶಸ್ತಿಯಿಂದ ವಂಚಿತರಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಕೋರಗಲ್ ವಿರೂಪಾಕ್ಷಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಿತ್ತು…
ಹಾವೇರಿ ನೆಲದ ಸಾಹಿತಿ, ತಮ್ಮ ಬದುಕು, ಬರಹದ ಮೂಲಕ ಹಾವೇರಿ ಮಣ್ಣಿಗೆ ಗೌರವ, ಘನತೆ ತಂದುಕೊಟ್ಟಿರುವ, ತಮ್ಮ ಈ ಎಂಬತ್ತೈದರ ಇಳಿವಯಸ್ಸಿನಲ್ಲೂ ಜೀವನೋತ್ಸಾಹದಿಂದ ಹೊಸ ಪೀಳಿಗೆಯ ಬರಹಗಾರರಿಗೆ ಮಾದರಿಯಾಗಿರುವ
ಕೋರಗಲ್ ವಿರೂಪಾಕ್ಷಪ್ಪನವರು ಹಾವೇರಿಯ ಜಿ.ಎಚ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ ನಿವೃತ್ತಿಯಾಗಿದ್ದಾರೆ.
ತಮ್ಮ ವೃತ್ತಿಯ ಜೊತೆಗೆ ಕಥೆಗಾರರಾಗಿ ೮೦ -೯೦ ದಶಕದಲ್ಲಿಯೇ ಹೆಸರು ಮಾಡಿದವರು, ಅಂದಿನ “ಸುಧಾ” ಮಯೂರ ” “ಕರ್ಮವೀರ ” “ಕಸ್ತೂರಿ “, “ಪ್ರಜಾಮತ” ಹೀಗೆ ನಾನಾ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾದ ಅವುಗಳನ್ನು ಓದಿದ ನೆ
ನಪು ಇದೆ.
ರಾಜ್ಯದ ಹಾಗೂ ದೇಶದ ಪ್ರಮುಖ ಸಾಹಿತ್ಯ ದಿಗ್ಗಜರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಇವರು ಕೌರವ ದಿನ ಪತ್ರಿಕೆಯಲ್ಲಿ “ಸಿಂಬಳು ಬುರುಕನ ನೆನಪುಗಳು” “ಮೊಗಲಾಯಿ ನಾಡಿನಿಂದ ಏಲಕ್ಕಿನಾಡಿಗೆ” ಎನ್ನುವ ಅಂಕಣಗಳನ್ನು ಬರೆಯುತ್ತಾ ಬರವಣಿಗೆಯ ನಾನಾ ಮಜಲುಗಳನ್ನು ಓದುಗರಲ್ಲಿ ಬಿತ್ತುವ ಮೂಲಕ ಓದುಗರ ಚಿಂತನಾಕ್ರಮವನ್ನು ಬದಲಾಯಿಸಿದ ಶ್ರೇಯಸ್ಸು ಇವರದು.
ಇವರು ಅನೇಕ ಕೃತಿಗಳನ್ನು ಕನ್ನಡ ಸಾರಸತ್ವಲೋಕಕ್ಕೆ ನೀಡಿದ್ದಾರೆ. ಇವರ ಸಾಹಿತ್ಯದ ಬಗ್ಗೆ, ಇವರು “ಎಡಪಂಥೀಯರೋ, ಬಲಪಂಥೀಯರೋ” ಎನ್ನುವ ತಕರಾರುಗಳು ಏನೆ ಇದ್ದರೂ ಇವರ ಅಮೂಲ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆಯಾಗಿವೆ.
ಇವರು ತಮ್ಮ ಈ ಇಳಿವಯಸ್ಸಿನಲ್ಲಿ (ಇಳಿಯವಯಸ್ಸು ಎಂದರೆ ಪ್ರೀತಿಯಿಂದ ಕೋಪಿಸಿಕೊಳ್ಳುತ್ತಾರೆ) ಕಲ್ಯಾಣದಿಂದ ಉಳಿವಿಯತ್ತ ಪ್ರಸ್ಥಾನಗೈದ ಶರಣರ ದಂಡಿನ ದಾರಿಯನ್ನು ಎಂಬತ್ತೈದರ ಪ್ರಾಯದ ದಣಿವನ್ನು ಲೆಕ್ಕಿಸದೆ ಸಂಚರಿಸಿ, ಕ್ಷೇತ್ರ ಕಾರ್ಯ ಕೈಗೊಂಡು ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ.
‘ಬೆಂಕಿಯಲ್ಲಿ ಬೇಯುತ್ತಿತ್ತು ಕಲ್ಯಾಣ’ ಎಂಬ ಶೀರ್ಷಿಕೆಯಿಂದ ಆರಂಭವಾಗುವ ಕಾದಂಬರಿ ಸುಮಾರು ಮೂವತ್ತಾರು ಅಧ್ಯಾಯಗಳ ಹರಿವಿನಲ್ಲಿ ಷಟ್‌ಸ್ಥಲಜ್ಞಾನಿ ಚೆನ್ನಬಸವಣ್ಣನವರ ತಾಯಿ ನಾಗಲಾಂಬಿಕೆ, ಅತ್ತೆ ಗಂಗಾಂಬಿಕೆ, ನೀಲಾಂಬಿಕೆ, ಮಡಿವಾಳ ಮಾಚಿದೇವರು, ಡೋಹರ ಕಕ್ಕಯ್ಯನವರು ಮುಂತಾದ ಅನೇಕ ಶರಣ-ಶರಣೆಯರ ಸಂಘಟಿತ ನೇತೃತ್ವದಲ್ಲಿ ಸುಮಾರು ಇಪ್ಪತ್ತು ಸಾವಿರ ಸಂದೋಹದೊಂದಿಗೆ ಉಳವಿಯತ್ತ ಪಯಣ ಹೊರಡುತ್ತಾರೆ. ಬಹುದೊಡ್ಡ ಸಂಖ್ಯೆಯ ಶರಣ ಸಮುದಾಯದೊಂದಿಗೆ ಆರಂಭವಾದ ಈ ಕಾರವಾನ್ ಸಾಗಲು ಆರಿಸಿಕೊಂಡಿದ್ದು ನದಿಯ ಹರಿವಿನ ಹೆಜ್ಜೆಗಳನ್ನು.
ಹೀಗೆ ನೀರ ಮಾರ್ಗದ ಹೆಜ್ಜೆ ತುಳಿಯುವ ಆನೇಕ ಸಂದರ್ಭಗಳಲ್ಲಿ ಆ ನೀರಿನಲ್ಲಿ ಶರಣರ ಮೈಯೊಳಗಣ ರಕ್ತವು ಸೇರಿ ನೀರು ತನ್ನ ಬಣ್ಣವನ್ನೇ ಬದಲಿಸಿದ ಚಿತ್ರಗಳು ಇಲ್ಲಿ ಚಿತ್ರಿತವಾಗಿವೆ. ದಾರಿಯುದ್ದಕ್ಕೂ ಶರಣರು ಅನುಭವಿಸಿದ ಕಷ್ಟ, ಎದುರಿಸಿದ ಸವಾಲು, ಬದಲಾಯಿಸಿದ ಮಾರ್ಗ, ಜನರಿಂದ ಪಡೆದ ಸಹಾಯ ವಿಶೇಷವಾಗಿ ಸಾಗುವ ಹಾದಿಯಲ್ಲಿ ಬರುವ ಜನಪದರು ಬಸವಣ್ಣನ ಪರಿವಾರ ಹಾಗೂ ಶರಣರ ಕುರಿತಾಗಿ ಕೇಳಿ, ನೋಡಿ ಕಾದಂಬರಿ ರಚಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಯಾವಾಗಲೂ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಆದರೆ ಪ್ರಶಸ್ತಿಗಳನ್ನು ಹೇಗೆ ಪಡೆಯಬೇಕು, ಹೇಗೆ ಹೊಡೆದುಕೊಳ್ಳಬೇಕೆನ್ನುವ ಲಾಭಿಗಳ ನಡುವೆ ಕೋರಗಲ್ ವಿರೂಪಾಕ್ಷಪ್ಪನವರಂತವರು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಿ ಪಡೆಯಬೇಕೆ? ಅರ್ಹತೆ ಇದ್ದರೂ ಪ್ರಶಸ್ತಿಯಿಂದ ವಂಚಿತರಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...