ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್-ವಿದ್ಯುತ್ ಕಂಬಕ್ಕೆ ಡಿಕ್ಕಿ, ತಪ್ಪಿದ ಭಾರೀ ಅನುಹುತ!

Date:

ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್-ವಿದ್ಯುತ್ ಕಂಬಕ್ಕೆ ಡಿಕ್ಕಿ, ತಪ್ಪಿದ ಭಾರೀ ಅನುಹುತ!
ಹಾವೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ಪರಿವರ್ತಕವಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮಧ್ಯಾಹ್ನ ೧-೪೫ ರ ಸುಮಾರಿಗೆ ಹಾವೇರಿ ತಾಲೂಕಿನ ಬೆಳವಗಿಗ್ರಾಮದ ಬಳಿ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣಕ್ಕೆ ಭಾರೀ ಅನುಹುತ ತಪ್ಪಿದಂತಾಗಿದೆ.
ಗದಗ ಡಿಪೋಕ್ಕೆ ಸೇರಿದ್ದ ಬಸ್ ಶಿರಹಟ್ಟಿಯಿಂದ ರಾಣೇಬೆನ್ನೂರಿಗೆ ೪೦ಕ್ಕೂ ಅಧಿಕ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಬಸ್ ಹಾವೇರಿ ತಾಲೂಕಿನ ಬೆಳವಗಿಗ್ರಾಮದ ಬಳಿಯ ಮೈಲಾರಲಿಂಗೇಶ್ವರ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಬಸ್‌ಗೆ ಅಡ್ಡವಾಗಿ ಬೈಕ್ ಸವಾರ ಬಂದಿದ್ದಾನೆ. ಬೈಕ್‌ಗೆ ಬಸ್ ಅಪ್ಪಳಿಸುವುದನ್ನು ಚಾಲಕ ತಡೆಯಲು ಮುಂದಾದ ವೇಳೆ ರಸ್ತೆಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್‌ನ ಪರಿವರ್ತಕವಿದ್ದ ವಿದ್ಯುತ್ ಕಂಬಕ್ಕೆ ಬಸ್ ಬಲವಾಗಿ ಅಪ್ಪ
ಳಿಸಿದೆ.
ಈ ವೇಳೆ ಡಿಕ್ಕಿಯ ರಭಸಕ್ಕೆ ವಿದ್ಯುತ್ ಸ್ಥಗಿತವಾದ ಕಾರಣಕ್ಕೆ ಕಂಬದ ವಿದ್ಯುತ್ ತಂತಿಗಳು ಬಸ್‌ಗೆ ತಾಗಿದರೂ ಸಹ ಪ್ರಯಾಣಿಕರು ಬಹುದೊಡ್ಡ ಅಪಾಯದಿಂದ ಪರಾಗಿದ್ದಾರೆ. ಡಿಕ್ಕಿಯ ರಭಸ ಯಾವ ಪ್ರಮಾಣದಲ್ಲಿತ್ತೆಂದರೇ ಪರಿವರ್ತಕದ ಎರಡು ವಿದ್ಯುತ್ ಕಂಬಗಳು ಮುರಿದು ತಂಡಾಗಿದ್ದು, ಪರಿವರ್ತಕಕ್ಕೂ ಸಹ ಧಕ್ಕೆಯಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರು ಎದ್ದು,ಬಿದ್ದು ಬಸ್‌ನಿಂದ ಹೊರಗೋಡಿ ಬಂದಿದ್ದಾರೆ. ಡಿಕ್ಕಿಯ ರಭಸಕ್ಕೆ ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಗಾಯಾಳುಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಬೇರೆ ಬಸ್‌ನಲ್ಲಿ ಪ್ರಯಾಣಿಕರನ್ನು ಕಳಿಸಲಾಯಿತು. ಅಪಘಾತ ನಡೆದ ಸ್ಥಳದಲ್ಲಿದ್ದ ಸ್ಥಳೀಯರು ಜನರನ್ನು ಉಪಚರಿಸಿದ್ದಾರೆ.
ಬದುಕಿದೆಯಾ ಬಡಜೀವ ಎಂದ ಪ್ರಯಾಣಿಕರು; ಶಿರಹಟ್ಟಿಯಿಂದ ಬೆಳ್ಳಟ್ಟಿ-ಗುತ್ತಲಮಾರ್ಗವಾಗಿ ರಾಣೇಬೆನ್ನೂರಿಗೆ ಹೊರಟಿದ್ದ ಬಸ್‌ನಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ೪೦ಕ್ಕೂಅಧಿಕ ಪ್ರಯಾಣಿಕರಿದ್ದರು. ಬೆಳವಗಿಯ ಸಮೀಪದಲ್ಲಿ ರಸ್ತೆಯ ಬದಿಯ ಪೆಟ್ರೋಲ್‌ಪಂಪ್‌ಗೆ ನುಗ್ಗಿದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆಯುತ್ತಿದ್ದಂತೆಯೇ ಜೀವಬಾಯಿಗೆ ಬಂದಂತಾಗಿತ್ತು, ದೇವರದಯೆ ಯಾರಿಗೂ ಏನು ಆಗಿಲ್ಲ ಎಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದ್ಯಾಮಮ್ಮ ತಿಳಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್-ವಿದ್ಯುತ್ ಕಂಬಕ್ಕೆ ಡಿಕ್ಕಿ, ತಪ್ಪಿದ ಭಾರೀ ಅನುಹುತ!
ಹಾವೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ಪರಿವರ್ತಕವಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮಧ್ಯಾಹ್ನ ೧-೪೫ ರ ಸುಮಾರಿಗೆ ಹಾವೇರಿ ತಾಲೂಕಿನ ಬೆಳವಗಿಗ್ರಾಮದ ಬಳಿ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣಕ್ಕೆ ಭಾರೀ ಅನುಹುತ ತಪ್ಪಿದಂತಾಗಿದೆ.
ಗದಗ ಡಿಪೋಕ್ಕೆ ಸೇರಿದ್ದ ಬಸ್ ಶಿರಹಟ್ಟಿಯಿಂದ ರಾಣೇಬೆನ್ನೂರಿಗೆ ೪೦ಕ್ಕೂ ಅಧಿಕ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಬಸ್ ಹಾವೇರಿ ತಾಲೂಕಿನ ಬೆಳವಗಿಗ್ರಾಮದ ಬಳಿಯ ಮೈಲಾರಲಿಂಗೇಶ್ವರ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಬಸ್‌ಗೆ ಅಡ್ಡವಾಗಿ ಬೈಕ್ ಸವಾರ ಬಂದಿದ್ದಾನೆ. ಬೈಕ್‌ಗೆ ಬಸ್ ಅಪ್ಪಳಿಸುವುದನ್ನು ಚಾಲಕ ತಡೆಯಲು ಮುಂದಾದ ವೇಳೆ ರಸ್ತೆಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್‌ನ ಪರಿವರ್ತಕವಿದ್ದ ವಿದ್ಯುತ್ ಕಂಬಕ್ಕೆ ಬಸ್ ಬಲವಾಗಿ ಅಪ್ಪ
ಳಿಸಿದೆ.
ಈ ವೇಳೆ ಡಿಕ್ಕಿಯ ರಭಸಕ್ಕೆ ವಿದ್ಯುತ್ ಸ್ಥಗಿತವಾದ ಕಾರಣಕ್ಕೆ ಕಂಬದ ವಿದ್ಯುತ್ ತಂತಿಗಳು ಬಸ್‌ಗೆ ತಾಗಿದರೂ ಸಹ ಪ್ರಯಾಣಿಕರು ಬಹುದೊಡ್ಡ ಅಪಾಯದಿಂದ ಪರಾಗಿದ್ದಾರೆ. ಡಿಕ್ಕಿಯ ರಭಸ ಯಾವ ಪ್ರಮಾಣದಲ್ಲಿತ್ತೆಂದರೇ ಪರಿವರ್ತಕದ ಎರಡು ವಿದ್ಯುತ್ ಕಂಬಗಳು ಮುರಿದು ತಂಡಾಗಿದ್ದು, ಪರಿವರ್ತಕಕ್ಕೂ ಸಹ ಧಕ್ಕೆಯಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರು ಎದ್ದು,ಬಿದ್ದು ಬಸ್‌ನಿಂದ ಹೊರಗೋಡಿ ಬಂದಿದ್ದಾರೆ. ಡಿಕ್ಕಿಯ ರಭಸಕ್ಕೆ ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಗಾಯಾಳುಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಬೇರೆ ಬಸ್‌ನಲ್ಲಿ ಪ್ರಯಾಣಿಕರನ್ನು ಕಳಿಸಲಾಯಿತು. ಅಪಘಾತ ನಡೆದ ಸ್ಥಳದಲ್ಲಿದ್ದ ಸ್ಥಳೀಯರು ಜನರನ್ನು ಉಪಚರಿಸಿದ್ದಾರೆ.
ಬದುಕಿದೆಯಾ ಬಡಜೀವ ಎಂದ ಪ್ರಯಾಣಿಕರು; ಶಿರಹಟ್ಟಿಯಿಂದ ಬೆಳ್ಳಟ್ಟಿ-ಗುತ್ತಲಮಾರ್ಗವಾಗಿ ರಾಣೇಬೆನ್ನೂರಿಗೆ ಹೊರಟಿದ್ದ ಬಸ್‌ನಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ೪೦ಕ್ಕೂಅಧಿಕ ಪ್ರಯಾಣಿಕರಿದ್ದರು. ಬೆಳವಗಿಯ ಸಮೀಪದಲ್ಲಿ ರಸ್ತೆಯ ಬದಿಯ ಪೆಟ್ರೋಲ್‌ಪಂಪ್‌ಗೆ ನುಗ್ಗಿದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆಯುತ್ತಿದ್ದಂತೆಯೇ ಜೀವಬಾಯಿಗೆ ಬಂದಂತಾಗಿತ್ತು, ದೇವರದಯೆ ಯಾರಿಗೂ ಏನು ಆಗಿಲ್ಲ ಎಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದ್ಯಾಮಮ್ಮ ತಿಳಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...