ಜಾನಪದ ವಿವಿಗೆ ಪ್ರೊ.ಕೃಷ್ಣಪ್ಪನವರ ಹೆಸರಿಡಲು ಡಿಎಸ್ಎಸ್ ಒತ್ತಾಯ
ಹಾವೇರಿ:ಜಿಲ್ಲೆಯ ಶಿಗ್ಗಾವಿ ಬಳಿ ಇರುವ ಜಾನಪದ ವಿಶ್ವವಿದ್ಯಾಲಯಕ್ಕೆ ಹೆಸರಾಂತ ಹೋರಾಟಗಾರ, ಸಾಹಿತಿ ಪ್ರೊ. ಬಿ ಕೃಷ್ಣಪ್ಪ ಅವರ ಹೆಸರನ್ನು ನಾಮಕರಣಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.೧೮ರಂದು ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ಜಿಲ್ಲಾ ಘಟಕದವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರುಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿದ ಶಿಗ್ಗಾಂವ ಬಳಿ ಇರುವ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರೊ. ಬಿ ಕೃಷ್ಣಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು. ಪ್ರೊ. ಬಿ ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರು, ದಲಿತರ ಎದೆಯಲ್ಲಿ ಸ್ವಾಬಿಮಾನದ ಕಿಚ್ಚು ಹತ್ತಿಸಿದ ಸರದಾರ, ದಲಿತರ ಗುಡಿಸಲಿನಲ್ಲಿ ಹೋರಾಟದ ಮೂಲಕ ದೀಪ ಹಚ್ಚಿದ್ದೇನೆ. ಹೊರಗೆ ಬಿರುಗಾಳಿ ಬೀಸುತ್ತಿದೆ, ಆರದಂತೆ ನೋಡಿಕೋಳ್ಳಿ ಎಂದು ಕರೆಯನ್ನು ಸಹ ಕೊಟ್ಟಿದ್ದ ಈ ಮಹಾನ ಧೀಮಂತ ನಾಯಕ ರಾಷ್ಟ್ರ ಮತ್ತು ರಾಜ್ಯ ಮೆಚ್ಚಿದ ಜನನಾಯಕ ಇಂತಹ ನಾಯಕನ ಹೆಸರನ್ನು ಜಾನಪದ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವಂತೆ ಆಗ್ರಹಿಸಿದರು.
ಬಹುಸಂಖ್ಯಾತ ಮಾದಿಗ ಸಮಾಜಕ್ಕೆ ಹಾವೇರಿ ನಗರದಲ್ಲಿ ಸಾರ್ವಜನಿಕವಾಗಿ ಸಭೆ -ಸಮಾರಂಭ ಮಾಡಲು ೧೦ ಎಕರೆ ಭೂಮಿಯನ್ನು ಒದಗಿಸಿ ಅನುಕೂಲ ಕಲ್ಪಿಸಬೇಕು. ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣ ಮಾಡಬೇಕು. ಜಿಲ್ಲೆಯ ಎಲ್ಲಾ ಹಳ್ಳಿಯಲ್ಲಿ ಜಗಜೀವನರಾಮ್ ಅವರ ಭವನ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ನಿಂಗಪ್ಪ ಕಡೂರ, ಜಿಲ್ಲಾ ಖಜಾಂಚಿ ಮಂಜು ದಡ್ಡೂರ, ಆನಂದ ಮುರುಡೆಪ್ಪನವರ, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸುಮಂಗಲಾ ರಾರಾವಿ. ಗುತ್ತೆಮ್ಮ ಮಾಳಗಿ, ನಗೀನಾಬಾನು ಎ ಎಂ, ರೇಖಾ ಸಣ್ಣನೀಲಪ್ಪನವರ, ಹನುಮಂತಪ್ಪ ಮಾದರ್, ನಾಗರಾಜ ಶಿಡ್ಲಣ್ಣನವರ, ಸುರೇಶ ಹರಿಜನ, ಮಲ್ಲೇಶಪ್ಪ ಕೆಂಚಲ್ಲನವರ, ನಾಗರಾಜ ಕರಿಯಮ್ಮನವರ, ಮಾಲತೇಶ ಕೆಂಚಮ್ಮನವರ, ಅಣ್ಣಪ್ಪ ಸಂಜೀವಣ್ಣನವರ, ಕೋಟೆಪ್ಪ ಸಂಜೀವಣ್ಣನವರ, ಕರಿಯಪ್ಪ ಜಾಲಣ್ಣನವರ, ಕುಮಾರ ಹುಣಸಿಮರದ, ಪ್ರಕಾಶ ಮರಬದ, ಮರಿಯಪ್ಪ ಬಂದಮ್ಮನವರ, ರಾಮಣ್ಣ ಮಾದಾಪೂರ್, ರಾಜು ಮೂಕಮ್ಮನವರ, ಪ್ರವೀಣ್ ಗುಡ್ಡದ, ರೇವಣಪ್ಪ ಗುಬ್ಬಿ ಮುಂತಾದವರು ಹಾಜರಿದ್ದರು.