ಜಿಲ್ಲೆಯಲ್ಲಿ ೧೫೯ ಮನೆಗಳಿಗೆ ಹಾನಿ- ಮೂರು ಜೀವಹಾನಿ-೧೨ ರಸ್ತೆ ಸಂಪರ್ಕ ಕಡಿತ
-ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ೧೫೯ ಮನೆಗಳಿಗೆ ಹಾನಿಯಾಗಿದ್ದು, ಮೂರು ಮಾನವ ಜೀವಹಾನಿ ಸಂಭವಿಸಿದ್ದು, ೭.೭೮ ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದ್ದು, ೧೨ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೧೬.೪೩ ಕೋಟಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ರೂ. ೫.೭೫ ಕೋಟಿ ಸೇರಿ ೨೨.೧೮ ಕೋಟಿ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.ಮಳೆ ವಿವರ: ಜಿಲ್ಲೆಯಲ್ಲಿ ಜನವರಿ ೧ ರಿಂದ ಜುಲೈ ೨೦ರವರೆಗೆ ವಾಡಿಕೆ ಮಳೆ ೩೫೦.೫೦ ಮಿ.ಮಿ. ಎದುರು ೩೪೫ ಮಿ.ಮಿ ಮಳೆಯಾಗಿದೆ. ಜುಲೈ ೧ ರಿಂದ ೨೦ರವರೆಗೆ ೧೧೦ ಮಿ.ಮಿ ಎದುರು ೧೨೦.೪೦ ಮಿ.ಮಿ ಮಳೆಯಾಗಿದೆ. ಕಳೆದ ಏಳು ದಿನಗಳಿಂದ ೪೧ ಮಿ.ಮಿ ವಾಡಿಕೆ ಮಳೆ ಎದುರು ೭೭.೫೦ ಮಿ.ಮಿ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೬.೦೦ ಮಿ.ಮಿ ವಾಡಿಕೆ ಮಳೆಗೆ ಎದುರು ೧೩.೯೦ ಮಿ.ಮಿ. ಅಧಿಕ ಮಳೆಯಾಗಿದೆ.
ಮನೆಹಾನಿ ವಿವರ: ಜಿಲ್ಲೆಯಲ್ಲಿ ಒಟ್ಟು ೧೫೯ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಒಂದು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, ೧೫೪ ಮನೆಗಳು ಭಾಗಶಃಹಾನಿಯಾಗಿದೆ. ಮೂರು ಸದಸ್ಯರ ಸಮಿತಿಯಿಂದ ಹಾನಿಯಾದ ಮನೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೀವಹಾನಿ: ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಜುಲೈ ೧೯ ರಂದು ಮನೆ ಗೋಡೆ ಕುಸಿದು ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬದ ವಾರಸುದಾರರಿಗೆ ತಲಾ ರೂ.೫ ಲಕ್ಷದಂತೆ ಒಟ್ಟು ರೂ.೧೫ ಲಕ್ಷ ವಿತರಣೆ ಮಾಡಲಾಗಿದೆ. ಯಾವುದೇ ಜಾನುವಾರು ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಬೆಳೆಹಾನಿ: ಜಿಲ್ಲೆಯಲ್ಲಿ ೧೪ ರೈತರ ೭.೭೮ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ೫.೧೮ ಹೆಕ್ಟೇರ್ ಬಾಳೆ, ೨ ಹೆಕ್ಟೇರ್ ಬೆಳ್ಳುಳ್ಳಿ ಹಾಗೂ ೦.೬೦ ಹೆಕ್ಟೇರ್ ಹಾಗಲಕಾಯಿ ಬೆಳೆ ಹಾನಿಯಾಗಿದೆ.
೧೨ ರಸ್ತೆ ಸಂಪರ್ಕ ಕಡಿತ: ಜಿಲ್ಲೆಯಲ್ಲಿ ಒಟ್ಟು ೧೨ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಹಾವೇರಿ ತಾಲೂಕಿನ ನಾಗನೂರ-ಕೂಡಲ ಹಾಗೂ ಕರ್ಜಗಿ-ಚಿಕ್ಕಮುಗದೂರ ಸೇತುವೆ ಮುಳಗಡೆಯಾಗಿದೆ. ಸವಣೂರ ತಾಲೂಕಿನಲ್ಲಿ ಕಳಸೂರ-ಕೋಳೂರ ಸೇತುವೆ ಮೇಲೆ ನೀರು ಹೆಚ್ಚಾಗಿದೆ, ಚಿಕ್ಕಮುಗದೂರ-ಕರ್ಜಗಿ ಹಾಗೂ ಹಿರೇಮರಳಿಹಳ್ಳಿ-ಕೋಣತಂಬಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಾನಗಲ್ ತಾಲೂಕಿನ ಆಡೂರ-ತುಮರಿಕೊಪ್ಪ ರಸ್ತೆ ಮೇಲೆ, ಬಾಳಂಬೀಡ-ಲಕಮಾಪೂರ ರಸ್ತೆ ಮೇಲೆ ಹಾಗೂ ಕೂಡಲ-ನಾಗನೂರ ರಸ್ತೆ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಣೇಬೆನ್ನೂರ ತಾಲೂಕಿನ ಮುಷ್ಟೂರ-ಹೊಳೆಆನ್ವೇರಿ ಸೇತುವೆ ಮೇಲೆ, ಅಂತರವಳ್ಳಿ-ಲಿAಗದಹಳ್ಳಿ ಸೇತುವೆ ಮೇಲೆ ಹಾಗೂ ಹಿರೇಮಾಗನೂರ-ಕೋಣನತಲಿ ಸೇತುವೆ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಟ್ಟಿಹಳ್ಳಿ-ಯಲಿವಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಇರುತ್ತದೆ. ನದಿ ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳ ಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬ್ಯಾರಿಕೇಡರ್ಗಳನ್ನು ಹಾಕಿ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿ ನದಿ ಪಾತ್ರಕ್ಕೆ ಹೋಗದಂತೆ ಡಂಗುರದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ.ನದಿ ಪಾತ್ರ -ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ
-ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಪರಿಶೀಲನೆಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಜಾನುವಾರುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಹಶೀಲ್ದಾರಗಳಿಗೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ.
ನಿರಂತರ ಮಳೆಯಿಂದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ಸಮರ್ಪಕವಾಗಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಲು ಆಯಾ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎಲ್ಲ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಚ್ಚಾಮನೆಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ರಾತ್ರಿ ವೇಳೆಯಲ್ಲಿ ವಾಸ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಹತ್ತಿರದ ಸಂಬAಧಿಕರ ಮನೆ ಅಥವಾ ಗ್ರಾಮದಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನದಿಯ ಪ್ರವಾಹ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ಸಾರ್ವಜನಿಕರು ಹಾಗೂ ಜಾನುವಾರು ಹೋಗದಂತೆ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗುರ ಸಾರುವ ಮೂಲಕ ತಿಳಿಸಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು ಹೋಗಬಾರದು ಹಾಗೂ ದನಕರುಗಳನ್ನು ನದಿಪಾತ್ರಕ್ಕೆ ಬಿಡಬಾರದು ಎಂದು ತಿಳಿಸಿದ್ದಾರೆ.
ಕಳೆದ ಏಳು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಸಂಭವನೀಯ ಅವಘಡಗಳನ್ನು ತಡೆಯಲು ಸಾರ್ವಜನಿಕರು ಮುಂಜಾಗ್ರತಾ ಕ್ರಮವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹದಿಂದ ಸೇತುವೆ ಹಾಗೂ ರಸ್ತೆಗಳ ಸಂಪರ್ಕಗಳು ಕಡಿತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಮೇಲೆ ಓಡಾಡುವುದಾಗಲಿ ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗದಂತೆ ತಿಳಿಸಲಾಗಿದೆ. ಈ ರಸ್ತೆಗಳ ಬದಲಾಗಿ ಪರ್ಯಾಯ ರಸ್ತೆಗಳನ್ನು ಉಪಯೋಗಿಸಲು ಸಲಹೆ ನೀಡಲಾಗಿದೆ.
ನಿರಂತರ ಮಳೆ-ಗಾಳಿಯಿಂದ ಮರಳು, ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಬೀಳುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮಕ್ಕಳು, ಸಾರ್ವಜನಿಕರು ಇಂತಹ ಸ್ಥಳಗಳಲ್ಲಿ ಓಡಾಡಬಾರದು ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ತಿಳಿಸಿದ್ದಾರೆ.
ಸಹಾಯವಾಣಿ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕವಾರು ಸಹಾಯವಾಣಿ ಆರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಈ ಕೆಳಕಂಡ ಸಹಾಯವಾಣಿಗಳಿಗೆ ಕರೆ ಮಾಡಿ ನೆರವು ಪಡೆಯಬಹುದು. ಹಾವೇರಿ-೦೮೩೭೫-೨೩೨೪೪೫, ರಾಣೇಬೆನ್ನೂರು-೦೮೩೭೩-೨೬೦೪೪೯, ಬ್ಯಾಡಗಿ-೦೮೩೭೫-೨೨೮೪೨೮, ಹಿರೇಕೆರೂರು-೦೮೩೭೬-೨೮೨೨೩೧, ರಟ್ಟಿಹಳ್ಳಿ-೦೮೩೭೬-೨೦೦೧೪೭, ಸವಣೂರು-೦೮೩೭೮-೨೪೧೬೨೬, ಶಿಗ್ಗಾಂವ-೮೧೪೭೦೫೦೨೯೯ ಹಾಗೂ ಹಾನಗಲ್ ೦೮೩೭೯-೨೬೨೨೪೧ ಸಂಪರ್ಕಿಸಲು ಕೋರಲಾಗಿದೆ
ಜಿಲ್ಲೆಯಲ್ಲಿ ೧೫೯ ಮನೆಗಳಿಗೆ ಹಾನಿ- ಮೂರು ಜೀವಹಾನಿ-೧೨ ರಸ್ತೆ ಸಂಪರ್ಕ ಕಡಿತ -ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
Date:
ಜಿಲ್ಲೆಯಲ್ಲಿ ೧೫೯ ಮನೆಗಳಿಗೆ ಹಾನಿ- ಮೂರು ಜೀವಹಾನಿ-೧೨ ರಸ್ತೆ ಸಂಪರ್ಕ ಕಡಿತ
-ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ೧೫೯ ಮನೆಗಳಿಗೆ ಹಾನಿಯಾಗಿದ್ದು, ಮೂರು ಮಾನವ ಜೀವಹಾನಿ ಸಂಭವಿಸಿದ್ದು, ೭.೭೮ ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದ್ದು, ೧೨ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೧೬.೪೩ ಕೋಟಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ರೂ. ೫.೭೫ ಕೋಟಿ ಸೇರಿ ೨೨.೧೮ ಕೋಟಿ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.ಮಳೆ ವಿವರ: ಜಿಲ್ಲೆಯಲ್ಲಿ ಜನವರಿ ೧ ರಿಂದ ಜುಲೈ ೨೦ರವರೆಗೆ ವಾಡಿಕೆ ಮಳೆ ೩೫೦.೫೦ ಮಿ.ಮಿ. ಎದುರು ೩೪೫ ಮಿ.ಮಿ ಮಳೆಯಾಗಿದೆ. ಜುಲೈ ೧ ರಿಂದ ೨೦ರವರೆಗೆ ೧೧೦ ಮಿ.ಮಿ ಎದುರು ೧೨೦.೪೦ ಮಿ.ಮಿ ಮಳೆಯಾಗಿದೆ. ಕಳೆದ ಏಳು ದಿನಗಳಿಂದ ೪೧ ಮಿ.ಮಿ ವಾಡಿಕೆ ಮಳೆ ಎದುರು ೭೭.೫೦ ಮಿ.ಮಿ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೬.೦೦ ಮಿ.ಮಿ ವಾಡಿಕೆ ಮಳೆಗೆ ಎದುರು ೧೩.೯೦ ಮಿ.ಮಿ. ಅಧಿಕ ಮಳೆಯಾಗಿದೆ.
ಮನೆಹಾನಿ ವಿವರ: ಜಿಲ್ಲೆಯಲ್ಲಿ ಒಟ್ಟು ೧೫೯ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಒಂದು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, ೧೫೪ ಮನೆಗಳು ಭಾಗಶಃಹಾನಿಯಾಗಿದೆ. ಮೂರು ಸದಸ್ಯರ ಸಮಿತಿಯಿಂದ ಹಾನಿಯಾದ ಮನೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೀವಹಾನಿ: ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಜುಲೈ ೧೯ ರಂದು ಮನೆ ಗೋಡೆ ಕುಸಿದು ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬದ ವಾರಸುದಾರರಿಗೆ ತಲಾ ರೂ.೫ ಲಕ್ಷದಂತೆ ಒಟ್ಟು ರೂ.೧೫ ಲಕ್ಷ ವಿತರಣೆ ಮಾಡಲಾಗಿದೆ. ಯಾವುದೇ ಜಾನುವಾರು ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಬೆಳೆಹಾನಿ: ಜಿಲ್ಲೆಯಲ್ಲಿ ೧೪ ರೈತರ ೭.೭೮ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ೫.೧೮ ಹೆಕ್ಟೇರ್ ಬಾಳೆ, ೨ ಹೆಕ್ಟೇರ್ ಬೆಳ್ಳುಳ್ಳಿ ಹಾಗೂ ೦.೬೦ ಹೆಕ್ಟೇರ್ ಹಾಗಲಕಾಯಿ ಬೆಳೆ ಹಾನಿಯಾಗಿದೆ.
೧೨ ರಸ್ತೆ ಸಂಪರ್ಕ ಕಡಿತ: ಜಿಲ್ಲೆಯಲ್ಲಿ ಒಟ್ಟು ೧೨ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಹಾವೇರಿ ತಾಲೂಕಿನ ನಾಗನೂರ-ಕೂಡಲ ಹಾಗೂ ಕರ್ಜಗಿ-ಚಿಕ್ಕಮುಗದೂರ ಸೇತುವೆ ಮುಳಗಡೆಯಾಗಿದೆ. ಸವಣೂರ ತಾಲೂಕಿನಲ್ಲಿ ಕಳಸೂರ-ಕೋಳೂರ ಸೇತುವೆ ಮೇಲೆ ನೀರು ಹೆಚ್ಚಾಗಿದೆ, ಚಿಕ್ಕಮುಗದೂರ-ಕರ್ಜಗಿ ಹಾಗೂ ಹಿರೇಮರಳಿಹಳ್ಳಿ-ಕೋಣತಂಬಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಾನಗಲ್ ತಾಲೂಕಿನ ಆಡೂರ-ತುಮರಿಕೊಪ್ಪ ರಸ್ತೆ ಮೇಲೆ, ಬಾಳಂಬೀಡ-ಲಕಮಾಪೂರ ರಸ್ತೆ ಮೇಲೆ ಹಾಗೂ ಕೂಡಲ-ನಾಗನೂರ ರಸ್ತೆ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಣೇಬೆನ್ನೂರ ತಾಲೂಕಿನ ಮುಷ್ಟೂರ-ಹೊಳೆಆನ್ವೇರಿ ಸೇತುವೆ ಮೇಲೆ, ಅಂತರವಳ್ಳಿ-ಲಿAಗದಹಳ್ಳಿ ಸೇತುವೆ ಮೇಲೆ ಹಾಗೂ ಹಿರೇಮಾಗನೂರ-ಕೋಣನತಲಿ ಸೇತುವೆ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಟ್ಟಿಹಳ್ಳಿ-ಯಲಿವಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಇರುತ್ತದೆ. ನದಿ ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳ ಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬ್ಯಾರಿಕೇಡರ್ಗಳನ್ನು ಹಾಕಿ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿ ನದಿ ಪಾತ್ರಕ್ಕೆ ಹೋಗದಂತೆ ಡಂಗುರದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ.ನದಿ ಪಾತ್ರ -ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ
-ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಪರಿಶೀಲನೆಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಜಾನುವಾರುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಹಶೀಲ್ದಾರಗಳಿಗೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ.
ನಿರಂತರ ಮಳೆಯಿಂದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ಸಮರ್ಪಕವಾಗಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಲು ಆಯಾ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎಲ್ಲ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಚ್ಚಾಮನೆಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ರಾತ್ರಿ ವೇಳೆಯಲ್ಲಿ ವಾಸ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಹತ್ತಿರದ ಸಂಬAಧಿಕರ ಮನೆ ಅಥವಾ ಗ್ರಾಮದಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನದಿಯ ಪ್ರವಾಹ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ಸಾರ್ವಜನಿಕರು ಹಾಗೂ ಜಾನುವಾರು ಹೋಗದಂತೆ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗುರ ಸಾರುವ ಮೂಲಕ ತಿಳಿಸಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು ಹೋಗಬಾರದು ಹಾಗೂ ದನಕರುಗಳನ್ನು ನದಿಪಾತ್ರಕ್ಕೆ ಬಿಡಬಾರದು ಎಂದು ತಿಳಿಸಿದ್ದಾರೆ.
ಕಳೆದ ಏಳು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಸಂಭವನೀಯ ಅವಘಡಗಳನ್ನು ತಡೆಯಲು ಸಾರ್ವಜನಿಕರು ಮುಂಜಾಗ್ರತಾ ಕ್ರಮವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹದಿಂದ ಸೇತುವೆ ಹಾಗೂ ರಸ್ತೆಗಳ ಸಂಪರ್ಕಗಳು ಕಡಿತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಮೇಲೆ ಓಡಾಡುವುದಾಗಲಿ ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗದಂತೆ ತಿಳಿಸಲಾಗಿದೆ. ಈ ರಸ್ತೆಗಳ ಬದಲಾಗಿ ಪರ್ಯಾಯ ರಸ್ತೆಗಳನ್ನು ಉಪಯೋಗಿಸಲು ಸಲಹೆ ನೀಡಲಾಗಿದೆ.
ನಿರಂತರ ಮಳೆ-ಗಾಳಿಯಿಂದ ಮರಳು, ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಬೀಳುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮಕ್ಕಳು, ಸಾರ್ವಜನಿಕರು ಇಂತಹ ಸ್ಥಳಗಳಲ್ಲಿ ಓಡಾಡಬಾರದು ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ತಿಳಿಸಿದ್ದಾರೆ.
ಸಹಾಯವಾಣಿ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕವಾರು ಸಹಾಯವಾಣಿ ಆರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಈ ಕೆಳಕಂಡ ಸಹಾಯವಾಣಿಗಳಿಗೆ ಕರೆ ಮಾಡಿ ನೆರವು ಪಡೆಯಬಹುದು. ಹಾವೇರಿ-೦೮೩೭೫-೨೩೨೪೪೫, ರಾಣೇಬೆನ್ನೂರು-೦೮೩೭೩-೨೬೦೪೪೯, ಬ್ಯಾಡಗಿ-೦೮೩೭೫-೨೨೮೪೨೮, ಹಿರೇಕೆರೂರು-೦೮೩೭೬-೨೮೨೨೩೧, ರಟ್ಟಿಹಳ್ಳಿ-೦೮೩೭೬-೨೦೦೧೪೭, ಸವಣೂರು-೦೮೩೭೮-೨೪೧೬೨೬, ಶಿಗ್ಗಾಂವ-೮೧೪೭೦೫೦೨೯೯ ಹಾಗೂ ಹಾನಗಲ್ ೦೮೩೭೯-೨೬೨೨೪೧ ಸಂಪರ್ಕಿಸಲು ಕೋರಲಾಗಿದೆ