ಜೀಗಿದು… ಜೀಗಿದು ಬಾರೇ……………. ಕೃಷ್ಣಮೃಗಗಳಿಗೆ ನೆಲೆಯಾಗಿರುವ ರಾಣೇಬೆನ್ನೂರು “ಕೃಷ್ಣಮೃಗ ಅಭಯಾರಣ್ಯ”

Date:

ಜೀಗಿದು… ಜೀಗಿದು ಬಾರೇ…………….
ಕೃಷ್ಣಮೃಗಗಳಿಗೆ ನೆಲೆಯಾಗಿರುವ ರಾಣೇಬೆನ್ನೂರು “ಕೃಷ್ಣಮೃಗ ಅಭಯಾರಣ್ಯ”
ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಕೃಷ್ಣಮೃಗಗಳಿಗೆ ಹಾವೇರಿಜಿಲ್ಲೆಯ ರಾಣೇಬೆನ್ನೂರು ಬಳಿ ಕೃಷ್ಣಮೃಗ ಅಭಯಾರಣ್ಯ ನೆಲೆಯಾಗಿದೆ. ಈ ಅಭಯಾರಣ್ಯದಲ್ಲಿ ಕೃಷ್ಣಮೃಗಗಳ ಜೊತೆಗೆ ಅನೇಕ ಕಾಡು ಪ್ರಾಣಿಗಳು ನೆಲೆ ಕಂಡುಕೊಂಡಿವೆ. “ರಾಜ್ಯದಲ್ಲಿ ಕೃಣ್ಣಮೃಗಗಳಿಗೆ ಎಂದೇ ಮೀಸಲಾಗಿರುವ ಕೃಷ್ಣಮೃಗ ಅಭಯಾರಣ್ಯ ಇದಾಗಿದ್ದು, ದೇಶದಲ್ಲಿಯೇ ಹೆಸರುವಾಸಿಯಾಗಿದೆ”. ಆದರೆ ಪ್ರಚಾರದ ಕೊರತೆಯಿಂದಾಗಿ ಎಲೆಯ ಮರೆಯ ಕಾಯಂತಿದೆ.
ವಾಣಿಜ್ಯನಗರ ರಾಣೇಬೆನ್ನೂರಿನಿಂದ ಕೇವಲ ೬ಕಿ.ಮೀ ದೂರ ಇರುವ ಕೃಷ್ಣಮೃಗ ಅಭಯಾರಣ್ಯ ಜಿಲ್ಲೆಯಲ್ಲಿರುವ ಏಕೈಕ ಅಭಯಾರಣ್ಯವಾಗಿದೆ. ಇಲ್ಲಿ ಕಪ್ಪುಜಿಂಕೆ (ಕರಿಚಿಗರೆ) ಅಥವಾ ಕೃಷ್ಣಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ “ಕೃಷ್ಣಮೃಗ ಅಭಯಾರಣ್ಯ”ವನ್ನು ಜೂನ್ ೧೭, ೧೯೭೪ ರಂದು ವನ್ಯಪ್ರಾಣಿ ಧಾಮವೆಂದು ಘೋಷಿಸಲಾಯಿತು.
ರಾಣೇಬೆನ್ನೂರಿನ ಈ ಸಂರಕ್ಷಿತ “ಕೃಷ್ಣಮೃಗ ಅಭಯಾರಣ್ಯ”ವು ನೀಲಗಿರಿ, ಬೇವಿನ ಮರಗಳು, ಅಕೇಶಿಯ, ಕಾಚು, ಕಗ್ಗಲಿ, ಆನೆಗೊಬ್ಬಳಿ, ಬಳ್ಳಾರಿಜಾಲಿ, ಕಮರ, ಚುಜ್ಜುಲು, ಬಾರೆ, ದಿಡಿಲು ಮುಂತಾದ ಮರಗಳ ಜೊತೆಗೆ ಬಂದರಿಕೆ, ತಂಗಡಿಕೆ, ಕಾರೆ, ಲಂಟಾನ ಪೊದೆಗಳು ಸೇರಿದಂತೆ ವಿವಿಧ ಗಿಡ-ಮರಗಳನ್ನು ಒಳಗೊಂಡಿದೆ. ಬಯಲು ಕುರುಚಲು ಕಾಡಾಗಿರುವ ಕಾರಣಕ್ಕೆ ಹಾಗೂ ತೆರೆದ ಹುಲ್ಲುಗಾವಲಿನಲ್ಲಿ ಹೇರಳವಾಗಿ ಆಹಾರ ಲಭ್ಯ ಇರುವ ಕಾರಣಕ್ಕೆ ಕೃಷ್ಣಮೃಗಗಳು ಇಲ್ಲಿ ಬಿಡಾರ ಹೂಡಿವೆ. ಕೃಷ್ಣಮೃಗ ಅಭಯಾರಣ್ಯದಲ್ಲಿ ಬ್ಲಾಕ್ ಡ್ರೊಂಗೊ, ಕೋಗಿಲೆ, ಬೇ ಬ್ಯಾಕ್ಡ್ ಶ್ರೈಕ್ ಮತ್ತು ದೊಡ್ಡ ಬೂದು ಬಬ್ಲರ್ ಗಿಳಿ, ಕಿಂಗ್‌ಫಿಶರ್ ಪಕ್ಷಿಗಳು ಸೇರಿದಂತೆ ಅನೇಕ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.
ವನ್ಯಜೀವಿ ಕಾಯ್ದೆಯಡಿ ಕೃಷ್ಣಮೃಗಗಳನ್ನು ರಕ್ಷಿಸಲಾಗಿರುವುದರಿಂದ ಸ್ವಚ್ಚಂದಾಗಿ ಕೃಷ್ಣಮೃಗಗಳ ಇಲ್ಲಿ ಓಡಾಡಿಕೊಂಡಿವೆ. ಇಲ್ಲಿ ೬,೦೦ಕ್ಕೂ ಅಧಿಕ ಕೃಷ್ಣಮೃಗಗಳಿದ್ದು, ಕೃಷ್ಣ ಮೃಗಗಳು ನಿಂತ ಸ್ಥಳದಿಂದ ಒಂದು ಮೀಟರ್‌ನಿಂದ ಐದಾರು ಮೀಟರ್ ಎತ್ತರಕ್ಕೆ ನೆಗೆಯಬಲ್ಲವು. ಉತ್ತಮವಾಗಿ ಬೆಳೆದ ಮೃಗಗಳು ಸರಾಸರಿ ೮೦ ಸೆ.ಮಿ ಎತ್ತರದವರೆಗೂ ಹಾಗೂ ೪೦ ಕೆಜಿ ತೂಕದವರೆಗೂ ಬೆಳೆಯುತ್ತವೆ. ಕೃಷ್ಣಮೃಗಗಳನ್ನು ನೋಡಲು ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ದಂಡು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಇಲ್ಲಿ ಕೃಷ್ಣಮೃಗಗಳ ಜೊತೆಗೆ ತೋಳ, ನರಿ, ಲಂಗೂರ್, ಕಾಡು ಹಂದಿ, ಮೊಲ, ಮುಳ್ಳುಹಂದಿ, ಕಾಮನ್ ಮುಂಗುಸಿ ಮತ್ತು ಪ್ಯಾಂಗೊಲಿನ್‌ಗಳನ್ನು ಸಹ ಅದೃಷ್ಟವಿದ್ದಲ್ಲಿ ಕಾಣಬಹುದಾಗಿದೆ.
ಅಪಾಯದಲ್ಲಿರುವ ಕೃಷ್ಣಮೃಗಗಳು: ಈ ಮೊದಲು ಹಾವೇರಿಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಕೃಷ್ಣಮೃಗಗಳು ಕಳ್ಳಬೇಟೆಗಾರರಿಗೆ ಬಲಿಯಾಗಿ ಇದೀಗ ಇವುಗಳು ಕಾಣುವುದೇ ಅಪರೂಪವಾಗಿದೆ. ಅಳಿವಿನಂಚಿನಲ್ಲಿರುವ ಪ್ರಭೇದ ಕೃಷ್ಣಮೃಗಗಳು ಜೀವನ್ಮರಣ ಸವಾಲನ್ನು ಎದುರಿಸುತ್ತಿವೆ.
ಹೆಚ್ಚಾಗಿ ಹುಲ್ಲು ಮತ್ತು ವಿವಿಧ ಸಸ್ಯಗಳ ಚಿಗುರುಗಳನ್ನು ಸೇವಿಸುತ್ತಾ ಬದುಕುತ್ತಿರುವ ಕೃಷ್ಣಮೃಗಗಳಿಗೆ ತಮ್ಮ ಆವಾಸಸ್ಥಾನಗಳಾದ ಹುಲ್ಲುಗಾವಲು ವೇಗವಾಗಿ ಕಾಡುಗಳಾಗಿ ಬದಲಾಗುತ್ತಿರುವುದರಿಂದ ಮೇವಿನಿಂದ ವಂಚಿತವಾಗುತ್ತಿವೆ. ಮುಂಗಾರು ಆರಂಭದ ಹಾಗೂ ಹಿಂಗಾರು ಆರಂಭದ ಹಂಗಾಮಿನಲ್ಲಿ ಹೊಲಗಳಿಗೆ ಆಹಾರ ಅರಸಿ ನುಗ್ಗುವು ಇವುಗಳು ರೈತರ ಬೆಳೆಗಳ ಕುಡಿಗಳನ್ನು ಕಡಿದು ಹಾನಿಮಾಡುವುದು ಉಂಟು. ಬೇಸಿಗೆಯಲ್ಲಿ ಇವು ನೀರಿನ ಸಮಸ್ಯೆ ಎದುರಿಸುತ್ತವೆ. ಕೃಷ್ಣಮೃಗಗಳು ಆಹಾರದ ಹುಡುಕಾಟದಲ್ಲಿ ಬೆಳೆಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ವಿತರಿಸಲಾಗುತ್ತದೆ.

ಚಿತ್ರಗಳು/ಲೇಖನ ; ಮಾಲತೇಶ ಅಂಗೂರ. ಹಾವೇರಿ.

೭೦೧೮ ಜಿಂಕೆಗಳು!
“ಕೃಷ್ಣಮೃಗ ಅಭಯಾರಣ್ಯದಲ್ಲ್ಲಿ ೨೦೧೭ರಲ್ಲಿ ಗಣತಿ ಮಾಡಿದಾಗ ೭೦೧೮ ಜಿಂಕೆಗಳಿವೆ ಎಂದು ದಾಖಲಿಸಲಾಗಿದೆ. ಅದರಲ್ಲಿ ೨೫೦೦ಕ್ಕೂ ಹೆಚ್ಚು ಗಂಡು, ಉಳಿದವು ಹೆಣ್ಣು ಹಾಗೂ ಮರಿ ಜಿಂಕೆಗಳಿವೆ. ಈಗ ಇವುಗಳ ಸಂತತಿ ಹೆಚ್ಚಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು”.

ಸಫಾರಿ ಸಮಯ
“ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸಲಾಗಿದೆ. ಸಪಾರಿಗೆ ಸಾಮಯ ನಿಗದಿ ಮಾಡಿದ್ದು, ಬೆಳಗ್ಗೆ ೬ರಿಂದ ೮ ಗಂಟೆ ಹಾಗೂ ಸಂಜೆ ೪ರಿಂದ ೬ರ ವರೆಗೆ ಅವಕಾಶ ನೀಡಲಾಗಿದೆ. ಸದ್ಯ ೧೨ ಜನರು ಕುಳಿತುಕೊಳ್ಳುವ ಸಫಾರಿ ವಾಹನ ವನ್ಯಪ್ರೇಮಿಗಳ ಸೇವೆಗೆ ಸಿದ್ದಗೊಂಡಿದೆ. ದರ ಸದ್ಯದಲ್ಲಿಯೇ ನಿಗದಿಯಾಗಲಿದೆ ಎನ್ನುತ್ತಾರೆ ಎಸಿಎಫ್ ಸತೀಶ ಪೂಜಾರ.

ಅಭಯಾರಣ್ಯದ ವೀಸ್ತಿರ್ಣ ೧೧೯ ಚದರ ಕಿ.ಮೀ
ರಾಣೇಬೆನ್ನೂರ ನಗರದಿಂದ ಆರು ಕಿ.ಮೀ ದೂರದಲ್ಲಿರುವ ಅಭಯಾರಣ್ಯದಲ್ಲಿ ಸಾವಿರಾರು ಜಿಂಕೆಗಳಿದ್ದು, ಕಣ್ಣನ ಸೆಳೆಯುತ್ತಿವೆ. ಒಟ್ಟು ೧೧೯ ಚದರ ಕಿ.ಮೀ ವೀಸ್ತಿರ್ಣದ ಅಭಯಾರಣ್ಯದಲ್ಲಿ ೧೪.೮೭ ಚದರ ಕಿ.ಮೀ ರಕ್ಷಿತ ವಲಯ ಮತ್ತು ೧೦೪.೧೩ ಚದರ ಕಿಮೀ ಬಫರ್-ಕಮ್ ಪ್ರವಾಸೋದ್ಯಮ ವಲಯ ಎಂದು ವಿಂಗಡಣೆ ಮಾಡಲಾಗಿದೆ.

 
ಅಭಯಾರಣ್ಯಕ್ಕೆ ಬೇಕಿದೆ ಬೇಲಿ
ಅರಣ್ಯ ಇಲಾಖೆ ಕೃಷ್ಣಮೃಗ ಅಭಯಾರಣ್ಯಕ್ಕೆ ಮೆಡ್ಲೆರಿರಸ್ತೆಗೆ ಹೊಂದಿಕೊಂಡು ಮುಳ್ಳಿನ ತಂತಿ ಬೇಲಿ ನಿರ್ಮಿಸಿದೆ, ಕಾವಲುಗಾರರು ಮುಖ್ಯಗೇಟಿನಲ್ಲಿ ಕಾವಲು ಇರುತ್ತಾರೆ. ಆದರೆ ಜಿಂಕೆಗಳು ಇರುವ ಅರಣ್ಯದ ಅಂಚಿನಲ್ಲಿ ಯಾವುದೇ ಬೇಲಿಯಾಗಲಿ, ದಿನದ ೨೪ಗಂಟೆ ಕಾವಲು ಆಗಲಿ ಇರುವುದಿಲ್ಲ. ಹೀಗಾಗಿ ದನಗಾಯಿಗಳು, ಕುರಿಮೇಯಿಸುವವರು ಹೊಲವರಿಗಳ ಮೂಲಕ ಅಭಯಾರಣ್ಯ ಪ್ರವೇಶಿಸಿ ದನಕರುಗಳನ್ನು, ಕುರಿಗಳನ್ನು ಮೇಯಿಸುತ್ತಾರೆ. ಈ ಬಗ್ಗೆ ಪ್ರವಾಸಿಗರು ದೂರುಗಳು ನೀಡಿದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ತಗೆದುಕೊಂಡಿಲ್ಲ. ದನ, ಕರು, ಕುರಿಗಳು ಅಭಯಾರಣ್ಯ ಪ್ರವೇಶಿಸದಂತೆ ಅಭಯಾರಣ್ಯಕ್ಕೆ ಸಂಪೂರ್ಣವಾಗಿ ತಂತಿಬೇಲಿ ಅಳವಡಿಸಬೇಕಿದೆ. ನಮ್ಮ ಮುಂದಿನ ಜನಾಂಗಕ್ಕೆ ಕೃಷ್ಣಮೃಗ ಅಭಯಾರಣ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಜೀಗಿದು… ಜೀಗಿದು ಬಾರೇ…………….
ಕೃಷ್ಣಮೃಗಗಳಿಗೆ ನೆಲೆಯಾಗಿರುವ ರಾಣೇಬೆನ್ನೂರು “ಕೃಷ್ಣಮೃಗ ಅಭಯಾರಣ್ಯ”
ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಕೃಷ್ಣಮೃಗಗಳಿಗೆ ಹಾವೇರಿಜಿಲ್ಲೆಯ ರಾಣೇಬೆನ್ನೂರು ಬಳಿ ಕೃಷ್ಣಮೃಗ ಅಭಯಾರಣ್ಯ ನೆಲೆಯಾಗಿದೆ. ಈ ಅಭಯಾರಣ್ಯದಲ್ಲಿ ಕೃಷ್ಣಮೃಗಗಳ ಜೊತೆಗೆ ಅನೇಕ ಕಾಡು ಪ್ರಾಣಿಗಳು ನೆಲೆ ಕಂಡುಕೊಂಡಿವೆ. “ರಾಜ್ಯದಲ್ಲಿ ಕೃಣ್ಣಮೃಗಗಳಿಗೆ ಎಂದೇ ಮೀಸಲಾಗಿರುವ ಕೃಷ್ಣಮೃಗ ಅಭಯಾರಣ್ಯ ಇದಾಗಿದ್ದು, ದೇಶದಲ್ಲಿಯೇ ಹೆಸರುವಾಸಿಯಾಗಿದೆ”. ಆದರೆ ಪ್ರಚಾರದ ಕೊರತೆಯಿಂದಾಗಿ ಎಲೆಯ ಮರೆಯ ಕಾಯಂತಿದೆ.
ವಾಣಿಜ್ಯನಗರ ರಾಣೇಬೆನ್ನೂರಿನಿಂದ ಕೇವಲ ೬ಕಿ.ಮೀ ದೂರ ಇರುವ ಕೃಷ್ಣಮೃಗ ಅಭಯಾರಣ್ಯ ಜಿಲ್ಲೆಯಲ್ಲಿರುವ ಏಕೈಕ ಅಭಯಾರಣ್ಯವಾಗಿದೆ. ಇಲ್ಲಿ ಕಪ್ಪುಜಿಂಕೆ (ಕರಿಚಿಗರೆ) ಅಥವಾ ಕೃಷ್ಣಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ “ಕೃಷ್ಣಮೃಗ ಅಭಯಾರಣ್ಯ”ವನ್ನು ಜೂನ್ ೧೭, ೧೯೭೪ ರಂದು ವನ್ಯಪ್ರಾಣಿ ಧಾಮವೆಂದು ಘೋಷಿಸಲಾಯಿತು.
ರಾಣೇಬೆನ್ನೂರಿನ ಈ ಸಂರಕ್ಷಿತ “ಕೃಷ್ಣಮೃಗ ಅಭಯಾರಣ್ಯ”ವು ನೀಲಗಿರಿ, ಬೇವಿನ ಮರಗಳು, ಅಕೇಶಿಯ, ಕಾಚು, ಕಗ್ಗಲಿ, ಆನೆಗೊಬ್ಬಳಿ, ಬಳ್ಳಾರಿಜಾಲಿ, ಕಮರ, ಚುಜ್ಜುಲು, ಬಾರೆ, ದಿಡಿಲು ಮುಂತಾದ ಮರಗಳ ಜೊತೆಗೆ ಬಂದರಿಕೆ, ತಂಗಡಿಕೆ, ಕಾರೆ, ಲಂಟಾನ ಪೊದೆಗಳು ಸೇರಿದಂತೆ ವಿವಿಧ ಗಿಡ-ಮರಗಳನ್ನು ಒಳಗೊಂಡಿದೆ. ಬಯಲು ಕುರುಚಲು ಕಾಡಾಗಿರುವ ಕಾರಣಕ್ಕೆ ಹಾಗೂ ತೆರೆದ ಹುಲ್ಲುಗಾವಲಿನಲ್ಲಿ ಹೇರಳವಾಗಿ ಆಹಾರ ಲಭ್ಯ ಇರುವ ಕಾರಣಕ್ಕೆ ಕೃಷ್ಣಮೃಗಗಳು ಇಲ್ಲಿ ಬಿಡಾರ ಹೂಡಿವೆ. ಕೃಷ್ಣಮೃಗ ಅಭಯಾರಣ್ಯದಲ್ಲಿ ಬ್ಲಾಕ್ ಡ್ರೊಂಗೊ, ಕೋಗಿಲೆ, ಬೇ ಬ್ಯಾಕ್ಡ್ ಶ್ರೈಕ್ ಮತ್ತು ದೊಡ್ಡ ಬೂದು ಬಬ್ಲರ್ ಗಿಳಿ, ಕಿಂಗ್‌ಫಿಶರ್ ಪಕ್ಷಿಗಳು ಸೇರಿದಂತೆ ಅನೇಕ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.
ವನ್ಯಜೀವಿ ಕಾಯ್ದೆಯಡಿ ಕೃಷ್ಣಮೃಗಗಳನ್ನು ರಕ್ಷಿಸಲಾಗಿರುವುದರಿಂದ ಸ್ವಚ್ಚಂದಾಗಿ ಕೃಷ್ಣಮೃಗಗಳ ಇಲ್ಲಿ ಓಡಾಡಿಕೊಂಡಿವೆ. ಇಲ್ಲಿ ೬,೦೦ಕ್ಕೂ ಅಧಿಕ ಕೃಷ್ಣಮೃಗಗಳಿದ್ದು, ಕೃಷ್ಣ ಮೃಗಗಳು ನಿಂತ ಸ್ಥಳದಿಂದ ಒಂದು ಮೀಟರ್‌ನಿಂದ ಐದಾರು ಮೀಟರ್ ಎತ್ತರಕ್ಕೆ ನೆಗೆಯಬಲ್ಲವು. ಉತ್ತಮವಾಗಿ ಬೆಳೆದ ಮೃಗಗಳು ಸರಾಸರಿ ೮೦ ಸೆ.ಮಿ ಎತ್ತರದವರೆಗೂ ಹಾಗೂ ೪೦ ಕೆಜಿ ತೂಕದವರೆಗೂ ಬೆಳೆಯುತ್ತವೆ. ಕೃಷ್ಣಮೃಗಗಳನ್ನು ನೋಡಲು ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ದಂಡು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಇಲ್ಲಿ ಕೃಷ್ಣಮೃಗಗಳ ಜೊತೆಗೆ ತೋಳ, ನರಿ, ಲಂಗೂರ್, ಕಾಡು ಹಂದಿ, ಮೊಲ, ಮುಳ್ಳುಹಂದಿ, ಕಾಮನ್ ಮುಂಗುಸಿ ಮತ್ತು ಪ್ಯಾಂಗೊಲಿನ್‌ಗಳನ್ನು ಸಹ ಅದೃಷ್ಟವಿದ್ದಲ್ಲಿ ಕಾಣಬಹುದಾಗಿದೆ.
ಅಪಾಯದಲ್ಲಿರುವ ಕೃಷ್ಣಮೃಗಗಳು: ಈ ಮೊದಲು ಹಾವೇರಿಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಕೃಷ್ಣಮೃಗಗಳು ಕಳ್ಳಬೇಟೆಗಾರರಿಗೆ ಬಲಿಯಾಗಿ ಇದೀಗ ಇವುಗಳು ಕಾಣುವುದೇ ಅಪರೂಪವಾಗಿದೆ. ಅಳಿವಿನಂಚಿನಲ್ಲಿರುವ ಪ್ರಭೇದ ಕೃಷ್ಣಮೃಗಗಳು ಜೀವನ್ಮರಣ ಸವಾಲನ್ನು ಎದುರಿಸುತ್ತಿವೆ.
ಹೆಚ್ಚಾಗಿ ಹುಲ್ಲು ಮತ್ತು ವಿವಿಧ ಸಸ್ಯಗಳ ಚಿಗುರುಗಳನ್ನು ಸೇವಿಸುತ್ತಾ ಬದುಕುತ್ತಿರುವ ಕೃಷ್ಣಮೃಗಗಳಿಗೆ ತಮ್ಮ ಆವಾಸಸ್ಥಾನಗಳಾದ ಹುಲ್ಲುಗಾವಲು ವೇಗವಾಗಿ ಕಾಡುಗಳಾಗಿ ಬದಲಾಗುತ್ತಿರುವುದರಿಂದ ಮೇವಿನಿಂದ ವಂಚಿತವಾಗುತ್ತಿವೆ. ಮುಂಗಾರು ಆರಂಭದ ಹಾಗೂ ಹಿಂಗಾರು ಆರಂಭದ ಹಂಗಾಮಿನಲ್ಲಿ ಹೊಲಗಳಿಗೆ ಆಹಾರ ಅರಸಿ ನುಗ್ಗುವು ಇವುಗಳು ರೈತರ ಬೆಳೆಗಳ ಕುಡಿಗಳನ್ನು ಕಡಿದು ಹಾನಿಮಾಡುವುದು ಉಂಟು. ಬೇಸಿಗೆಯಲ್ಲಿ ಇವು ನೀರಿನ ಸಮಸ್ಯೆ ಎದುರಿಸುತ್ತವೆ. ಕೃಷ್ಣಮೃಗಗಳು ಆಹಾರದ ಹುಡುಕಾಟದಲ್ಲಿ ಬೆಳೆಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ವಿತರಿಸಲಾಗುತ್ತದೆ.

ಚಿತ್ರಗಳು/ಲೇಖನ ; ಮಾಲತೇಶ ಅಂಗೂರ. ಹಾವೇರಿ.

೭೦೧೮ ಜಿಂಕೆಗಳು!
“ಕೃಷ್ಣಮೃಗ ಅಭಯಾರಣ್ಯದಲ್ಲ್ಲಿ ೨೦೧೭ರಲ್ಲಿ ಗಣತಿ ಮಾಡಿದಾಗ ೭೦೧೮ ಜಿಂಕೆಗಳಿವೆ ಎಂದು ದಾಖಲಿಸಲಾಗಿದೆ. ಅದರಲ್ಲಿ ೨೫೦೦ಕ್ಕೂ ಹೆಚ್ಚು ಗಂಡು, ಉಳಿದವು ಹೆಣ್ಣು ಹಾಗೂ ಮರಿ ಜಿಂಕೆಗಳಿವೆ. ಈಗ ಇವುಗಳ ಸಂತತಿ ಹೆಚ್ಚಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು”.

ಸಫಾರಿ ಸಮಯ
“ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸಲಾಗಿದೆ. ಸಪಾರಿಗೆ ಸಾಮಯ ನಿಗದಿ ಮಾಡಿದ್ದು, ಬೆಳಗ್ಗೆ ೬ರಿಂದ ೮ ಗಂಟೆ ಹಾಗೂ ಸಂಜೆ ೪ರಿಂದ ೬ರ ವರೆಗೆ ಅವಕಾಶ ನೀಡಲಾಗಿದೆ. ಸದ್ಯ ೧೨ ಜನರು ಕುಳಿತುಕೊಳ್ಳುವ ಸಫಾರಿ ವಾಹನ ವನ್ಯಪ್ರೇಮಿಗಳ ಸೇವೆಗೆ ಸಿದ್ದಗೊಂಡಿದೆ. ದರ ಸದ್ಯದಲ್ಲಿಯೇ ನಿಗದಿಯಾಗಲಿದೆ ಎನ್ನುತ್ತಾರೆ ಎಸಿಎಫ್ ಸತೀಶ ಪೂಜಾರ.

ಅಭಯಾರಣ್ಯದ ವೀಸ್ತಿರ್ಣ ೧೧೯ ಚದರ ಕಿ.ಮೀ
ರಾಣೇಬೆನ್ನೂರ ನಗರದಿಂದ ಆರು ಕಿ.ಮೀ ದೂರದಲ್ಲಿರುವ ಅಭಯಾರಣ್ಯದಲ್ಲಿ ಸಾವಿರಾರು ಜಿಂಕೆಗಳಿದ್ದು, ಕಣ್ಣನ ಸೆಳೆಯುತ್ತಿವೆ. ಒಟ್ಟು ೧೧೯ ಚದರ ಕಿ.ಮೀ ವೀಸ್ತಿರ್ಣದ ಅಭಯಾರಣ್ಯದಲ್ಲಿ ೧೪.೮೭ ಚದರ ಕಿ.ಮೀ ರಕ್ಷಿತ ವಲಯ ಮತ್ತು ೧೦೪.೧೩ ಚದರ ಕಿಮೀ ಬಫರ್-ಕಮ್ ಪ್ರವಾಸೋದ್ಯಮ ವಲಯ ಎಂದು ವಿಂಗಡಣೆ ಮಾಡಲಾಗಿದೆ.

 
ಅಭಯಾರಣ್ಯಕ್ಕೆ ಬೇಕಿದೆ ಬೇಲಿ
ಅರಣ್ಯ ಇಲಾಖೆ ಕೃಷ್ಣಮೃಗ ಅಭಯಾರಣ್ಯಕ್ಕೆ ಮೆಡ್ಲೆರಿರಸ್ತೆಗೆ ಹೊಂದಿಕೊಂಡು ಮುಳ್ಳಿನ ತಂತಿ ಬೇಲಿ ನಿರ್ಮಿಸಿದೆ, ಕಾವಲುಗಾರರು ಮುಖ್ಯಗೇಟಿನಲ್ಲಿ ಕಾವಲು ಇರುತ್ತಾರೆ. ಆದರೆ ಜಿಂಕೆಗಳು ಇರುವ ಅರಣ್ಯದ ಅಂಚಿನಲ್ಲಿ ಯಾವುದೇ ಬೇಲಿಯಾಗಲಿ, ದಿನದ ೨೪ಗಂಟೆ ಕಾವಲು ಆಗಲಿ ಇರುವುದಿಲ್ಲ. ಹೀಗಾಗಿ ದನಗಾಯಿಗಳು, ಕುರಿಮೇಯಿಸುವವರು ಹೊಲವರಿಗಳ ಮೂಲಕ ಅಭಯಾರಣ್ಯ ಪ್ರವೇಶಿಸಿ ದನಕರುಗಳನ್ನು, ಕುರಿಗಳನ್ನು ಮೇಯಿಸುತ್ತಾರೆ. ಈ ಬಗ್ಗೆ ಪ್ರವಾಸಿಗರು ದೂರುಗಳು ನೀಡಿದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ತಗೆದುಕೊಂಡಿಲ್ಲ. ದನ, ಕರು, ಕುರಿಗಳು ಅಭಯಾರಣ್ಯ ಪ್ರವೇಶಿಸದಂತೆ ಅಭಯಾರಣ್ಯಕ್ಕೆ ಸಂಪೂರ್ಣವಾಗಿ ತಂತಿಬೇಲಿ ಅಳವಡಿಸಬೇಕಿದೆ. ನಮ್ಮ ಮುಂದಿನ ಜನಾಂಗಕ್ಕೆ ಕೃಷ್ಣಮೃಗ ಅಭಯಾರಣ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...