“ಜುಲೈ ೨೦ರಂದು ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ”
ಹಾವೇರಿ: ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವವನ್ನು ಜುಲೈ, ೨೦ ೨೦೨೪ನೇ ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಜನರು ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಿಂದ ಸಮುದಾಯದ ಮುಖಂಡರು ಭಾಗವಹಿಸುತ್ತಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಎಸ್ ಮನವಿ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಭೋವಿ ವಡ್ಡರ ಸಮಾಜ ಏರ್ಪಡಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸುವರು, ಡಿಸಿಎಮ ಡಿ.ಕೆ.ಶಿವಕುಮಾರ್ ವಚನ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ, ಸಮುದಾಯದ ಹಾಲಿ ಮಾಜಿ ಶಾಸಕರು, ಸಂಸದರು ಸಾರಥ್ಯದಲ್ಲಿ, ಮಂತ್ರಾಲಯದ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರುಗಳು, ಹಿಂದುಳಿದ, ದಲಿತ ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅದೇ ದಿನದಂದು ಬೆಳಿಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು ಎಂದರು.
ಸಾನಿಧ್ಯ ವಹಿಸಿದ್ದ ಜ.ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಸ್ವಾಮೀಜಿಯವರ ಜನ್ಮದಿನವನ್ನು ರಾಷ್ಟ್ರೀಯ ಭೋವಿ ಜನೋತ್ಸವವನ್ನಾಗಿ ಆಚರಿಸುವ ಪ್ರತೀತಿ ದಶಕದಿಂದ ಬೆಳೆದು ಬಂದಿದೆ. ಸಮಾಜ ಸೇವಾ ದೀಕ್ಷೆ ನೆನಪು ಹಾಗೂ ಪಟ್ಟಾಭಿಷೇಕದ ಸಂಭ್ರಮದ ನಿಮಿತ್ತ ಸಂಸದರಾಗಿ, ಶಾಸಕರಾಗಿ, ವಿವಿಧ ಹಂತದ ಜನ ಪ್ರತಿನಿಧಿಗಳಿಗೆ ಅಭಿನಂದಿಸುವುದು, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪಿ.ಹೆಚ್.ಡಿ ಪದವೀಧರರು ಮತ್ತು ಐ.ಎ.ಎಸ್, ಕೆ.ಎ.ಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿಯನ್ನ ಪೂರೈಸಿದವರಿಗೆ ಅಭಿನಂದನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಉತ್ಸವವೇ ರಾಷ್ಟ್ರೀಯ ಭೋವಿ ಜನೋತ್ಸವ. ಇದು ಭೋವಿ ಸಮುದಾಯದಲ್ಲಿ ಇನ್ನಷ್ಟು ಪ್ರೇರಕ ಶಕ್ತಿಯಾಗಿ ಬೆಳವಣಿಗೆಗೆ ಸ್ಫೂರ್ತಿಯಾಗಿದೆ ಎಂದರು.
ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರಿ ಮಾತನಾಡಿ ಅಕ್ಷರ ವಂಚಿತ ಸಮುದಾಯಕ್ಕೆ ವೈಚಾರಿಕ, ವೈಜ್ಞಾನಿಕ ತಳಹದಿಯ ಮೇಲೆ ಜ್ಞಾನದ ದಾರೆಯನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಭೋವಿ ಗುರುಪೀಠ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆಯನ್ನು ಮಾಡಿಕೊಡುವಲ್ಲಿ ಶ್ರೀಗಳು ನಿರಂತರವಾಗಿದ್ದಾರೆ.ಅಲೆಮಾರಿ ಹಾಗೂ ಅರೆಅಲೆಮಾರಿ ಲಕ್ಷಣಗಳನ್ನು ಹೊಂದಿರುವ ಭೋವಿ ಸಮುದಾಯವನ್ನು ಕಟ್ಟುವಲ್ಲಿ ಸ್ವಾಮೀಜಿಯವರ ಶ್ರಮ ಆಪಾರವಾದುದ್ದು. ಕರ್ನಾಟಕದ ಮೂಲೆ ಮೂಲೆಯ ಭೋವಿ ಕಾಲೋನಿ, ಹಟ್ಟಿಗಳನ್ನು ಸ್ವಾಮೀಜಿ ಸುತ್ತುತ್ತಿದ್ದಾರೆ. ಇದರ ಪರಿಶ್ರಮ ಫಲವಾಗಿ ಹಲವು ಗ್ರಾಮಗಳು ವ್ಯಸನಮುಕ್ತವಾಗಿವೆ. ಪ್ರಾಣಿಬಲಿ ನಿಷೇದಕ್ಕೆ ವಾಗ್ದಾನವನ್ನು ನೀಡಿವೆ. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮ, ಹುಲಿಗೆಮ್ಮ ಜಾತ್ರೆಗಳು ಸಮುದಾಯದ ಆರ್ಥಿಕತೆ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸ್ವಾಮೀಜಿಯವರಿಗೆ ಸ್ಪಷ್ಟತೆ ಇತ್ತು, ಹೀಗಾಗಿ ಗಳಿಕೆ, ಬಳಕೆ, ಉಳಿಕೆ ಸೂತ್ರವನ್ನು ಭಕ್ತರ ಮುಂದಿಟ್ಟರು ಇದನ್ನು ಅರಿತವರು ಜಾತ್ರೆಗಳ ನೆಪದಲ್ಲಿ ದುಂದುವೆಚ್ಚ ಮಾಡುವುದು ನಿಲ್ಲಿಸಿದ್ದಾರೆ. ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆಯನ್ನು ಮಾಡಿಕೊಡುವಲ್ಲಿ ಶ್ರೀಗಳು ನಿರಂತರವಾಗಿದ್ದಾರೆ.
ಉಚಿತ ಶಿಕ್ಷಣ ಮತ್ತು ವಸತಿ:ಉದ್ಯೋಗ ಅರಸಿ ಗುಳೆಹೋಗುವ ಭೋವಿ, ವಡ್ಡರ ಜನಾಂಗದ ಬಡ ಮಕ್ಕಳು ಶಿಕ್ಷಣದತ್ತ ಗಮನಹರಿಸಿದ್ದು ಕಡಿಮೆ. ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ದುಡಿಮೆಗೆ ಬಳಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದಿತ್ತು. ಇದನ್ನು ಅರಿತ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಇಡೀ ಸಮುದಾಯದ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ಪಣತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಉಚಿತ ಶಿಕ್ಷಣ ಮತ್ತು ವಸತಿಯನ್ನು ಒದಗಿಸುತ್ತಿದ್ದಾರೆ.
ಅನಾಥ ಮಕ್ಕಳಿಗೆ ಆಶ್ರಮ:ಭೋವಿ, ವಡ್ಡರ ಸಮುದಾಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನಾಥಪ್ರಜ್ಞೆ ಮೂಡದಂತೆ ಬೆಳೆಯಬೇಕು ಎಂಬ ಉದ್ದೇಶದಿಂದ ಅಂತಹ ಮಕ್ಕಳನ್ನು ಗುರುತಿಸಿ ಶ್ರೀಮಠವೇ ಪದವಿ, ಇಂಜಿನಿಯರಿಂಗ್ವರೆಗೆ ಉಚಿತ ಶಿಕ್ಷಣ ಮತ್ತು ವಸತಿಯನ್ನು ಕಲ್ಪಿಸಿದೆ. ಉದ್ಯೋಗ ಪಡೆದು ಸ್ವಾವಲಂಭಿಯಾಗಿ ರೂಪುಗೊಳ್ಳುವವರೆಗೂ ಮಠದ ನೆರವು ನೀಡುತ್ತಿದೆ.
ಸಂತ್ರಸ್ತರಿಗೆ ನೆರವು, ಕೊರೋನ ಸಂದರ್ಭದಲ್ಲಿ ಧವಸ, ದಾನ್ಯಗಳ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವು ಮಾರ್ಗದಲ್ಲಿ ಭೋವಿ, ಒಡ್ಡರ ಸಮುದಾಯವನ್ನ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರೀಗಳು ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದೀಕ್ಷಾ ರಜತ ಮಹೋತ್ಸವವನ್ನ 2024ನೇ ಜುಲೈ, 20 ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. “ಜುಲೈ ೨೦ರಂದು ನಡೆಯುವ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ”ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರುಗಳಾದದ ಅರ್ಜುನ ಹಂಚಿನಮನಿ, ಸುರೇಶ ಸವಣೂರು, ಮಂಜು ವಡ್ಡರ, ನಿಂಗಣ್ಣ ಹೊಸರು, ಬತ್ತಿಕೊಪ್ಪ, ಪ್ರೋ. ಹೊಳೆಣ್ಣರವರು, ದಾಸಪ್ಪ ಕರ್ಜಗಿ, ಹನುಮಂತಪ್ಪ ದೇವಗಿರಿ, ಪರಶುರಾಮ ಯಲವಿಗೆ, ದ್ಯಾಮಣ್ಣ ಅರಸನಾಳ, ನಾಗರಾಜ ಮಲಗೊಡ, ಹನುಮಂತಪ್ಪ ಪೂಜಾರ, ರಮೇಶ ಸುತ್ತಕೊಟಿ, ಜಗದೀಶ ಸವಣೂರು ಮತ್ತಿತರರು ಭಾಗವಹಿಸಿದ್ದರು.
“ಜುಲೈ ೨೦ರಂದು ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ”
Date:
“ಜುಲೈ ೨೦ರಂದು ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ”
ಹಾವೇರಿ: ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವವನ್ನು ಜುಲೈ, ೨೦ ೨೦೨೪ನೇ ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಜನರು ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಿಂದ ಸಮುದಾಯದ ಮುಖಂಡರು ಭಾಗವಹಿಸುತ್ತಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಎಸ್ ಮನವಿ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಭೋವಿ ವಡ್ಡರ ಸಮಾಜ ಏರ್ಪಡಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸುವರು, ಡಿಸಿಎಮ ಡಿ.ಕೆ.ಶಿವಕುಮಾರ್ ವಚನ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ, ಸಮುದಾಯದ ಹಾಲಿ ಮಾಜಿ ಶಾಸಕರು, ಸಂಸದರು ಸಾರಥ್ಯದಲ್ಲಿ, ಮಂತ್ರಾಲಯದ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರುಗಳು, ಹಿಂದುಳಿದ, ದಲಿತ ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅದೇ ದಿನದಂದು ಬೆಳಿಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು ಎಂದರು.
ಸಾನಿಧ್ಯ ವಹಿಸಿದ್ದ ಜ.ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಸ್ವಾಮೀಜಿಯವರ ಜನ್ಮದಿನವನ್ನು ರಾಷ್ಟ್ರೀಯ ಭೋವಿ ಜನೋತ್ಸವವನ್ನಾಗಿ ಆಚರಿಸುವ ಪ್ರತೀತಿ ದಶಕದಿಂದ ಬೆಳೆದು ಬಂದಿದೆ. ಸಮಾಜ ಸೇವಾ ದೀಕ್ಷೆ ನೆನಪು ಹಾಗೂ ಪಟ್ಟಾಭಿಷೇಕದ ಸಂಭ್ರಮದ ನಿಮಿತ್ತ ಸಂಸದರಾಗಿ, ಶಾಸಕರಾಗಿ, ವಿವಿಧ ಹಂತದ ಜನ ಪ್ರತಿನಿಧಿಗಳಿಗೆ ಅಭಿನಂದಿಸುವುದು, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪಿ.ಹೆಚ್.ಡಿ ಪದವೀಧರರು ಮತ್ತು ಐ.ಎ.ಎಸ್, ಕೆ.ಎ.ಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿಯನ್ನ ಪೂರೈಸಿದವರಿಗೆ ಅಭಿನಂದನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಉತ್ಸವವೇ ರಾಷ್ಟ್ರೀಯ ಭೋವಿ ಜನೋತ್ಸವ. ಇದು ಭೋವಿ ಸಮುದಾಯದಲ್ಲಿ ಇನ್ನಷ್ಟು ಪ್ರೇರಕ ಶಕ್ತಿಯಾಗಿ ಬೆಳವಣಿಗೆಗೆ ಸ್ಫೂರ್ತಿಯಾಗಿದೆ ಎಂದರು.
ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರಿ ಮಾತನಾಡಿ ಅಕ್ಷರ ವಂಚಿತ ಸಮುದಾಯಕ್ಕೆ ವೈಚಾರಿಕ, ವೈಜ್ಞಾನಿಕ ತಳಹದಿಯ ಮೇಲೆ ಜ್ಞಾನದ ದಾರೆಯನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಭೋವಿ ಗುರುಪೀಠ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆಯನ್ನು ಮಾಡಿಕೊಡುವಲ್ಲಿ ಶ್ರೀಗಳು ನಿರಂತರವಾಗಿದ್ದಾರೆ.ಅಲೆಮಾರಿ ಹಾಗೂ ಅರೆಅಲೆಮಾರಿ ಲಕ್ಷಣಗಳನ್ನು ಹೊಂದಿರುವ ಭೋವಿ ಸಮುದಾಯವನ್ನು ಕಟ್ಟುವಲ್ಲಿ ಸ್ವಾಮೀಜಿಯವರ ಶ್ರಮ ಆಪಾರವಾದುದ್ದು. ಕರ್ನಾಟಕದ ಮೂಲೆ ಮೂಲೆಯ ಭೋವಿ ಕಾಲೋನಿ, ಹಟ್ಟಿಗಳನ್ನು ಸ್ವಾಮೀಜಿ ಸುತ್ತುತ್ತಿದ್ದಾರೆ. ಇದರ ಪರಿಶ್ರಮ ಫಲವಾಗಿ ಹಲವು ಗ್ರಾಮಗಳು ವ್ಯಸನಮುಕ್ತವಾಗಿವೆ. ಪ್ರಾಣಿಬಲಿ ನಿಷೇದಕ್ಕೆ ವಾಗ್ದಾನವನ್ನು ನೀಡಿವೆ. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮ, ಹುಲಿಗೆಮ್ಮ ಜಾತ್ರೆಗಳು ಸಮುದಾಯದ ಆರ್ಥಿಕತೆ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸ್ವಾಮೀಜಿಯವರಿಗೆ ಸ್ಪಷ್ಟತೆ ಇತ್ತು, ಹೀಗಾಗಿ ಗಳಿಕೆ, ಬಳಕೆ, ಉಳಿಕೆ ಸೂತ್ರವನ್ನು ಭಕ್ತರ ಮುಂದಿಟ್ಟರು ಇದನ್ನು ಅರಿತವರು ಜಾತ್ರೆಗಳ ನೆಪದಲ್ಲಿ ದುಂದುವೆಚ್ಚ ಮಾಡುವುದು ನಿಲ್ಲಿಸಿದ್ದಾರೆ. ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆಯನ್ನು ಮಾಡಿಕೊಡುವಲ್ಲಿ ಶ್ರೀಗಳು ನಿರಂತರವಾಗಿದ್ದಾರೆ.
ಉಚಿತ ಶಿಕ್ಷಣ ಮತ್ತು ವಸತಿ:ಉದ್ಯೋಗ ಅರಸಿ ಗುಳೆಹೋಗುವ ಭೋವಿ, ವಡ್ಡರ ಜನಾಂಗದ ಬಡ ಮಕ್ಕಳು ಶಿಕ್ಷಣದತ್ತ ಗಮನಹರಿಸಿದ್ದು ಕಡಿಮೆ. ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ದುಡಿಮೆಗೆ ಬಳಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದಿತ್ತು. ಇದನ್ನು ಅರಿತ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಇಡೀ ಸಮುದಾಯದ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ಪಣತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಉಚಿತ ಶಿಕ್ಷಣ ಮತ್ತು ವಸತಿಯನ್ನು ಒದಗಿಸುತ್ತಿದ್ದಾರೆ.
ಅನಾಥ ಮಕ್ಕಳಿಗೆ ಆಶ್ರಮ:ಭೋವಿ, ವಡ್ಡರ ಸಮುದಾಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನಾಥಪ್ರಜ್ಞೆ ಮೂಡದಂತೆ ಬೆಳೆಯಬೇಕು ಎಂಬ ಉದ್ದೇಶದಿಂದ ಅಂತಹ ಮಕ್ಕಳನ್ನು ಗುರುತಿಸಿ ಶ್ರೀಮಠವೇ ಪದವಿ, ಇಂಜಿನಿಯರಿಂಗ್ವರೆಗೆ ಉಚಿತ ಶಿಕ್ಷಣ ಮತ್ತು ವಸತಿಯನ್ನು ಕಲ್ಪಿಸಿದೆ. ಉದ್ಯೋಗ ಪಡೆದು ಸ್ವಾವಲಂಭಿಯಾಗಿ ರೂಪುಗೊಳ್ಳುವವರೆಗೂ ಮಠದ ನೆರವು ನೀಡುತ್ತಿದೆ.
ಸಂತ್ರಸ್ತರಿಗೆ ನೆರವು, ಕೊರೋನ ಸಂದರ್ಭದಲ್ಲಿ ಧವಸ, ದಾನ್ಯಗಳ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವು ಮಾರ್ಗದಲ್ಲಿ ಭೋವಿ, ಒಡ್ಡರ ಸಮುದಾಯವನ್ನ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರೀಗಳು ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದೀಕ್ಷಾ ರಜತ ಮಹೋತ್ಸವವನ್ನ 2024ನೇ ಜುಲೈ, 20 ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. “ಜುಲೈ ೨೦ರಂದು ನಡೆಯುವ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ”ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರುಗಳಾದದ ಅರ್ಜುನ ಹಂಚಿನಮನಿ, ಸುರೇಶ ಸವಣೂರು, ಮಂಜು ವಡ್ಡರ, ನಿಂಗಣ್ಣ ಹೊಸರು, ಬತ್ತಿಕೊಪ್ಪ, ಪ್ರೋ. ಹೊಳೆಣ್ಣರವರು, ದಾಸಪ್ಪ ಕರ್ಜಗಿ, ಹನುಮಂತಪ್ಪ ದೇವಗಿರಿ, ಪರಶುರಾಮ ಯಲವಿಗೆ, ದ್ಯಾಮಣ್ಣ ಅರಸನಾಳ, ನಾಗರಾಜ ಮಲಗೊಡ, ಹನುಮಂತಪ್ಪ ಪೂಜಾರ, ರಮೇಶ ಸುತ್ತಕೊಟಿ, ಜಗದೀಶ ಸವಣೂರು ಮತ್ತಿತರರು ಭಾಗವಹಿಸಿದ್ದರು.