ಜು.೧೨ರಿಂದ ಹಾವೇರಿಯಲ್ಲಿ “ಬಳೆಗಾರ ಹನುಮವ್ವ” ನಾಟಕ
ಹಾವೇರಿ: ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿನ ಬಯಲಿನಲ್ಲಿ ಹಾಕಲಾಗಿರುವ ಟೆಂಟ್ನಲ್ಲಿ ಸಂತ ಶರೀಫ್ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿಪರಿವಾರದ ವತಿಯಿಂದ ಜು.೧೨ರಿಂದ ಹಾಸ್ಯ ಭರಿತ “ಬಳೆಗಾರ ಹನುಮವ್ವ” ನಾಟಕ ನಿತ್ಯ ಎರಡು ಪ್ರದರ್ಶನ ಜರುಗುವವು. ಹಾವೇರಿ ಹಾಗೂ ಸುತ್ತ-ಮುತ್ತಲಿನ ಕಲಾಭಿಮಾನಿಗಳು ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ನಾಟಕ ಕಂಪನಿಯ ಮಾಲಕ ಕತಾಲಸಾಬ ಬಣಗಾರ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ನಾಟಕ ಟೆಂಟ್ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಉತ್ತರ ಕರ್ನಾಟಕದ ಕಲಾವಿದರು ನಾಟಕ ಅಭಿನಯಿಸುವರು. ನಿತ್ಯ ಮಧ್ಯಾಹ್ನ ೩-೧೫ ಮತ್ತು ಸಂಜೆ ೬-೧೫ಕ್ಕೆ ಎರಡು ಪ್ರದರ್ಶನಗಳು ನಡೆಯುತ್ತವೆ. ನಮ್ಮ ಕಂಪನಿಯಲ್ಲಿ ಬಡ ಕಲಾವಿದರು ಕುಟುಂಬದಸ್ಯರು ಸೇರಿ ೩೦ ಜನರ ತಂಡವಿದ್ದು, ಹಾವೇರಿ ಭಾಗದ ಜನರು ಕಲಾ ಪ್ರೇಮಿಗಳಿದ್ದು, ಕಲಾವಿದರನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮಳೆಗಾಲದ ಸಮಯವಾದರೂ ಸಹ ಹಾವೇರಿಯಲ್ಲಿ ಸುಸಜ್ಜಿತ ರಂಗಸಜ್ಜಿಕಗೆ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತಂಡದ ವ್ಯವಸ್ಥಾಪಕ ಮಾಹಾಂತೇಶಗೌಡ ಬಿರಾದಾರ ಮಾತನಾಡಿ ನಾಟಕ ಕಂಪನಿ ನಡೆಸುವುದು ಬಹಳ ಕಷ್ಟದಾಯಕವಾಗಿದೆ. ನಮ್ಮ ಕಂಪನಿಯು ಜಾತ್ರೆ ನಡೆಯುವ ಸ್ಥಳಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ನಮ್ಮ ಕಂಪನಿಯ “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಇದರ ಜೊತೆಗೆ “ಕಿವುಡು ಮಾಡಿದ ಕಿತಾಪತಿ”, “ಹಳ್ಳಿಹುಡುಗಿ ಮಸರು ಗಡಗಿ” ಸೇರಿದಂತೆ ಅನೇಕ ನಾಟಕಗಳನ್ನು ಪ್ರದರ್ಶಿಸಲಿದ್ದೇವೆ ಎಂದರು.
ನಾಟಕ ಸಂಸ್ಥೆ ನಡೆಸುವದು ತುಂಬಾ ಕಷ್ಟ, ೧೫ ಕಡೆಗಳಲ್ಲಿ ನಾಟಕ ಪರವಾನಿಗೆಗೆ ಅನುಮತಿಪಡೆಯಬೇಕು. ಪರವಾನಿಗೆ ಪಡೆಯಲು ಅನಗತ್ಯ ಓಡಾಟವನ್ನು ತಪ್ಪಿಸಬೇಕಿದೆ. ನಾಟಕ ಪರವಾನಿಗೆಯನ್ನು ಆನ್ಲೈನ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.
ಜು.೧೨ರಿಂದ ಹಾವೇರಿಯಲ್ಲಿ “ಬಳೆಗಾರ ಹನುಮವ್ವ” ನಾಟಕ
Date:
ಜು.೧೨ರಿಂದ ಹಾವೇರಿಯಲ್ಲಿ “ಬಳೆಗಾರ ಹನುಮವ್ವ” ನಾಟಕ
ಹಾವೇರಿ: ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿನ ಬಯಲಿನಲ್ಲಿ ಹಾಕಲಾಗಿರುವ ಟೆಂಟ್ನಲ್ಲಿ ಸಂತ ಶರೀಫ್ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿಪರಿವಾರದ ವತಿಯಿಂದ ಜು.೧೨ರಿಂದ ಹಾಸ್ಯ ಭರಿತ “ಬಳೆಗಾರ ಹನುಮವ್ವ” ನಾಟಕ ನಿತ್ಯ ಎರಡು ಪ್ರದರ್ಶನ ಜರುಗುವವು. ಹಾವೇರಿ ಹಾಗೂ ಸುತ್ತ-ಮುತ್ತಲಿನ ಕಲಾಭಿಮಾನಿಗಳು ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ನಾಟಕ ಕಂಪನಿಯ ಮಾಲಕ ಕತಾಲಸಾಬ ಬಣಗಾರ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ನಾಟಕ ಟೆಂಟ್ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಉತ್ತರ ಕರ್ನಾಟಕದ ಕಲಾವಿದರು ನಾಟಕ ಅಭಿನಯಿಸುವರು. ನಿತ್ಯ ಮಧ್ಯಾಹ್ನ ೩-೧೫ ಮತ್ತು ಸಂಜೆ ೬-೧೫ಕ್ಕೆ ಎರಡು ಪ್ರದರ್ಶನಗಳು ನಡೆಯುತ್ತವೆ. ನಮ್ಮ ಕಂಪನಿಯಲ್ಲಿ ಬಡ ಕಲಾವಿದರು ಕುಟುಂಬದಸ್ಯರು ಸೇರಿ ೩೦ ಜನರ ತಂಡವಿದ್ದು, ಹಾವೇರಿ ಭಾಗದ ಜನರು ಕಲಾ ಪ್ರೇಮಿಗಳಿದ್ದು, ಕಲಾವಿದರನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮಳೆಗಾಲದ ಸಮಯವಾದರೂ ಸಹ ಹಾವೇರಿಯಲ್ಲಿ ಸುಸಜ್ಜಿತ ರಂಗಸಜ್ಜಿಕಗೆ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತಂಡದ ವ್ಯವಸ್ಥಾಪಕ ಮಾಹಾಂತೇಶಗೌಡ ಬಿರಾದಾರ ಮಾತನಾಡಿ ನಾಟಕ ಕಂಪನಿ ನಡೆಸುವುದು ಬಹಳ ಕಷ್ಟದಾಯಕವಾಗಿದೆ. ನಮ್ಮ ಕಂಪನಿಯು ಜಾತ್ರೆ ನಡೆಯುವ ಸ್ಥಳಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ನಮ್ಮ ಕಂಪನಿಯ “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಇದರ ಜೊತೆಗೆ “ಕಿವುಡು ಮಾಡಿದ ಕಿತಾಪತಿ”, “ಹಳ್ಳಿಹುಡುಗಿ ಮಸರು ಗಡಗಿ” ಸೇರಿದಂತೆ ಅನೇಕ ನಾಟಕಗಳನ್ನು ಪ್ರದರ್ಶಿಸಲಿದ್ದೇವೆ ಎಂದರು.
ನಾಟಕ ಸಂಸ್ಥೆ ನಡೆಸುವದು ತುಂಬಾ ಕಷ್ಟ, ೧೫ ಕಡೆಗಳಲ್ಲಿ ನಾಟಕ ಪರವಾನಿಗೆಗೆ ಅನುಮತಿಪಡೆಯಬೇಕು. ಪರವಾನಿಗೆ ಪಡೆಯಲು ಅನಗತ್ಯ ಓಡಾಟವನ್ನು ತಪ್ಪಿಸಬೇಕಿದೆ. ನಾಟಕ ಪರವಾನಿಗೆಯನ್ನು ಆನ್ಲೈನ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.