ಡಾ. ಚಂದ್ರಶೇಖರ ಕಂಬಾರರಿಂದ ಡಾ. ಕುಬೇರಪ್ಪನವರ ಅಭಿನಂದನಾ ಗ್ರಂಥ ಬಿಡುಗಡೆ ಜ.೨೨ಕ್ಕೆ
ಹಾವೇರಿ: ಶಿಕ್ಷಣತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಹಾಗೂ ಹೋರಾಟಗಾರರಾದ ಡಾ.ಆರ್.ಎಂ. ಕುಬೇರಪ್ಪನವರ “ಹೋರಾಟಗಾರ” ಹಾಗೂ ಸಾಹಿತ್ಯಿಕ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ ಜಾನಪದ ಜಗತ್ತು ಉತ್ತರ ಕರ್ನಾಟಕ ಜಾನಪದ ಹಾಗೂ ರಂಗಭೂಮಿ” ಕಲೆಗಳ ತರಬೇತಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ರಾಣೇಬೆನ್ನೂರಿನ ಬಿ.ಎ.ಜೆ.ಎಸ್.ಎಸ್. ಮ”ಳಾ ಕಾಲೇಜ್ಆವರಣದಲ್ಲಿ ಜ.೨೨ ನೇ ಭಾನು ವಾರ ಬೆಳಿಗ್ಗೆ ೧೦-೩೦ .ಆರ್.ಎಂ. ಕುಬೇರಪ್ಪನವರ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ.
ಈ ಸಮಾರಂಭಕ್ಕೆ ಜ್ಞಾನ ಪೀಠ ಪುರಸ್ಕೃತರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ನಾಡೋಜ ಡಾ. ಚಂದ್ರಶೇಖರ ಕಂಬಾರವರು ಆಗಮಿಸುವರು. ಕಾರ್ಯಕ್ರಮದ ಸಾನಿಧ್ಯವನ್ನ ಪರಮಪೂಜ್ಯ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಿರಾಪುರ “ಹಿರೇಮಠ ಸಾಗರ ತಾಲೂಕ ಇವರು ವಹಿಸುರು. ಮುಖ್ಯ ಅತಿಥಿಗಳಾಗಿ ಕುವೆಂಪು “ವಿಶ್ವವಿ”ದ್ಯಾಲಯ ಶಿವಮೊಗ್ಗದ ಕುಲಪತಿಗಳಾದ ಡಾ.ಬಿ.ಪಿ. ವೀರಭದ್ರಪ್ಪ ಹಾಗೂ ಜಾನಪದ “ವಿಶ್ವವಿ”ದ್ಯಾಲಯ ಗೊಟಗೋಡಿಯ ಕುಲಪತಿಗಳಾದ ಡಾ. ಟಿ.ಎಂ.ಭಾಸ್ಕರ್ರವರು ಹಾಗೂ “ವಿಧಾನ ಸಭೆ ಮಾಜಿ ಸಭಾಧ್ಯಕ್ಷರಾದ. ಕೆ.ಬಿ. ಕೋಳಿವಾಡಅವರು ಆಗಮಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ರುದ್ರಪ್ಪ ಎಂ. ಲಮಾಣಿ ವಹಿಸುವರು. ಪ್ರಾಸ್ತಾವಿಕ ನುಡಿ ಪ್ರೊ.ಎಚ್.ಎ. ಬಿಕ್ಷಾವರ್ತಿಮಠ ಪುಸ್ತಕ ಪರಿಚಯವನ್ನು ಲೇಖಕರು ಹಾಗೂ ಹಾವೇರಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ಪ್ರೊ. ಮಾರುತಿ ಶಿಡ್ಲಾಪುರ ಹಾಗೂ ಡಾ.ಕಾಂತೇಶರೆಡ್ಡಿ ಗೋಡಿಹಾಳ ಉಪನ್ಯಾಸಕರು ಸರ್ಕಾರಿ ಪದವಿ” ಕಾಲೇಜು ರಾಣೇಬೆನ್ನೂರು ಇವರು ನಡೆಸಿಕೊಡಲಿದ್ದಾರೆ ಎಂದು ಅಭಿನಂದನಾಗ್ರಂಥ ಪ್ರಧಾನ ಸಂಪಾದಕರಾದ ಪ್ರೊ. ಎಚ್.ಎ.ಬಿಕ್ಷಾವರ್ತಿಮಠ ಅವರು ತಿಳಿಸಿದ್ದಾರೆ.
ಡಾ. ಕುಬೇರಪ್ಪಅಭಿಮಾನಿ ಬಳಗ ರಾಜ್ಯಾಧ್ಯಾಕ್ಷರು ಹಾಗೂ ಕರ್ನಾಟಕ ಅತಿಥಿಉಪನ್ಯಾಸಕರ ಸಂಘ (ರಿ) ಬೆಂಗಳೂರು ರಾಜ್ಯಾಧ್ಯಕ್ಷರು ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂಸಂಗೀತ ಕಾರ್ಯಕ್ರಮ ಜಾನಪದ ಹಾಡುಗಾರ ಡಾ.ಕೆ.ಸಿ.ನಾಗರಜ್ಜಿ ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.
ಪ್ರಾಚಾರ್ಯರಾದ ಸುರೇಶ ಬಣಕಾರ, ಬಸವರಾಜ ಮಾಳೇನಹಳ್ಳಿ, ಆರ್.ಗೋಪಾಲರೆಡ್ಡಿ, ದೇವರಾಜ ಹಂಚಿನಮನಿ, ಚಂದ್ರಶೇಖರ ಪ್ರಮುಖರು ಸೇರಿಕುಬೇರಪ್ಪ ಅಭಿಮಾನಿಗಳು ಈ ವೇಳೆ ಹಾಜರಿದ್ದರು.