ಡಾ. ರಾಜಕುಮಾರ ಮರೋಳ ರಾಜ್ಯಾಧ್ಯಕ್ಷರಾಗಿ ಆಯ್ಕೆ
ಹಾವೇರಿ: ಕಾರವಾರ ಹಾಗೂ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ರಾಜಕುಮಾರ ಮರೋಳ ಇವರು ಭಾರತೀಯ ಮಕ್ಕಳ ವೈದ್ಯರ ಸಂಘದ ಕರ್ನಾಟಕ ರಾಜ್ಯದ ಸಾಂಕ್ರಾಮಿಕ ರೋಗಗಳ ವಿಭಾಗದ ರಾಜ್ಯಾಧ್ಯಕ್ಷರಾಗಿ ೨೦೨೫ ನೇ ಸಾಲಿಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಬಸವರಾಜ ಜೆ.ವಿ. ಇವರು ಡಾ. ಮರೋಳ ಅವರಿಗೆ ಅಧಿಕಾರ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಡಾ. ನಾರಾಯಣಪ್ಪ, ಡಾ.ರಘುನಾಥ, ಡಾ.ಸೋಮಶೇಖರ, ಡಾ.ಕೀಶೋರ ಬೈಂದೂರ, ಡಾ.ಸೋಸಲೆ, ಡಾ.ಚಿದಾನಂದ, ಡಾ.ಪ್ರೀತಿ ಗಲಗಲಿ ಮತ್ತು ಕರ್ನಾಟಕ ರಾಜ್ಯ ಮಕ್ಕಳ ವೈದ್ಯರ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಮ್ಮ ಅಧಿಕಾರದ ಅವಧಿಯಲ್ಲಿ ಡಾ.ರಾಜಕುಮಾರ ಮರೋಳ ಇವರು ಕರ್ನಾಟಕ ರಾಜ್ಯ ಮಕ್ಕಳ ವೈದ್ಯರಿಗೆ, ಮಕ್ಕಳಲ್ಲಿ ಬರುವ ಹೊಸ ಸಾಂಕ್ರಾಮಿಕ ರೋಗಗಳು, ಎಂಟಿಬಿಯಾಟಿಕ ರಜೆಸ್ಟನ್ಸ, ಸಾಂಕ್ರಾಮಿಕ ರೋಗ ತಡೆಗಟ್ಟುವುದು ಮತ್ತು ಮುಂದೆ ಬರುವ ಕೋವಿಡನಂತಹ ಕಾಯಿಲೆಗಳನ್ನು ಹತೋಟಿಗೆ ತರುವುದರ ಬಗ್ಗೆ ಮಾಹಿತಿ ನೀಡುವರು.