ಡಿ.೨೮ರಿಂದ ಜ.೧ರವರೆಗೆ ಹುಕ್ಕೇರಿಮಠದ “ನಮ್ಮೂರಜಾತ್ರೆ”
ಹಾವೇರಿಯ ಅಕ್ಷರಜಾತ್ರೆಗೆ ೪೦ ಸಾವಿರ ರೊಟ್ಟಿ : ಸದಾಶಿವಸ್ವಾಮಿಜಿ
ಹಾವೇರಿ: ಭಾವೈಕ್ಷತೆಯ ಸಂದೇಶ ಸಾರುವ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಹುಕ್ಕೇರಿಮಠದ ಲಿಂ.ಶಿವಬಸವಸ್ವಾಮೀಜಿಗಳ ೭೭ ನೇ ಹಾಗೂ ಶಿವಲಿಂಗಸ್ವಾಮಿಜಿಯವರ ೧೪ನೇ ವರ್ಷದ ಪುಣ್ಯಸ್ಮರಣೋತ್ಸವ ನಮ್ಮೂರಜಾತ್ರೆಯ ಧಾರ್ಮಿಕ, ಸಾಹಿತ್ಯ್ತಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಗರದ ಹುಕ್ಕೇರಿಮಠದಲ್ಲಿ ಡಿ.೨೮ರಿಂದ ಜ.೧ರವರೆಗೆ ಜರುಗಲಿವೆ ಎಂದು ಹುಕ್ಕೇರಿಮಠದ ಪೀಠಾಧ್ಯಕ್ಷರಾದ ಸದಾಶಿವಸ್ವಾಮಿಜಿ ತಿಳಿಸಿದರು.
ಸೋಮವಾರ ಇಲ್ಲಿನ ಹುಕ್ಕೇರಿಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾತ್ರೆಯ ವಿವರಗಳನ್ನು ತಿಳಿಸಿದ ಅವರು, ಕಳೆದ ಎರಡು ವರ್ಷಗಲಿಂದ ಕೊರೋನಾ ಕಾರಣಕ್ಕೆ ನಮ್ಮೂರಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು, ಪ್ರಕಸ್ತ ವರ್ಷ ನಮ್ಮೂರಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದ ಶ್ರೀಗಳು ಪ್ರಸಕ್ತ ವರ್ಷ ಹಾವೇರಿಯಲ್ಲಿ ಜ.೬ರಿಂದ ೮ರವರೆಗೆ ಜರುಗುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಜಾತ್ರೆಗೆ ಹುಕ್ಕೇರಿಮಠದಿಮದ ೪೦ಸಾವಿರ ರೊಟ್ಟಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಡಿ.೨೮ರಂದು ಬೆಳಿಗ್ಗೆ ೮-೩೦ಕ್ಕೆ ಮಠದ ಆವರಣದಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಹುಬ್ಬಳ್ಳಿ ಮತ್ತು ಹಾನಗಲ್ಲ ಸಾನಿಧ್ಯದಲ್ಲಿ, ಮಠಾಧ್ಯಕ್ಷರಾದ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ, ಹಾವೇರಿ ನೇತೃತ್ವ ದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರುವುದು. ಅಮರೇಶ ಕೊಟ್ಟಿಕಲ್ ಇವರಿಂದ ಪ್ರತಿದಿನ ಸಾಯಂಕಾಲ ಪ್ರಾರ್ಥನೆ ಹಾಗೂ ಸಂಗೀತ ಹನುಮಂತ ಕೊಟ್ಟಿಕಲ್ ಇವರಿಂದ ತಬಲಾ ಸೇವೆ ಜರುಗುವುದು.
ಅಂದು ಸಂಜೆ ೬-೩೦ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣ್ಣದಮಠ, ಶಿರ್ಶಿ ಹಾಗೂ ಚಿಕ್ಕತೊಟ್ಟಲಕೆರೆಯ ಶಿವಲಿಂಗಮಹಾಸ್ವಾಮಿಗಳು ವಹಿಸುವರು, ಸಮ್ಮುಖವನ್ನು ಮಹಾಂತ ಮೂಕಪ್ಪ ಶಿವಯೋಗಿಮಠ, ತಿಪ್ಪಾಯಿಕೊಪ್ಪ, ನೇತೃತ್ವವನ್ನು ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗುರುನಂಜೇಶ್ವರಮಠ, ಕೂಡಲ ವಹಿಸುವರು, ಪ್ರಭುಲಿಂಗ ಮಹಾಸ್ವಾಮಿಗಳು ವಿರಕ್ತಮಠ, ಘೋಡಗೇರಿ ಇವರಿಗೆ ಗೌರವಾರ್ಪಣೆ ನಡೆಯುವುದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಶ್ರೀಶೈಲ ಹುದ್ದಾರ, ಮಹದೇಶ್ವರಗೌಡ ಲಿಂಗದಹಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ.
ಡಿ.೨೯ರಂದು ಸಂಜೆ ೬-೩೦ಕ್ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠ, ಘಟಪ್ರಭಾ ಇವರು ವಹಿಸುವರು, ನೇತೃತ್ವ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಗೌರಿಮಠ ಕರ್ಜಗಿ ಹಾಗೂ ಹಾವೇರಿ, ಸಮ್ಮುಖವನ್ನು ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹರಸೂರು ಬಣ್ಣದಮಠ, ಹಾವೇರಿ, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮುತ್ತಿನಕಂತಿಮಠ, ಅಕ್ಕಿಆಲೂರು, ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಚರಮೂರ್ತಿಗಳು, ಹೊಸಮಠ, ಹಾವೇರಿ ಇವರು ವಹಿಸುವರು. ಅಭಿನವ ರೇವಣಸಿದ್ಧ ಮಹಾಸ್ವಾಮಿಗಳು ವಿರಕ್ತಮಠ, ರಾಯನಾಳ ಇವರಿಗೆ ಗೌರವಾರ್ಪಣೆ ನೆರವೇರುವುದು.
ಗ್ರಂಥ ಬಿಡುಗಡೆ: ಸಮಾರಂಭದಲ್ಲಿ ಕವಿರತ್ನ ದ್ಯಾಂಪುರ ಚೆನ್ನಕವಿಕೃತ ಶ್ರೀ ಕುಮಾರೇಶ್ವರ ಪುರಾಣ ಗ್ರಂಥ ಬಿಡುಗಡೆ ವ್ಯಾಖ್ಯಾನಕಾರರು: ಶ್ರೀ ಶೋ.ಬ್ರ. ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಷಣ್ಮುಖಾರೂಢಮಠ ವಿಜಯಪುರ ಇವರು ಭಾಗವಹಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಸಾ|| ಮರಿಯಮ್ಮನಹಳ್ಳಿ, ಶ್ರೀ ಪ್ರಮೋದ ನೆಲವಾಗ, ಗೌರವ ಸಮಾಧಿಷ್ಠರು, ಗೃಹರಕ್ಷಕದಳ ಹಾವೇರಿ ಇವರನ್ನು ಸನ್ಮಾನಿಸಲಾಗುವುದು, ಶರಣು ಯಮನೂರ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯುವುದು.
ಡಿ.೩೦ರಂದು ಬೆಳಿಗ್ಗೆ ೧೦ಕ್ಕೆ ಹಾವೇರಿಯ ಶ್ರೀ ಶಿವಬಸವ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಶ್ರೀ ಶಿವಬಸವ ದನಗಳ ಜಾತ್ರೆ ಉದ್ಘಾಟನೆ ನಡೆಯುವದು.
ಅಂದು ಶುಕ್ರವಾರ ಸಾಯಂಕಾಲ ೦೬:೩೦ ಗಂಟೆಗೆ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಫಕೀರೇಶ್ವರ ಸಂಸ್ಥಾನಮಠ ಶಿರಹಟ್ಟ ಬಾಳೇಹೊಸೂರು. ಇವರ ಸಾನಿಧ್ಯದಲ್ಲಿ, ಶಿವಕುಮಾರ ಮಹಾಸ್ವಾಮಿಗಳು ನಂದಿವೇರಿಮಠ ಕಪ್ಪತಗುಡ್ಡ ಸಮ್ಮುಖ,. ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್ ಇವರು ನೇತೃತ್ವ ವಹಿಸುವರು, ಶಿವಮೂರ್ತಿ ಮಹಾಸ್ವಾಮಿಗಳು ತೋಂಟದಾರ್ಯ ವಿರಕ್ತಮಠ ಅರಳಿಕಟ್ಟೆ ಶ್ರೀಗಳಿಗೆ ಗೌರವಾರ್ಪಣೆ ನೆರವೇರುವುದು.
ಮುಖ್ಯ ಅತಿಥಿಗಳು ಬಿ. ಜಗದೀಶ ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಆಗಮಿಸುವರು,
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಂತೇಶಕೋರಿಶೆಟ್ಟರ ರವೀಂದ್ರ ಶೆಟ್ಟಿ ಇವರನ್ನು ಸನ್ಮಾನಿಸಲಾಗುತ್ತದೆ. ಸಿದ್ದಪ್ಪ ಬಿದರಿ ಜಾನಪದ ಕವಿಗಳು, ಬೀಳಗಿ
ಜನಪದ ಸಂಭ್ರಮ ಕಾರ್ಯಕ್ರಮ ನಡೆಸಿಕೊಡುವರು.
ಡಿ.೩೧ರಂದು ಸಾಯಂಕಾಲ ೦೬:೩೦ ಗಂಟೆಗೆ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರುಸ್ವಾಮಿಮಠ, ಹೊಸಪೇಟೆ-ಹಾಲಕೆರೆ ಇವರ ಅಧ್ಯಕ್ಷತೆಯಲ್ಲಿ, ಶಿವಬಸವ ಮಹಾಸ್ವಾಮಿಗಳು ಚನ್ನವೀರೇಶ್ವರ ವಿರಕ್ತಮಠ, ಅಕ್ಕಿಆಲೂರು ನೇತೃತ್ವದಲ್ಲಿ ಅಭಿನವ ಮೃತ್ಯುಂಜಯ ಸ್ವಾಮಿಗಳು ದೇವಮಂದಿರಮಠ, ಮಣಕವಾಡ,ಸಿದ್ಧಲಿಂಗ ದೇವರು ಸಿದ್ಧಲಿಂಗೇಶ್ವರ ಸಂಸ್ಥಾನಮಠ, ರಾವೂರ ಸಮ್ಮುಖ ವಹಿಸುವರು, ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ, ಯಡ್ರಾಮಿ
ಇವರಿಗೆ ಗೌರವಾರ್ಪಣೆ ನಡೆಯುವುದು. ವೇ.ಶಿವಬಸಯ್ಯನವರು ಆರಾಧ್ಯಮಠ, ಸಂಚಾಲಕರು ಶ್ರೀ ಸಿಂದಗಿಮಠ ಹಾವೇರಿ ಇವರನ್ನು ಸನ್ಮಾನಿಸಲಾಗುವುದು.
ವಿರಾಟಪುರ ವಿರಾಗಿ ಚಿತ್ರತಂಡದ ಬಿ.ಎಸ್. ಲಿಂಗದೇವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರು. ಶ್ರೀ ಸುಚೇಂದ್ರಪ್ರಸಾದ ಖ್ಯಾತ ಚಲನಚಿತ್ರ ನಟರು ಇವರಿಗೆ ಗೌರವಾಬಿನಂದನೆ ಕಾರ್ಯಕ್ರಮ ನಡೆಯುವುದು. ಬಸವ ಕಲಾಲೋಕ, ದಾವಣಗೇರಿ ಇವರಿಂದ ವಚನ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಜನೇವರಿ ರಂದು ಸಾಯಂಕಾಲ ೦೬:೩೦ ಗಂಟೆಗೆ ನಡೆಯುವ ಸಮಾರಂಭದ ಸಾನಿಧ್ಯವನ್ನು ನಿರಂಜನ ಜಗದ್ಗುರು ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರಮಠ, ಹುಬ್ಬಳ್ಳಿ-ಹಾನಗಲ್ಲ ಇವರು ವಹಿಸುವರು, ಅಧ್ಯಕ್ಷತೆಯನ್ನು ಅಭಿನವ ಶಿವಲಿಂಗ ಮಹಾಸ್ವಾಮಿಗಳು ಶ್ರೀ ಶಿವಲಿಂಗೇಶ್ವರ ವಿರಕ್ತಮಠ, ಮಾದನಹಿಪ್ಪರಗಿ ಚಹಿಸುವರು, ಡಾ. ಮಹಾಂತ ಮಹಾಸ್ವಾಮಿಗಳು ವಿರಕ್ತಮಠ, ಶೇಗುಣಸಿ ಇವರಿಗೆ ಗೌರವಾರ್ಪಣೆ ನೆರವೇರಿಸಲಾಗುವುದು.
ಜನವರಿ೨ರಂದು ಪೂಜ್ಯದ್ವಯರ ಪುಣ್ಯ ಸ್ಮರಣೋತ್ಸವ ನಡೆಯುವುದು, ಮುಂಜಾನೆ ೮ ಗಂಟೆಗೆ ಪೂಜ್ಯ ಶ್ರೀಗಳವರ ಗದ್ದುಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ
ಮಧ್ಯಾಹ್ನ ೧೨ ಗಂಟೆಗೆ ಮಹಾ ಗಣಾರಾಧನೆ ನಡೆಯುವುದು, ಸಾಯಂಕಾಲ ೪ ಗಂಟೆಗೆ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಶಿವಯೋಗಿಗಳವರ ಹಾಗೂ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ನಾಡಿನ ಖ್ಯಾತ ಕಲಾ ತಂಡಗಳು ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಜರುಗುವುದು. ಈ ಉತ್ಸವದಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಿ ಶ್ರೀಗಳವರ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕೆಂದು ಸದಾಶಿವ ಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣ್ಯರಾದ ಪಿ.ಡಿ.ಶಿರೂರ, ಎಸ್.ಎಸ್.ಮುಷ್ಠಿ, ಜಾತ್ರಾಕಮಿಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ, ಕಾರ್ಯದಶಿ ಜಗದೀಶ ಕನವಳ್ಳಿ, ಶಿವಯೋಗಿ ಮಾಮ್ಲೆಪಟ್ಟಣಶೆಟ್ಟರ, ಪರಶುರಾಮ ಅಡಕಿ ಸೇರಿದಂತೆ ಅನೇಕರು ಹಾಜರಿದ್ದರು.
ಡಿ.೨೮ರಿಂದ ಜ.೧ರವರೆಗೆ ಹುಕ್ಕೇರಿಮಠದ “ನಮ್ಮೂರಜಾತ್ರೆ” ಹಾವೇರಿಯ ಅಕ್ಷರಜಾತ್ರೆಗೆ ೪೦ ಸಾವಿರ ರೊಟ್ಟಿ : ಸದಾಶಿವಸ್ವಾಮಿಜಿ
Date:
ಡಿ.೨೮ರಿಂದ ಜ.೧ರವರೆಗೆ ಹುಕ್ಕೇರಿಮಠದ “ನಮ್ಮೂರಜಾತ್ರೆ”
ಹಾವೇರಿಯ ಅಕ್ಷರಜಾತ್ರೆಗೆ ೪೦ ಸಾವಿರ ರೊಟ್ಟಿ : ಸದಾಶಿವಸ್ವಾಮಿಜಿ
ಹಾವೇರಿ: ಭಾವೈಕ್ಷತೆಯ ಸಂದೇಶ ಸಾರುವ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಹುಕ್ಕೇರಿಮಠದ ಲಿಂ.ಶಿವಬಸವಸ್ವಾಮೀಜಿಗಳ ೭೭ ನೇ ಹಾಗೂ ಶಿವಲಿಂಗಸ್ವಾಮಿಜಿಯವರ ೧೪ನೇ ವರ್ಷದ ಪುಣ್ಯಸ್ಮರಣೋತ್ಸವ ನಮ್ಮೂರಜಾತ್ರೆಯ ಧಾರ್ಮಿಕ, ಸಾಹಿತ್ಯ್ತಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಗರದ ಹುಕ್ಕೇರಿಮಠದಲ್ಲಿ ಡಿ.೨೮ರಿಂದ ಜ.೧ರವರೆಗೆ ಜರುಗಲಿವೆ ಎಂದು ಹುಕ್ಕೇರಿಮಠದ ಪೀಠಾಧ್ಯಕ್ಷರಾದ ಸದಾಶಿವಸ್ವಾಮಿಜಿ ತಿಳಿಸಿದರು.
ಸೋಮವಾರ ಇಲ್ಲಿನ ಹುಕ್ಕೇರಿಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾತ್ರೆಯ ವಿವರಗಳನ್ನು ತಿಳಿಸಿದ ಅವರು, ಕಳೆದ ಎರಡು ವರ್ಷಗಲಿಂದ ಕೊರೋನಾ ಕಾರಣಕ್ಕೆ ನಮ್ಮೂರಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು, ಪ್ರಕಸ್ತ ವರ್ಷ ನಮ್ಮೂರಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದ ಶ್ರೀಗಳು ಪ್ರಸಕ್ತ ವರ್ಷ ಹಾವೇರಿಯಲ್ಲಿ ಜ.೬ರಿಂದ ೮ರವರೆಗೆ ಜರುಗುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಜಾತ್ರೆಗೆ ಹುಕ್ಕೇರಿಮಠದಿಮದ ೪೦ಸಾವಿರ ರೊಟ್ಟಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಡಿ.೨೮ರಂದು ಬೆಳಿಗ್ಗೆ ೮-೩೦ಕ್ಕೆ ಮಠದ ಆವರಣದಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಹುಬ್ಬಳ್ಳಿ ಮತ್ತು ಹಾನಗಲ್ಲ ಸಾನಿಧ್ಯದಲ್ಲಿ, ಮಠಾಧ್ಯಕ್ಷರಾದ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ, ಹಾವೇರಿ ನೇತೃತ್ವ ದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರುವುದು. ಅಮರೇಶ ಕೊಟ್ಟಿಕಲ್ ಇವರಿಂದ ಪ್ರತಿದಿನ ಸಾಯಂಕಾಲ ಪ್ರಾರ್ಥನೆ ಹಾಗೂ ಸಂಗೀತ ಹನುಮಂತ ಕೊಟ್ಟಿಕಲ್ ಇವರಿಂದ ತಬಲಾ ಸೇವೆ ಜರುಗುವುದು.
ಅಂದು ಸಂಜೆ ೬-೩೦ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣ್ಣದಮಠ, ಶಿರ್ಶಿ ಹಾಗೂ ಚಿಕ್ಕತೊಟ್ಟಲಕೆರೆಯ ಶಿವಲಿಂಗಮಹಾಸ್ವಾಮಿಗಳು ವಹಿಸುವರು, ಸಮ್ಮುಖವನ್ನು ಮಹಾಂತ ಮೂಕಪ್ಪ ಶಿವಯೋಗಿಮಠ, ತಿಪ್ಪಾಯಿಕೊಪ್ಪ, ನೇತೃತ್ವವನ್ನು ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗುರುನಂಜೇಶ್ವರಮಠ, ಕೂಡಲ ವಹಿಸುವರು, ಪ್ರಭುಲಿಂಗ ಮಹಾಸ್ವಾಮಿಗಳು ವಿರಕ್ತಮಠ, ಘೋಡಗೇರಿ ಇವರಿಗೆ ಗೌರವಾರ್ಪಣೆ ನಡೆಯುವುದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಶ್ರೀಶೈಲ ಹುದ್ದಾರ, ಮಹದೇಶ್ವರಗೌಡ ಲಿಂಗದಹಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ.
ಡಿ.೨೯ರಂದು ಸಂಜೆ ೬-೩೦ಕ್ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠ, ಘಟಪ್ರಭಾ ಇವರು ವಹಿಸುವರು, ನೇತೃತ್ವ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಗೌರಿಮಠ ಕರ್ಜಗಿ ಹಾಗೂ ಹಾವೇರಿ, ಸಮ್ಮುಖವನ್ನು ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹರಸೂರು ಬಣ್ಣದಮಠ, ಹಾವೇರಿ, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮುತ್ತಿನಕಂತಿಮಠ, ಅಕ್ಕಿಆಲೂರು, ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಚರಮೂರ್ತಿಗಳು, ಹೊಸಮಠ, ಹಾವೇರಿ ಇವರು ವಹಿಸುವರು. ಅಭಿನವ ರೇವಣಸಿದ್ಧ ಮಹಾಸ್ವಾಮಿಗಳು ವಿರಕ್ತಮಠ, ರಾಯನಾಳ ಇವರಿಗೆ ಗೌರವಾರ್ಪಣೆ ನೆರವೇರುವುದು.
ಗ್ರಂಥ ಬಿಡುಗಡೆ: ಸಮಾರಂಭದಲ್ಲಿ ಕವಿರತ್ನ ದ್ಯಾಂಪುರ ಚೆನ್ನಕವಿಕೃತ ಶ್ರೀ ಕುಮಾರೇಶ್ವರ ಪುರಾಣ ಗ್ರಂಥ ಬಿಡುಗಡೆ ವ್ಯಾಖ್ಯಾನಕಾರರು: ಶ್ರೀ ಶೋ.ಬ್ರ. ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಷಣ್ಮುಖಾರೂಢಮಠ ವಿಜಯಪುರ ಇವರು ಭಾಗವಹಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಸಾ|| ಮರಿಯಮ್ಮನಹಳ್ಳಿ, ಶ್ರೀ ಪ್ರಮೋದ ನೆಲವಾಗ, ಗೌರವ ಸಮಾಧಿಷ್ಠರು, ಗೃಹರಕ್ಷಕದಳ ಹಾವೇರಿ ಇವರನ್ನು ಸನ್ಮಾನಿಸಲಾಗುವುದು, ಶರಣು ಯಮನೂರ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯುವುದು.
ಡಿ.೩೦ರಂದು ಬೆಳಿಗ್ಗೆ ೧೦ಕ್ಕೆ ಹಾವೇರಿಯ ಶ್ರೀ ಶಿವಬಸವ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಶ್ರೀ ಶಿವಬಸವ ದನಗಳ ಜಾತ್ರೆ ಉದ್ಘಾಟನೆ ನಡೆಯುವದು.
ಅಂದು ಶುಕ್ರವಾರ ಸಾಯಂಕಾಲ ೦೬:೩೦ ಗಂಟೆಗೆ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಫಕೀರೇಶ್ವರ ಸಂಸ್ಥಾನಮಠ ಶಿರಹಟ್ಟ ಬಾಳೇಹೊಸೂರು. ಇವರ ಸಾನಿಧ್ಯದಲ್ಲಿ, ಶಿವಕುಮಾರ ಮಹಾಸ್ವಾಮಿಗಳು ನಂದಿವೇರಿಮಠ ಕಪ್ಪತಗುಡ್ಡ ಸಮ್ಮುಖ,. ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್ ಇವರು ನೇತೃತ್ವ ವಹಿಸುವರು, ಶಿವಮೂರ್ತಿ ಮಹಾಸ್ವಾಮಿಗಳು ತೋಂಟದಾರ್ಯ ವಿರಕ್ತಮಠ ಅರಳಿಕಟ್ಟೆ ಶ್ರೀಗಳಿಗೆ ಗೌರವಾರ್ಪಣೆ ನೆರವೇರುವುದು.
ಮುಖ್ಯ ಅತಿಥಿಗಳು ಬಿ. ಜಗದೀಶ ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಆಗಮಿಸುವರು,
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಂತೇಶಕೋರಿಶೆಟ್ಟರ ರವೀಂದ್ರ ಶೆಟ್ಟಿ ಇವರನ್ನು ಸನ್ಮಾನಿಸಲಾಗುತ್ತದೆ. ಸಿದ್ದಪ್ಪ ಬಿದರಿ ಜಾನಪದ ಕವಿಗಳು, ಬೀಳಗಿ
ಜನಪದ ಸಂಭ್ರಮ ಕಾರ್ಯಕ್ರಮ ನಡೆಸಿಕೊಡುವರು.
ಡಿ.೩೧ರಂದು ಸಾಯಂಕಾಲ ೦೬:೩೦ ಗಂಟೆಗೆ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರುಸ್ವಾಮಿಮಠ, ಹೊಸಪೇಟೆ-ಹಾಲಕೆರೆ ಇವರ ಅಧ್ಯಕ್ಷತೆಯಲ್ಲಿ, ಶಿವಬಸವ ಮಹಾಸ್ವಾಮಿಗಳು ಚನ್ನವೀರೇಶ್ವರ ವಿರಕ್ತಮಠ, ಅಕ್ಕಿಆಲೂರು ನೇತೃತ್ವದಲ್ಲಿ ಅಭಿನವ ಮೃತ್ಯುಂಜಯ ಸ್ವಾಮಿಗಳು ದೇವಮಂದಿರಮಠ, ಮಣಕವಾಡ,ಸಿದ್ಧಲಿಂಗ ದೇವರು ಸಿದ್ಧಲಿಂಗೇಶ್ವರ ಸಂಸ್ಥಾನಮಠ, ರಾವೂರ ಸಮ್ಮುಖ ವಹಿಸುವರು, ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ, ಯಡ್ರಾಮಿ
ಇವರಿಗೆ ಗೌರವಾರ್ಪಣೆ ನಡೆಯುವುದು. ವೇ.ಶಿವಬಸಯ್ಯನವರು ಆರಾಧ್ಯಮಠ, ಸಂಚಾಲಕರು ಶ್ರೀ ಸಿಂದಗಿಮಠ ಹಾವೇರಿ ಇವರನ್ನು ಸನ್ಮಾನಿಸಲಾಗುವುದು.
ವಿರಾಟಪುರ ವಿರಾಗಿ ಚಿತ್ರತಂಡದ ಬಿ.ಎಸ್. ಲಿಂಗದೇವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರು. ಶ್ರೀ ಸುಚೇಂದ್ರಪ್ರಸಾದ ಖ್ಯಾತ ಚಲನಚಿತ್ರ ನಟರು ಇವರಿಗೆ ಗೌರವಾಬಿನಂದನೆ ಕಾರ್ಯಕ್ರಮ ನಡೆಯುವುದು. ಬಸವ ಕಲಾಲೋಕ, ದಾವಣಗೇರಿ ಇವರಿಂದ ವಚನ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಜನೇವರಿ ರಂದು ಸಾಯಂಕಾಲ ೦೬:೩೦ ಗಂಟೆಗೆ ನಡೆಯುವ ಸಮಾರಂಭದ ಸಾನಿಧ್ಯವನ್ನು ನಿರಂಜನ ಜಗದ್ಗುರು ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರಮಠ, ಹುಬ್ಬಳ್ಳಿ-ಹಾನಗಲ್ಲ ಇವರು ವಹಿಸುವರು, ಅಧ್ಯಕ್ಷತೆಯನ್ನು ಅಭಿನವ ಶಿವಲಿಂಗ ಮಹಾಸ್ವಾಮಿಗಳು ಶ್ರೀ ಶಿವಲಿಂಗೇಶ್ವರ ವಿರಕ್ತಮಠ, ಮಾದನಹಿಪ್ಪರಗಿ ಚಹಿಸುವರು, ಡಾ. ಮಹಾಂತ ಮಹಾಸ್ವಾಮಿಗಳು ವಿರಕ್ತಮಠ, ಶೇಗುಣಸಿ ಇವರಿಗೆ ಗೌರವಾರ್ಪಣೆ ನೆರವೇರಿಸಲಾಗುವುದು.
ಜನವರಿ೨ರಂದು ಪೂಜ್ಯದ್ವಯರ ಪುಣ್ಯ ಸ್ಮರಣೋತ್ಸವ ನಡೆಯುವುದು, ಮುಂಜಾನೆ ೮ ಗಂಟೆಗೆ ಪೂಜ್ಯ ಶ್ರೀಗಳವರ ಗದ್ದುಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ
ಮಧ್ಯಾಹ್ನ ೧೨ ಗಂಟೆಗೆ ಮಹಾ ಗಣಾರಾಧನೆ ನಡೆಯುವುದು, ಸಾಯಂಕಾಲ ೪ ಗಂಟೆಗೆ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಶಿವಯೋಗಿಗಳವರ ಹಾಗೂ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ನಾಡಿನ ಖ್ಯಾತ ಕಲಾ ತಂಡಗಳು ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಜರುಗುವುದು. ಈ ಉತ್ಸವದಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಿ ಶ್ರೀಗಳವರ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕೆಂದು ಸದಾಶಿವ ಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣ್ಯರಾದ ಪಿ.ಡಿ.ಶಿರೂರ, ಎಸ್.ಎಸ್.ಮುಷ್ಠಿ, ಜಾತ್ರಾಕಮಿಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ, ಕಾರ್ಯದಶಿ ಜಗದೀಶ ಕನವಳ್ಳಿ, ಶಿವಯೋಗಿ ಮಾಮ್ಲೆಪಟ್ಟಣಶೆಟ್ಟರ, ಪರಶುರಾಮ ಅಡಕಿ ಸೇರಿದಂತೆ ಅನೇಕರು ಹಾಜರಿದ್ದರು.