ತಂತ್ರಜ್ಞಾನದ ಮೂಲಕ ಸಾಹಿತ್ಯಸರ್ವರಿಗೂ ತಲುಪಿಸಬೇಕು: ಸುರೇಶ ಜಂಗಮಶೆಟ್ಟಿ

Date:

ತಂತ್ರಜ್ಞಾನದ ಮೂಲಕ ಸಾಹಿತ್ಯಸರ್ವರಿಗೂ ತಲುಪಿಸಬೇಕು: ಸುರೇಶ ಜಂಗಮಶೆಟ್ಟಿ

ಹಾವೇರಿ: ತಂತ್ರಜ್ಞಾನ ಇಂದು ಅತೀ ವೇಗವಾಗಿ ಬೆಳೆದು ನಿಂತು ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸುವ ಜೊತೆಗೆ ಬದುಕನ್ನು ಸರಳಗೊಳಿಸಿದೆ.ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಅನೇಕ ಅದ್ಭುತ, ಅಚ್ಚರಿಗಳನ್ನು ಸೃಷ್ಟಿಸುತ್ತಿವೆ.ಆ ಜ್ಞಾನವನ್ನು ನಾವು ಪಡೆದು ಸದುಪಯೋಗಪಡಿಸಿಕೊಂಡರೆ ಜಗತ್ತಿನ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಸಾಹಿತ್ಯದ ಪ್ರತಿಯೊಂದು ಚಟುವಟಿಕೆಗಳನ್ನು ಕೂಡ ತಂತ್ರಜ್ಞಾನ ಬಳಸಿ ಸರ್ವರನ್ನೂ ತಲುಪುವಂತಾಗಬೇಕು.ಆಗ ಸಾಹಿತ್ಯವನ್ನು ಓದುವರ ಸಂಖ್ಯೆ ಹೆಚ್ಚಾಗುತ್ತದೆ.ಆದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿರುವ ಪ್ರತಿಭಾವಂತರು ತಂತ್ರಜ್ಞಾನದ ಮೊರೆ ಹೋಗಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ ಜಂಗಮಶೆಟ್ಟಿ ಕರೆ ನೀಡಿದರು.
ನಗರದ ಭಾವ ಸಂಗಮ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹಂಚಿನಮನಿ ಆರ್ಟ್ ಗ್ಯಾಲರಿ ಮತ್ತು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಜರುಗಿದ ‘ಪುಸ್ತಕ ಪ್ರೀತಿ-04′( ಮಹಿಳಾ ವಿಶೇಷ ) ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವನ್ನು ವಚನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೂರು ಲೇಖಕಿಯರ ಪುಸ್ತಕಗಳಲ್ಲಿ ಮೌಲ್ಯಯುತವಾದ ವಿಚಾರಗಳ ಪ್ರಸ್ತಾಪವಿದೆ. ಸಾಹಿತ್ಯ ನಮ್ಮ ನೋವು ನಲಿವಿಗೆ ಔಷಧದಂತೆ ಕೆಲಸ ಮಾಡುತ್ತದೆ. ಕೃತಿಗಳ ವಿಮರ್ಶೆ ಜೊತೆಗೆ ಓದುಗ ಮತ್ತು ಲೇಖಕರೊಂದಿಗಿನ ಸಂವಾದ ಹೊಸಬರ ಬರವಣಿಗೆಗೆ ಪ್ರೇರಣೆಯಾಗುತ್ತದೆ.ಇಂತಹ ಸುವಿಚಾರಗಳು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲೇ ಜಗತ್ತುನ್ನು ಆವರಿಸಿಕೊಳ್ಳುವಂತೆ ಮಾಡಿದರೆ ಓದುವ ಸಂಸ್ಕೃತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿ ಮಹಿಳೆಯರ ಪುಸ್ತಕಗಳನ್ನೇ ತೆಗೆದುಕೊಂಡು ಕಾರ್ಯಕ್ರಮ ಮಾಡಿದ್ದು ಅಭಿನಂದನಿಯ ಎಂದರು.
ಮೊದಲಿಗೆ ಉಪನ್ಯಾಸಕ ಮಂಜುನಾಥ ಹತ್ತಿಯವರ ಪ್ರಾಸ್ತಾವಿಕವಾಗಿ ಮಾತನಾಡಿ ಪುಸ್ತಕ ಪ್ರೀತಿ ಕಾರ್ಯಕ್ರಮದ ಅಡಿಯಲ್ಲಿ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದದಿಂದ ಗುಣಮಟ್ಟದ ಲೇಖಕರು ಮತ್ತು ಓದುಗರನ್ನು ಸೃಷ್ಟಿಸಲು ಸಾಧ್ಯವಾಗಿದೆ.ಇದು ನಾಲ್ಕನೇ ಕಾರ್ಯಕ್ರಮವಾಗಿದ್ದು ಖ್ಯಾತನಾಮರು ಬಂದು ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ. ಜಿಲ್ಲೆಯ ಸಾಹಿತಿಕ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ ಎಂದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಸಾಹಿತಿಗಳಾದ ಪ್ರೊ.ಶೇಖರ ಭಜಂತ್ರಿ ಡಾ.ಪುಷ್ಪಾವತಿ ಶಲವಡಿಮಠ ರವರ ‘ನೀಲಾಂಬಿಕೆ’ ಕೃತಿ ಕುರಿತು ಬಸವಣ್ಣನವರ ಪತ್ನಿ ನೀಲಾಂಬಿಕೆ ವಿಚಾರ ಪತ್ನಿಯಾಗಿ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಡೆದವರು. ಬಸವಣ್ಣನ ಪ್ರಭಾವಕ್ಕೆ ಒಳಗಾದ ನೀಲಾಂಬಿಕೆ ಸಾತ್ವಿಕ ಜೀವನದ ಜೊತೆಗೆ ಲೌಕಿಕ ಬದುಕಿನಲ್ಲೂ ಅಲೌಕಿಕತೆಯೆಡೆಗೆ ಸಾಗಿದವರು.ಆತ್ಮಿಕ ಸಂಬಂಧದ ಕೌಟುಂಬಿಕ ಜೀವನದಲ್ಲಿದ್ದು ಬಸವಣ್ಣನವರ ಕಾರ್ಯಕ್ಕೆ ಪೂರಕವಾಗಿ ಗುರುಲಿಂಗ ಜಂಗಮ ಸೇವೆಗೈದವರು. ತನ್ನ ತಾನು ಕಳೆದುಕೊಳ್ಳುತ್ತಾ ಲಿಂಗನಿಷ್ಠೆ ಮತ್ತು ಬಸವ ನಿಷ್ಠೆ ಪ್ರದರ್ಶಿಸಿದರು.ಅಸಮಾನತೆಗೆ ಸೆಡ್ಡು ಹೊಡೆದ ಬಸವ ಧರ್ಮದಲ್ಲಿ ಅತ್ಯುತ್ತಮ ವಚನಕಾರ್ತಿಯಾಗಿ ಬೆಳಗಿದವರು.ಕಲ್ಯಾಣ ಕ್ರಾಂತಿಯ ನಂತರ ಪತಿಯ ಸಾವನ್ನು ಅರಗಿಸಿಕೊಳ್ಳಲಾಗದೆ ಪ್ರಾಣತೆತ್ತ ಧೀಮಂತ ಶರಣೆ ಎಂದರು. ನಂತರ ಲತಾ ಹಳಕೊಪ್ಪ ರವರ ‘ಅಂತರಾಳ’ ಕೃತಿ ಕುರಿತು ಲತಾ ರವರ ಆತ್ಮಕಥೆಯಲ್ಲಿ ಬದುಕಿನ ಏರಿಳಿತಗಳಿವೆ.ಬದುಕು ಕಟ್ಟಿಕೊಂಡ ಬಗೆಯೊಂದಿಗೆ ಪಡೆದ ವಿದ್ಯೆ ಸಂಸ್ಕಾರ, ಮೌಲ್ಯಗಳ ಸಂಕಥನವಿದೆ. ಬದುಕಿನ ಪಯಣದಲ್ಲಿ ಬಂದ ತಂದೆ ತಾಯಿ, ಪತಿ, ಬಂಧುಗಳು ಸ್ನೇಹಿತರು ಎಲ್ಲಾ ಪಾತ್ರಗಳ ಪರಿಚಯವಿದೆ.ತಾವು ಎದುರಿಸಿ ನಿಂತ ಆರೋಗ್ಯ ಸಮಸ್ಯೆಗಳ ಕಥೆಗಳಿವೆ. ಕೃತಿಯಲ್ಲಿ ಅಜ್ಜಿ ಒಬ್ಬಳು ಪಕ್ಕದಲ್ಲಿ ಕುಳ್ಳಿರಿಸಿ ತನ್ನ ಮತ್ತು ತಲೆಮಾರುಗಳ ಕಥೆಯನ್ನು ಹೇಳಿದ ಆಪ್ತತೆ ಇದೆ ಎಂದರು.ಮತ್ತೊರ್ವ ಕವಿಯತ್ರಿ ಭಾಗ್ಯ ಎಂ.ಕೆ. ರವರ ‘ಬದುಕ ನಿತ್ಯ ನಗಾರಿ’ ವಚನಗಳ ಕೃತಿಯಲ್ಲಿ ಲೇಖಕಿ ಕಂಡ ಬದುಕಿನ ಅನುಭವಗಳನ್ನು, ಸಮಾಜದ ಜನರ ಮನಸ್ಥಿತಿಯ ಸ್ಥಿತ್ಯಂತರಗಳನ್ನ ಕುರಿತು ವಚನಗಳ ಮೂಲಕ ತಿವಿದಿದ್ದಾರೆ. ಮೌಲ್ಯಯುತ ಸಮಾಜ ಮತ್ತು ಬದುಕನ್ನು ಅರಸುತ್ತ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬೆಳಕನ್ನ ಚೆಲ್ಲುತ್ತಾರೆ. ಸಮಾಜದ ಅಂಕುಡೊಂಕುಗಳು ಮತ್ತು ಮೌಡ್ಯಗಳನ್ನ ಖಂಡಿಸುತ್ತಾರೆ. ಭಾಗ್ಯರವರ ಕವಿತೆಗಳು ಇಲ್ಲಿ ಆಪ್ತ ಭಾವವನ್ನ ತಂದು ಭಾವನೆಗಳ ಬಣ್ಣಗಳನ್ನು ಕನಸುಗಳ ಮೇಲೆ ಚೆಲ್ಲುತ್ತವೆ ಎಂದು ವಿಮರ್ಶೆ ಮಾಡಿದರು.
ನಂತರ ಓದುಗರು ಮೂವರು ಲೇಖಕಿಯರಿಗೆ ದಾಕ್ಷಾಯಿಣಿ ಉದಗಟ್ಟಿ, ಕವಿತಾ ಸಾರಂಗಮಠ, ರಾಜೇಶ್ವರಿ, ಮಣಿಕಂಠ, ಲತಾ ಪಾಟೀಲ, ಅನಿತಾ ಮಂಜುನಾಥ, ರಹೀಲ್ ರಾಜಭಕ್ಷಿ, ಸಿ.ಎ. ದೊಡ್ಡಗೌಡ್ರ, ದಾನೇಶ್ವರಿ ಸಿಗ್ಗಾವಿ, ಜಗನ್ನಾಥ ಗೇನಣ್ಣನವರ ಮತ್ತು ಇತರ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾ ಸಂವಾದ ನಡೆಸಿಕೊಟ್ಟರು. ಲೇಖಕರು ತಮ್ಮ ಬದುಕು ಬರಹಕ್ಕಾದ ಪ್ರೇರಣೆ ಇತ್ಯಾದಿ ವಿಷಯಗಳ ಕುರಿತು ಮನವರಿಕೆ ಮಾಡಿದರು.ನಂತರ ಮೂವರು ಲೇಖಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಕರಿಯಪ್ಪ ಹಂಚಿನಮನಿ, ಎಸ್. ಆರ್. ಹಿರೇಮಠ, ನಾಗರಾಜ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಜಿಎಚ್ ಕಾಲೇಜ ಮತ್ತು ಎಸ್.ಜೆ.ಎಮ್. ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಾಕ್ಷಾಯಿಣಿ ಉದಗಟ್ಟಿ ಸ್ವಾಗತಿಸಿ ಮಣಿಕಂಠ ಗೋದಮನಿ ನಿರೂಪಿಸಿದರೆ, ಕರಿಯಪ್ಪ ಹಂಚಿನಮನಿ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ತಂತ್ರಜ್ಞಾನದ ಮೂಲಕ ಸಾಹಿತ್ಯಸರ್ವರಿಗೂ ತಲುಪಿಸಬೇಕು: ಸುರೇಶ ಜಂಗಮಶೆಟ್ಟಿ

ಹಾವೇರಿ: ತಂತ್ರಜ್ಞಾನ ಇಂದು ಅತೀ ವೇಗವಾಗಿ ಬೆಳೆದು ನಿಂತು ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸುವ ಜೊತೆಗೆ ಬದುಕನ್ನು ಸರಳಗೊಳಿಸಿದೆ.ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಅನೇಕ ಅದ್ಭುತ, ಅಚ್ಚರಿಗಳನ್ನು ಸೃಷ್ಟಿಸುತ್ತಿವೆ.ಆ ಜ್ಞಾನವನ್ನು ನಾವು ಪಡೆದು ಸದುಪಯೋಗಪಡಿಸಿಕೊಂಡರೆ ಜಗತ್ತಿನ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಸಾಹಿತ್ಯದ ಪ್ರತಿಯೊಂದು ಚಟುವಟಿಕೆಗಳನ್ನು ಕೂಡ ತಂತ್ರಜ್ಞಾನ ಬಳಸಿ ಸರ್ವರನ್ನೂ ತಲುಪುವಂತಾಗಬೇಕು.ಆಗ ಸಾಹಿತ್ಯವನ್ನು ಓದುವರ ಸಂಖ್ಯೆ ಹೆಚ್ಚಾಗುತ್ತದೆ.ಆದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿರುವ ಪ್ರತಿಭಾವಂತರು ತಂತ್ರಜ್ಞಾನದ ಮೊರೆ ಹೋಗಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ ಜಂಗಮಶೆಟ್ಟಿ ಕರೆ ನೀಡಿದರು.
ನಗರದ ಭಾವ ಸಂಗಮ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹಂಚಿನಮನಿ ಆರ್ಟ್ ಗ್ಯಾಲರಿ ಮತ್ತು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಜರುಗಿದ ‘ಪುಸ್ತಕ ಪ್ರೀತಿ-04′( ಮಹಿಳಾ ವಿಶೇಷ ) ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವನ್ನು ವಚನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೂರು ಲೇಖಕಿಯರ ಪುಸ್ತಕಗಳಲ್ಲಿ ಮೌಲ್ಯಯುತವಾದ ವಿಚಾರಗಳ ಪ್ರಸ್ತಾಪವಿದೆ. ಸಾಹಿತ್ಯ ನಮ್ಮ ನೋವು ನಲಿವಿಗೆ ಔಷಧದಂತೆ ಕೆಲಸ ಮಾಡುತ್ತದೆ. ಕೃತಿಗಳ ವಿಮರ್ಶೆ ಜೊತೆಗೆ ಓದುಗ ಮತ್ತು ಲೇಖಕರೊಂದಿಗಿನ ಸಂವಾದ ಹೊಸಬರ ಬರವಣಿಗೆಗೆ ಪ್ರೇರಣೆಯಾಗುತ್ತದೆ.ಇಂತಹ ಸುವಿಚಾರಗಳು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲೇ ಜಗತ್ತುನ್ನು ಆವರಿಸಿಕೊಳ್ಳುವಂತೆ ಮಾಡಿದರೆ ಓದುವ ಸಂಸ್ಕೃತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿ ಮಹಿಳೆಯರ ಪುಸ್ತಕಗಳನ್ನೇ ತೆಗೆದುಕೊಂಡು ಕಾರ್ಯಕ್ರಮ ಮಾಡಿದ್ದು ಅಭಿನಂದನಿಯ ಎಂದರು.
ಮೊದಲಿಗೆ ಉಪನ್ಯಾಸಕ ಮಂಜುನಾಥ ಹತ್ತಿಯವರ ಪ್ರಾಸ್ತಾವಿಕವಾಗಿ ಮಾತನಾಡಿ ಪುಸ್ತಕ ಪ್ರೀತಿ ಕಾರ್ಯಕ್ರಮದ ಅಡಿಯಲ್ಲಿ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದದಿಂದ ಗುಣಮಟ್ಟದ ಲೇಖಕರು ಮತ್ತು ಓದುಗರನ್ನು ಸೃಷ್ಟಿಸಲು ಸಾಧ್ಯವಾಗಿದೆ.ಇದು ನಾಲ್ಕನೇ ಕಾರ್ಯಕ್ರಮವಾಗಿದ್ದು ಖ್ಯಾತನಾಮರು ಬಂದು ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ. ಜಿಲ್ಲೆಯ ಸಾಹಿತಿಕ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ ಎಂದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಸಾಹಿತಿಗಳಾದ ಪ್ರೊ.ಶೇಖರ ಭಜಂತ್ರಿ ಡಾ.ಪುಷ್ಪಾವತಿ ಶಲವಡಿಮಠ ರವರ ‘ನೀಲಾಂಬಿಕೆ’ ಕೃತಿ ಕುರಿತು ಬಸವಣ್ಣನವರ ಪತ್ನಿ ನೀಲಾಂಬಿಕೆ ವಿಚಾರ ಪತ್ನಿಯಾಗಿ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಡೆದವರು. ಬಸವಣ್ಣನ ಪ್ರಭಾವಕ್ಕೆ ಒಳಗಾದ ನೀಲಾಂಬಿಕೆ ಸಾತ್ವಿಕ ಜೀವನದ ಜೊತೆಗೆ ಲೌಕಿಕ ಬದುಕಿನಲ್ಲೂ ಅಲೌಕಿಕತೆಯೆಡೆಗೆ ಸಾಗಿದವರು.ಆತ್ಮಿಕ ಸಂಬಂಧದ ಕೌಟುಂಬಿಕ ಜೀವನದಲ್ಲಿದ್ದು ಬಸವಣ್ಣನವರ ಕಾರ್ಯಕ್ಕೆ ಪೂರಕವಾಗಿ ಗುರುಲಿಂಗ ಜಂಗಮ ಸೇವೆಗೈದವರು. ತನ್ನ ತಾನು ಕಳೆದುಕೊಳ್ಳುತ್ತಾ ಲಿಂಗನಿಷ್ಠೆ ಮತ್ತು ಬಸವ ನಿಷ್ಠೆ ಪ್ರದರ್ಶಿಸಿದರು.ಅಸಮಾನತೆಗೆ ಸೆಡ್ಡು ಹೊಡೆದ ಬಸವ ಧರ್ಮದಲ್ಲಿ ಅತ್ಯುತ್ತಮ ವಚನಕಾರ್ತಿಯಾಗಿ ಬೆಳಗಿದವರು.ಕಲ್ಯಾಣ ಕ್ರಾಂತಿಯ ನಂತರ ಪತಿಯ ಸಾವನ್ನು ಅರಗಿಸಿಕೊಳ್ಳಲಾಗದೆ ಪ್ರಾಣತೆತ್ತ ಧೀಮಂತ ಶರಣೆ ಎಂದರು. ನಂತರ ಲತಾ ಹಳಕೊಪ್ಪ ರವರ ‘ಅಂತರಾಳ’ ಕೃತಿ ಕುರಿತು ಲತಾ ರವರ ಆತ್ಮಕಥೆಯಲ್ಲಿ ಬದುಕಿನ ಏರಿಳಿತಗಳಿವೆ.ಬದುಕು ಕಟ್ಟಿಕೊಂಡ ಬಗೆಯೊಂದಿಗೆ ಪಡೆದ ವಿದ್ಯೆ ಸಂಸ್ಕಾರ, ಮೌಲ್ಯಗಳ ಸಂಕಥನವಿದೆ. ಬದುಕಿನ ಪಯಣದಲ್ಲಿ ಬಂದ ತಂದೆ ತಾಯಿ, ಪತಿ, ಬಂಧುಗಳು ಸ್ನೇಹಿತರು ಎಲ್ಲಾ ಪಾತ್ರಗಳ ಪರಿಚಯವಿದೆ.ತಾವು ಎದುರಿಸಿ ನಿಂತ ಆರೋಗ್ಯ ಸಮಸ್ಯೆಗಳ ಕಥೆಗಳಿವೆ. ಕೃತಿಯಲ್ಲಿ ಅಜ್ಜಿ ಒಬ್ಬಳು ಪಕ್ಕದಲ್ಲಿ ಕುಳ್ಳಿರಿಸಿ ತನ್ನ ಮತ್ತು ತಲೆಮಾರುಗಳ ಕಥೆಯನ್ನು ಹೇಳಿದ ಆಪ್ತತೆ ಇದೆ ಎಂದರು.ಮತ್ತೊರ್ವ ಕವಿಯತ್ರಿ ಭಾಗ್ಯ ಎಂ.ಕೆ. ರವರ ‘ಬದುಕ ನಿತ್ಯ ನಗಾರಿ’ ವಚನಗಳ ಕೃತಿಯಲ್ಲಿ ಲೇಖಕಿ ಕಂಡ ಬದುಕಿನ ಅನುಭವಗಳನ್ನು, ಸಮಾಜದ ಜನರ ಮನಸ್ಥಿತಿಯ ಸ್ಥಿತ್ಯಂತರಗಳನ್ನ ಕುರಿತು ವಚನಗಳ ಮೂಲಕ ತಿವಿದಿದ್ದಾರೆ. ಮೌಲ್ಯಯುತ ಸಮಾಜ ಮತ್ತು ಬದುಕನ್ನು ಅರಸುತ್ತ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬೆಳಕನ್ನ ಚೆಲ್ಲುತ್ತಾರೆ. ಸಮಾಜದ ಅಂಕುಡೊಂಕುಗಳು ಮತ್ತು ಮೌಡ್ಯಗಳನ್ನ ಖಂಡಿಸುತ್ತಾರೆ. ಭಾಗ್ಯರವರ ಕವಿತೆಗಳು ಇಲ್ಲಿ ಆಪ್ತ ಭಾವವನ್ನ ತಂದು ಭಾವನೆಗಳ ಬಣ್ಣಗಳನ್ನು ಕನಸುಗಳ ಮೇಲೆ ಚೆಲ್ಲುತ್ತವೆ ಎಂದು ವಿಮರ್ಶೆ ಮಾಡಿದರು.
ನಂತರ ಓದುಗರು ಮೂವರು ಲೇಖಕಿಯರಿಗೆ ದಾಕ್ಷಾಯಿಣಿ ಉದಗಟ್ಟಿ, ಕವಿತಾ ಸಾರಂಗಮಠ, ರಾಜೇಶ್ವರಿ, ಮಣಿಕಂಠ, ಲತಾ ಪಾಟೀಲ, ಅನಿತಾ ಮಂಜುನಾಥ, ರಹೀಲ್ ರಾಜಭಕ್ಷಿ, ಸಿ.ಎ. ದೊಡ್ಡಗೌಡ್ರ, ದಾನೇಶ್ವರಿ ಸಿಗ್ಗಾವಿ, ಜಗನ್ನಾಥ ಗೇನಣ್ಣನವರ ಮತ್ತು ಇತರ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾ ಸಂವಾದ ನಡೆಸಿಕೊಟ್ಟರು. ಲೇಖಕರು ತಮ್ಮ ಬದುಕು ಬರಹಕ್ಕಾದ ಪ್ರೇರಣೆ ಇತ್ಯಾದಿ ವಿಷಯಗಳ ಕುರಿತು ಮನವರಿಕೆ ಮಾಡಿದರು.ನಂತರ ಮೂವರು ಲೇಖಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಕರಿಯಪ್ಪ ಹಂಚಿನಮನಿ, ಎಸ್. ಆರ್. ಹಿರೇಮಠ, ನಾಗರಾಜ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಜಿಎಚ್ ಕಾಲೇಜ ಮತ್ತು ಎಸ್.ಜೆ.ಎಮ್. ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಾಕ್ಷಾಯಿಣಿ ಉದಗಟ್ಟಿ ಸ್ವಾಗತಿಸಿ ಮಣಿಕಂಠ ಗೋದಮನಿ ನಿರೂಪಿಸಿದರೆ, ಕರಿಯಪ್ಪ ಹಂಚಿನಮನಿ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...