ನೊಂದವರಿಗೆ ನ್ಯಾಯ ಕೊಡಿಸಿದರೇ ಹೋರಾಟಕ್ಕೆ ಶಕ್ತಿ: ಗುರುಮೂರ್ತಿ
ಹಾವೇರಿ: ನೊಂದವರಿಗೆ ನ್ಯಾಯ ಕೊಡಿಸುವಂತ ಕೆಲಸ ಆಗಬೇಕು. ಅವಾಗ ಮಾತ್ರ ಹೋರಾಟಕ್ಕೆ ಒಂದು ಶಕ್ತಿ ಬರುತ್ತದೆ. ಡಿಎಸ್ಎಸ್ ಸಂಘಟನೆಯ ನೂತನ ಪದಾಧಿಕಾರಿಗಳು ನೊಂದವರಿಗೆ ನ್ಯಾಯಕೊಡಿಸುವದರ ಮೂಲಕ ಡಿಎಸ್ಎಸ್ ಸಂಘಟನೆಯನ್ನು ಬಲ ಪಡಿಸಬೇಕೆಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಕರೆ ನೀಡಿದರು.
ಇಲ್ಲಿನ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಡಿ.೧ರಂದು ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ಹಾವೇರಿಜಿಲ್ಲೆಯ ಡಿಎಸ್ಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು. sಸಾಮಾಜಿಕ ನ್ಯಾಯ ಎನ್ನುವುದುದು ಇನ್ನು ಅನೇಕ ಕಡೆಗಳಲ್ಲಿ ಮರೀಚಿಕೆಯಾಗಿದೆ. ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಶೋಷಣೆಯ ಮುಖವಾಡ ಬದಲಾಗಿದ್ದು, ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳು ಇದನ್ನು ಅರಿತುಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಸಮಿತಿ ರಚನೆ ಮಾಡಿ ಜಿಲ್ಲಾ ಸಂಚಾಲಕರನ್ನು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಹನುಮಂತಪ್ಪ ಕಾಕರಗಲ್, ಎಸ್. ಪಕ್ಕೀರಪ್ಪ, ನೀಲಕಂಠಪ್ಪ ಕುಸುಗೂರು, ಸಂಜಯಗಾಂಧಿ ಸಂಜೀವಣ್ಣನವರ, ನಿಂಗಪ್ಪ ಕಡೂರು, ಮಂಜು ದಡ್ಡೂರು, ಕೆ.ಆರ್.ಉಮೇಶ್, ಸುಮಂಗಳಾ ರಾರಾವಿ, ಗುತ್ತೆಮ್ಮ ಹರಿಜನ, ನಾಗರಾಜ್ ಸಿಡ್ಲಣ್ಣನವರ, ಅಣ್ಣಪ್ಪ ಸಂಜೀವಣ್ಣನವರ, ರಮೇಶ್ ಮಾದಾಪುರ, ಫಕ್ಕೀರೇಶ ಚೌಡಮ್ಮನವರ್, ರಾಜು ಸಾರೆಪ್ಪನವರ, ಕೂಟ್ಟೆಪ್ಪ ಸಂಜೀವಣ್ಣನವರ, ಬಸವರಾಜ್ ಏ ಕೆ, ಪ್ರವೀಣ್ ಗುಡ್ಡದಮಾದಾಪುರ, ಕುಮಾರ್ ಹುಣಸಿಮರದ, ಮೈಲಪ್ಪ ಗೊರಪ್ಪನವರ ಮತ್ತಿತರರು ಭಾಗವಹಿಸಿದ್ದರು.
ಡಿಎಸ್ಎಸ್ ಜಿಲ್ಲಾಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾವೇರಿ ಜಿಲ್ಲಾ ಘಟಕಕ್ಕೆ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ಶುಕ್ರವಾರ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಚಾಲಕರಾಗಿ ಸರ್ವಾನುಮತದಿಂದ ಸಂಜಯಗಾಂಧಿ ಸಂಜೀವಣ್ಣನವರನ್ನು ಆಯ್ಕೆ ಮಾಡಿ ಆದೇಶ ಪ್ರತಿಯನ್ನು ನೀಡುವುದರ ಜೊತೆಗೆ ಡಾ ಬಾಬಾಸಾಹೇಬರ & ಪ್ರೋ ಬಿ ಕೃಷ್ಣಪ್ಪರವರ ಪೋಟೋಗಳನ್ನು ಗುರುಮೂರ್ತಿ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳಾದ ಹನುಮಂತಪ್ಪ ಕಾಕರಗಲ್, ಎಸ್ ಫಕೀರಪ್ಪ ಹಾಗೂ ಬಿ.ಎ. ಕಾಟ್ಕೆ ಮುಂತಾದ ರಾಜ್ಯ ಸಮಿತಿ ಮುಖಂಡರು ಹಾಜರಿದ್ದರು.
ನೊಂದವರಿಗೆ ನ್ಯಾಯ ಕೊಡಿಸಿದರೇ ಹೋರಾಟಕ್ಕೆ ಶಕ್ತಿ: ಗುರುಮೂರ್ತಿ
Date:
ನೊಂದವರಿಗೆ ನ್ಯಾಯ ಕೊಡಿಸಿದರೇ ಹೋರಾಟಕ್ಕೆ ಶಕ್ತಿ: ಗುರುಮೂರ್ತಿ
ಹಾವೇರಿ: ನೊಂದವರಿಗೆ ನ್ಯಾಯ ಕೊಡಿಸುವಂತ ಕೆಲಸ ಆಗಬೇಕು. ಅವಾಗ ಮಾತ್ರ ಹೋರಾಟಕ್ಕೆ ಒಂದು ಶಕ್ತಿ ಬರುತ್ತದೆ. ಡಿಎಸ್ಎಸ್ ಸಂಘಟನೆಯ ನೂತನ ಪದಾಧಿಕಾರಿಗಳು ನೊಂದವರಿಗೆ ನ್ಯಾಯಕೊಡಿಸುವದರ ಮೂಲಕ ಡಿಎಸ್ಎಸ್ ಸಂಘಟನೆಯನ್ನು ಬಲ ಪಡಿಸಬೇಕೆಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಕರೆ ನೀಡಿದರು.
ಇಲ್ಲಿನ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಡಿ.೧ರಂದು ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ಹಾವೇರಿಜಿಲ್ಲೆಯ ಡಿಎಸ್ಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು. sಸಾಮಾಜಿಕ ನ್ಯಾಯ ಎನ್ನುವುದುದು ಇನ್ನು ಅನೇಕ ಕಡೆಗಳಲ್ಲಿ ಮರೀಚಿಕೆಯಾಗಿದೆ. ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಶೋಷಣೆಯ ಮುಖವಾಡ ಬದಲಾಗಿದ್ದು, ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳು ಇದನ್ನು ಅರಿತುಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಸಮಿತಿ ರಚನೆ ಮಾಡಿ ಜಿಲ್ಲಾ ಸಂಚಾಲಕರನ್ನು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಹನುಮಂತಪ್ಪ ಕಾಕರಗಲ್, ಎಸ್. ಪಕ್ಕೀರಪ್ಪ, ನೀಲಕಂಠಪ್ಪ ಕುಸುಗೂರು, ಸಂಜಯಗಾಂಧಿ ಸಂಜೀವಣ್ಣನವರ, ನಿಂಗಪ್ಪ ಕಡೂರು, ಮಂಜು ದಡ್ಡೂರು, ಕೆ.ಆರ್.ಉಮೇಶ್, ಸುಮಂಗಳಾ ರಾರಾವಿ, ಗುತ್ತೆಮ್ಮ ಹರಿಜನ, ನಾಗರಾಜ್ ಸಿಡ್ಲಣ್ಣನವರ, ಅಣ್ಣಪ್ಪ ಸಂಜೀವಣ್ಣನವರ, ರಮೇಶ್ ಮಾದಾಪುರ, ಫಕ್ಕೀರೇಶ ಚೌಡಮ್ಮನವರ್, ರಾಜು ಸಾರೆಪ್ಪನವರ, ಕೂಟ್ಟೆಪ್ಪ ಸಂಜೀವಣ್ಣನವರ, ಬಸವರಾಜ್ ಏ ಕೆ, ಪ್ರವೀಣ್ ಗುಡ್ಡದಮಾದಾಪುರ, ಕುಮಾರ್ ಹುಣಸಿಮರದ, ಮೈಲಪ್ಪ ಗೊರಪ್ಪನವರ ಮತ್ತಿತರರು ಭಾಗವಹಿಸಿದ್ದರು.
ಡಿಎಸ್ಎಸ್ ಜಿಲ್ಲಾಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾವೇರಿ ಜಿಲ್ಲಾ ಘಟಕಕ್ಕೆ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ಶುಕ್ರವಾರ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಚಾಲಕರಾಗಿ ಸರ್ವಾನುಮತದಿಂದ ಸಂಜಯಗಾಂಧಿ ಸಂಜೀವಣ್ಣನವರನ್ನು ಆಯ್ಕೆ ಮಾಡಿ ಆದೇಶ ಪ್ರತಿಯನ್ನು ನೀಡುವುದರ ಜೊತೆಗೆ ಡಾ ಬಾಬಾಸಾಹೇಬರ & ಪ್ರೋ ಬಿ ಕೃಷ್ಣಪ್ಪರವರ ಪೋಟೋಗಳನ್ನು ಗುರುಮೂರ್ತಿ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳಾದ ಹನುಮಂತಪ್ಪ ಕಾಕರಗಲ್, ಎಸ್ ಫಕೀರಪ್ಪ ಹಾಗೂ ಬಿ.ಎ. ಕಾಟ್ಕೆ ಮುಂತಾದ ರಾಜ್ಯ ಸಮಿತಿ ಮುಖಂಡರು ಹಾಜರಿದ್ದರು.