ನ್ಯಾಯವಾದಿ ಶಿವಕುಮಾರ್ ತಳವಾರ
ಮೇಲೆ ಪಿ.ಎಸ್.ಐ. ಶ್ರೀಶೈಲ ಪಟ್ಟಣಶೆಟ್ಟಿ ಹಲ್ಲೆ! ಕ್ರಮಕ್ಕೆ ಆಗ್ರಹಿಸಿ ಠಾಣೆ ಎದುರು ಅಹೋರಾತ್ರಿ ಪ್ರತಿಭಟನೆ
ಹಾವೇರಿ: ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಮಂಗಳವಾರ ದೂರು ನೀಡಲು ಹೊದ ವಕೀಲ ರೊಬ್ಬರ ಮೇಲೆ ಹಾನಗಲ್ ಪೊಲೀಸ್ ಠಾಣೆ ಯ ಪಿ.ಎಸ್.ಐ ಅವರು ಕೆಲ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆಗೆ ಒಳಗಾದ ವಕೀಲರನ್ನು ಹಾನಗಲ್ ಸರಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಈ ಮಧ್ಯೆ ಹಲ್ಲೆ ನಡೆಸಿದ ಐಪಿಎಸ್ ಅವರಮೇಲೆ ಕ್ರಮಕ್ಕೆ ಆಗ್ರಹಿ ಹಲವಾರು ಜನರು ಠಾಣೆ ಎದುರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ನ್ಯಾಯವಾದಿ ಶಿವಕುಮಾರ್ ತಳವಾರ ಅವರ ಮೇಲೆ ಹಾನಗಲ್ಲ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಶೈಲ ಪಟ್ಟಣಶೆಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಲ್ಲೆ ಖಂಡಿಸಿ ಠಾಣೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಪೊಲೀಸ್ ದೌರ್ಜನ್ಯ ಖಂಡನೀಯ ಇಂಥ ಘಟನೆಗಳು ಹಾನಗಲ್ಲ ತಾಲೂಕಿನಲ್ಲಿ ಪದೇ ಪದೆ ನಡೆಯುತ್ತಿದ್ದು, ದೌರ್ಜನ್ಯ ಎಸಗಿದ ಪಿ.ಎಸ್.ಐ. ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಡರಾತ್ರಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.