ಪರೋಪಕಾರದಪಾಠ ಕಲಿಸಿದ ನನ್ನವ್ವ
ಇತ್ತೀಚೆಗೆ ಪದೇ ಪದೆ ನನ್ನವ್ವ ನೆನಪಿಗೆ ಬರುತ್ತಿದ್ದಾಳೆ. ಅದರಲ್ಲೂ ಅವಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಹೋಗುತ್ತಿದ್ದ ಸಂದರ್ಭದಲ್ಲಿ ಸದಾ ಅವಳು ತಗೆದುಕೊಂಡು ಹೋಗುತ್ತಿದ್ದ “ತಿರುಪಣಿಚರಗಿಯನ್ನು ನೋಡಿದರಂತು ಅವ್ವನಲ್ಲಿದ್ದ ಪರೋಪಕಾರದ ಗುಣ, ಅವ್ವನ ವ್ಯಕ್ತಿತ್ವ ಎಂತದು ಎನ್ನುವುದು ನೆನಪಾಗುತ್ತದೆ”. “ಅವ್ವ ತಾನು ಬದುಕಿರುವಷ್ಟುದಿನ ಸಂಸಾರದ ನೊಗ ಹೊತ್ತು, ನಾಲ್ಕು ಮಕ್ಕಳ ಬದುಕು ರೂಪಿಸಲು ತನ್ನನ್ನೇ ತಾನು ಗಂಧದಕೊರಡಿನಂತೆ ತೇದುಕೊಂಡವಳು”, “ತನ್ನ ಜೀವನವನ್ನು ಸವೆಸಿದವಳು. ಮಕ್ಕಳ ಬದುಕನ್ನು ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ”.
“ಅವ್ವ ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಕಂಡುಕೊಂಡಿದ್ದಳು”. “ಅನವರತ ದುಡಿತ, ಮಕ್ಕಳಬಗ್ಗೆ ಅವಳಿಗಿದ್ದ ತುಡಿತ-ತಳಮಳ, ಮಕ್ಕಳ ಬಗೆಗಿನ ಅವ್ಯಕ್ತ ಪ್ರೀತಿ, ಅವಳು ತೋರುತ್ತಿದ್ದ ಮಮಕಾರ, ಸರಿಕರೆದುರು ತನ್ನ ಮಕ್ಕಳು ತಲೆ ಎತ್ತಿ ನಿಲ್ಲಬೇಕು, ತನ್ನನ್ನು ಅವಮಾನಿಸಿದವರಿಗೆ, ನಿಂದಿಸಿದವರಿಗೆ ಮಕ್ಕಳ ಮೂಲಕ ಉತ್ತರ ಕೊಡಬೇಕೆನ್ನುವ ಅವಳ ಕನಸು ನನಸಾಗುವ ಮುನ್ನವೇ ಅವ್ವ ಹಾಸಿಗೆ ಹಿಡಿದಿದ್ದಳು”. “ಬದುಕಿನ ಗುದ್ದಾಟಗಳಲ್ಲಿ ಗೆಲ್ಲಲಾಗದೇ ಅವ್ವ ಹಾಸಿಗೆಯನ್ನು ಬಿಟ್ಟು ಮೇಲಕ್ಕೇಳದೆ ಒಂದುದಿನ ತನ್ನ ಹೋರಾಟದ ಬದುಕನ್ನು ಅಂತ್ಯಗೊಳಿಸಿದ ಅವ್ವ ಈಗಾಗಲೇ ತೀರಿಕೊಂಡು ೪೭ವರ್ಷಗಳಾಗಿವೆ, ಅವ್ವ ಈಗಲೂ ಬದುಕಿದ್ದಾಳೆ. ಅವಳು ಉಪಯೋಗಿಸುತ್ತಿದ್ದ ವಸ್ತುಗಳಲ್ಲಿ, ಅವಳು ಬಾಳಿ ಬದುಕಿದ ದಿನಗಳಲ್ಲಿ ಕೈಗೊಂಡ ಪರೋಪಕಾರದ ಕೆಲಸಗಳಲ್ಲಿ, ಅವಳು ಬಾಲ್ಯದಲ್ಲಿ ನನ್ನಲ್ಲಿ ಬಿತ್ತಿದ ನೀತಿಪಾಠಗಳಲ್ಲಿ.
ನನ್ನವ್ವ ಸುಮಾರು ಐದು ದಶಕಗಳ ಹಿಂದೆ ಪುಣ್ಯ ಕ್ಷೇತ್ರಗಳಿಗೆ, ವಿವಿಧ ದೇವಾಲಯಗಳಿಗೆ ಹೋಗುತ್ತಿದ್ದಳು. “ಪ್ರವಾಸದ ವೇಳೆ ಬಾಯರಿಕೆಯಾದರೇ ನೀರು ಕುಡಿಯಲೆಂದು ಒಯ್ಯಲು ೧೯೬೫ರಲ್ಲಿ ಅಂದರೆ ನಾನು ಹುಟ್ಟುವುದಕ್ಕಿಂತ ಮೊದಲೆ ಹಿತ್ತಾಳೆ ತಿರಪಣಿ ಚರಗಿಯನ್ನು ಖರೀದಿಸಿದ್ದಳು”. “ಈಗಿನಂತೆ ಆ ಕಾಲದಲ್ಲಿ ಬಿಸಲೇರಿ ನೀರಾಗಲಿ, ಪ್ಲಾಸ್ಟಿಕ್ ಬಾಟಲಿಗಳಾಗಲಿ ಇರುತ್ತಿರಲಿಲ್ಲ”. ಪ್ರಯಾಣ-ಪ್ರವಾಸದವೇಳೆ ಹೊಳೆ, ಹಳ್ಳ, ಬಾವಿ, ಕೆರೆಕಟ್ಟೆಗಳ ನೀರನ್ನು ಕುಡಿಯಬೇಕಿತ್ತು. ಅವ್ವ ಖರೀದಿಸಿದ್ದ ತಿರಪಣಿ ಚರಗಿ ಬಹಳ ಸುಂದರವಾಗಿತ್ತು, ಚರಗಿಯಲ್ಲಿ ನೀರು ಹಾಕಿ ಒಳಗೊಂದು ಚಿಕ್ಕ ಹಿತ್ತಾಳೆ ಲೋಟವನ್ನು ಮುಚ್ಚಿ ಹೊರಬಾಗದಿಂದ ಚರಗಿಯನ್ನು ಈಗಿನ ಔಷಧಿಬಾಟಲಿಯ ಮುಚ್ಚಳದ ರೀತಿಯಲ್ಲಿ ಅದನ್ನು ಮುಚ್ಚಬಹುದಾಗಿತ್ತು”.
ಸುಮಾರು ೧೯೭೫ನೇ ಇಸ್ವಿ ಇರಬಹುದು, ಅಂದಿನ ನಮ್ಮ ಓಣಿಯ ಕೆಲವು ಹಿರಿಯರು ಖಾಸಗಿ ಬಸ್ನಲ್ಲಿ ಪಣ್ಯಕ್ಷೇತ್ರಗಳಿಗೆ ಪ್ರವಾಸ ಏರ್ಪಡಿಸಿದ್ದರು. ಈ ಪ್ರವಾಸಕ್ಕೆ ಅವ್ವ ನನ್ನನ್ನು ಕರೆದುಕೊಂಡು ಹೋದ ನೆನಪಿದೆ. ಆಗ “ಅವ್ವ ಒಂದು ಕೈಯಲ್ಲಿ ನೀರು ತುಂಬಿದ ತಿರಪಣಿ ಚರಗಿ, ಮೊತ್ತೊಂದು ಕೈಯಲ್ಲಿ ಬಟ್ಟೆಗಳು, ಕುರಚಲು ತಿಂಡಿಗಳಿಂದ ತುಂಬಿದ ಕೈಚೀಲ ಇತ್ತು. ಪುಣ್ಯ ಕ್ಷೇತ್ರಗಳ ದರ್ಶನದ ಬಳಿಕ ಕೊನೆಯದಾಗಿ ಯಡೆಯೂರಿಗೆ ಹೋದ ನನೆಪು ನನ್ನಲ್ಲಿ ಮಾಸದೇ ಹಾಗೇ ಉಳಿದಿದೆ ಎನ್ನವುದಕ್ಕೆ ಕಾರಣ ಯಡೆಯೂರಬಳಿ ನಡೆದ ಭೀಕರ ಅಪಘಾತ!”.
“ನಾನಾ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ಕೊನೆಯದಾಗಿ ಯಡೆಯೂರಿಂದ ಬಸ್ ಮರಳಿ ಹಾವೇರಿಕಡೆಗೆ ಮರಳುತ್ತಿತ್ತು”. ಅವ್ವನನ್ನು ನಾನು “ಎವ್ವ ಬಾಯಾರಿಕೆಯಾಗಿದೆ, ನೀರು ಕೊಡು ಎಂದು ತಿರಪಣಿ ಚರಗಿಕಡೆಗೆ ಕೈಚಾಚುತ್ತಿದ್ದೆ, ಅವ್ವನನ್ನು ನೀರಿಗಾಗಿ ಕಾಡುತ್ತಿದ್ದೆ”. ಅವ್ವ…..”ಬ್ಯಾಡಪಾ ಆ ಚರಿಗ್ಯಾಗ ತೀರ್ಥ ಐತಿ, ಮನ್ಯಾಗ ದೇವ್ರ ಪೂಜಾ ಮಾಡಾಕಬೇಕು, ಮುಂದ ಊರು ಬರತೈತಿ, ಅಲ್ಲೆಗಾಡಿ ನಿಲ್ಲಸತಾರ, ಅಲ್ಲೆ ನೀರ ಕುಡುವಂತಿ” ಎನ್ನುತ್ತಾ ನನಗೆ ತಿರುಪಣಿ ಚರಗಿಯಲ್ಲಿದ್ದ ನೀರು ಕುಡಿಯಲು ಬಿಡಲಿಲ್ಲ.
ನಾವಿದ್ದ ಬಸ್ ಯಡೆಯೂರಿನಿಂದ ಹತ್ತಾರು ಮೈಲು ದಾಟಿ ಮುಂದೆ ಹೊರಟಿತ್ತು, ಕಾಡಿನ ದಾರಿಯಲ್ಲಿ ಚಾಲಕ ದಿಢೀರನೆ ಬಸ್ ನಿಲ್ಲಿಸಿದ. “ರಸ್ತೆಯ ಮೇಲೆ ಲಾರಿ- ಎತ್ತಿನಗಾಡಿಯೊಂದರ ನಡುವೆ ಅಪಘಾತ ಸಂಭವಿಸಿತ್ತು”. ಈ ಅಪಘಾತದ ದೃಶ್ಯವನ್ನು ನೋಡಲು ಬಸ್ಸಿನಲ್ಲಿದ್ದವರೆಲ್ಲರೂ ಕೆಳಗಿಳಿದರು, ಅವ್ವ ಒಂದು ಕೈಯಲ್ಲಿ ತಿರಪಣಿ ಚರಿಗಿ, ಮತ್ತೊಂದು ಕೈಯಲ್ಲಿ ನನ್ನ ಕಿರುಬೆರಳನ್ನು ಹಿಡಿದು ಬಸ್ನಿಂದ ಕೆಳಗಿಳಿಸಿ ಜನರ ಮಧ್ಯ ಅಪಘಾತದ ದ್ರಶ್ಯವನ್ನುನೋಡುತ್ತಿದ್ದಳು. ಅಪಘಾತದ ರಭಸಕ್ಕೆ ಎತ್ತಿನಗಾಡಿ ನುಚ್ಚುನಾರಾಗಿತ್ತು, ಎರಡು ಎತ್ತುಗಳ ಸತ್ತು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು”.
“ಗಾಡಿಯಲ್ಲಿದ್ದ ನಾಲ್ವರು ರಕ್ತಸಿಕ್ತವಾಗಿ ಗಾಯಗೊಂಡ ನರಳುತ್ತಿದ್ದರು. ನೀರು.. ನೀರು…. ಎನ್ನುತ್ತಿದ್ದರು. ಆದರೆ, ಯಾರು ಸಹ ಗಾಯಳುಗಳಿಗೆ ನೀರು ಕುಡಿಸಲು ಮಂದೆ ಬರಲಿಲ್ಲ”. ಆದರೆ, ನನ್ನವ್ವ ತಡಮಾಡದೇ ತಿರಪಣಿಯ ಚರಿಗೆಯ ಮುಚ್ಚಳವನ್ನು ತಗೆದು ಚರಿಗೆಯಲ್ಲಿದ್ದ ಚಿಕ್ಕಲೋಟಾಕ್ಕೆ ನೀರು ಹಾಕಿಕೊಂಡ ಗಾಯಾಳುಗಳ ಬಳಿ ತೆರಳಿ ಅವರಿಗೆ ತೀರ್ಥದ ನೀರು ಕುಡಿಸಿದಳು”.
ನನ್ನ ಅವ್ವನ ಈ ಕಾರ್ಯವನ್ನು ಅನೇಕರು ತದೇಕ ಚಿತ್ತದಿಂದ ನೋಡುತ್ತಿದ್ದರು. ನೀರು ಕುಡಿದ ಗಾಯಾಳುಗಳು “ತಾಯಿ ನಿನಗೆ ಪಣ್ಯಾಬರಲಿ, ನಿನ್ನ ಮಕ್ಕಳು-ಮರಿ ಚೆನ್ನಾಗಿರಲಿ” ಎನ್ನುತ್ತಿದ್ದರು. ಬಸ್ನಲ್ಲಿದ್ದ ನನ್ನವ್ವನ ಗೆಳತಿ ಪಾರಮ್ಮ “ಐಯ್ಯ ಸೋಮಕ್ಕ ಒಳ್ಳೆ ಕೆಲ್ಸಾಮಾಡಿದಿ ಬಿಡು”, “ತೀರ್ಥದ ನೀರು ತಗೊಂಡುಹೋಗಿ ದೇವ್ರಮ್ಯಾಗ ಸುರೇದ್ರಿಂದಾ ಏನು ಪ್ರಯೋಜ್ನಾ ಐತಿ ಹೇಳು? ತೀರ್ಥದ ನೀರಿನಿಂದ ನಾಲ್ಕ ಜನ್ರಿಗೆ ಒಳ್ಳೆದಾತಲ್ಲ ಸಾಕ ಬಿಡು”. “ಬಸ್ನ್ಯಾಗ ಇದ್ದೋರೋ ಹತ್ರಾ ತೀರ್ಥದ ನೀರು ಇತ್ತು, ಆದ್ರ ಒಬ್ಬರು ಸಹ ಸಾಯೋರಬಾಯಾಗ ನೀರಬಿಡಲಿಲ್ಲ. ಆದ್ರ ನೀನು ಈ ತೀರ್ಥದ ನೀರು ಕುಡ್ಸಿ ಪುಣ್ಯದ ಕೆಲ್ಸಾಮಾಡಿದಿ” ಎಂದು ನನ್ನವ್ವನನ್ನು ಕಾರ್ಯವನ್ನು ಶ್ಲಾಗಿಸುತ್ತಿದ್ದಳು”.
ಪಾಪ-ಪುಣ್ಯದ ಅರಿವಿರದ ನನಗೆ ನನ್ನ ಅವ್ವ ಮಾಡಿದ ಕೆಲಸದ ಬಗ್ಗೆ ಬೇಸರವಿತ್ತು. “ನಾನು ಬಾಯಾರಿದೆ ನೀರು ಕೊಡು ಎಂದರೆ, ನೀರು ಕೊಡದ ಅವ್ವ ರಸ್ತೆಯಲ್ಲಿ ಗಾಯಗೊಂಡು ನರಳುತ್ತಿದ್ದ ಗಾಯಾಳುಗಳಿಗೆ ನೀರು ಕೊಟ್ಟಳಲ್ಲ ಎಂದು”. ಅವ್ವ, “ನಾ ನೀರು ಕುಡಾಕ ಕೇಳಿದ್ರ ನೀರ ಕೊಡಲಿಲ್ಲ, ಆದ್ರ ರಸ್ತೆದಾಗ ಬಿದ್ದವ್ರಿಗೆ ನೀರು ಕೊಟ್ಟೆಲ್ಲ ಯಾಕ”? ಎಂದು ಪ್ರಶ್ನಿಸಿದೆ.
ಅದಕ್ಕೆ ಅವ್ವ ಕೊಟ್ಟತ್ತರ ಹೀಗಿತ್ತು.
“ನೋಡು ಮಗ್ನ. ಯಾರು ಕಷ್ಟದಾಗ ಇರ್ತಾರೋ ಅವರಿಗೆ ಸಹಾಯ ಮಾಡೋದು ಮುನಷ್ಯನ ಗುಣ,” “ಅವ್ರ ಕಷ್ಟದಾಗಿದ್ರು ಹಿಂಗಾಗಿ ಅವ್ರಿಗೆ ನಾನು ಸಹಾಯ ಮಾಡಿದೆ. ನೀನು ನೀರ ಕುಡಿಯೋದ್ರಿಂದ ಏನು ಆಕ್ಕಿದ್ದಿಲ್ಲ, ಆದ್ರ ನೀರು, ನೀರು,,, ಅಂತ ಬಡಬಡಿಸತ್ತಿದ್ದ ಜನರಿಗೆ ನೀರು ಕೊಡೋದು ಪುಣ್ಯದ ಕೆಲ್ಸ. ಅದಕ್ಕ ನಾನು ಅವರಿಗೆ ನೀರು ಕುಡ್ಸಿದೆ” ಎಂದಳು.
ನಾನು “ಅಲ್ಲಬೇ ಎವ್ವಾ. ಈ ಬಸ್ನ್ಯಾಗ ಇದ್ದೋರಕಡಿಗೆ ನೀರಿತ್ತು , ಅವರ್ಯಾಕ ನೀರ ಕುಡ್ಸಾಕ ಮಂದಬರಲಿಲ್ಲ ಎಂದ ಪ್ರಶ್ನೆಹಾಕಿದೆ”.
ಅದು ಅವ್ರರವರಿಗೆ ಬಿಟ್ಟದ್ದು, “ನೀನು ಸಹ ದೊಡ್ಡಾಂವ ಆದಮ್ಯಾಲ್ ಯಾರಾದ್ರೂ ಕಷ್ಟದಾಗಿದ್ರ ಅವರ ಸಹಾಯಕ್ಕ ನಿಲ್ಲಬೇಕು” “ಹಸದ ಬಂದೋರ್ನ ಎಂದಿಗೂ ಹಂಗ ಕಳ್ಸಬಾರ್ದು, ನಾವು ತಿನ್ನೋದ್ರಾಗ ಒಂದು ತುತ್ತು ಹಸದವ್ರಗೆ ಕೊಡಬೇಕು” ಎಂದು ಕಿವಿಮಾತು ಹೇಳಿದ್ದಳು ಅವ್ವ.
ಅವ್ವ ಸತ್ತು ೪೭ ವರ್ಷಗಳಾಗಿವೆ. ಅವ್ವ ಸಾಯವಾಗ ಬಾಲಕನಿದ್ದ ನಾನು ಈಗ ಅಜ್ಜನಾಗಿರುವೆ. ಆದರೆ ಅವ್ವ ಹೇಳಿಕೊಟ್ಟ ಬದುಕಿನ ನೀತಿ ಪಾಠ ಈಗಲೂ ನನ್ನ ಉಸಿರಾಗಿದೆ. ತಿರುಪಣಿ ಚರಿಗೆಯನ್ನ ನೋಡಿದಾಗೊಮ್ಮ ಅವ್ವ ನೆನಪಾಗತ್ತಾಳೆ, ಜೊತೆಗೆ ಅವಳು ಮಾಡಿದ ಪುಣ್ಯದ ಕೆಲಸಗಳು ಕೂಡಾ.
ಮಾಲತೇಶ ಅಂಗೂರ. ಹಾವೇರಿ
ಪರೋಪಕಾರದಪಾಠಕಲಿಸಿದ ನನ್ನವ್ವ
Date:
ಪರೋಪಕಾರದಪಾಠ ಕಲಿಸಿದ ನನ್ನವ್ವ
ಇತ್ತೀಚೆಗೆ ಪದೇ ಪದೆ ನನ್ನವ್ವ ನೆನಪಿಗೆ ಬರುತ್ತಿದ್ದಾಳೆ. ಅದರಲ್ಲೂ ಅವಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಹೋಗುತ್ತಿದ್ದ ಸಂದರ್ಭದಲ್ಲಿ ಸದಾ ಅವಳು ತಗೆದುಕೊಂಡು ಹೋಗುತ್ತಿದ್ದ “ತಿರುಪಣಿಚರಗಿಯನ್ನು ನೋಡಿದರಂತು ಅವ್ವನಲ್ಲಿದ್ದ ಪರೋಪಕಾರದ ಗುಣ, ಅವ್ವನ ವ್ಯಕ್ತಿತ್ವ ಎಂತದು ಎನ್ನುವುದು ನೆನಪಾಗುತ್ತದೆ”. “ಅವ್ವ ತಾನು ಬದುಕಿರುವಷ್ಟುದಿನ ಸಂಸಾರದ ನೊಗ ಹೊತ್ತು, ನಾಲ್ಕು ಮಕ್ಕಳ ಬದುಕು ರೂಪಿಸಲು ತನ್ನನ್ನೇ ತಾನು ಗಂಧದಕೊರಡಿನಂತೆ ತೇದುಕೊಂಡವಳು”, “ತನ್ನ ಜೀವನವನ್ನು ಸವೆಸಿದವಳು. ಮಕ್ಕಳ ಬದುಕನ್ನು ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ”.
“ಅವ್ವ ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಕಂಡುಕೊಂಡಿದ್ದಳು”. “ಅನವರತ ದುಡಿತ, ಮಕ್ಕಳಬಗ್ಗೆ ಅವಳಿಗಿದ್ದ ತುಡಿತ-ತಳಮಳ, ಮಕ್ಕಳ ಬಗೆಗಿನ ಅವ್ಯಕ್ತ ಪ್ರೀತಿ, ಅವಳು ತೋರುತ್ತಿದ್ದ ಮಮಕಾರ, ಸರಿಕರೆದುರು ತನ್ನ ಮಕ್ಕಳು ತಲೆ ಎತ್ತಿ ನಿಲ್ಲಬೇಕು, ತನ್ನನ್ನು ಅವಮಾನಿಸಿದವರಿಗೆ, ನಿಂದಿಸಿದವರಿಗೆ ಮಕ್ಕಳ ಮೂಲಕ ಉತ್ತರ ಕೊಡಬೇಕೆನ್ನುವ ಅವಳ ಕನಸು ನನಸಾಗುವ ಮುನ್ನವೇ ಅವ್ವ ಹಾಸಿಗೆ ಹಿಡಿದಿದ್ದಳು”. “ಬದುಕಿನ ಗುದ್ದಾಟಗಳಲ್ಲಿ ಗೆಲ್ಲಲಾಗದೇ ಅವ್ವ ಹಾಸಿಗೆಯನ್ನು ಬಿಟ್ಟು ಮೇಲಕ್ಕೇಳದೆ ಒಂದುದಿನ ತನ್ನ ಹೋರಾಟದ ಬದುಕನ್ನು ಅಂತ್ಯಗೊಳಿಸಿದ ಅವ್ವ ಈಗಾಗಲೇ ತೀರಿಕೊಂಡು ೪೭ವರ್ಷಗಳಾಗಿವೆ, ಅವ್ವ ಈಗಲೂ ಬದುಕಿದ್ದಾಳೆ. ಅವಳು ಉಪಯೋಗಿಸುತ್ತಿದ್ದ ವಸ್ತುಗಳಲ್ಲಿ, ಅವಳು ಬಾಳಿ ಬದುಕಿದ ದಿನಗಳಲ್ಲಿ ಕೈಗೊಂಡ ಪರೋಪಕಾರದ ಕೆಲಸಗಳಲ್ಲಿ, ಅವಳು ಬಾಲ್ಯದಲ್ಲಿ ನನ್ನಲ್ಲಿ ಬಿತ್ತಿದ ನೀತಿಪಾಠಗಳಲ್ಲಿ.
ನನ್ನವ್ವ ಸುಮಾರು ಐದು ದಶಕಗಳ ಹಿಂದೆ ಪುಣ್ಯ ಕ್ಷೇತ್ರಗಳಿಗೆ, ವಿವಿಧ ದೇವಾಲಯಗಳಿಗೆ ಹೋಗುತ್ತಿದ್ದಳು. “ಪ್ರವಾಸದ ವೇಳೆ ಬಾಯರಿಕೆಯಾದರೇ ನೀರು ಕುಡಿಯಲೆಂದು ಒಯ್ಯಲು ೧೯೬೫ರಲ್ಲಿ ಅಂದರೆ ನಾನು ಹುಟ್ಟುವುದಕ್ಕಿಂತ ಮೊದಲೆ ಹಿತ್ತಾಳೆ ತಿರಪಣಿ ಚರಗಿಯನ್ನು ಖರೀದಿಸಿದ್ದಳು”. “ಈಗಿನಂತೆ ಆ ಕಾಲದಲ್ಲಿ ಬಿಸಲೇರಿ ನೀರಾಗಲಿ, ಪ್ಲಾಸ್ಟಿಕ್ ಬಾಟಲಿಗಳಾಗಲಿ ಇರುತ್ತಿರಲಿಲ್ಲ”. ಪ್ರಯಾಣ-ಪ್ರವಾಸದವೇಳೆ ಹೊಳೆ, ಹಳ್ಳ, ಬಾವಿ, ಕೆರೆಕಟ್ಟೆಗಳ ನೀರನ್ನು ಕುಡಿಯಬೇಕಿತ್ತು. ಅವ್ವ ಖರೀದಿಸಿದ್ದ ತಿರಪಣಿ ಚರಗಿ ಬಹಳ ಸುಂದರವಾಗಿತ್ತು, ಚರಗಿಯಲ್ಲಿ ನೀರು ಹಾಕಿ ಒಳಗೊಂದು ಚಿಕ್ಕ ಹಿತ್ತಾಳೆ ಲೋಟವನ್ನು ಮುಚ್ಚಿ ಹೊರಬಾಗದಿಂದ ಚರಗಿಯನ್ನು ಈಗಿನ ಔಷಧಿಬಾಟಲಿಯ ಮುಚ್ಚಳದ ರೀತಿಯಲ್ಲಿ ಅದನ್ನು ಮುಚ್ಚಬಹುದಾಗಿತ್ತು”.
ಸುಮಾರು ೧೯೭೫ನೇ ಇಸ್ವಿ ಇರಬಹುದು, ಅಂದಿನ ನಮ್ಮ ಓಣಿಯ ಕೆಲವು ಹಿರಿಯರು ಖಾಸಗಿ ಬಸ್ನಲ್ಲಿ ಪಣ್ಯಕ್ಷೇತ್ರಗಳಿಗೆ ಪ್ರವಾಸ ಏರ್ಪಡಿಸಿದ್ದರು. ಈ ಪ್ರವಾಸಕ್ಕೆ ಅವ್ವ ನನ್ನನ್ನು ಕರೆದುಕೊಂಡು ಹೋದ ನೆನಪಿದೆ. ಆಗ “ಅವ್ವ ಒಂದು ಕೈಯಲ್ಲಿ ನೀರು ತುಂಬಿದ ತಿರಪಣಿ ಚರಗಿ, ಮೊತ್ತೊಂದು ಕೈಯಲ್ಲಿ ಬಟ್ಟೆಗಳು, ಕುರಚಲು ತಿಂಡಿಗಳಿಂದ ತುಂಬಿದ ಕೈಚೀಲ ಇತ್ತು. ಪುಣ್ಯ ಕ್ಷೇತ್ರಗಳ ದರ್ಶನದ ಬಳಿಕ ಕೊನೆಯದಾಗಿ ಯಡೆಯೂರಿಗೆ ಹೋದ ನನೆಪು ನನ್ನಲ್ಲಿ ಮಾಸದೇ ಹಾಗೇ ಉಳಿದಿದೆ ಎನ್ನವುದಕ್ಕೆ ಕಾರಣ ಯಡೆಯೂರಬಳಿ ನಡೆದ ಭೀಕರ ಅಪಘಾತ!”.
“ನಾನಾ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ಕೊನೆಯದಾಗಿ ಯಡೆಯೂರಿಂದ ಬಸ್ ಮರಳಿ ಹಾವೇರಿಕಡೆಗೆ ಮರಳುತ್ತಿತ್ತು”. ಅವ್ವನನ್ನು ನಾನು “ಎವ್ವ ಬಾಯಾರಿಕೆಯಾಗಿದೆ, ನೀರು ಕೊಡು ಎಂದು ತಿರಪಣಿ ಚರಗಿಕಡೆಗೆ ಕೈಚಾಚುತ್ತಿದ್ದೆ, ಅವ್ವನನ್ನು ನೀರಿಗಾಗಿ ಕಾಡುತ್ತಿದ್ದೆ”. ಅವ್ವ…..”ಬ್ಯಾಡಪಾ ಆ ಚರಿಗ್ಯಾಗ ತೀರ್ಥ ಐತಿ, ಮನ್ಯಾಗ ದೇವ್ರ ಪೂಜಾ ಮಾಡಾಕಬೇಕು, ಮುಂದ ಊರು ಬರತೈತಿ, ಅಲ್ಲೆಗಾಡಿ ನಿಲ್ಲಸತಾರ, ಅಲ್ಲೆ ನೀರ ಕುಡುವಂತಿ” ಎನ್ನುತ್ತಾ ನನಗೆ ತಿರುಪಣಿ ಚರಗಿಯಲ್ಲಿದ್ದ ನೀರು ಕುಡಿಯಲು ಬಿಡಲಿಲ್ಲ.
ನಾವಿದ್ದ ಬಸ್ ಯಡೆಯೂರಿನಿಂದ ಹತ್ತಾರು ಮೈಲು ದಾಟಿ ಮುಂದೆ ಹೊರಟಿತ್ತು, ಕಾಡಿನ ದಾರಿಯಲ್ಲಿ ಚಾಲಕ ದಿಢೀರನೆ ಬಸ್ ನಿಲ್ಲಿಸಿದ. “ರಸ್ತೆಯ ಮೇಲೆ ಲಾರಿ- ಎತ್ತಿನಗಾಡಿಯೊಂದರ ನಡುವೆ ಅಪಘಾತ ಸಂಭವಿಸಿತ್ತು”. ಈ ಅಪಘಾತದ ದೃಶ್ಯವನ್ನು ನೋಡಲು ಬಸ್ಸಿನಲ್ಲಿದ್ದವರೆಲ್ಲರೂ ಕೆಳಗಿಳಿದರು, ಅವ್ವ ಒಂದು ಕೈಯಲ್ಲಿ ತಿರಪಣಿ ಚರಿಗಿ, ಮತ್ತೊಂದು ಕೈಯಲ್ಲಿ ನನ್ನ ಕಿರುಬೆರಳನ್ನು ಹಿಡಿದು ಬಸ್ನಿಂದ ಕೆಳಗಿಳಿಸಿ ಜನರ ಮಧ್ಯ ಅಪಘಾತದ ದ್ರಶ್ಯವನ್ನುನೋಡುತ್ತಿದ್ದಳು. ಅಪಘಾತದ ರಭಸಕ್ಕೆ ಎತ್ತಿನಗಾಡಿ ನುಚ್ಚುನಾರಾಗಿತ್ತು, ಎರಡು ಎತ್ತುಗಳ ಸತ್ತು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು”.
“ಗಾಡಿಯಲ್ಲಿದ್ದ ನಾಲ್ವರು ರಕ್ತಸಿಕ್ತವಾಗಿ ಗಾಯಗೊಂಡ ನರಳುತ್ತಿದ್ದರು. ನೀರು.. ನೀರು…. ಎನ್ನುತ್ತಿದ್ದರು. ಆದರೆ, ಯಾರು ಸಹ ಗಾಯಳುಗಳಿಗೆ ನೀರು ಕುಡಿಸಲು ಮಂದೆ ಬರಲಿಲ್ಲ”. ಆದರೆ, ನನ್ನವ್ವ ತಡಮಾಡದೇ ತಿರಪಣಿಯ ಚರಿಗೆಯ ಮುಚ್ಚಳವನ್ನು ತಗೆದು ಚರಿಗೆಯಲ್ಲಿದ್ದ ಚಿಕ್ಕಲೋಟಾಕ್ಕೆ ನೀರು ಹಾಕಿಕೊಂಡ ಗಾಯಾಳುಗಳ ಬಳಿ ತೆರಳಿ ಅವರಿಗೆ ತೀರ್ಥದ ನೀರು ಕುಡಿಸಿದಳು”.
ನನ್ನ ಅವ್ವನ ಈ ಕಾರ್ಯವನ್ನು ಅನೇಕರು ತದೇಕ ಚಿತ್ತದಿಂದ ನೋಡುತ್ತಿದ್ದರು. ನೀರು ಕುಡಿದ ಗಾಯಾಳುಗಳು “ತಾಯಿ ನಿನಗೆ ಪಣ್ಯಾಬರಲಿ, ನಿನ್ನ ಮಕ್ಕಳು-ಮರಿ ಚೆನ್ನಾಗಿರಲಿ” ಎನ್ನುತ್ತಿದ್ದರು. ಬಸ್ನಲ್ಲಿದ್ದ ನನ್ನವ್ವನ ಗೆಳತಿ ಪಾರಮ್ಮ “ಐಯ್ಯ ಸೋಮಕ್ಕ ಒಳ್ಳೆ ಕೆಲ್ಸಾಮಾಡಿದಿ ಬಿಡು”, “ತೀರ್ಥದ ನೀರು ತಗೊಂಡುಹೋಗಿ ದೇವ್ರಮ್ಯಾಗ ಸುರೇದ್ರಿಂದಾ ಏನು ಪ್ರಯೋಜ್ನಾ ಐತಿ ಹೇಳು? ತೀರ್ಥದ ನೀರಿನಿಂದ ನಾಲ್ಕ ಜನ್ರಿಗೆ ಒಳ್ಳೆದಾತಲ್ಲ ಸಾಕ ಬಿಡು”. “ಬಸ್ನ್ಯಾಗ ಇದ್ದೋರೋ ಹತ್ರಾ ತೀರ್ಥದ ನೀರು ಇತ್ತು, ಆದ್ರ ಒಬ್ಬರು ಸಹ ಸಾಯೋರಬಾಯಾಗ ನೀರಬಿಡಲಿಲ್ಲ. ಆದ್ರ ನೀನು ಈ ತೀರ್ಥದ ನೀರು ಕುಡ್ಸಿ ಪುಣ್ಯದ ಕೆಲ್ಸಾಮಾಡಿದಿ” ಎಂದು ನನ್ನವ್ವನನ್ನು ಕಾರ್ಯವನ್ನು ಶ್ಲಾಗಿಸುತ್ತಿದ್ದಳು”.
ಪಾಪ-ಪುಣ್ಯದ ಅರಿವಿರದ ನನಗೆ ನನ್ನ ಅವ್ವ ಮಾಡಿದ ಕೆಲಸದ ಬಗ್ಗೆ ಬೇಸರವಿತ್ತು. “ನಾನು ಬಾಯಾರಿದೆ ನೀರು ಕೊಡು ಎಂದರೆ, ನೀರು ಕೊಡದ ಅವ್ವ ರಸ್ತೆಯಲ್ಲಿ ಗಾಯಗೊಂಡು ನರಳುತ್ತಿದ್ದ ಗಾಯಾಳುಗಳಿಗೆ ನೀರು ಕೊಟ್ಟಳಲ್ಲ ಎಂದು”. ಅವ್ವ, “ನಾ ನೀರು ಕುಡಾಕ ಕೇಳಿದ್ರ ನೀರ ಕೊಡಲಿಲ್ಲ, ಆದ್ರ ರಸ್ತೆದಾಗ ಬಿದ್ದವ್ರಿಗೆ ನೀರು ಕೊಟ್ಟೆಲ್ಲ ಯಾಕ”? ಎಂದು ಪ್ರಶ್ನಿಸಿದೆ.
ಅದಕ್ಕೆ ಅವ್ವ ಕೊಟ್ಟತ್ತರ ಹೀಗಿತ್ತು.
“ನೋಡು ಮಗ್ನ. ಯಾರು ಕಷ್ಟದಾಗ ಇರ್ತಾರೋ ಅವರಿಗೆ ಸಹಾಯ ಮಾಡೋದು ಮುನಷ್ಯನ ಗುಣ,” “ಅವ್ರ ಕಷ್ಟದಾಗಿದ್ರು ಹಿಂಗಾಗಿ ಅವ್ರಿಗೆ ನಾನು ಸಹಾಯ ಮಾಡಿದೆ. ನೀನು ನೀರ ಕುಡಿಯೋದ್ರಿಂದ ಏನು ಆಕ್ಕಿದ್ದಿಲ್ಲ, ಆದ್ರ ನೀರು, ನೀರು,,, ಅಂತ ಬಡಬಡಿಸತ್ತಿದ್ದ ಜನರಿಗೆ ನೀರು ಕೊಡೋದು ಪುಣ್ಯದ ಕೆಲ್ಸ. ಅದಕ್ಕ ನಾನು ಅವರಿಗೆ ನೀರು ಕುಡ್ಸಿದೆ” ಎಂದಳು.
ನಾನು “ಅಲ್ಲಬೇ ಎವ್ವಾ. ಈ ಬಸ್ನ್ಯಾಗ ಇದ್ದೋರಕಡಿಗೆ ನೀರಿತ್ತು , ಅವರ್ಯಾಕ ನೀರ ಕುಡ್ಸಾಕ ಮಂದಬರಲಿಲ್ಲ ಎಂದ ಪ್ರಶ್ನೆಹಾಕಿದೆ”.
ಅದು ಅವ್ರರವರಿಗೆ ಬಿಟ್ಟದ್ದು, “ನೀನು ಸಹ ದೊಡ್ಡಾಂವ ಆದಮ್ಯಾಲ್ ಯಾರಾದ್ರೂ ಕಷ್ಟದಾಗಿದ್ರ ಅವರ ಸಹಾಯಕ್ಕ ನಿಲ್ಲಬೇಕು” “ಹಸದ ಬಂದೋರ್ನ ಎಂದಿಗೂ ಹಂಗ ಕಳ್ಸಬಾರ್ದು, ನಾವು ತಿನ್ನೋದ್ರಾಗ ಒಂದು ತುತ್ತು ಹಸದವ್ರಗೆ ಕೊಡಬೇಕು” ಎಂದು ಕಿವಿಮಾತು ಹೇಳಿದ್ದಳು ಅವ್ವ.
ಅವ್ವ ಸತ್ತು ೪೭ ವರ್ಷಗಳಾಗಿವೆ. ಅವ್ವ ಸಾಯವಾಗ ಬಾಲಕನಿದ್ದ ನಾನು ಈಗ ಅಜ್ಜನಾಗಿರುವೆ. ಆದರೆ ಅವ್ವ ಹೇಳಿಕೊಟ್ಟ ಬದುಕಿನ ನೀತಿ ಪಾಠ ಈಗಲೂ ನನ್ನ ಉಸಿರಾಗಿದೆ. ತಿರುಪಣಿ ಚರಿಗೆಯನ್ನ ನೋಡಿದಾಗೊಮ್ಮ ಅವ್ವ ನೆನಪಾಗತ್ತಾಳೆ, ಜೊತೆಗೆ ಅವಳು ಮಾಡಿದ ಪುಣ್ಯದ ಕೆಲಸಗಳು ಕೂಡಾ.
ಮಾಲತೇಶ ಅಂಗೂರ. ಹಾವೇರಿ