
ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ
ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ, ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

