
ಪೋನ್ ಪೇ ಮೂಲಕ ಲಂಚ – ಹಾವೇರಿ ಆಹಾರ ನಿರೀಕ್ಷಕ ವಿಜಯಕುಮಾರ್ ಗುಡಿಗೇರಿ ಲೋಕಾ ಬಲೆಗೆ
ಹಾವೇರಿ; ಭ್ರಷಾಚಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ಹಾವೇರಿಯಲ್ಲಿ ಬುಧವಾರ ರೇಷನ್ ಕಾರ್ಡ್ ಮಾಡಿಕೊಟ್ಟು ಪೋನ್ ಪೇ ಮೂಲಕ ಲಂಚ ಪಡೆದ ಹಾವೇರಿ ತಾಲೂಕ ಪ್ರಭಾರ ಆಹಾರ ನಿರೀಕ್ಷಕ ವಿಜಯಕುಮಾರ್ ಗುಡಿಗೇರಿಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಇತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ನಿವಾಸಿ ಬೀರಪ್ಪ ಕಾಶಂಬಿ ಅವರಿಂದ ರೇಷನ್ ಕಾರ್ಡ್ಗಾಗಿ ೫೦೦೦ ರುಪಾಯಿ ಲಂಚ ಪಡೆಯುತ್ತಿದ್ದ ಪಡೆಯುತ್ತಿದ್ದ ವೇಳೆ ಡಿವೈಎಸ್ಪಿ ಮಧಸೂದನ್ ನೇತ್ರತ್ವದಲ್ಲಿ ದಾಳಿ ಮಾಡಿ ವಿಜಯಕುಮಾರ್ ಗುಡಿಗೇರಿಯನ್ನು ಲೋಕಾಯುಕ್ತರು ವಶಕ್ಕೆ ಪಡೆದು ನ್ಯಾಯಾಂಗ

