ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣ: ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ಕಿಮ್ಸ್ನಲ್ಲಿ ಮರಣ-ಆರೋಪಿಗಳ ಗಡಿಪಾರಿಗೆ ಆಗ್ರಹ
ಹಾವೇರಿ: ಹಾವೇರಿ ನಗರದಲ್ಲಿ ಬರ್ತಡೆ ಬ್ಯಾನರ್ ತೆರವು ವಿಚಾರಕ್ಕೆ ಆರಂಭವಾದ ಸಂಘರ್ಷದಲ್ಲಿ ಜೂ.೫ ಹಾಗೂ ೭ರಂದು ಹಲ್ಲೆ ಹಾಗೂ ನಿಂದನೆಗೆ ಒಳಗಾಗಿದ್ದ ಇಬ್ಬರು ಪೌರಕಾರ್ಮಿಕರಲ್ಲಿ ರಂಗಪ್ಪ ಹೆರಕಲ್ಲ(೫೪)ಎನ್ನುವ ಓರ್ವ ಪೌರಕಾರ್ಮಿಕ ಸೋಮವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತೆಯಲ್ಲಿ ಮರಣಹೊಂದಿದ್ದಾರೆ.
ಜೂ.೫ರಂದು ಗುರುಭವನದಬಳಿ ಅಳವಡಿಸಲಾಗಿದ್ದಹುಟ್ಟು ಹಬ್ಬದ ಶುಭಕೋರುವ ಬ್ಯಾನರ್ನ್ನು ನಗರಸಭೆಯ ಅಧಿಕಾರಿಗಳ ಆದೇಶದಮೇರೆಗೆ ತೆರವುಗೊಳಿಸಲು ಹೋದ ಸಂದರ್ಭದಲ್ಲಿ ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ಅವರಮೇಲೆ ಅವಾಚ್ಚಶಬ್ದಗಳಿಂದ ನಿಂದಿಸಿ ತೀರಾ ಹಿನಾಯವಾಗಿ ಅವಮಾನಗೊಳಿಸಿದ್ದರಿಂದ ತೀವ್ರಮಾನಸಿಕ ಕಿನ್ನತೆಗೆ ಒಳಗಾಗಿದ್ದ ರಂಗಪ್ಪ ಹೆರಕಲ್ಲ ಜೂ.೧೯ರಂದು ವಿಷ ಸೇವಿಸಿದ್ದರೆನ್ನಲಾಗಿದ್ದು, ಇವರನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನಗೆ ಇವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾದೇ ಜೂ.೨೩ರಂದು ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರಿದ್ದಾರೆ.
ಆರೋಪಿಗಳ ಗಡಿಪಾರಿಗೆ ಆಗ್ರಹ: ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಕಾರ್ಮಿಕ ರಾಜು ದೊಡ್ಡಮನಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಸದರಿ ಬ್ಯಾನರ್ ತೆರವುಗೊಳಿಸಿದ್ದ ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ನೊಂದು ಕಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದು, ಇತನ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಗಡಿಪಾರುಮಾಡಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು, ತಪ್ಪಿತಸ್ತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸದರಿ ಘಟನೆಯಿಂದ ಭಯಬೀತರಾಗಿರುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು, ಮೃತ ಪಟ್ಟಿರುವ ರಂಗಪ್ಪ ಹೆರೆಕಲ್ಲ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ದಲಿತ ಸಂಘಟನೆಗಳು ಮುಖಂಡರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ; ಹಾವೇರಿನಗರದಲ್ಲಿ ಪೌರಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ಸಹ ಸೌಜನಕ್ಕೂ ಪೌರಕಾರ್ಮಿಕರನ್ನು ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ, ಶಾಸಕರಾಗಲಿ, ನಗರಸಭೆಯ ಆಡಳಿತ ಮಂಡಳಿಯವರಾಗಲಿ, ಅಧಿಕಾರಿ ವರ್ಗದವರಾಗಿ ಭೇಟಿ ನೀಡಿ ಆತ್ಮ ಸ್ಥೈರ್ಯತುಂಬದಿರುವುದು ಪೌರಕಾರ್ಮಿಕರಲ್ಲಿ ನೋವುಂಟುಮಾಡಿದ್ದು, ಈಗಲಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ಪೌರಕಾರ್ಮಿಕರಲ್ಲಿ ಆತ್ಮಸ್ಥ್ಯರ್ಯ ತುಂಬಬೇಕೆಂದು ದಲಿತ ಸಂಘಟನೆಗಳ ಮುಖಂಡರುಗಳಾದ ಅಶೋಕ ಮರೆಣ್ಣನವರ, ಹೊನ್ನಪ್ಪ ತಗಡಿನಮನಿ, ಉಡಚ್ಚಪ್ಪ ಮಾಳಗಿ, ನಾಗರಾಜ ಮಾಳಗಿ, ಬಸವರಾಜ ಹೆಡಿಗೊಂಡ, ಮಲ್ಲೇಶ ಕಡಕೋಳ, ಕೃಷ್ಣಾ ಕರ್ಜಗಿ, ಶ್ರೀಕಾಂತ ಗಡ್ಡಿ, ಮಾರುತಿ ಬಣಕಾರ, ಫಕ್ಕೀರೇಶ ಪುರದ, ಸಂತೋಷ ಗುಡ್ಡಪ್ಪನವರ, ರಾಜು ಗಾಳೆಪ್ಪನವರ , ರಮೇಶ ಆನವಟ್ಟಿ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ಜೂ.೫ ಹಾಗೂ ೭ರಂದು ನಡೆದ ಘಟನೆ: ಬ್ಯಾನರ್ ತರವು ಘಟನೆಗೆ ಸಂಬಂಧಿಸಿದಂತೆ ಜೂ.೫ರಂದು ನಗರಸಭೆಯ ಮುಭಾಗದಲ್ಲಿ ಗಲಾಟೆ ನಡೆದು ಇಬ್ಬರು ಪೌರಕಾರ್ಮಿಕರಮೇಲೆ ಹಲ್ಲೆ ನಡೆಸಲಾಗಿತ್ತು. ಜೂ.೭ರಂದು ನಗರದ ಬಾರ್ನಲ್ಲಿದ್ದ ಪೌರಕಾರ್ಮಿಕ ರಾಜು ದೊಡ್ಡಮನಿ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಬ್ಯಾಟ್ ಹಿಡಿದು ಬಂದ ಗುಂಪು ರಾಜು ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು. ಈ ಹಲ್ಲೆಗೆ ಅಕ್ಷತಾ ಮತ್ತು ಅವರ ಗುಂಪಿನವರು ಕಾರಣ ಎಂದು ಪೌರಕಾರ್ಮಿಕರು ಅಕ್ಷತಾ ಮತ್ತು ಆಕೆಯ ೯ ಬೆಂಬಲಿಗರ ಮೇಲೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ನಗರ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಸಲಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಬರ್ತಡೇ ಬ್ಯಾನರ್ ತೆರವುಮಾಡಿ ನಿಂದನೆಗೆ ಒಳಗಾಗಿದ್ದ ರಂಗಪ್ಪ ಹೆರೆಕಲ್ಲ ನಿಧರಾಗಿದ್ದು, ಮಂಗಳವಾರ ಪೌರಕರ್ಮಿನ ಶವ ಹಾವೇರಿಗೆ ಬರಲಿದ್ದು, ನಗರಸಭೆಯ ಮುಂಭಾಗದಲ್ಲಿ ಶವದೊಂದಿಗೆ ಪ್ರತಿಭಟನೆ ನಡೆಸುವುದಾಗಿ ದಸಸಂ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಹಾವೇರಿ: ಹಾವೇರಿ ನಗರದಲ್ಲಿ ಬರ್ತಡೆ ಬ್ಯಾನರ್ ತೆರವು ವಿಚಾರಕ್ಕೆ ಆರಂಭವಾದ ಸಂಘರ್ಷದಲ್ಲಿ ಜೂ.೫ ಹಾಗೂ ೭ರಂದು ಹಲ್ಲೆ ಹಾಗೂ ನಿಂದನೆಗೆ ಒಳಗಾಗಿದ್ದ ಇಬ್ಬರು ಪೌರಕಾರ್ಮಿಕರಲ್ಲಿ ರಂಗಪ್ಪ ಹೆರಕಲ್ಲ(೫೪)ಎನ್ನುವ ಓರ್ವ ಪೌರಕಾರ್ಮಿಕ ಸೋಮವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತೆಯಲ್ಲಿ ಮರಣಹೊಂದಿದ್ದಾರೆ.
ಜೂ.೫ರಂದು ಗುರುಭವನದಬಳಿ ಅಳವಡಿಸಲಾಗಿದ್ದಹುಟ್ಟು ಹಬ್ಬದ ಶುಭಕೋರುವ ಬ್ಯಾನರ್ನ್ನು ನಗರಸಭೆಯ ಅಧಿಕಾರಿಗಳ ಆದೇಶದಮೇರೆಗೆ ತೆರವುಗೊಳಿಸಲು ಹೋದ ಸಂದರ್ಭದಲ್ಲಿ ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ಅವರಮೇಲೆ ಅವಾಚ್ಚಶಬ್ದಗಳಿಂದ ನಿಂದಿಸಿ ತೀರಾ ಹಿನಾಯವಾಗಿ ಅವಮಾನಗೊಳಿಸಿದ್ದರಿಂದ ತೀವ್ರಮಾನಸಿಕ ಕಿನ್ನತೆಗೆ ಒಳಗಾಗಿದ್ದ ರಂಗಪ್ಪ ಹೆರಕಲ್ಲ ಜೂ.೧೯ರಂದು ವಿಷ ಸೇವಿಸಿದ್ದರೆನ್ನಲಾಗಿದ್ದು, ಇವರನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನಗೆ ಇವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾದೇ ಜೂ.೨೩ರಂದು ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರಿದ್ದಾರೆ.
ಆರೋಪಿಗಳ ಗಡಿಪಾರಿಗೆ ಆಗ್ರಹ: ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಕಾರ್ಮಿಕ ರಾಜು ದೊಡ್ಡಮನಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಸದರಿ ಬ್ಯಾನರ್ ತೆರವುಗೊಳಿಸಿದ್ದ ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ನೊಂದು ಕಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದು, ಇತನ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಗಡಿಪಾರುಮಾಡಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು, ತಪ್ಪಿತಸ್ತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸದರಿ ಘಟನೆಯಿಂದ ಭಯಬೀತರಾಗಿರುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು, ಮೃತ ಪಟ್ಟಿರುವ ರಂಗಪ್ಪ ಹೆರೆಕಲ್ಲ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ದಲಿತ ಸಂಘಟನೆಗಳು ಮುಖಂಡರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ; ಹಾವೇರಿನಗರದಲ್ಲಿ ಪೌರಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ಸಹ ಸೌಜನಕ್ಕೂ ಪೌರಕಾರ್ಮಿಕರನ್ನು ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ, ಶಾಸಕರಾಗಲಿ, ನಗರಸಭೆಯ ಆಡಳಿತ ಮಂಡಳಿಯವರಾಗಲಿ, ಅಧಿಕಾರಿ ವರ್ಗದವರಾಗಿ ಭೇಟಿ ನೀಡಿ ಆತ್ಮ ಸ್ಥೈರ್ಯತುಂಬದಿರುವುದು ಪೌರಕಾರ್ಮಿಕರಲ್ಲಿ ನೋವುಂಟುಮಾಡಿದ್ದು, ಈಗಲಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ಪೌರಕಾರ್ಮಿಕರಲ್ಲಿ ಆತ್ಮಸ್ಥ್ಯರ್ಯ ತುಂಬಬೇಕೆಂದು ದಲಿತ ಸಂಘಟನೆಗಳ ಮುಖಂಡರುಗಳಾದ ಅಶೋಕ ಮರೆಣ್ಣನವರ, ಹೊನ್ನಪ್ಪ ತಗಡಿನಮನಿ, ಉಡಚ್ಚಪ್ಪ ಮಾಳಗಿ, ನಾಗರಾಜ ಮಾಳಗಿ, ಬಸವರಾಜ ಹೆಡಿಗೊಂಡ, ಮಲ್ಲೇಶ ಕಡಕೋಳ, ಕೃಷ್ಣಾ ಕರ್ಜಗಿ, ಶ್ರೀಕಾಂತ ಗಡ್ಡಿ, ಮಾರುತಿ ಬಣಕಾರ, ಫಕ್ಕೀರೇಶ ಪುರದ, ಸಂತೋಷ ಗುಡ್ಡಪ್ಪನವರ, ರಾಜು ಗಾಳೆಪ್ಪನವರ , ರಮೇಶ ಆನವಟ್ಟಿ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ಜೂ.೫ ಹಾಗೂ ೭ರಂದು ನಡೆದ ಘಟನೆ: ಬ್ಯಾನರ್ ತರವು ಘಟನೆಗೆ ಸಂಬಂಧಿಸಿದಂತೆ ಜೂ.೫ರಂದು ನಗರಸಭೆಯ ಮುಭಾಗದಲ್ಲಿ ಗಲಾಟೆ ನಡೆದು ಇಬ್ಬರು ಪೌರಕಾರ್ಮಿಕರಮೇಲೆ ಹಲ್ಲೆ ನಡೆಸಲಾಗಿತ್ತು. ಜೂ.೭ರಂದು ನಗರದ ಬಾರ್ನಲ್ಲಿದ್ದ ಪೌರಕಾರ್ಮಿಕ ರಾಜು ದೊಡ್ಡಮನಿ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಬ್ಯಾಟ್ ಹಿಡಿದು ಬಂದ ಗುಂಪು ರಾಜು ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು. ಈ ಹಲ್ಲೆಗೆ ಅಕ್ಷತಾ ಮತ್ತು ಅವರ ಗುಂಪಿನವರು ಕಾರಣ ಎಂದು ಪೌರಕಾರ್ಮಿಕರು ಅಕ್ಷತಾ ಮತ್ತು ಆಕೆಯ ೯ ಬೆಂಬಲಿಗರ ಮೇಲೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ನಗರ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಸಲಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಬರ್ತಡೇ ಬ್ಯಾನರ್ ತೆರವುಮಾಡಿ ನಿಂದನೆಗೆ ಒಳಗಾಗಿದ್ದ ರಂಗಪ್ಪ ಹೆರೆಕಲ್ಲ ನಿಧರಾಗಿದ್ದು, ಮಂಗಳವಾರ ಪೌರಕರ್ಮಿನ ಶವ ಹಾವೇರಿಗೆ ಬರಲಿದ್ದು, ನಗರಸಭೆಯ ಮುಂಭಾಗದಲ್ಲಿ ಶವದೊಂದಿಗೆ ಪ್ರತಿಭಟನೆ ನಡೆಸುವುದಾಗಿ ದಸಸಂ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
—