ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪನವರ ‘ನುಡಿಯ ಎಡವಿತ್ತು ಕಲ್ಯಾಣ’ ನಾಟಕ ಪುಸ್ತಕ ಬಿಡುಗಡೆ ಜುಲೈ.೧೬ಕ್ಕೆ
ಹಾವೇರಿ: ಹಿರಿಯ ಲೇಖಕ ಪ್ರೊ ಕೋರಗಲ್ಲ ವಿರೂಪಾಕ್ಷಪ್ಪನವರ ನಾಟಕ ಕೃತಿ ‘ನುಡಿಯ ಎಡವಿತ್ತು ಕಲ್ಯಾಣ’ ಇದೇ ೧೬, ರವಿವಾರ ಬೆಳಿಗ್ಗೆ ೧೦:೩೦ ಕ್ಕೆ ಗೆಳೆಯರ ಬಳಗದ ಪ್ರಾಥಮಿಕ ಶಾಲೆಯ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ಗೆಳೆಯರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಆಯೋಜಿಸಿರುವ ಸಮಾರಂಭದಲ್ಲಿ ನಾಡಿನ ಹಿರಿಯ ವಿದ್ವಾಂಸ, ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಬಿಡುಗಡೆ ಮಾಡುವರು. ಸಾನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ವಹಿಸಿದರೆ, ಸಮ್ಮುಖವನ್ನು ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ವಹಿಸುವರು.
ಪುಸ್ತಕ ಪರಿಚಯವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾ ಪ್ರೊ. ಮಾರುತಿ ಶಿಡ್ಲಾಪೂರ ಅವರು ಮಾಡುವರು. ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಡಾ. ಸುದೀಪ ಪಂಡಿತ ವಹಿಸುವರು. ಈ ಸಂದರ್ಭದಲ್ಲಿ ಪ್ರಕಾಶಕ ಡಾ. ಬಸವರಾಜ ಹಳ್ಳೂರ ಅವರನ್ನು ಸನ್ಮಾನಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.
ಲೇಖಕರ ಪರಿಚಯ :
ಕಥೆ, ಕಾವ್ಯ , ಲಲಿತ ಪ್ರಬಂಧ, ಸಂಶೋಧನೆ, ಪ್ರವಾಸ ಮತ್ತು ಮಕ್ಕಳ ಸಾಹಿತ್ಯ ಹೀಗೆ ವೈವಿಧ್ಯಮಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಪ್ರೊ. ಕೋರಗಲ್ಲ ವಿರೂಪಾಕ್ಷಪ್ಪನವರು ಮೂಲತಃ ಕೊಪ್ಪಳದವರು. ಗಣಿತ ಪ್ರಾಧ್ಯಪಕರಾಗಿ ನಿವೃತ್ತರಾದ ಕೋರಗಲ್ಲರ ‘ಮುತ್ತಿನ ಚಿಪ್ಪುಗಳು’ ಎಂಬ ವಿಶಿಷ್ಟ ಕೃತಿ ಹಾವೇರಿಯಲ್ಲಿ ಜರುಗಿದ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ‘ನುಡಿಯ ಎಡವಿತ್ತು ಕಲ್ಯಾಣ’ ೮೩ ಪ್ರಾಯದ ಕೋರಗಲ್ಲರ ಮೊದಲ ನಾಟಕ ಕೃತಿ.