ಫೆ. ೨೩ ರಿಂದ ಮಾ. ೦೫ ರವರೆಗೆ ಹಾವೇರಿಯ ಗ್ರಾಮದೇವತೆ ಜಾತ್ರೆ
ಹಾವೇರಿ: ಇಲ್ಲಿನ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿಯ ಜಾತ್ರೆಯನ್ನು ಫೆ. ೨೩ ರಿಂದ ಮಾ. ೦೫ ರವರೆಗೆ ಶ್ರೀ ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮಿತಿಯವರು ಆಯೋಜಿಸಿದ್ದು, ಜಾತ್ರೆಯ ಪೆಂಡಾಲ ನಿರ್ಮಾಣಕ್ಕೆ ಸೋಮವಾರ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ದ್ಯಾಮವ್ವನ ಪಾದಗಟ್ಟಿಯ ಬಳಿ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಭೂಮಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ದ್ಯಾಮವ್ವ ದೇವಿಯ ಕಮಿಟಿಯ ಪ್ರಮುಖರಾದ ಅಶೋಕ ಮುದಗಲ್ಲ, ಹನುಮಂತನಾಯ್ಕ ಬದಾಮಿ, ಬಸವರಾಜ ಮುಗದೂರ, ವೆಂಕಟೇಶ ದೈವಜ್ಞ, ಪ್ರಕಾಶ ಉಜನಿಕೊಪ್ಪ, ವೀರುಪಾಕ್ಷಪ್ಪ ಹತ್ತಿಮತ್ತೂರ, ಪರಮೇಶ ಪಾಟೀಲ, ಕುಶಾಲ ಕನವಳ್ಳಿ, ಭರತ ಮತ್ತಿತರರು ಹಾಜರಿದ್ದರು.
ಜಾತ್ರಾ ಕಾರ್ಯಕ್ರಮಗಳ ವಿವರ: ಫೆ.೨೩ರಂದು ಅಂಕಿ ಹಾಕುವುದು ಹಾಗೂ ಪಡ್ಲಿಗಿ ತುಂಬಿಸುವುದು, ಫೆ ೨೭ರಂದು ನಗರದ ದೇವಸ್ಥಾನಗಳಿಗೆ ವಾದ್ಯ ವೈಭವಗಳಿಂದ ನೈವೇದ್ಯ ಮಾಡಿಸುವುದು. ಅದೇ ದಿವಸ ಸಂಜೆ ೬-೦೦ ಗಂಟೆಗೆ ಮಂಗಲ ವಾದ್ಯವೈಭವದೊಂದಿಗೆ ಶ್ರೀ ಗ್ರಾಮದೇವತಾ ದೇವಸ್ಥಾನದಿಂದ ಶೃಂಗರಿಸಿದ ತೇರಿನಲ್ಲಿ ಶ್ರೀ ದೇವಿಯ ಉತ್ಸವವನ್ನು ಚವತಮನಿ ಕಟ್ಟೆಗೆ ಕರೆತಂದು ಶ್ರೀದೇವಿಯನ್ನು ಪ್ರತಿಷ್ಠಾಪಿಸುವದು.
ಫೆ.೨೮ರಂದು ರಂಗ ಹೊಯ್ಯುವದು, ಉಡಿ ತುಂಬಿಸುವುದು, ಸಾರ್ವಜನಿಕರಿಂದ ಹಣ್ಣುಕಾಯಿ ಮಾಡಿಸುವುದು ಮತ್ತು ಹರಕೆ, ಕಾಣಿಕೆ ಇತ್ಯಾದಿಗಳನ್ನು ಸಲ್ಲಿಸುವುದು.
ಮಾ. ೦೨ ರಂದು ಸಾಯಂಕಾಲ ೪-೦೦ ಗಂಟೆಗೆ ಶ್ರೀದೇವಿಯನ್ನು ಮಹೋತ್ಸವದಿಂದ ಗಡಿಗೆ ಕಳುಹಿಸುವುದು. ಮಾ. ೦೫ ಮುಂಜಾನೆ ೧೦-೦೦ ಗಂಟೆಗೆ ಶ್ರೀ ಗ್ರಾಮದೇವಿಯನ್ನು ಗುಡಿ ತುಂಬಿಸುವುದು. ಶ್ರೀದೇವಿಗೆ ಕ್ಷೀರಾಭಿಷೇಕ ಹಾಗೂ ಚಂಡಿಪಾರಾಯಣ ಹೋಮ ನಡೆಸಲಾಗುತ್ತದೆ.
ಫೆ. ೨೩ ರಿಂದ ಮಾ. ೦೫ ರವರೆಗೆ ಹಾವೇರಿಯ ಗ್ರಾಮದೇವತೆ ಜಾತ್ರೆ
Date:
ಫೆ. ೨೩ ರಿಂದ ಮಾ. ೦೫ ರವರೆಗೆ ಹಾವೇರಿಯ ಗ್ರಾಮದೇವತೆ ಜಾತ್ರೆ
ಹಾವೇರಿ: ಇಲ್ಲಿನ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿಯ ಜಾತ್ರೆಯನ್ನು ಫೆ. ೨೩ ರಿಂದ ಮಾ. ೦೫ ರವರೆಗೆ ಶ್ರೀ ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮಿತಿಯವರು ಆಯೋಜಿಸಿದ್ದು, ಜಾತ್ರೆಯ ಪೆಂಡಾಲ ನಿರ್ಮಾಣಕ್ಕೆ ಸೋಮವಾರ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ದ್ಯಾಮವ್ವನ ಪಾದಗಟ್ಟಿಯ ಬಳಿ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಭೂಮಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ದ್ಯಾಮವ್ವ ದೇವಿಯ ಕಮಿಟಿಯ ಪ್ರಮುಖರಾದ ಅಶೋಕ ಮುದಗಲ್ಲ, ಹನುಮಂತನಾಯ್ಕ ಬದಾಮಿ, ಬಸವರಾಜ ಮುಗದೂರ, ವೆಂಕಟೇಶ ದೈವಜ್ಞ, ಪ್ರಕಾಶ ಉಜನಿಕೊಪ್ಪ, ವೀರುಪಾಕ್ಷಪ್ಪ ಹತ್ತಿಮತ್ತೂರ, ಪರಮೇಶ ಪಾಟೀಲ, ಕುಶಾಲ ಕನವಳ್ಳಿ, ಭರತ ಮತ್ತಿತರರು ಹಾಜರಿದ್ದರು.
ಜಾತ್ರಾ ಕಾರ್ಯಕ್ರಮಗಳ ವಿವರ: ಫೆ.೨೩ರಂದು ಅಂಕಿ ಹಾಕುವುದು ಹಾಗೂ ಪಡ್ಲಿಗಿ ತುಂಬಿಸುವುದು, ಫೆ ೨೭ರಂದು ನಗರದ ದೇವಸ್ಥಾನಗಳಿಗೆ ವಾದ್ಯ ವೈಭವಗಳಿಂದ ನೈವೇದ್ಯ ಮಾಡಿಸುವುದು. ಅದೇ ದಿವಸ ಸಂಜೆ ೬-೦೦ ಗಂಟೆಗೆ ಮಂಗಲ ವಾದ್ಯವೈಭವದೊಂದಿಗೆ ಶ್ರೀ ಗ್ರಾಮದೇವತಾ ದೇವಸ್ಥಾನದಿಂದ ಶೃಂಗರಿಸಿದ ತೇರಿನಲ್ಲಿ ಶ್ರೀ ದೇವಿಯ ಉತ್ಸವವನ್ನು ಚವತಮನಿ ಕಟ್ಟೆಗೆ ಕರೆತಂದು ಶ್ರೀದೇವಿಯನ್ನು ಪ್ರತಿಷ್ಠಾಪಿಸುವದು.
ಫೆ.೨೮ರಂದು ರಂಗ ಹೊಯ್ಯುವದು, ಉಡಿ ತುಂಬಿಸುವುದು, ಸಾರ್ವಜನಿಕರಿಂದ ಹಣ್ಣುಕಾಯಿ ಮಾಡಿಸುವುದು ಮತ್ತು ಹರಕೆ, ಕಾಣಿಕೆ ಇತ್ಯಾದಿಗಳನ್ನು ಸಲ್ಲಿಸುವುದು.
ಮಾ. ೦೨ ರಂದು ಸಾಯಂಕಾಲ ೪-೦೦ ಗಂಟೆಗೆ ಶ್ರೀದೇವಿಯನ್ನು ಮಹೋತ್ಸವದಿಂದ ಗಡಿಗೆ ಕಳುಹಿಸುವುದು. ಮಾ. ೦೫ ಮುಂಜಾನೆ ೧೦-೦೦ ಗಂಟೆಗೆ ಶ್ರೀ ಗ್ರಾಮದೇವಿಯನ್ನು ಗುಡಿ ತುಂಬಿಸುವುದು. ಶ್ರೀದೇವಿಗೆ ಕ್ಷೀರಾಭಿಷೇಕ ಹಾಗೂ ಚಂಡಿಪಾರಾಯಣ ಹೋಮ ನಡೆಸಲಾಗುತ್ತದೆ.