
ಫೆ.೬ರಂದು ಉಚಿತ ಹೃದಯ ರೋಗ ತಪಾಸಣಾ ಶಿಬಿರ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾವೇರಿ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ 42ನೇ ಹುಟ್ಟು ಹಬ್ಬದ ಪ್ರಯುಕ್ತ ಫೆ.೬ರಂದು ಮಂಗಳವಾರ ತಾಲೂಕಿನ ನೆಗಳೂರಗ್ರಾಮದಲ್ಲಿ
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ (ಆಸ್ಪತ್ರೆ)ಯಲ್ಲಿ ಬೆಳಿಗ್ಯೆ 10-00 ರಿಂದ ಮಧ್ಯಾಹ್ನ 1-00 ಘಂಟೆಯವರೆಗೆ ಧಾರವಾಡದ ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ಹಾ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯ ತಜ್ಞ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಶಿಬಿರದಲ್ಲಿ BP E.C.G & 2D ಇಕೋ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ಹೃದಯ ರೋಗದ ಲಕ್ಷಣಗಳು ಎದೆ ನೋಯುವುದು, ಎದೆಯಲ್ಲಿ ಚುಚ್ಚುವುದು, ಉಸಿರಾಡಲು ತೊಂದರೆಯಾಗುವುದು, ಎದೆ ಉರಿಯುವುದು, ಸ್ವಲ್ಪ ಕೆಲಸಕ್ಕೆ ಆಯಾಸಾವಾಗುವುದು, ಅನಿಯಮಿತ ಎದೆ ಬಡಿತ, ತಣ್ಣನೆಯ ಬೆವರು, ಬುಜ ಮತ್ತು ಕೈಗಳ ಸೆಳೆತ ಹೃದಯರೋಗ ಲಕ್ಷಣಗಳನ್ನು ಹೊಂದಿರುವವರು, ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಲುಕೋರಲಾಗಿದೆ.

