ಬಿಜೆಪಿಗೆ ಗುಡ್ಬೈ ಹೇಳಿದ ನಿರಂಜನ ಹೇರೂರ!
ಹಾವೇರಿ: ಬಿಜೆಪಿಯಲ್ಲಿನ ಗುಂಪುಗಾರಿಕೆಗೆ ಹಾಗೂ ಇತ್ತೀಚಿಗೆ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳಿಗೆ ಬೇಸತ್ತು ಬಿಜೆಪಿ ಜಿಲ್ಲಾ ವಕ್ತಾರ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ನಿರಂಜನ ಹೇರೂರ ತಿಳಿಸಿದ್ದಾರೆ.
ಬಿಜೆಪಿ ಸದಸ್ಯತ್ವಕ್ಕೆ ಹಾಗೂ ಬಿಜೆಪಿ ಜಿಲ್ಲಾ ವಕ್ತಾರ ಹುದ್ದೆ ರಾಜೀನಾಮೆ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಪೂಜಾರ ಅವರಿಗೆ ರಾಜಿನಾಮೆ ಸಲ್ಲಿಸಿರುವುದಾಗಿ ರಾಜಿನಾಮೆಯ ಪತ್ರವನ್ನು ಮಾಧ್ಯಮಗಳಿಗೆ ನಿರಂಜನ ಹೇರೂರ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಬರೆದಿರುವ ರಾಜಿನಾಮೆ ಪತ್ರದಲ್ಲಿ, ತಾವು ಸುಮಾರು ೨೩ ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ, ಪಕ್ಷ ಕೊಟ್ಟಂತ ಅನೇಕ ಜವಾಬ್ದಾರಿಗಳನ್ನು ವಿಸ್ವಾಸ ಮತ್ತು ನಿಷ್ಠೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಿರುತ್ತೇನೆ. ಆದರೆ ಇತ್ತೀಚೆಗೆ ಪಕ್ಷದಲ್ಲಿನ ಆಂತರಿಕ ಗೊಮದಲಗಳಿಂದ ಮತ್ತು ಪಕ್ಷದಲ್ಲಿನ ಅವಿಶ್ವಾಸ ಮತ್ತು ಗುಂಪುಗಾರಿಕೆಯಿಂದ ಬೇಸತ್ತು ನನ್ನ ಹುದ್ದೆ ಹಾಗೂ ಸದಸ್ಯತ್ವವನ್ನು ತ್ಯಜಿಸುತ್ತಿದ್ದೇನೆ,. ಈ ವಿಷಯಗಳಿಗೆ ಸಂಬಂಧಿಸಿದಂತೆ ನನ್ನನ್ನು ಜವಾಬ್ದಾರಿಗಳಿಂದ ಮುಕ್ತಗೊಳಿಸಿ ನನ್ನ ರಾಜಿನಾಮೆಯನ್ನು ಅಂಗಿಕರಿಸಬೇಕೆಂದು ನಿರಂಜನ ಹೇರೂರು ಜಿಲ್ಲಾಧ್ಯಕ್ಷರಲ್ಲಿ ಕೋರಿದ್ದಾರೆ.
ಬಿಜೆಪಿಗೆ ಗುಡ್ಬೈ ಹೇಳಿದ ನಿರಂಜನ ಹೇರೂರ!
Date:
ಬಿಜೆಪಿಗೆ ಗುಡ್ಬೈ ಹೇಳಿದ ನಿರಂಜನ ಹೇರೂರ!
ಹಾವೇರಿ: ಬಿಜೆಪಿಯಲ್ಲಿನ ಗುಂಪುಗಾರಿಕೆಗೆ ಹಾಗೂ ಇತ್ತೀಚಿಗೆ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳಿಗೆ ಬೇಸತ್ತು ಬಿಜೆಪಿ ಜಿಲ್ಲಾ ವಕ್ತಾರ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ನಿರಂಜನ ಹೇರೂರ ತಿಳಿಸಿದ್ದಾರೆ.
ಬಿಜೆಪಿ ಸದಸ್ಯತ್ವಕ್ಕೆ ಹಾಗೂ ಬಿಜೆಪಿ ಜಿಲ್ಲಾ ವಕ್ತಾರ ಹುದ್ದೆ ರಾಜೀನಾಮೆ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಪೂಜಾರ ಅವರಿಗೆ ರಾಜಿನಾಮೆ ಸಲ್ಲಿಸಿರುವುದಾಗಿ ರಾಜಿನಾಮೆಯ ಪತ್ರವನ್ನು ಮಾಧ್ಯಮಗಳಿಗೆ ನಿರಂಜನ ಹೇರೂರ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಬರೆದಿರುವ ರಾಜಿನಾಮೆ ಪತ್ರದಲ್ಲಿ, ತಾವು ಸುಮಾರು ೨೩ ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ, ಪಕ್ಷ ಕೊಟ್ಟಂತ ಅನೇಕ ಜವಾಬ್ದಾರಿಗಳನ್ನು ವಿಸ್ವಾಸ ಮತ್ತು ನಿಷ್ಠೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಿರುತ್ತೇನೆ. ಆದರೆ ಇತ್ತೀಚೆಗೆ ಪಕ್ಷದಲ್ಲಿನ ಆಂತರಿಕ ಗೊಮದಲಗಳಿಂದ ಮತ್ತು ಪಕ್ಷದಲ್ಲಿನ ಅವಿಶ್ವಾಸ ಮತ್ತು ಗುಂಪುಗಾರಿಕೆಯಿಂದ ಬೇಸತ್ತು ನನ್ನ ಹುದ್ದೆ ಹಾಗೂ ಸದಸ್ಯತ್ವವನ್ನು ತ್ಯಜಿಸುತ್ತಿದ್ದೇನೆ,. ಈ ವಿಷಯಗಳಿಗೆ ಸಂಬಂಧಿಸಿದಂತೆ ನನ್ನನ್ನು ಜವಾಬ್ದಾರಿಗಳಿಂದ ಮುಕ್ತಗೊಳಿಸಿ ನನ್ನ ರಾಜಿನಾಮೆಯನ್ನು ಅಂಗಿಕರಿಸಬೇಕೆಂದು ನಿರಂಜನ ಹೇರೂರು ಜಿಲ್ಲಾಧ್ಯಕ್ಷರಲ್ಲಿ ಕೋರಿದ್ದಾರೆ.