ಬೆಳಗಾವಿಯ ಶೇಪರ್ಡ್ಸ್ ಇಂಡಿಯಾ ಸಮಾವೇಶಕ್ಕೆ ತೆರಳಿದ್ದ ಹಾವೇರಿ ವ್ಯಕ್ತಿ ಅಪಘಾತದಲ್ಲಿ ಮರಣಹಾವೇರಿ: ಬೆಳಗಾವಿಯಲ್ಲಿ ಅ.೩ರಂದು ಆಯೋಜಿಸಿದ್ದ ಶೇಪರ್ಡ್ಸ್ ಇಂಡಿಯಾ ಸಮಾವೇಶಕ್ಕೆ ತೆರಳಿದ್ದ ಹಾವೇರಿ ವ್ಯಕ್ತಿ ಅಪಘಾತದಲ್ಲಿ ಮರಣಹೊಂದಿರುವ ಘಟನೆ ನಡೆದಿದೆ.![]()
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ನ್ನು ಹಾವೇರಿ ತಾಲೂಕಿನ ಗುಡೂರು ಗ್ರಾಮದ ನಿವಾಸಿ ಕೋಟೆಪ್ಪ ಬೀರಪ್ಪ ಕುದರಿಹಾಳ (೬೦) ಎಂದು ತಿಳಿದುಬಂದಿದೆ.ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯಾಗಿದ್ದ ಕೋಟೆಪ್ಪ ಬೀರಪ್ಪ ಕುದರಿಹಾಳ ಬೆಳಗಾವಿಯಲ್ಲಿ ಅ.೩ರಂದು ಆಯೋಜಿಸಿದ್ದ ಶೇಪರ್ಡ್ಸ್ ಇಂಡಿಯಾ ಇಂಟರರ್ನ್ಯಾಷನಲ್ 9ನೇ ವಾರ್ಷಿಕ ರಾಷ್ಟ್ರೀಯ ಮಹಾ ಸಮಾವೇಶ ಕಾರ್ಯಕ್ರಮಕ್ಕೆ ಹೋಗಿ ಮರಳಿ ಊರಿಗೆ ಬರುವಾಗ ಬೆಳಗಾವಿ ಮತ್ತು ಹಿರೇ ಬಾಗೇವಾಡಿಯ ಮಧ್ಯ ಅ.೩ರಂದು ಸಂಜೆ ೬-೧೫ರ ಸುಮಾರಿಗೆಹೆದ್ದಾರಿ ರಸ್ತೆಯ ಬ್ರೀಡ್ಜ ಪಕ್ಕದಲ್ಲಿ ವಾಹನ ನಿಲ್ಲಿಸಿ ಚಹಾ ಕುಡಿಯಲು ಹೋಗುವಾಗ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಕೋಟೆಪ್ಪ ಅವರಿಗೆ ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿಇದ್ದಾರೆ.
ಬೆಳಗಾವಿಯ ಶೇಪರ್ಡ್ಸ್ ಇಂಡಿಯಾ ಸಮಾವೇಶಕ್ಕೆ ತೆರಳಿದ್ದ ಹಾವೇರಿ ವ್ಯಕ್ತಿ ಅಪಘಾತದಲ್ಲಿ ಮರಣ
Date: