ಭೀಕರ ರಸ್ತೆ ಅಪಘಾತ, ಹಾವೇರಿಯ ನಾಲ್ವರ ದುರ್ಮರಣ
ಹಾವೇರಿ: ಗದಗಜಿಲ್ಲೆಯ ನರಗುಂದಬಳಿ ಕಲ್ಲಾಪುರಗ್ರಾಮದ ಬಳಿಭಾನುವಾರ ಬೆಳಿಗ್ಗೆ ೬ಸುಮಾರಿಗೆ ಕಾರು ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಾವೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಮೃತರನ್ನು ಮಂಜುನಾಥ (ರುದ್ರಪ್ಪ) ಬಾಬಣ್ಣ ಅಂಗಡಿ (೫೨), ಇವರ ಧರ್ಮಪತ್ನಿ ರಾಜೇಶ್ವರಿ ಅಂಗಡಿ (೪೫) ದಂಪತಿಗಳ ಪುತ್ರಿ ಐಶ್ವರ್ಯ ಅಂಗಡಿ (೧೯), ಪುತ್ರ ವಿಜಯ್ ಅಂಗಡಿ (೧೨)ಎಂದು ಗುರುತಿಸಲಾಗಿದೆ.
ಹಾವೇರಿಯ ಇಜಾರಿಲಕಮಾಪುರಬಳಿಯ ಮಾರುತಿನಗರದ ೨ನೇ ಕ್ರಾಸ್ ನಿವಾಸಿಯಾಗಿದ್ದ ಮಂಜುನಾಥ (ರುದ್ರಪ್ಪ) ಬಾಬಣ್ಣ ಅಂಗಡಿ ಕುಟುಂಬದವರು ಕಾರಿನಲ್ಲಿ ಭಾನುವಾರ ಬೆಳಿಗ್ಗೆ ೪ರ ಸುಮಾರಿಗೆ ಹಾವೇರಿಯಿಂದ ನರಗುಂದ ಮಾರ್ಗವಾಗಿ ವಿಜಯಪೂರಕ್ಕೆ ತೆರಳುತ್ತಿದ್ದರೆಂದು, ಗುಳೇದಗುಡ್ಡದಿಂದ ಕೊಣ್ಣೂರ, ನರಗುಂದ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.ಎರಡು ವಾಹನಗಳು ಮೂಲ ಪಥ ಬದಲಿಸಿದ್ದು, ಬಸ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ನರಗುಂದಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾವೇರಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮಂಜುನಾಥ (ರುದ್ರಪ್ಪ) ಅಂಗಡಿ ಹಾವೇರಿಯೂ ಸೇರಿದಂತೆ ವಿವಿಧೆಡೆಗಳಲ್ಲಿ ವಿದ್ಯುತ್ ಗುತ್ತಿಗೆಕೆಲಸಗಳನ್ನು ನಿರ್ವಹಿಸುತ್ತಿದ್ದರು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ಬೆರೆಯುತ್ತಿದ್ದ ಮಂಜುನಾಥ ಅವರು ಅವರ ಗೆಳೆಯರಿಗೆಲ್ಲರೂ ಮಂಜಣ್ಣ ಎಂದ ಅವರನ್ನು ಕರೆಯುತ್ತಿದ್ದರು.