ಮಗುವಿನ ಜೀವ ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯ: ಡಾ. ವಸಂತ ಕಲಾತಕರ

Date:

ಮಗುವಿನ ಜೀವ ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯ: ಡಾ. ವಸಂತ ಕಲಾತಕರ
ಹಾವೇರಿ: ಭಾರತೀಯ ಮಕ್ಕಳ ವೈದ್ಯರ ಸಂಘ ಐಎಪಿ ಕರ್ನಾಟಕ ಶಾಖೆಯ ಸಾಂಕ್ರಾಮಿಕ ರೋಗಗಳ ಘಟಕವು, ಹಾವೇರಿ ಜಿಲ್ಲಾ ಘಟಕದ ಮತ್ತು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಮೇ. ೨೫ ರಂದು ಭಾನುವಾರ ಹಾವೇರಿಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಾವೇರಿಯ ವೈದ್ಯಕೀಯ ಇತಿಹಾಸದಲ್ಲಿಯೇ ಮೊದಲನೆ ಬಾರಿಗೆ ಆಯೋಜಿಸಿದ್ದ ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟಿಸಿ,   ಡಾ. ರಾಜ್ ಕುಮಾರ್ ಮರೋಳ ಅವರು ಬರೆದಿರುವ  “CRADLETOKINDERGARTEN-A SIMPLE GUIDE TO PARENTS”   ಪುಸ್ತಕದ ಲೋಕಾರ್ಪಣೆಗೊಳಿಸಿ ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ  ನಾಗಪುರದ ಡಾ. ವಸಂತ ಕಲಾತಕರ ಮಾತನಾಡಿ. ಮಾನವ ಸಮಾಜದಲ್ಲಿ ಪ್ರತಿಯೊಂದು ಮಗುವಿನ ಜೀವ ಮಹತ್ವದ್ದಾಗಿದ್ದು, ಅದನ್ನು ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯವಾಗಿರುತ್ತದೆ ಎಂದರು.
ಇಂತಹ ವಿಚಾರ  ಸಂಕಿರಣಗಳ ಮೂಲಕ ವೈದ್ಯರು ಇತ್ತೀಚಿನ ಹೊಸ ತಂತ್ರಜ್ಞಾನದ ಬಳಕೆ ಹಾಗೂ ಸಂಶೋಧನೆಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವುದು ಅತ್ಯವಶ್ಯವಾಗಿದೆ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು. ಇಂತಹ ಸಮಾವೇಶಗಳು ಹಾಗೂ ವಿಚಾರ ಸಂಕಿರಣಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನಡೆಯುತ್ತಿದ್ದವು. ಈಗ ಡಾ. ರಾಜಕುಮಾರ್ ಮರೋಳ ಹಾಗೂ ಹಾವೇರಿಯ ಇತರ ವೈದ್ಯರಿಂದ ಇಂತಹ ಪ್ರಯತ್ನ ಮಾಡಿರುವುದು ಪ್ರಶಂಸನಾರ್ಹ ಎಂದ ಅವರು ಡಾ. ರಾಜಕುಮಾರ್ ಮೊರೋಳ ಅವರು ಸಂಘಟನಾ ಚಾತುರ್ಯ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ತಂದೆ -ತಾಯಂದಿರಿಗೆ ತಿಳುವಳಿಕೆ ಮೂಡಿಸುವ ಕಾಳಜಿ ಬೇರೆಯವರಿಗೆ ಮಾದರಿಯಾಗಲಿ ಎಂದರು.
ಸಮಾವೇಶದಲ್ಲಿ ಮಕ್ಕಳಲ್ಲಿ ಬರುವ ಸಂಕ್ರಾಮಿಕ ರೋಗಗಳು ಹಾಗೂ ಅವುಗಳ ಕಾರಣಗಳು ಮತ್ತು ಪರಿಹಾರೋಪಾಯಗಳ ಕುರಿತು ನುರಿತ ವೈದ್ಯರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಸಮಾವೇಶ ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ತಜ್ಞರಿಗೆ ಮಹತ್ವದ್ದಾಗಿತ್ತು. ಕಾರ್ಯಕ್ರಮದಲ್ಲಿ ಬೇರೆಬೇರೆ ಭಾಗಗಳಿಂದ ೩೦೦ಕ್ಕೂ ಹೆಚ್ಚು ಮಕ್ಕಳ ತಜ್ಞರು ಹಾಗೂ ಬೇರೆ ಬೇರೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೯೦ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.
ಭಾನುವಾರ ಬೆಳಿಗ್ಗೆ ೯:೦೦ಯಿಂದ ಸಂಜೆ ೬ ಗಂಟೆಯವರೆಗೆ ನಡೆದ ವಿಚಾರಗೋಷ್ಠಿಗಳಲ್ಲಿ ಅನೇಕ ಮಕ್ಕಳ ತಜ್ಞ ವೈದ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷತೆ ಹಾಗೂ ಅಚ್ಚು ಕಟ್ಟುತನದ ಬಗ್ಗೆ ಪ್ರಸ್ತಾಪಿಸಿ ಡಾ.ಭಾಸ್ಕರ್,  ಡಾ. ಬಸವರಾಜ್, ಡಾ.ಯೋಗೇಶ್ ಪಾರಿಕ್ ಡಾ.ಆತನು ಭದ್ರ್ರಾ, ಡಾ. ಪ್ರದೀಪ್‌ಕುಮಾರ್ ಎಂ.ವಿ, ಡಾ. ಎಸ್.ವಿ. ಪಾಟೀಲ್ ಮಾತನಾಡಿದರು.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಘಟಕದ ಅಧ್ಯಕ್ಷ ಡಾ. ರಾಜಕುಮಾರ್ ಮರೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಸ್ತಾವಿಕಕವಾಗಿ ಮಾತನಾಡಿ  ಎಲ್ಲರ ಸಹಕಾರದಿಂದ ಇಂದು ಈ ಸಮಾವೇಶ ಮಾಡಲಿಕ್ಕೆ ಸಾಧ್ಯವಾಯಿತು ಎಂದರು.
ಡಾ.ಅಂಜು  ಪ್ರಾರ್ಥಿಸಿದರು. ಡಾ.ಎಸ್.ಎಲ್.ಬಾಲೇಹೊಸೂರು ಸ್ವಾಗತಿಸಿದರು. ಡಾ, ಸುದೀಪ ಪಂಡಿತ್ ವಂದಿಸಿದರು. ಡಾ. ರೇಣುಕಾ ಮರೋಳ, ಡಾ.ಮೃಣಾಲ ಹಾಗೂ ಶ್ರೀಮತಿ ಇಂಚರ ಕಾರ್ಯಕ್ರಮ ನಿರೂಪಿಸಿದರು. ಡಾ. ದೀಪಕ್ ಚಿರಡೋಣಿ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಸೋಯನ್ಸ್, ಡಾ. ಸಿ.ಆರ್. ಬಾಣಾಪುರಮಠ, ಡಾ. ಎಲ್.ಹೆಚ್. ಬಿದರಿ, ಡಾ. ರಘುನಾಥ್ ಸಿ.ಎನ್, ಡಾ. ಸುನಿತಾ ನಾಯಕ್,ಡಾ.ಪಿ.ಆರ್. ಹಾವನೂg, ಡಾ. ಶ್ರೀನಾಥ್ ಮುಗಲಿ, ಡಾ.ಸಿದ್ದು ಚರಕಿ, ಡಾ. ಬಿ.ಆರ್. ಸಾಹುಕಾರ್, ಡಾ. ಅಂಜನ್ ಕುಮಾರ್ ಕೆ.ಟಿ,  ಡಾ. ನವೀನ್ ಸಂಗೂರಮಠ, ಡಾ.ಲಕ್ಷ್ಮೀಪತಿ ಜಿ.ಎಚ್, ಡಾ. ಬಸವರಾಜ ಕೊಳ್ಳಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಜ್ಞ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಬೇರೆ ಬೇರೆ ರಾಜ್ಯಗಳ ಕೊಲ್ಕತ್ತಾ, ಉದಯಪುರ, ನಾಗಪುರ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಸಿರಸಿ, ಹೊನ್ನಾವರ, ಕಾರವಾರ, ಕಲಬುರ್ಗಿ, ವಿಜಯಪುರ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಗದಗ್, ಧಾರವಾಡ ಮೊದಲಾದ ಸ್ಥಳಗಳಿಂದ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಮಗುವಿನ ಜೀವ ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯ: ಡಾ. ವಸಂತ ಕಲಾತಕರ
ಹಾವೇರಿ: ಭಾರತೀಯ ಮಕ್ಕಳ ವೈದ್ಯರ ಸಂಘ ಐಎಪಿ ಕರ್ನಾಟಕ ಶಾಖೆಯ ಸಾಂಕ್ರಾಮಿಕ ರೋಗಗಳ ಘಟಕವು, ಹಾವೇರಿ ಜಿಲ್ಲಾ ಘಟಕದ ಮತ್ತು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಮೇ. ೨೫ ರಂದು ಭಾನುವಾರ ಹಾವೇರಿಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಾವೇರಿಯ ವೈದ್ಯಕೀಯ ಇತಿಹಾಸದಲ್ಲಿಯೇ ಮೊದಲನೆ ಬಾರಿಗೆ ಆಯೋಜಿಸಿದ್ದ ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟಿಸಿ,   ಡಾ. ರಾಜ್ ಕುಮಾರ್ ಮರೋಳ ಅವರು ಬರೆದಿರುವ  “CRADLETOKINDERGARTEN-A SIMPLE GUIDE TO PARENTS”   ಪುಸ್ತಕದ ಲೋಕಾರ್ಪಣೆಗೊಳಿಸಿ ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ  ನಾಗಪುರದ ಡಾ. ವಸಂತ ಕಲಾತಕರ ಮಾತನಾಡಿ. ಮಾನವ ಸಮಾಜದಲ್ಲಿ ಪ್ರತಿಯೊಂದು ಮಗುವಿನ ಜೀವ ಮಹತ್ವದ್ದಾಗಿದ್ದು, ಅದನ್ನು ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯವಾಗಿರುತ್ತದೆ ಎಂದರು.
ಇಂತಹ ವಿಚಾರ  ಸಂಕಿರಣಗಳ ಮೂಲಕ ವೈದ್ಯರು ಇತ್ತೀಚಿನ ಹೊಸ ತಂತ್ರಜ್ಞಾನದ ಬಳಕೆ ಹಾಗೂ ಸಂಶೋಧನೆಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವುದು ಅತ್ಯವಶ್ಯವಾಗಿದೆ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು. ಇಂತಹ ಸಮಾವೇಶಗಳು ಹಾಗೂ ವಿಚಾರ ಸಂಕಿರಣಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನಡೆಯುತ್ತಿದ್ದವು. ಈಗ ಡಾ. ರಾಜಕುಮಾರ್ ಮರೋಳ ಹಾಗೂ ಹಾವೇರಿಯ ಇತರ ವೈದ್ಯರಿಂದ ಇಂತಹ ಪ್ರಯತ್ನ ಮಾಡಿರುವುದು ಪ್ರಶಂಸನಾರ್ಹ ಎಂದ ಅವರು ಡಾ. ರಾಜಕುಮಾರ್ ಮೊರೋಳ ಅವರು ಸಂಘಟನಾ ಚಾತುರ್ಯ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ತಂದೆ -ತಾಯಂದಿರಿಗೆ ತಿಳುವಳಿಕೆ ಮೂಡಿಸುವ ಕಾಳಜಿ ಬೇರೆಯವರಿಗೆ ಮಾದರಿಯಾಗಲಿ ಎಂದರು.
ಸಮಾವೇಶದಲ್ಲಿ ಮಕ್ಕಳಲ್ಲಿ ಬರುವ ಸಂಕ್ರಾಮಿಕ ರೋಗಗಳು ಹಾಗೂ ಅವುಗಳ ಕಾರಣಗಳು ಮತ್ತು ಪರಿಹಾರೋಪಾಯಗಳ ಕುರಿತು ನುರಿತ ವೈದ್ಯರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಸಮಾವೇಶ ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ತಜ್ಞರಿಗೆ ಮಹತ್ವದ್ದಾಗಿತ್ತು. ಕಾರ್ಯಕ್ರಮದಲ್ಲಿ ಬೇರೆಬೇರೆ ಭಾಗಗಳಿಂದ ೩೦೦ಕ್ಕೂ ಹೆಚ್ಚು ಮಕ್ಕಳ ತಜ್ಞರು ಹಾಗೂ ಬೇರೆ ಬೇರೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೯೦ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.
ಭಾನುವಾರ ಬೆಳಿಗ್ಗೆ ೯:೦೦ಯಿಂದ ಸಂಜೆ ೬ ಗಂಟೆಯವರೆಗೆ ನಡೆದ ವಿಚಾರಗೋಷ್ಠಿಗಳಲ್ಲಿ ಅನೇಕ ಮಕ್ಕಳ ತಜ್ಞ ವೈದ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷತೆ ಹಾಗೂ ಅಚ್ಚು ಕಟ್ಟುತನದ ಬಗ್ಗೆ ಪ್ರಸ್ತಾಪಿಸಿ ಡಾ.ಭಾಸ್ಕರ್,  ಡಾ. ಬಸವರಾಜ್, ಡಾ.ಯೋಗೇಶ್ ಪಾರಿಕ್ ಡಾ.ಆತನು ಭದ್ರ್ರಾ, ಡಾ. ಪ್ರದೀಪ್‌ಕುಮಾರ್ ಎಂ.ವಿ, ಡಾ. ಎಸ್.ವಿ. ಪಾಟೀಲ್ ಮಾತನಾಡಿದರು.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಘಟಕದ ಅಧ್ಯಕ್ಷ ಡಾ. ರಾಜಕುಮಾರ್ ಮರೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಸ್ತಾವಿಕಕವಾಗಿ ಮಾತನಾಡಿ  ಎಲ್ಲರ ಸಹಕಾರದಿಂದ ಇಂದು ಈ ಸಮಾವೇಶ ಮಾಡಲಿಕ್ಕೆ ಸಾಧ್ಯವಾಯಿತು ಎಂದರು.
ಡಾ.ಅಂಜು  ಪ್ರಾರ್ಥಿಸಿದರು. ಡಾ.ಎಸ್.ಎಲ್.ಬಾಲೇಹೊಸೂರು ಸ್ವಾಗತಿಸಿದರು. ಡಾ, ಸುದೀಪ ಪಂಡಿತ್ ವಂದಿಸಿದರು. ಡಾ. ರೇಣುಕಾ ಮರೋಳ, ಡಾ.ಮೃಣಾಲ ಹಾಗೂ ಶ್ರೀಮತಿ ಇಂಚರ ಕಾರ್ಯಕ್ರಮ ನಿರೂಪಿಸಿದರು. ಡಾ. ದೀಪಕ್ ಚಿರಡೋಣಿ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಸೋಯನ್ಸ್, ಡಾ. ಸಿ.ಆರ್. ಬಾಣಾಪುರಮಠ, ಡಾ. ಎಲ್.ಹೆಚ್. ಬಿದರಿ, ಡಾ. ರಘುನಾಥ್ ಸಿ.ಎನ್, ಡಾ. ಸುನಿತಾ ನಾಯಕ್,ಡಾ.ಪಿ.ಆರ್. ಹಾವನೂg, ಡಾ. ಶ್ರೀನಾಥ್ ಮುಗಲಿ, ಡಾ.ಸಿದ್ದು ಚರಕಿ, ಡಾ. ಬಿ.ಆರ್. ಸಾಹುಕಾರ್, ಡಾ. ಅಂಜನ್ ಕುಮಾರ್ ಕೆ.ಟಿ,  ಡಾ. ನವೀನ್ ಸಂಗೂರಮಠ, ಡಾ.ಲಕ್ಷ್ಮೀಪತಿ ಜಿ.ಎಚ್, ಡಾ. ಬಸವರಾಜ ಕೊಳ್ಳಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಜ್ಞ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಬೇರೆ ಬೇರೆ ರಾಜ್ಯಗಳ ಕೊಲ್ಕತ್ತಾ, ಉದಯಪುರ, ನಾಗಪುರ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಸಿರಸಿ, ಹೊನ್ನಾವರ, ಕಾರವಾರ, ಕಲಬುರ್ಗಿ, ವಿಜಯಪುರ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಗದಗ್, ಧಾರವಾಡ ಮೊದಲಾದ ಸ್ಥಳಗಳಿಂದ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...