ಮಣ್ಣಿನ ಲಾರಿ ಬಿಡುಗಡೆಗೆ ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಹನುಮಂತ ಶಿರಹಟ್ಟಿ ಬಂಧನ
ಹಾವೇರಿ: ಮಣ್ಣಿನ ಟಿಪ್ಪರ್ಲಾರಿಗಳ ಬಿಡುಗಡೆಗೆ ಶುಕ್ರವಾರ ಲಂಚ ಸ್ವೀಕರಿತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಗೆ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ ಬಲೆಗೆ ಬಿದ್ದಿದ್ದು, ಈವೇಳೆ ತಹಶೀಲ್ದಾರ ವಾಹನ ಚಾಲಕನನ್ನು ಸಹ ಲೋಕಾಯುಕ್ತರು ಬಂಧಿಸಿದ್ದಾರೆ.
ರಾಣೆಬೆನ್ನೂರಿನ ಮಂಜುನಾಥ ನಾಗಪ್ಪ ವಾಲೀಕಾರ ತಮ್ಮ ಟಿಪ್ಪರ್ ಲಾರಿಗಳಲ್ಲಿ ಗಂಗಾಪುರದಿಂದ ರಾಣೆಬೆನ್ನೂರಿನ ಶನೈಶ್ವರ ಮಠಕ್ಕೆ ಮಣ್ಣನ್ನು ಸಾಗಿಸುವಾಗ ತಹಶೀಲ್ದಾರ ಹನುಮಂತ ಶಿರಹಟ್ಟಿ ಅವರು ಲಾರಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಟಿಪ್ಪರ್ ಲಾರಿ ಡ್ರೈವರ್ ಮೊಬೈಲ್ ಹಾಗೂ ಗಾಡಿ ಕೀಲಿಗಳನ್ನು ಕಸಿದುಕೊಂಡು, ರೂ ೧೦,೦೦೦/- ಗಳಂತೆ ಎರಡೂ ವಾಹನಗಳಿಗೂ ರೂ. ೨೦,೦೦೦/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಲಾರಿ ಚಾಲಕ ಹಾಗೂ ಮಾಲಿಕ ಚೌಕಾಸಿ ಮಾಡಿದ ನಂತರ ರೂ ೧೨,೦೦೦/- ಗಳಿಗೆ ಒಪ್ಪಿ ಜ.೦೫ ರಂದು ಡ್ರೈವರ್ ಮಾಲತೇಶ ಮಡಿವಾಳರ್ ಮೂಲಕ ರೂ ೧೨,೦೦೦/- ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಆಂಜನೇಯ ಎನ್ ಎಚ್, ಮಂಜುನಾಥ ಪಂಡಿತ್ ಪಿ ಎನ್, ಸಿಬ್ಬಂದಿ ಸಿ.ಎಮ್. ಬಾರ್ಕಿ, ಎಮ್.ಕೆ.ನದಾಫ, ಟಿ.ಇ. ತಿರುಮಲೆ, ಬಿ.ಎಮ್. ಕರ್ಜಗಿ, ಎಮ್.ಕೆ. ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಬಿ.ಎಸ್. ಸಂಕಣ್ಣನವರ, ಎನ್.ಬಿ. ಪಾಟೀಲ್, ಎ.ಜಿ. ಶೆಟ್ಟರ್, ಎಮ್.ಸಿ.ಅರಸೀಕೆರೆ, ಎಮ್.ಎಸ್. ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸದರಿ ಆರೋಪಿತರನ್ನು ರಾಣೆಬೆನ್ನೂರ ನಗರದ ವೀರಭದ್ರೇಶ್ವರ ಲೇಔಟ್ನಲ್ಲಿರುವ ತಹಶೀಲ್ದಾರ ವಾಸ ಇರುವ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.
ಮಣ್ಣಿನ ಲಾರಿ ಬಿಡುಗಡೆಗೆ ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಹನುಮಂತ ಶಿರಹಟ್ಟಿ ಬಂಧನ
Date:
ಮಣ್ಣಿನ ಲಾರಿ ಬಿಡುಗಡೆಗೆ ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಹನುಮಂತ ಶಿರಹಟ್ಟಿ ಬಂಧನ
ಹಾವೇರಿ: ಮಣ್ಣಿನ ಟಿಪ್ಪರ್ಲಾರಿಗಳ ಬಿಡುಗಡೆಗೆ ಶುಕ್ರವಾರ ಲಂಚ ಸ್ವೀಕರಿತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಗೆ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ ಬಲೆಗೆ ಬಿದ್ದಿದ್ದು, ಈವೇಳೆ ತಹಶೀಲ್ದಾರ ವಾಹನ ಚಾಲಕನನ್ನು ಸಹ ಲೋಕಾಯುಕ್ತರು ಬಂಧಿಸಿದ್ದಾರೆ.
ರಾಣೆಬೆನ್ನೂರಿನ ಮಂಜುನಾಥ ನಾಗಪ್ಪ ವಾಲೀಕಾರ ತಮ್ಮ ಟಿಪ್ಪರ್ ಲಾರಿಗಳಲ್ಲಿ ಗಂಗಾಪುರದಿಂದ ರಾಣೆಬೆನ್ನೂರಿನ ಶನೈಶ್ವರ ಮಠಕ್ಕೆ ಮಣ್ಣನ್ನು ಸಾಗಿಸುವಾಗ ತಹಶೀಲ್ದಾರ ಹನುಮಂತ ಶಿರಹಟ್ಟಿ ಅವರು ಲಾರಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಟಿಪ್ಪರ್ ಲಾರಿ ಡ್ರೈವರ್ ಮೊಬೈಲ್ ಹಾಗೂ ಗಾಡಿ ಕೀಲಿಗಳನ್ನು ಕಸಿದುಕೊಂಡು, ರೂ ೧೦,೦೦೦/- ಗಳಂತೆ ಎರಡೂ ವಾಹನಗಳಿಗೂ ರೂ. ೨೦,೦೦೦/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಲಾರಿ ಚಾಲಕ ಹಾಗೂ ಮಾಲಿಕ ಚೌಕಾಸಿ ಮಾಡಿದ ನಂತರ ರೂ ೧೨,೦೦೦/- ಗಳಿಗೆ ಒಪ್ಪಿ ಜ.೦೫ ರಂದು ಡ್ರೈವರ್ ಮಾಲತೇಶ ಮಡಿವಾಳರ್ ಮೂಲಕ ರೂ ೧೨,೦೦೦/- ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಆಂಜನೇಯ ಎನ್ ಎಚ್, ಮಂಜುನಾಥ ಪಂಡಿತ್ ಪಿ ಎನ್, ಸಿಬ್ಬಂದಿ ಸಿ.ಎಮ್. ಬಾರ್ಕಿ, ಎಮ್.ಕೆ.ನದಾಫ, ಟಿ.ಇ. ತಿರುಮಲೆ, ಬಿ.ಎಮ್. ಕರ್ಜಗಿ, ಎಮ್.ಕೆ. ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಬಿ.ಎಸ್. ಸಂಕಣ್ಣನವರ, ಎನ್.ಬಿ. ಪಾಟೀಲ್, ಎ.ಜಿ. ಶೆಟ್ಟರ್, ಎಮ್.ಸಿ.ಅರಸೀಕೆರೆ, ಎಮ್.ಎಸ್. ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸದರಿ ಆರೋಪಿತರನ್ನು ರಾಣೆಬೆನ್ನೂರ ನಗರದ ವೀರಭದ್ರೇಶ್ವರ ಲೇಔಟ್ನಲ್ಲಿರುವ ತಹಶೀಲ್ದಾರ ವಾಸ ಇರುವ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.