ಮಾಜಿ ಶಾಸಕ ನೆಹರು ಓಲೇಕಾರ ಕಾಂಗ್ರೆಸ್ ಪಕ್ಷ ಸೇರ್ಪಡೆ, ಸಿಎಂ ಸೇರಿದಂತೆ ಕಾಂಗ್ರೆಸ್ ಪ್ರಮುಖರ ಜೊತೆ ಅಂತಿಮ ಹಂತದ ಮಾತುಕತೆ , ಸುರಪುರ ದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಓಲೇಕಾರ
ಹಾವೇರಿ:ಮಾಜಿ ಶಾಸಕ ನೆಹರು ಓಲೇಕಾರ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಬಹಳ ದಿನಗಳಿಂದ ಹರಿದಾಡುತ್ತಿದ್ದ ಉಹಾಪುಹದ ಸುದ್ದಿಗೆ ಮೇ.೨ರ ಬುಧವಾರ ಅಂತಿಮ ತೆರೆ ಬಿದ್ದಿದೆ. ಮಾಜಿ ಶಾಸಕ ಓಲೇಕಾರ ಅವರು ಬುಧವಾರ ಹೊಸಪೇಟೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಜೊತೆಗೆ ಓಲೇಕಾರ ಅವರು
ಹೊಸಪೇಟೆ ರೆಸಾರ್ಟ್ ಒಂದರಲ್ಲಿ ಮಾತುಕತೆ ನಡೆಸಿದರು. ಈವೇಳೆ ನೆಹರು ಓಲೇಕಾರ ಅವರು ಕಾಂಗ್ರೆಸ್ ಪಕ್ಷ ಸೇರಲು ಸಿಎಂ ಸೇರಿದಂತೆ ಅನೇಕ ಪ್ರಮುಖರು ಸಹಮತ ವ್ಯಕ್ತಪಡಿದಿದರೆಂದು ತಿಳಿದು ಬಂದಿದೆ.
ಇಬೆಳವಣಿಗೆ ಇಂದಾಗಿ
ಅನೇಕ ಕಾರ್ಯಕರ್ತರೊಂದಿಗೆ ಮಾಜಿ ಶಾಸಕರಾದ ನೆಹರು ಓಲೇಕಾರ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದು ಖಚಿತ ವಾಗಿದೆ.
ಸುರಪುರದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಓಲೇಕಾರ ಅವರನ್ನು ಸಿಎಂ ಸುರಪುರ ಕ್ಕೆ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಹೊಸಪೇಟೆ ನಗರದ ಕಮಲಾಪೂರದ ಅರೇಂಜ್ ಕೌಂಟಿ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೊಂದಿಗೆ ನಡೆದ ಮಾತುಕತೆ ಯ ವೇಳೆ ಬ್ಯಾಡಗಿ ಶಾಸಕರಾದ ಬಸವರಾಜ ಶಿವಣ್ಣನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿಅವರ ಜೊತೆಗೆ ಮಾಜಿ ಶಾಸಕರಾದ ನೆಹರು ಓಲೇಕಾರ ರವರು ಸುದೀರ್ಘ ಮಾತುಕತೆ ನಡೆಸಿದರು.ಲೋಕಸಭಾ ಚುನಾವಣೆ ಗೆಇನ್ನು ಆರುದಿಗಳು ಇರುವಾಗ ಬಿಜೆಪಿ ತೊರೆದು ನೆಹರು ಓಲೇಕಾರ ಅವರು ಕಾಂಗ್ರೆಸ್ ಸೇರ್ಪಡೆ ಯಾಗುತ್ತಿರುವುದು ಕ್ಷೇತ್ರದ ಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಕೆಲವರು ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ವರವಾಗಬಹುದು ರಂದು ವಿಶ್ಲೇಷಣೆ ಮಾಡುತ್ತಿದ್ದಾರೆ.
ಹೊಸಪೇಟೆ ಯಲ್ಲಿ ನಡೆದ ಬೆಳವಣಿಗೆಗಳಿಗೆ ನೆಹರು ಓಲೇಕಾರ ಅವರ ಬೆಂಬಲಿಗರಾದ
,ಶ್ರೀಕಾಂತ ಪೂಜಾರ, ಸಂಗಮೇಶ ಸುಳ್ಳಳ್ಳಿ, ಶಿವರಾಜ ಮತ್ತಿಹಳ್ಳಿ ಹಾಗೂ ಹನಮಂತಪ್ಪ ಶರಸೂರಿ, ಕೃಷ್ಣಾ ಜವಳಿ, ಹನಮಂತಪ್ಪ ಕುಮ್ಮಣ್ಣನವರ, ಮಂಜುನಾಥ ಇಟಗಿ, ಶಂಬು ಕಳಸದ, ರವಿ ಗೊಡ್ಡೆಮ್ಮಿ, ದರ್ಶನ ಮಿರ್ಜಕರ್, ಸುಮಂತ ಮಲ್ಲನಗೌಡ್ರ ಮತ್ತಿತರರು ಸಾಕ್ಷಿಯಾಗಿದ್ದಾರೆ.