ಮಾರಕಾಸ್ತ್ರಗಳಿಂದ ಮೂವರ ಕೊಲೆ, ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಘಟನೆ
ಹಾವೇರಿ: ಮಾರಕಾಸ್ತ್ರಗಳಿಂದ ಮೂವರನ್ನು ಭೀಕರವಾಗಿ ಕೊಲೆಮಾಡಿರುವ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ ಪರಿವಾರವನ್ನ ತಮ್ಮ ಕೊಲೆಗೈದಿರೋ ಶಂಕೆವ್ಯಕ್ತವಾಗಿದೆ.
ಕೊಲೆಯಾದ ದುರ್ದೈವಿಗಳನ್ನು ಗೀತಾ ಹೊನಗೌಡ ಮರಿಗೌಡ್ರ, (೩೫), ಅಕುಲ್ (೧೦), ಅಂಕಿತಾ (೬) ವರ್ಷ ಎಂದು ತಿಳಿದು ಬಂದಿದೆ. ಕೊಲೆಮಾಡಿರುವ ಆರೋಪಿ ಕುಮಾರಮರಿಗೌಡ್ರ ಸುಮಾರು ೩೫ ವರ್ಷ ಎಂದು ತಿಳಿದು ಬಂದಿದೆ.
ಆರೋಪಿ ಕುಮಾರ್ಗೌಡ್ ತನ್ನ ಸ್ವಂತ ಅಣ್ಣ ಹೊನ್ನೇಗೌಡರ ಹೆಂಡತಿ ಮತ್ತು ಮಕ್ಕಳ ಹತ್ಯೆಗೈದು ಪರಾರಿಯಾಗಿದ್ದಾನೆ. ಕೊಲೆಯಾದ ಗೀತಾ ಅವರ ಗಂಡ ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆಂತರಿಕ ಜಗಳ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸ್ಥಳಕ್ಕೆ ಸಿಪಿಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.