ಮುಸ್ಲಿಂರಿಗೆ ೨ಬಿ ಮೀಸಲಾತಿ ಶೇ.೮ ಹೆಚ್ಚಳಕ್ಕೆ ಬಾಬುಸಾಬ ಮೋಮಿನಗಾರ ಒತ್ತಾಯ

Date:

ಮುಸ್ಲಿಂರಿಗೆ ೨ಬಿ ಮೀಸಲಾತಿ ಶೇ.೮ ಹೆಚ್ಚಳಕ್ಕೆ ಬಾಬುಸಾಬ ಮೋಮಿನಗಾರ ಒತ್ತಾಯ
ಹಾವೇರಿ: ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂರಿಗೆ ಕೊಡುತ್ತಿರುವ ೨ಬಿ ಮೀಸಲಾತಿಯನ್ನು ಸ್ಥಗಿತಗೊಳಿಸದೇ ಮುಂದುವರೆಸಬೇಕು. ೪% ರಿಂದ ೮%ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಮುಸ್ಲಿಂರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ದಲ್ಲಿ ಅವಕಾಶ ನೀಡುವ ಮೂಲಕ ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಒಳಮೀಸಲಾತಿ ನೀಡುವಂತೆ ಮುಸ್ಲಿಂ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಡಾ. ಟಿಪ್ಪುಸಾಬ ಕಲಕೋಟಿ, ಪ್ರಧಾನ ಕಾರ್ಯದರ್ಶಿ ಬಾಬುಸಾಬ ಮೋಮಿನಗಾರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಅವರಿಗೆ ಮನವಿ ಸಲ್ಲಿಸಿರುವ ಅವರು ರಾಜಕೀಯವಾಗಿ ೨ಬಿ ಯಲ್ಲಿ “ಅ” ವರ್ಗದ ಪ್ರಮಾಣ ಪತ್ರದಲ್ಲಿ ಹತ್ತಾರು ಜಾತಿಗಳು ಬರುವುದರಿಂದ ಮುಸ್ಲಿಂರಿಗೆ ಬಹಳ ಅನ್ಯಾಯವಾಗುತ್ತದೆ. ಇದರಿಂದ ಒಳಮೀಸಲಾತಿ ನೀಡಿದರೆ ಮುಸ್ಲಿಂರಿಗೆ ಅವಕಾಶವಾಗುತ್ತದೆ ಎಂದಿದ್ದಾರೆ.
ಉರ್ದು ಶಾಲೆಗಳಿಗೆ ಶಿಕ್ಷಕರ ಕೊರತೆ ನಿಗಿಸಬೇಕು, ಹೊಸ ಕಟ್ಟಡ, ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ಉರ್ದು ಶಾಲೆಗಳೆ ಇರುವುದಿಲ್ಲ. ಜಿಲ್ಲೆಯಲ್ಲಿ ಉರ್ದು ಜ್ಯೂನಿಯರ್ ಕಾಲೇಜು, ಡಿಗ್ರಿ ಕಾಲೇಜುಗಳು ಇಲ್ಲದೇ ಮುಸ್ಲಿಂ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದಿಂದ ತೊಂದರೆಯಾಗಿ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕು.
ಪೇಶ ಇಮಾಮ ಮೌಜನ್ನಗಳ ವೇತನ ಹೆಚ್ಚಳಮಾಡಬೇಕು. ಜಿಲ್ಲೆಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಖಬರಸ್ಥಾನಗಳಿಗೆ ಜಾಗೆ ಇಲ್ಲದೇ ಶವ ಸಂಸ್ಕಾರ ಮಾಡಲು ಮುಸ್ಲಿಂರಿಗೆ ಬಹಳ ತೊಂದರೆಯಾಗಿದೆ, ಬೇಗನೆ ಸರ್ಕಾರದಿಂದ ಜಾಗೆ ಮಂಜೂರು ಮಾಡಬೇಕು. ಮುಸ್ಲಿಂರಿಗೆ ಸರ್ಕಾರದಿಂದ ಬರುವ ಹತ್ತಾರು ಸೌಲಭ್ಯಗಳನ್ನು ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಅಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಐ.ಎ ಹವಾಲ್ದಾರ, ಖಲೀಲಅಹ್ಮದ ಖಾಜಿ, ನಜೀರಸಾಬ ಸವಣೂರ, ನಾಸೀರಖಾನ ಪಠಾಣ, ಎಮ್.ಎಮ್ ಮುಲ್ಲಾ. ಫಯಾಜಅಹ್ಮದ ಮುಲ್ಲಾ , ಮಲೀಕರೆಹಾನ ಶಿಗ್ಗಾಂವ್, ಮಲೀಕಸಾಬ ಬಾಣಿ, ಶಿರಿನತಾಜ್ ಶೇಖ್, ಎ.ಎಮ್ ಪಟವೇಗಾರ, ಎಮ್.ಎ ಕಾಲೇಬಾಗ, ಅಮೀರಜಾನ ಬೇಪಾರಿ, ರಿಯಾಜಅಹ್ಮದ ಶಿಡಗನಾಳ, ಮೋಸಿನ ಮುಲ್ಲಾ, ಖುತುಬುದ್ದೀನ ಖಾಜಿ, ಗೌಸುಸಾಬ ಆಲದಗೇರಿ, ಬಾಬುಸಾಬ ಮುಗದೂರ, ಶಾಹೀದ ದೇವಿಹೊಸುರ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಮುಸ್ಲಿಂರಿಗೆ ೨ಬಿ ಮೀಸಲಾತಿ ಶೇ.೮ ಹೆಚ್ಚಳಕ್ಕೆ ಬಾಬುಸಾಬ ಮೋಮಿನಗಾರ ಒತ್ತಾಯ
ಹಾವೇರಿ: ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂರಿಗೆ ಕೊಡುತ್ತಿರುವ ೨ಬಿ ಮೀಸಲಾತಿಯನ್ನು ಸ್ಥಗಿತಗೊಳಿಸದೇ ಮುಂದುವರೆಸಬೇಕು. ೪% ರಿಂದ ೮%ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಮುಸ್ಲಿಂರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ದಲ್ಲಿ ಅವಕಾಶ ನೀಡುವ ಮೂಲಕ ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಒಳಮೀಸಲಾತಿ ನೀಡುವಂತೆ ಮುಸ್ಲಿಂ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಡಾ. ಟಿಪ್ಪುಸಾಬ ಕಲಕೋಟಿ, ಪ್ರಧಾನ ಕಾರ್ಯದರ್ಶಿ ಬಾಬುಸಾಬ ಮೋಮಿನಗಾರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಅವರಿಗೆ ಮನವಿ ಸಲ್ಲಿಸಿರುವ ಅವರು ರಾಜಕೀಯವಾಗಿ ೨ಬಿ ಯಲ್ಲಿ “ಅ” ವರ್ಗದ ಪ್ರಮಾಣ ಪತ್ರದಲ್ಲಿ ಹತ್ತಾರು ಜಾತಿಗಳು ಬರುವುದರಿಂದ ಮುಸ್ಲಿಂರಿಗೆ ಬಹಳ ಅನ್ಯಾಯವಾಗುತ್ತದೆ. ಇದರಿಂದ ಒಳಮೀಸಲಾತಿ ನೀಡಿದರೆ ಮುಸ್ಲಿಂರಿಗೆ ಅವಕಾಶವಾಗುತ್ತದೆ ಎಂದಿದ್ದಾರೆ.
ಉರ್ದು ಶಾಲೆಗಳಿಗೆ ಶಿಕ್ಷಕರ ಕೊರತೆ ನಿಗಿಸಬೇಕು, ಹೊಸ ಕಟ್ಟಡ, ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ಉರ್ದು ಶಾಲೆಗಳೆ ಇರುವುದಿಲ್ಲ. ಜಿಲ್ಲೆಯಲ್ಲಿ ಉರ್ದು ಜ್ಯೂನಿಯರ್ ಕಾಲೇಜು, ಡಿಗ್ರಿ ಕಾಲೇಜುಗಳು ಇಲ್ಲದೇ ಮುಸ್ಲಿಂ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದಿಂದ ತೊಂದರೆಯಾಗಿ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕು.
ಪೇಶ ಇಮಾಮ ಮೌಜನ್ನಗಳ ವೇತನ ಹೆಚ್ಚಳಮಾಡಬೇಕು. ಜಿಲ್ಲೆಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಖಬರಸ್ಥಾನಗಳಿಗೆ ಜಾಗೆ ಇಲ್ಲದೇ ಶವ ಸಂಸ್ಕಾರ ಮಾಡಲು ಮುಸ್ಲಿಂರಿಗೆ ಬಹಳ ತೊಂದರೆಯಾಗಿದೆ, ಬೇಗನೆ ಸರ್ಕಾರದಿಂದ ಜಾಗೆ ಮಂಜೂರು ಮಾಡಬೇಕು. ಮುಸ್ಲಿಂರಿಗೆ ಸರ್ಕಾರದಿಂದ ಬರುವ ಹತ್ತಾರು ಸೌಲಭ್ಯಗಳನ್ನು ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಅಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಐ.ಎ ಹವಾಲ್ದಾರ, ಖಲೀಲಅಹ್ಮದ ಖಾಜಿ, ನಜೀರಸಾಬ ಸವಣೂರ, ನಾಸೀರಖಾನ ಪಠಾಣ, ಎಮ್.ಎಮ್ ಮುಲ್ಲಾ. ಫಯಾಜಅಹ್ಮದ ಮುಲ್ಲಾ , ಮಲೀಕರೆಹಾನ ಶಿಗ್ಗಾಂವ್, ಮಲೀಕಸಾಬ ಬಾಣಿ, ಶಿರಿನತಾಜ್ ಶೇಖ್, ಎ.ಎಮ್ ಪಟವೇಗಾರ, ಎಮ್.ಎ ಕಾಲೇಬಾಗ, ಅಮೀರಜಾನ ಬೇಪಾರಿ, ರಿಯಾಜಅಹ್ಮದ ಶಿಡಗನಾಳ, ಮೋಸಿನ ಮುಲ್ಲಾ, ಖುತುಬುದ್ದೀನ ಖಾಜಿ, ಗೌಸುಸಾಬ ಆಲದಗೇರಿ, ಬಾಬುಸಾಬ ಮುಗದೂರ, ಶಾಹೀದ ದೇವಿಹೊಸುರ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...