ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

Date:

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!
ಹಾವೇರಿ: ದಾಸರು, ಶರಣರು, ಭಾವೈಕ್ಷತೆಯ ಹರಿಕಾರರನ್ನು ಹೊಂದಿರುವ ಹಾವೇರಿಜಿಲ್ಲೆ ಸಾಹಿತ್ಯ, ಸಂಸ್ಕ್ರತಿಗೆ ರಾಜ್ಯದಲ್ಲಿಯೇ ತನ್ನದೇ ಆದ ಸ್ಥಾನ-ಮಾನ ಹೊಂದಿದ್ದು, ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹಾವೇರಿಜಿಲ್ಲೆಯಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೇ ಎತ್ತ ಸಾಗುತ್ತಿದೆ ಹಾವೇರಿಜಿಲ್ಲೆ? ಎನ್ನುವ ಭಯ ಕಾಡುತ್ತದೆ. ಯಾಲಕ್ಕಿ ಕಂಪಿನ ನಗರ ಎನ್ನುವ ಖ್ಯಾತಿಯ ಹಾವೇರಿಗೆ ರಕ್ತದವಾಸನೆ ನಂಟು ಅಂಟುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಹಾವೇರಿಯಲ್ಲಿ ರೌಡಿಗಳ, ಪುಡಿ ರೌಡಿಗಳ ಅಟ್ಟಹಾಸ, ಅಮಾಯಕರ ಮೇಲೆ ದೌರ್ಜನ್ಯ, ವಸೂಲಿ ದಂಧೆ ಜೋರಾಗಿದ್ದು, ಎಲ್ಲಂದರಲ್ಲಿ ನಡೆಯುತ್ತಿರುವ ಇಸ್ಟೆಟ್ ಕ್ಲಬ್‌ಗಳು, ರಾಜರೋಷವಾಗಿ ಅನಧಿಕೃತವಾಗಿ ನಡೆಯುತ್ತಿರುವ ಬಾರ್‌ಗಳು, ಎಲ್ಲಂದರಲ್ಲಿ ಎಣ್ಣೆ ಗಮಲು, ಗಾಂಜಾ ಗಮಲು, ಬಡ್ಡಿ ಮಾಫಿಯಾ, ಎನ್.ಜಿ.ಓ ಮಾಫಿಯಾ, ಮೀಟರ್ ಬಡ್ಡಿ ದಂಧೆ, ಕ್ರಿಕೆಟ್ ಬೆಟ್ಟಿಂಗ್, ಓಸಿ, ಕಳವು, ರಿಯಲ್‌ಎಸ್ಟೆಟ್ ದಂಧೆ, ಏಜೆಂಟರ್ ಹಾವಳಿ, ಹೀಗೆ ಒಂದೇ ಎರಡೆ ಹಲವಾರು ಕಾನೂನು ಭಾಹೀರ ಕೃತ್ಯಗಳು ನಡೆಯುತ್ತಿವೆ. ನಿತ್ಯ ಹೊಡೆದಾಟ, ಪುಂಡಾಟಿಕೆಗಳು ಸಾಮಾನ್ಯ ಎನ್ನುವಂತಾಗಿದೆ.
ಇತ್ತೀಚೆಗೆ ನಗರದಲ್ಲಿ ಬ್ಯಾನರ್ ತೆರವು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೌರಕಾರ್ಮಿಕರ ಮೇಲೆ ಪುಡಿ ರೌಡಿ ಗುಂಪು ಅದಾವ ಪರಿ ಹಲ್ಲೆ ಮಾಡಿದೆ ಎಂದರೆ, ಆತನನನ್ನು ಬ್ಯಾಟ್, ಡೊಣ್ಣೆಗಳಿಂದ ಥಳಿಸಲಾಗಿದ್ದು, ಬಿಯರ್ ಬಾಟಲಿಯಿಂದ ಆತನ ತಲೆಗೆ ಹೊಡೆಯಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ಹದಿನಾರು ಹೊಲಿಗೆ ಹಾಕಲಾಗಿದ್ದು, ಆತ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇನ್ನೂ ಹಲವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪರಾಗಿದ್ದಾರೆ. ಈರೀತಿಯ ಹಲ್ಲೆ ನಡೆಸುವ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಾಕಿ ಜನರನ್ನು ಹೆದರಿಸುವ ತಂತ್ರ ಇವರದ್ದಂತೆ.
ಹೊರ ರಾಜ್ಯದಿಂದ ಕೆಲವರು ಹಾವೇರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಇವರು ನಿತ್ಯ ಸಿಹಿ ತಿನಿಸುಗಳನ್ನು ತಯಾರಿಸಿ ಬೇಕರಿಗಳಿಗೆ, ಹುಟ್ಟು ಹಬ್ಬು, ವಿವಾಹ ಮಹೋತ್ಸವ ಸೇರಿದಂತೆ ಶುಭ ಕಾರ್ಯಗಳಿಗೆ ಸಿಹಿ ತಿನಿಸುಗಳನ್ನು ತಯಾರಿಸಿ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಾರೆ. ಸ್ವಲ್ಪಮಟ್ಟಿಗೆ ಆದಾಯವನ್ನು ಮಾಡುತ್ತಿದ್ದಾರೆ. ಇವರ ಮೇಲೆ ಈ ಪುಡಿರೌಡಿಗಳ ಗ್ಯಾಂಗ್ ದಾಳಿಮಾಡಿ, ಇವರು ತಯಾರಿಸಿದ ಸಿಹಿ ತಿನಿಸಿಗೆ ಸತ್ತ ಹಲ್ಲಿಯನ್ನು ಏಸೆದು ಬೆದರಿಕೆ ಹಾಕಿ ಇವರಿಂದ ಲಕ್ಷಾಂತರ ಹಣವನ್ನು ಪಡೆದಿದೆ. ರಸ್ತೆ ಬದಿ ಮರಾಟ ಮಾಡುವ ಮಸಾಲ ಚಾಟ್ಸ್‌ಗಳಿಗೆ ನುಗ್ಗುವ ಈ ಗುಂಪು ತಿನಿಸುಗಳಲ್ಲಿ ಹೂಳಗಳನ್ನು ಹಾಕಿ ಕಾಲು ಕೆದರಿ ಜಗಳ ಮಾಡಿ ಬೆದರಿಕೆ ಹಾಕಿ ಹಲ್ಲೆ ನಡೆಸಿ ಹಣ ಸುಲುಗೆ ಮಾಡಿದೆ.
ಇನ್ನೊಂದು ಘಟನೆಯಲ್ಲಿ ಈ ಪುಡಿರೌಡಿಗಳ ಗ್ಯಾಂಗ್ ಮಾರವಾಡಿಗಳ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿಸುತ್ತಾರೆ. ಅದಕ್ಕೆ ಅಂಗಡಿಯವರು ಜಿಎಸ್‌ಟಿ ಬಿಲ್ ನೀಡದೇ ಬೇರೆ ಬಿಲ್ಲ ನೀಡಿದ ಕಾರಣಕ್ಕೆ ಹತ್ತಾರು ಅಂಗಡಿಯವರನ್ನು ಮನ ಬಂದಂತೆ ಥಳಿಸಿದ್ದಾರೆ. ಹಲ್ಲೆ ಮಾಡುವ ವಿಡಿಯೋವನ್ನು ರಾಜಾರೋಷವಾಗಿ ಜಾಲತಾಣದಲ್ಲಿ ಈ ಗ್ಯಾಂಗ್ ಹಾಕುತ್ತಾರೆ. ಇವರು ಮಾಡುವ ಹಲ್ಲೆಯನ್ನು ನೋಡಿ ಬೇರೆಯವರು ಇವರು ಕೇಳಿದ ತಕ್ಷಣ ಹಣ ನೀಡಬೇಕೆನ್ನುವುದು ಇವರ ವರಸೆ, ಮೇಲಾಗಿ ಇವರು ಬೆಂಗಳೂರು ಮಾದರಿಯಲ್ಲಿ ಡಾನ್‌ಗಳಾಬೇಕೆನ್ನುವುದು ಇವರ ಅಭಿಲಾಷೆಯಂತೆ. ಈ ಗುಂಪಿಗೆ ಡಾನ್ ಬೇರೆ ಇದ್ದಾರಂತೆ.
ಇನ್ನೊಂದು ಘಟನೆಯಲ್ಲಿ ಕೆಲವರು   ಯೂಟ್ಯೂಬ್ ಚಾನಲ್ ನವರೆಂದು, ಇನ್ನು ಕೆಲವರು ವರದಿಗಾರರೆಂದು ಏಕಾ ಏಕಿ ಹೋಟೆಲ್‌ಗಳ ಅಡುಗೆ ಮನೆಗಳಿಗೆ ದಾಳಿ ನಡೆಸಿ ಅಲ್ಲಿನ ಕೊಳಕನ್ನು ಚಿತ್ರೀಸಿಕೊಂಡು ಪ್ರಸಾರ ಮಾಡುವುದಾಗಿ ಹೋಟೆಲ್‌ನವರನ್ನು ಬೆದರಿಸಿ ಅವರಿಂದ ಹಪ್ತಾವಸೂಲಿ ಮಾಡಿದ್ದಾರಂತೆ. ಮತ್ತೊಂದು ಘಟನೆಯಲ್ಲಿ ಇಂತದೇ ಒಂದು ಗುಂಪು ಅನಧಿಕೃತವಾಗಿ ಮರಳು-ಮಣ್ಣು ತಗೆಯುವ ನದಿಪಾತ್ರ ಸೇರಿದಂತೆ ಇತರೇ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಲ್ಲಿ ಚಿತ್ರೀಕಣರದ ನಾಟಕವಾಡಿ ಅವರಿಂದ ಲಕ್ಷಾಂತರ ಹಣವನ್ನು ಕಸಿದುಕೊಂಡು ಬಂದಿದ್ದಾರಂತೆ.
ಇನ್ನೊಂದು ಘಟನೆಯಲ್ಲಿ ಹೀಗೆ ಮತ್ತೊಂದು ಪುಡಿ ರೌಡಿಗಳ, ಸಮಾಜಸೇವೆಯ ಮುಖವಾಡ ಹೊತ್ತ ಗ್ಯಾಂಗ್ ಕೈಯಲ್ಲಿ ಕ್ಯಾಮರಾಗಳನ್ನು ಹಿಡಿದುಕೊಂಡು ವಸತಿನಿಲಯಗಳ ಮೇಲೆ ದಾಳಿ ನಡೆಸಿ, ಅಲ್ಲಿ  ವಿದ್ಯಾರ್ಥಿಗಳ ಮಾಡುವ ಸಣ್ಣ-ಪುಟ್ಟ ಕೆಲಸಗಳನ್ನು, ಅವರು ಅನಾರೋಗ್ಯದಿಂದ ಇರುವ ವಿಡಿಯೋಗಳನ್ನು, ನೀರಿನ ಟ್ಯಾಂಕ್ ಶುದ್ಧಗೊಳಿಸದಿರುವುದನ್ನು ಚಿತ್ರೀಕರಿಸಿಕೊಂಡು  ಸಂಬಂಧಿಸಿದ ಅಧಿಕಾರಿಗಳನ್ನು, ವಾರ್ಡನ್ನ ಗಳನ್ನು ಹೆದರಿಸಿ ಅವರಿಂದ ಹಣ ಗೆಬರಿದ್ದಾರಂತೆ. ಮತ್ತೊಂದು ಗುಂಪು ನಿತ್ಯ ಮೀಟರ್ ಬಡ್ಡಿಗೆ ಹಣ ನೀಡುವುದು, ಬಡ್ಡಿಕೊಡದವರನ್ನು ಅವರ ಅಡ್ಡೆಗೆ ಕರೆತಂದು ಅವರ ಮೇಲೆ ಮನ ಬಂದಂತೆ ಹಲ್ಲೆ ಮಾಡುವುದು, ಹಲ್ಲೆ ಮಾಡಿರುವ ದೃಶ್ಯಗಳನ್ನು ಜಾಲತಾಣದಲ್ಲಿ ಹರಿ ಬಿಟ್ಟು ಬೇರೆಯವರನ್ನು ಹೆದರಿಸುವುದು. ಹೀಗೆ ಹಣ ಸುಲುಗೆಯ ನಾನಾ ನಮೂನಿ ಅನಧಿಕೃತ ಕೆಲಸಗಳು ಹಾವೇರಿಯಲ್ಲಿ ನಡೆದಿವೆ. ಹಾಗಂತ ಈ ರೌಡಿಗಳಿಗೆ ಹಣ ಕೊಟ್ಟವರು ಸಾಚಾಗಳೇನಲ್ಲ! ಅವರಲ್ಲಿ ಕೆಲವರು ಅಡ್ಡ ಮಾರ್ಗದಲ್ಲಿ ಹಣ ಸಂಪಾದಿಸುವವರು ಇದ್ದಾರೆ. ತಮ್ಮ ಯಪ್ಪುಗಳನ್ನು ಮುಚ್ಚಿಕೊಳ್ಳಲು ಈ ಪುಡಿರ್ರ‍ಡಿಗಳನ್ನು ಬಳಸಿಕೊಂಡವರು ಉಂಟು.
ಈ ರೀತಿ ಯ ಕೃತ್ಯಗಳು ನಡೆದ ಸಂದರ್ಭದಲ್ಲಿ ನೋವಿಗೆ ಒಳಗಾದವರು, ಈ ಪುಂಡರಿಂದ ತೊಂದರೆಗೆ ಒಳಗಾದವರು ಪೊಲೀಸ್ ಠಾಣೆಯ ಮೆಟ್ಟೇಲಿರಿದ್ದರೂ ಸಹ ಅವರಿಗೆ ನ್ಯಾಯ ಸಿಕ್ಕಲ್ಲ!. ಮೊತ್ತಷ್ಟು, ಇನ್ನಷ್ಟು ಇಂತ ಭಯಾನಕ ಘಟನೆಗಳು ಹೆಚ್ಚ್ಚುತ್ತಲೇ ಇವೆ.  ಆದರೂ ಪೊಲೀಸ್ ಇಲಾಖೆ ಯಾಕೆ ಇವರ ಮೇಲೆ ಕ್ರಮ ಕೈಗೊಂಡಿಲ್ಲ. ಇಂತ  ಆಕ್ರಮ ಕೂಟಕ್ಕೆ ಲಗಾಮು ಹಾಕಬೇಕಾದ  ಪೊಲೀಸರನ್ನೇ ಬೆದರಿಸುವ ಮಟ್ಟಿಗೆ ಪುಡಿರೌಡಿಗಳು ಮುಂದಾಗಿರುವರೆ? ಎನ್ನುವ ಅನುಮಾನ ಬರುತ್ತದೆ.
ಈ ನಿಟ್ಟಿನಲ್ಲಿ ದಕ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ, ಇತ್ತೀಚೆಗಷ್ಟೆ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾಗಿರುವ ಅಂಶುಕುಮಾರ ಅವರು ಕಠಿಣ ಕ್ರಮ ಕೈಗೊಂಡು ಈ ರೀತಿ ಅಕ್ರಮ, ಅನಾಚಾರಗಳಲ್ಲಿ ತೊಡಗಿರುವರನ್ನು ಮಟ್ಟ ಹಾಕುವ ಮೂಲಕ ಹಾವೇರಿಗೆ ಅಂಟುತ್ತಿರುವ ಕಳಂಕವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!
ಹಾವೇರಿ: ದಾಸರು, ಶರಣರು, ಭಾವೈಕ್ಷತೆಯ ಹರಿಕಾರರನ್ನು ಹೊಂದಿರುವ ಹಾವೇರಿಜಿಲ್ಲೆ ಸಾಹಿತ್ಯ, ಸಂಸ್ಕ್ರತಿಗೆ ರಾಜ್ಯದಲ್ಲಿಯೇ ತನ್ನದೇ ಆದ ಸ್ಥಾನ-ಮಾನ ಹೊಂದಿದ್ದು, ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹಾವೇರಿಜಿಲ್ಲೆಯಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೇ ಎತ್ತ ಸಾಗುತ್ತಿದೆ ಹಾವೇರಿಜಿಲ್ಲೆ? ಎನ್ನುವ ಭಯ ಕಾಡುತ್ತದೆ. ಯಾಲಕ್ಕಿ ಕಂಪಿನ ನಗರ ಎನ್ನುವ ಖ್ಯಾತಿಯ ಹಾವೇರಿಗೆ ರಕ್ತದವಾಸನೆ ನಂಟು ಅಂಟುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಹಾವೇರಿಯಲ್ಲಿ ರೌಡಿಗಳ, ಪುಡಿ ರೌಡಿಗಳ ಅಟ್ಟಹಾಸ, ಅಮಾಯಕರ ಮೇಲೆ ದೌರ್ಜನ್ಯ, ವಸೂಲಿ ದಂಧೆ ಜೋರಾಗಿದ್ದು, ಎಲ್ಲಂದರಲ್ಲಿ ನಡೆಯುತ್ತಿರುವ ಇಸ್ಟೆಟ್ ಕ್ಲಬ್‌ಗಳು, ರಾಜರೋಷವಾಗಿ ಅನಧಿಕೃತವಾಗಿ ನಡೆಯುತ್ತಿರುವ ಬಾರ್‌ಗಳು, ಎಲ್ಲಂದರಲ್ಲಿ ಎಣ್ಣೆ ಗಮಲು, ಗಾಂಜಾ ಗಮಲು, ಬಡ್ಡಿ ಮಾಫಿಯಾ, ಎನ್.ಜಿ.ಓ ಮಾಫಿಯಾ, ಮೀಟರ್ ಬಡ್ಡಿ ದಂಧೆ, ಕ್ರಿಕೆಟ್ ಬೆಟ್ಟಿಂಗ್, ಓಸಿ, ಕಳವು, ರಿಯಲ್‌ಎಸ್ಟೆಟ್ ದಂಧೆ, ಏಜೆಂಟರ್ ಹಾವಳಿ, ಹೀಗೆ ಒಂದೇ ಎರಡೆ ಹಲವಾರು ಕಾನೂನು ಭಾಹೀರ ಕೃತ್ಯಗಳು ನಡೆಯುತ್ತಿವೆ. ನಿತ್ಯ ಹೊಡೆದಾಟ, ಪುಂಡಾಟಿಕೆಗಳು ಸಾಮಾನ್ಯ ಎನ್ನುವಂತಾಗಿದೆ.
ಇತ್ತೀಚೆಗೆ ನಗರದಲ್ಲಿ ಬ್ಯಾನರ್ ತೆರವು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೌರಕಾರ್ಮಿಕರ ಮೇಲೆ ಪುಡಿ ರೌಡಿ ಗುಂಪು ಅದಾವ ಪರಿ ಹಲ್ಲೆ ಮಾಡಿದೆ ಎಂದರೆ, ಆತನನನ್ನು ಬ್ಯಾಟ್, ಡೊಣ್ಣೆಗಳಿಂದ ಥಳಿಸಲಾಗಿದ್ದು, ಬಿಯರ್ ಬಾಟಲಿಯಿಂದ ಆತನ ತಲೆಗೆ ಹೊಡೆಯಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ಹದಿನಾರು ಹೊಲಿಗೆ ಹಾಕಲಾಗಿದ್ದು, ಆತ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇನ್ನೂ ಹಲವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪರಾಗಿದ್ದಾರೆ. ಈರೀತಿಯ ಹಲ್ಲೆ ನಡೆಸುವ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಾಕಿ ಜನರನ್ನು ಹೆದರಿಸುವ ತಂತ್ರ ಇವರದ್ದಂತೆ.
ಹೊರ ರಾಜ್ಯದಿಂದ ಕೆಲವರು ಹಾವೇರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಇವರು ನಿತ್ಯ ಸಿಹಿ ತಿನಿಸುಗಳನ್ನು ತಯಾರಿಸಿ ಬೇಕರಿಗಳಿಗೆ, ಹುಟ್ಟು ಹಬ್ಬು, ವಿವಾಹ ಮಹೋತ್ಸವ ಸೇರಿದಂತೆ ಶುಭ ಕಾರ್ಯಗಳಿಗೆ ಸಿಹಿ ತಿನಿಸುಗಳನ್ನು ತಯಾರಿಸಿ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಾರೆ. ಸ್ವಲ್ಪಮಟ್ಟಿಗೆ ಆದಾಯವನ್ನು ಮಾಡುತ್ತಿದ್ದಾರೆ. ಇವರ ಮೇಲೆ ಈ ಪುಡಿರೌಡಿಗಳ ಗ್ಯಾಂಗ್ ದಾಳಿಮಾಡಿ, ಇವರು ತಯಾರಿಸಿದ ಸಿಹಿ ತಿನಿಸಿಗೆ ಸತ್ತ ಹಲ್ಲಿಯನ್ನು ಏಸೆದು ಬೆದರಿಕೆ ಹಾಕಿ ಇವರಿಂದ ಲಕ್ಷಾಂತರ ಹಣವನ್ನು ಪಡೆದಿದೆ. ರಸ್ತೆ ಬದಿ ಮರಾಟ ಮಾಡುವ ಮಸಾಲ ಚಾಟ್ಸ್‌ಗಳಿಗೆ ನುಗ್ಗುವ ಈ ಗುಂಪು ತಿನಿಸುಗಳಲ್ಲಿ ಹೂಳಗಳನ್ನು ಹಾಕಿ ಕಾಲು ಕೆದರಿ ಜಗಳ ಮಾಡಿ ಬೆದರಿಕೆ ಹಾಕಿ ಹಲ್ಲೆ ನಡೆಸಿ ಹಣ ಸುಲುಗೆ ಮಾಡಿದೆ.
ಇನ್ನೊಂದು ಘಟನೆಯಲ್ಲಿ ಈ ಪುಡಿರೌಡಿಗಳ ಗ್ಯಾಂಗ್ ಮಾರವಾಡಿಗಳ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿಸುತ್ತಾರೆ. ಅದಕ್ಕೆ ಅಂಗಡಿಯವರು ಜಿಎಸ್‌ಟಿ ಬಿಲ್ ನೀಡದೇ ಬೇರೆ ಬಿಲ್ಲ ನೀಡಿದ ಕಾರಣಕ್ಕೆ ಹತ್ತಾರು ಅಂಗಡಿಯವರನ್ನು ಮನ ಬಂದಂತೆ ಥಳಿಸಿದ್ದಾರೆ. ಹಲ್ಲೆ ಮಾಡುವ ವಿಡಿಯೋವನ್ನು ರಾಜಾರೋಷವಾಗಿ ಜಾಲತಾಣದಲ್ಲಿ ಈ ಗ್ಯಾಂಗ್ ಹಾಕುತ್ತಾರೆ. ಇವರು ಮಾಡುವ ಹಲ್ಲೆಯನ್ನು ನೋಡಿ ಬೇರೆಯವರು ಇವರು ಕೇಳಿದ ತಕ್ಷಣ ಹಣ ನೀಡಬೇಕೆನ್ನುವುದು ಇವರ ವರಸೆ, ಮೇಲಾಗಿ ಇವರು ಬೆಂಗಳೂರು ಮಾದರಿಯಲ್ಲಿ ಡಾನ್‌ಗಳಾಬೇಕೆನ್ನುವುದು ಇವರ ಅಭಿಲಾಷೆಯಂತೆ. ಈ ಗುಂಪಿಗೆ ಡಾನ್ ಬೇರೆ ಇದ್ದಾರಂತೆ.
ಇನ್ನೊಂದು ಘಟನೆಯಲ್ಲಿ ಕೆಲವರು   ಯೂಟ್ಯೂಬ್ ಚಾನಲ್ ನವರೆಂದು, ಇನ್ನು ಕೆಲವರು ವರದಿಗಾರರೆಂದು ಏಕಾ ಏಕಿ ಹೋಟೆಲ್‌ಗಳ ಅಡುಗೆ ಮನೆಗಳಿಗೆ ದಾಳಿ ನಡೆಸಿ ಅಲ್ಲಿನ ಕೊಳಕನ್ನು ಚಿತ್ರೀಸಿಕೊಂಡು ಪ್ರಸಾರ ಮಾಡುವುದಾಗಿ ಹೋಟೆಲ್‌ನವರನ್ನು ಬೆದರಿಸಿ ಅವರಿಂದ ಹಪ್ತಾವಸೂಲಿ ಮಾಡಿದ್ದಾರಂತೆ. ಮತ್ತೊಂದು ಘಟನೆಯಲ್ಲಿ ಇಂತದೇ ಒಂದು ಗುಂಪು ಅನಧಿಕೃತವಾಗಿ ಮರಳು-ಮಣ್ಣು ತಗೆಯುವ ನದಿಪಾತ್ರ ಸೇರಿದಂತೆ ಇತರೇ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಲ್ಲಿ ಚಿತ್ರೀಕಣರದ ನಾಟಕವಾಡಿ ಅವರಿಂದ ಲಕ್ಷಾಂತರ ಹಣವನ್ನು ಕಸಿದುಕೊಂಡು ಬಂದಿದ್ದಾರಂತೆ.
ಇನ್ನೊಂದು ಘಟನೆಯಲ್ಲಿ ಹೀಗೆ ಮತ್ತೊಂದು ಪುಡಿ ರೌಡಿಗಳ, ಸಮಾಜಸೇವೆಯ ಮುಖವಾಡ ಹೊತ್ತ ಗ್ಯಾಂಗ್ ಕೈಯಲ್ಲಿ ಕ್ಯಾಮರಾಗಳನ್ನು ಹಿಡಿದುಕೊಂಡು ವಸತಿನಿಲಯಗಳ ಮೇಲೆ ದಾಳಿ ನಡೆಸಿ, ಅಲ್ಲಿ  ವಿದ್ಯಾರ್ಥಿಗಳ ಮಾಡುವ ಸಣ್ಣ-ಪುಟ್ಟ ಕೆಲಸಗಳನ್ನು, ಅವರು ಅನಾರೋಗ್ಯದಿಂದ ಇರುವ ವಿಡಿಯೋಗಳನ್ನು, ನೀರಿನ ಟ್ಯಾಂಕ್ ಶುದ್ಧಗೊಳಿಸದಿರುವುದನ್ನು ಚಿತ್ರೀಕರಿಸಿಕೊಂಡು  ಸಂಬಂಧಿಸಿದ ಅಧಿಕಾರಿಗಳನ್ನು, ವಾರ್ಡನ್ನ ಗಳನ್ನು ಹೆದರಿಸಿ ಅವರಿಂದ ಹಣ ಗೆಬರಿದ್ದಾರಂತೆ. ಮತ್ತೊಂದು ಗುಂಪು ನಿತ್ಯ ಮೀಟರ್ ಬಡ್ಡಿಗೆ ಹಣ ನೀಡುವುದು, ಬಡ್ಡಿಕೊಡದವರನ್ನು ಅವರ ಅಡ್ಡೆಗೆ ಕರೆತಂದು ಅವರ ಮೇಲೆ ಮನ ಬಂದಂತೆ ಹಲ್ಲೆ ಮಾಡುವುದು, ಹಲ್ಲೆ ಮಾಡಿರುವ ದೃಶ್ಯಗಳನ್ನು ಜಾಲತಾಣದಲ್ಲಿ ಹರಿ ಬಿಟ್ಟು ಬೇರೆಯವರನ್ನು ಹೆದರಿಸುವುದು. ಹೀಗೆ ಹಣ ಸುಲುಗೆಯ ನಾನಾ ನಮೂನಿ ಅನಧಿಕೃತ ಕೆಲಸಗಳು ಹಾವೇರಿಯಲ್ಲಿ ನಡೆದಿವೆ. ಹಾಗಂತ ಈ ರೌಡಿಗಳಿಗೆ ಹಣ ಕೊಟ್ಟವರು ಸಾಚಾಗಳೇನಲ್ಲ! ಅವರಲ್ಲಿ ಕೆಲವರು ಅಡ್ಡ ಮಾರ್ಗದಲ್ಲಿ ಹಣ ಸಂಪಾದಿಸುವವರು ಇದ್ದಾರೆ. ತಮ್ಮ ಯಪ್ಪುಗಳನ್ನು ಮುಚ್ಚಿಕೊಳ್ಳಲು ಈ ಪುಡಿರ್ರ‍ಡಿಗಳನ್ನು ಬಳಸಿಕೊಂಡವರು ಉಂಟು.
ಈ ರೀತಿ ಯ ಕೃತ್ಯಗಳು ನಡೆದ ಸಂದರ್ಭದಲ್ಲಿ ನೋವಿಗೆ ಒಳಗಾದವರು, ಈ ಪುಂಡರಿಂದ ತೊಂದರೆಗೆ ಒಳಗಾದವರು ಪೊಲೀಸ್ ಠಾಣೆಯ ಮೆಟ್ಟೇಲಿರಿದ್ದರೂ ಸಹ ಅವರಿಗೆ ನ್ಯಾಯ ಸಿಕ್ಕಲ್ಲ!. ಮೊತ್ತಷ್ಟು, ಇನ್ನಷ್ಟು ಇಂತ ಭಯಾನಕ ಘಟನೆಗಳು ಹೆಚ್ಚ್ಚುತ್ತಲೇ ಇವೆ.  ಆದರೂ ಪೊಲೀಸ್ ಇಲಾಖೆ ಯಾಕೆ ಇವರ ಮೇಲೆ ಕ್ರಮ ಕೈಗೊಂಡಿಲ್ಲ. ಇಂತ  ಆಕ್ರಮ ಕೂಟಕ್ಕೆ ಲಗಾಮು ಹಾಕಬೇಕಾದ  ಪೊಲೀಸರನ್ನೇ ಬೆದರಿಸುವ ಮಟ್ಟಿಗೆ ಪುಡಿರೌಡಿಗಳು ಮುಂದಾಗಿರುವರೆ? ಎನ್ನುವ ಅನುಮಾನ ಬರುತ್ತದೆ.
ಈ ನಿಟ್ಟಿನಲ್ಲಿ ದಕ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ, ಇತ್ತೀಚೆಗಷ್ಟೆ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾಗಿರುವ ಅಂಶುಕುಮಾರ ಅವರು ಕಠಿಣ ಕ್ರಮ ಕೈಗೊಂಡು ಈ ರೀತಿ ಅಕ್ರಮ, ಅನಾಚಾರಗಳಲ್ಲಿ ತೊಡಗಿರುವರನ್ನು ಮಟ್ಟ ಹಾಕುವ ಮೂಲಕ ಹಾವೇರಿಗೆ ಅಂಟುತ್ತಿರುವ ಕಳಂಕವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...