“ಯುವಕರು ಪ್ರೊ.ಕೃಷ್ಣಪ್ಪನವರ ಆಶಯಗಳನ್ನು ಮುಂದುವರೆಸಿ”: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸುವ ಮೂಲಕ ನೊಂದವರಿಗೆ ನ್ಯಾಯಕೊಡಿಸುವ ಕಾರ್ಯಕ್ಕೆ ಭದ್ರ ಬುನಾದಿಹಾಕಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಶೋಷಿತರಲ್ಲಿ ಜಾಗೃತಿ ಉಂಟು ಮಾಡಿದ ಸಮಿತಿಗೆ ೫೦ ವರ್ಷ ತುಂಬಿರುವುದು ಸಂತಸದ ಸಂಗತಿಯಾಗಿದೆ. ಇಂದಿನ ಯುವಕರು ಪ್ರೊ.ಕೃಷ್ಣಪ್ಪನವರ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ ಹೇಳಿದರು.
ಬುಧವಾರ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಜನ ಸಂಪರ್ಕ ಕಾರ್ಯಾಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಭ್ರೋತ್ಸವ-೫೦ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ೭೦ ದಶಕದಲ್ಲಿ ಕೃಷ್ಣಪ್ಪನವರು, ದೇವನೂರು ಮಹದೇವ, ಸಿದ್ದಲಿಂಗಯ್ಯ ಸೇರಿದಂತೆ ಅನೇಕ ಸಾಹಿತಿಗಳು ಈ ಸಂಘಟನೆಯ ಮೂಲಕ ಶೋಷಿತರಲ್ಲಿ ಜಾಗ್ರತಿ ಮೂಡಿಸುವ ಕಾರ್ಯ ಕೈಗೊಂಡರು. ದಸಂಸ ಕೇವಲ ದಲಿತರಿಗೆ ಮಾತ್ರ ಸೀಮಿತವಾದ ಸಂಘಟನೆಯಾಗದೇ ಎಲ್ಲ ವರ್ಗಗಳ ಶೋಷಿತರ ಧ್ವಯಾಗಲಿ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸಾಂಸ್ಕ್ರತಿಕವಾಗಿ ಕಮ್ಮಟಗಳನ್ನು ಆಯೋಜಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಈ ಕಾರ್ಯಕ್ಕೆ ಸಾಹಿತಿಗಳ ಬೆಂಬಲ, ಸಹಕಾರ ಸದಾ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಆ.೭ ರಂದು ಬೆಂಗಳೂರಿನ ಡಾ.ಅಂಬೇಡ್ಕರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಭ್ರೋತ್ಸವ-೫೦ ಕಾರ್ಯಕ್ರಮ ಆಯೋಜಿಸಲಾಗಿದೆ. ಈಕಾರ್ಯಕ್ರಮಕ್ಕೆ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಮಾಲತೇಶ್ ಅಂಗೂರ್, ಮಹಿಳಾ ಜಿಲ್ಲಾ ಸಂಚಾಲಕಿ ಸುಮಂಗಲ ರಾರಾವಿ, ಸಂಘಟನೆಯ ಪದಾಧಿಕಾರಿಗಳಾದ ಶಿವಣ್ಣ ಕನವಳ್ಳಿ, ಆನಂದ್ ಮುರುಡಪ್ಪನವರ್, ನಾಗರಾಜ್ ಶಿಡ್ಲಣ್ಣನವರ, ಕೆ. ಆರ್. ಉಮೇಶ್, ಗಂಗಾಧರ್ ಬೋಗೇರ್, ಬಸಣ್ಣ ಕಾಲುವೆಹಳ್ಳಿ, ಮಾಲತೇಶ್ ಹೊಲವಿಗೊಂಡ, ವಿಟ್ಟಲ್ ಡಾಂಗೆ, ಶೇಖಪ್ಪ ಹರಿಜನ್, ಗೌರಮ್ಮ ಹರಿಜನ, ಖಾದರ್ಸಾಬ್ ಸುಂಕದ, ಪ್ರಕಾಶ್ ಮರಬದ, ಫಕ್ಕೇರೇಶ ಕಾಳಿ ಮುಂತಾದವರು ಇದ್ದರು.
“ಯುವಕರು ಪ್ರೊ.ಕೃಷ್ಣಪ್ಪನವರ ಆಶಯಗಳನ್ನು ಮುಂದುವರೆಸಿ”: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ
Date:
“ಯುವಕರು ಪ್ರೊ.ಕೃಷ್ಣಪ್ಪನವರ ಆಶಯಗಳನ್ನು ಮುಂದುವರೆಸಿ”: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸುವ ಮೂಲಕ ನೊಂದವರಿಗೆ ನ್ಯಾಯಕೊಡಿಸುವ ಕಾರ್ಯಕ್ಕೆ ಭದ್ರ ಬುನಾದಿಹಾಕಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಶೋಷಿತರಲ್ಲಿ ಜಾಗೃತಿ ಉಂಟು ಮಾಡಿದ ಸಮಿತಿಗೆ ೫೦ ವರ್ಷ ತುಂಬಿರುವುದು ಸಂತಸದ ಸಂಗತಿಯಾಗಿದೆ. ಇಂದಿನ ಯುವಕರು ಪ್ರೊ.ಕೃಷ್ಣಪ್ಪನವರ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ ಹೇಳಿದರು.
ಬುಧವಾರ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಜನ ಸಂಪರ್ಕ ಕಾರ್ಯಾಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಭ್ರೋತ್ಸವ-೫೦ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ೭೦ ದಶಕದಲ್ಲಿ ಕೃಷ್ಣಪ್ಪನವರು, ದೇವನೂರು ಮಹದೇವ, ಸಿದ್ದಲಿಂಗಯ್ಯ ಸೇರಿದಂತೆ ಅನೇಕ ಸಾಹಿತಿಗಳು ಈ ಸಂಘಟನೆಯ ಮೂಲಕ ಶೋಷಿತರಲ್ಲಿ ಜಾಗ್ರತಿ ಮೂಡಿಸುವ ಕಾರ್ಯ ಕೈಗೊಂಡರು. ದಸಂಸ ಕೇವಲ ದಲಿತರಿಗೆ ಮಾತ್ರ ಸೀಮಿತವಾದ ಸಂಘಟನೆಯಾಗದೇ ಎಲ್ಲ ವರ್ಗಗಳ ಶೋಷಿತರ ಧ್ವಯಾಗಲಿ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸಾಂಸ್ಕ್ರತಿಕವಾಗಿ ಕಮ್ಮಟಗಳನ್ನು ಆಯೋಜಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಈ ಕಾರ್ಯಕ್ಕೆ ಸಾಹಿತಿಗಳ ಬೆಂಬಲ, ಸಹಕಾರ ಸದಾ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಆ.೭ ರಂದು ಬೆಂಗಳೂರಿನ ಡಾ.ಅಂಬೇಡ್ಕರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಭ್ರೋತ್ಸವ-೫೦ ಕಾರ್ಯಕ್ರಮ ಆಯೋಜಿಸಲಾಗಿದೆ. ಈಕಾರ್ಯಕ್ರಮಕ್ಕೆ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಮಾಲತೇಶ್ ಅಂಗೂರ್, ಮಹಿಳಾ ಜಿಲ್ಲಾ ಸಂಚಾಲಕಿ ಸುಮಂಗಲ ರಾರಾವಿ, ಸಂಘಟನೆಯ ಪದಾಧಿಕಾರಿಗಳಾದ ಶಿವಣ್ಣ ಕನವಳ್ಳಿ, ಆನಂದ್ ಮುರುಡಪ್ಪನವರ್, ನಾಗರಾಜ್ ಶಿಡ್ಲಣ್ಣನವರ, ಕೆ. ಆರ್. ಉಮೇಶ್, ಗಂಗಾಧರ್ ಬೋಗೇರ್, ಬಸಣ್ಣ ಕಾಲುವೆಹಳ್ಳಿ, ಮಾಲತೇಶ್ ಹೊಲವಿಗೊಂಡ, ವಿಟ್ಟಲ್ ಡಾಂಗೆ, ಶೇಖಪ್ಪ ಹರಿಜನ್, ಗೌರಮ್ಮ ಹರಿಜನ, ಖಾದರ್ಸಾಬ್ ಸುಂಕದ, ಪ್ರಕಾಶ್ ಮರಬದ, ಫಕ್ಕೇರೇಶ ಕಾಳಿ ಮುಂತಾದವರು ಇದ್ದರು.