


ರಾಣೆಬೆನ್ನೂರ ಶಹರ ಪೊಲೀಸ್ ಠಾಣೆ ಪಿಎಸ್ಐ ಮತ್ತು ವಾಹನ ಚಾಲಕ ಲೋಕಾಯುಕ್ತ ಬಲೆಗೆ
ಹಾವೇರಿ: ಮನೆ ಆಸ್ತಿ ವಿವಾಧಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸದಿರಲು ೪೦ ಸಾವಿರ ರೂ. ಲಂಚ ಪಡೆಯುತ್ತಿದ್ದ ಸಮಯದಲ್ಲಿ ಮಂಗಳವಾರ ರೇಡ್ ಹ್ಯಾಂಡ್ ಆಗಿ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆ ಪಿಎಸ್ಐ ಮತ್ತು ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು ರಾಣೇಬೆನ್ನೂರ ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಈತನ ವಾಹನದ ಚಾಲಕ ಸಚಿನ್ ಎಂದು ತಿಳಿದು ಬರುತ್ತದೆ. ಈ ಇಬ್ಬರೂ ೫೦ಸಾವಿರ ರೂ. ಬೇಡಿಕೆ ಇಟ್ಟಿದ್ದರೆಂದು, ಅದರಲ್ಲಿ ೪೦ ಸಾವಿರ ರೂ.ಗಳನ್ನು ಪಡೆಯುತ್ತಿದ್ದ ಸಮಯದಲ್ಲಿ ಹಾವೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಫಿರಾದುದಾರರಾದ ಅನ್ನೋಜ್ಅಹ್ಮದ್ ನೂರಅಹ್ಮದ್ಸಾಬ್ ಊದಗಟ್ಟಿ ಸಾ|| ಸಿದ್ದೇಶ್ವರ ನಗರ, ೩ನೇ ಕ್ರಾಸ್, ರಾಣೆಬೆನ್ನೂರ ಇವರು ತಮ್ಮ ಅಣ್ಣನ ಪತ್ನಿ (ಅತ್ತಿಗೆ) ಶ್ರೀಮತಿ ರೌನಕ್ ಖಾನ್ ರವರೊಂದಿಗೆ ಆಸ್ತಿ ವಿವಾದ ಇದ್ದು, ಸದರಿ ವಿಷಯವಾಗಿ ರೌನಕ್ ರವರು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಸದರಿ ದೂರಿಗೆ ಸಂಬಂಧಪಟ್ಟಂತೆ ಪಿ.ಎಸ್.ಐ ಸುನೀಲ್ ಬಿ ತೇಲಿ ಹಾಗೂ ಕಾನಟೇಬಲ್ ಸಚಿನ್ ಓಲೇಕಾರ ರವರು ಸದರಿ ಪ್ರಕರಣದ ಪಿರ್ಯಾದಿದಾರರ ವಿರುದ್ಧ ಪ್ರಕರಣ ದಾಖಲಿಸದೇ ಇರಲು ರೂ ೫೦,೦೦೦/- ಗಳಿಗೆ ಬೇಡಿಕೆ ಇಟ್ಟು, ನಂತರ ರೂ ೪೦,೦೦೦/- ಗಳಿಗೆ ಒಪ್ಪಿಕೊಂಡು ಲಂಚದ ಹಣವನ್ನು ಆಪಾಧಿತರ ಪರವಾಗಿ ದಿನಾಂಕ:೨೧-೦೩-೨೦೨೩ ರಂದು ಮಧ್ಯಾಹ್ನ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯ ಪಕ್ಕದಲ್ಲಿನ ಉಡುಪಿ ಟೀ ಸ್ಟಾಲ್ ಮಾಲೀಕರಾದ ಸಂತೋಷ ಶೆಟ್ಟಿ ಅವರ ಮೂಲಕ ರೂ.೪೦,೦೦೦/-ಗಳನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತನನ್ನು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು ರಾಣೇಬೆನ್ನೂರ ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಈತನ ವಾಹನದ ಚಾಲಕ ಸಚಿನ್ ಎಂದು ತಿಳಿದು ಬರುತ್ತದೆ. ಈ ಇಬ್ಬರೂ ೫೦ಸಾವಿರ ರೂ. ಬೇಡಿಕೆ ಇಟ್ಟಿದ್ದರೆಂದು, ಅದರಲ್ಲಿ ೪೦ ಸಾವಿರ ರೂ.ಗಳನ್ನು ಪಡೆಯುತ್ತಿದ್ದ ಸಮಯದಲ್ಲಿ ಹಾವೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಫಿರಾದುದಾರರಾದ ಅನ್ನೋಜ್ಅಹ್ಮದ್ ನೂರಅಹ್ಮದ್ಸಾಬ್ ಊದಗಟ್ಟಿ ಸಾ|| ಸಿದ್ದೇಶ್ವರ ನಗರ, ೩ನೇ ಕ್ರಾಸ್, ರಾಣೆಬೆನ್ನೂರ ಇವರು ತಮ್ಮ ಅಣ್ಣನ ಪತ್ನಿ (ಅತ್ತಿಗೆ) ಶ್ರೀಮತಿ ರೌನಕ್ ಖಾನ್ ರವರೊಂದಿಗೆ ಆಸ್ತಿ ವಿವಾದ ಇದ್ದು, ಸದರಿ ವಿಷಯವಾಗಿ ರೌನಕ್ ರವರು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಸದರಿ ದೂರಿಗೆ ಸಂಬಂಧಪಟ್ಟಂತೆ ಪಿ.ಎಸ್.ಐ ಸುನೀಲ್ ಬಿ ತೇಲಿ ಹಾಗೂ ಕಾನಟೇಬಲ್ ಸಚಿನ್ ಓಲೇಕಾರ ರವರು ಸದರಿ ಪ್ರಕರಣದ ಪಿರ್ಯಾದಿದಾರರ ವಿರುದ್ಧ ಪ್ರಕರಣ ದಾಖಲಿಸದೇ ಇರಲು ರೂ ೫೦,೦೦೦/- ಗಳಿಗೆ ಬೇಡಿಕೆ ಇಟ್ಟು, ನಂತರ ರೂ ೪೦,೦೦೦/- ಗಳಿಗೆ ಒಪ್ಪಿಕೊಂಡು ಲಂಚದ ಹಣವನ್ನು ಆಪಾಧಿತರ ಪರವಾಗಿ ದಿನಾಂಕ:೨೧-೦೩-೨೦೨೩ ರಂದು ಮಧ್ಯಾಹ್ನ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯ ಪಕ್ಕದಲ್ಲಿನ ಉಡುಪಿ ಟೀ ಸ್ಟಾಲ್ ಮಾಲೀಕರಾದ ಸಂತೋಷ ಶೆಟ್ಟಿ ಅವರ ಮೂಲಕ ರೂ.೪೦,೦೦೦/-ಗಳನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತನನ್ನು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಕೈಗೊಳ್ಳಲಾಗಿದೆ.