ರಾಣೇಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲುಪಕ್ಷಿ” ಪತ್ತೆ

Date:

ರಾಣೇಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲುಪಕ್ಷಿ” ಪತ್ತೆ
ಹಾವೇರಿ: ಜಿಲ್ಲೆಯ ಹೆಸರಾಂತ ಕೃಷ್ಣಮೃಗ ಅಭಯಾರಣ್ಯದಲ್ಲಿ ಅಪರೂಪದ “ಕಲ್ಲು ಗೌಜಲು” ಪಕ್ಷಿಗಳು ಪತ್ತೆಯಾಗಿವೆ.(ಸ್ಯಾಂಡ್ ಗ್ರೋಜ್) ಫೆ.೬ರಂದು ಗುರುವಾರ ಬೆಳಿಗ್ಗೆ ಕೃಷ್ಣ ಅಭಯಾರಣಕ್ಕೆ ಸಪಾರಿಗೆ ತೆರಳಿದ್ದ ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ, ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಅವರ ಕ್ಯಾಮರಾಕ್ಕೆ ಮೂರು “ಕಲ್ಲು ಗೌಜಲು” ಪಕ್ಷಿಗಳು ಸೆರೆಸಿಕ್ಕಿವೆ.
ಅಭಯಾರಣ್ಯದ ಸಫಾರಿವಾಹನದಲ್ಲಿ ತೆರಳುತ್ತಿದ್ದ ವೇಳೆ ಕಲ್ಲು ಗೌಜಲು ಪಕ್ಷಿಗಳು ಕಂಡಿವೆ. ಅಭಯಾರಣ್ಯದ ಒಣಗಿದ ಹುಲ್ಲಿನಲ್ಲಿ ಆಹಾರ ಅರಸುತ್ತಾ ಓಡಾಡುತ್ತಿದ್ದ ಮೂರು ಕಲ್ಲು ಗೌಜಲು ಪಕ್ಷಿಗಳು ಅರ್ಧಗಂಟೆಗೂ ಹೆಚ್ಚುಕಾಲ ಆಹಾರ ಅರಸಿವೆ. ಇವು ಹೆಚ್ಚು ದೂರದ ವರೆಗೂ ಹಾರಬಲ್ಲವು. ಹೆಚ್ಚಾಗಿ ಗಂಡು-ಹೆಣ್ಣು ಜತೆ ಯಾಗಿ, ಕೆಲವೊಮ್ಮೆ ಗುಂಪಾಗಿಯು ಸಹ ಇರುತ್ತವೆ.
ಬಂಜರು ವಾಸ!: ಕಲ್ಲುಗೌಜಲು ಹಕ್ಕಿಗಳು ಬಂಜರು ಪ್ರದೇಶಗಳಲ್ಲಿ ವಾಸಿಸಿದರೂ ದಿನಕ್ಕೆರಡು ಬಾರಿ ನೀರು ಕುಡಿಯಲು ಹತ್ತಿರದ ಯಾವುದಾದರೂ-ಕೊಳ, ತೊರೆ ಗಳಿಗೆ ಭೇಟಿಕೊಡುತ್ತವೆ. ಬೇಟೆಗಾರರು ಬೇಟೆಯಾಡಲು ಆಗದಷ್ಟು ಇವು ಬಲು ಸೂಕ್ಷ್ಮ ಮತಿಗಳು. ನೀರಿಗೆ ಬಾಯಿಕ್ಕುವ ಮುನ್ನ ಇವು ಕೊಳದಿಂದ ನೂರಾರು ಗಜಗಳ ದೂರದಲ್ಲೇ ಇಳಿದು ಶತ್ರುಗಳಿದ್ದಾರೋ ಏನೋ ಎಂದು ಕಾಯುತ್ತವೆ. ಯಾರೂ ಇಲ್ಲ ಎಂದು ಮನವರಿಕೆಯಾದ ಮೇಲೆ ಇವು ನೀರು ಕುಡಿಯಲು ಧಾವಿಸುತ್ತವೆ. ಕೆಲವು ಬಗೆಯ ಪಕ್ಷಿಗಳಲ್ಲಿ ವಲಸೆ ಹೋಗುವ ಕ್ರಮವೂ ಇದೆ.
ಸಾಧಾರಣವಾಗಿ ೯”_೧೬” ಉದ್ದಕ್ಕೆ ಬೆಳೆಯುತ್ತದೆ. ಇದಕ್ಕೆ ಪುಷ್ಟವಾದ ದೇಹವಿದೆ. ದೇಹದ ಬಣ್ಣ ಬೂದು,ಕಂದು. ಅಲ್ಲಲ್ಲಿ ಕಿತ್ತಳೆ, ಕೆಂಗಂದು, ಕಪ್ಪು,ಬಿಳಿಯ ಬಣ್ಣದ ಮಚ್ಚೆಗಳಿವೆ. ಇದರಿಂದಾಗಿ ಹಕ್ಕಿಯ ಬಣ್ಣ ಪರಿಸರದ ಬಣ್ಣದೊಂದಿಗೆ ಮಿಳಿತವಾಗಿ ಹಕ್ಕಿಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪಾರಿವಾಳಕ್ಕಿರುವಂಥ ಕತ್ತು ಮತ್ತು ತಲೆ, ಮೋಟಾದ ಕಾಲುಗಳು, ಚಿಕ್ಕದಾದ ಚೂಪಾದ ಕೊಕ್ಕು, ಉದ್ದನೆಯ ಹಾಗೂ ಚೂಪಾದ ರೆಕ್ಕೆ ಮತ್ತು ಬಾಲ_ಇವು ಕಲ್ಲುಗೌಜಲು ಹಕ್ಕಿಯ ಪ್ರಮುಖ ಲಕ್ಷಣಗಳು. ಈ ಹಕ್ಕಿಗಳು ಸಾಮಾನ್ಯವಾಗಿ ಗುಂಪುಗಳಲ್ಲಿಯೇ ಇರುತ್ತವೆ. ಹಾರುವುದು ಕಡಿಮೆ, ನೆಲದ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಓಡಾಡುತ್ತವೆ. ಆದರೆ ಮಾನವ ಹಾಗೂ ಇತರ ಶತ್ರುಗಳ ಸುಳಿವು ತಿಳಿದೊಡನೆಯೇ ವೇಗವಾಗಿ ಹಾರಿಹೋಗುತ್ತವೆ. ಇವು ಬಹಳ ಪುಕ್ಕಲು ಸ್ವಭಾವದ ಅಲ್ಲದೆ ಬಹು ಎಚ್ಚರಿಕೆಯ ಹಕ್ಕಿಗಳೆಂದು ಹೆಸರಾಗಿವೆ. ಸಣ್ಣ ಕಾಯಿಗಳು, ಕಾಳುಗಳು, ಮೊಗ್ಗುಗಳು ಹಾಗೂ ಸಣ್ಣಪುಟ್ಟ ಕೀಟಗಳು ಇವುಗಳ ಆಹಾರ.
ಕೃಷ್ಣಮೃಗ ಅಭಯಾರಣ್ಯದಲ್ಲಿ ಮೂರು ಸ್ಯಾಂಡ್ ಗ್ರೋಜ್ ಪಕ್ಷಿಗಳಿದ್ದು ಇವುಗಳನ್ನು ಗುರುತಿಸುವುದು ಬಲು ಕಷ್ಟದ ಕೆಲಸ. ಇವುಗಳನ್ನು ಗುರುತಿಸುವುದು ಸುಲಭವಲ್ಲ. ಇವು ಮರದ ಮೇಲೆ ಕುಳಿತುಕೊಳ್ಳುವ ಬದಲು ಹುಲ್ಲುಗಳ ನಡುವೆ, ಕಲ್ಲುಗಳ ನಡುವೆ, ಮಣ್ಣಿನ ಹೆಂಟೆಗಳಲ್ಲಿ ಕುಳಿತುಕೊಳ್ಳುವ ಕಾರಣಕ್ಕೆ ಮಣ್ಣು-ಮರಳಿನ ಬಣ್ಣಹೊಂದಿರುವ ಇವುಗಳು ಮಣ್ಣಿನ ಹೆಂಟೆಯೋ ಅಥವಾ ಪಕ್ಷಿಯೋ ವ್ಯತ್ತಾಸ ಗೊತ್ತಾಗದು.
ಮರುಭೂಮಿ ಪಕ್ಷಿ: (ಸ್ಯಾಂಡ್‌ಗ್ರೋಜ್) “ಕಲ್ಲು ಗೌಜಲು” ಪಕ್ಷಿಗಳಲ್ಲಿ ಒಟ್ಟು ಸುಮಾರು ೧೬ ಪ್ರಭೇದಗಳಿವೆ. ಇವು ಆಫ್ರಿಕ ಹಾಗೂ `ಮಡಗಾಸ್ಕರ್, ದಕ್ಷಿಣ ಯುರೋಪ್, ದಕ್ಷಿಣ ಹಾಗೂ ಮಧ್ಯ ಏಶಿಯಾದ ಮರಳುಗಾಡುಗಳಲ್ಲಿ ಕಂಡುಬರುತ್ತವೆ. ಚಳಿಗಾಲದಲ್ಲಿ ಇವುಗಳು ಇಲ್ಲಿಗೆ ವಲಸೆ ಬಂದಿರುವ ಸಾಧ್ಯತೆಗಳಿವೆ.
ಮೂರುಪಕ್ಷಿಗಳಲ್ಲಿ ಒಂದು ಹೆಣ್ಣು, ಇನ್ನೊಂದು ಗಂಡು,ಒಂದು ಮರಿ ಇರುವ ಹಾಗೆ ಗೋಚರಿಸಿದವು. ಈ ಪಕ್ಷಿಗಳು. ಕೆಲವೊಮ್ಮೆ ಹತ್ತಿರ ಹೋಗುವವರೆವಿಗೂ ಸುಮ್ಮನಿದ್ದು ತುಂಬಾ ಹತ್ತಿರವಾದಾಗ ಸದ್ದು ಮಾಡಿ ಪಾರಿವಾಳಧ ಹಾಗೆ ರೆಕ್ಕೆ ಬಡಿಯುತ್ತಾ ಹಾರುತ್ತವೆ.   ಈಬಗ್ಗೆ ಮಾಹಿತಿ ನೀಡಿದ ರಾಣೇಬೆನ್ನೂರು ಉಪ ವಲಯ ಅರಣ್ಯಾಧಿಕಾರಿ ಸರೇಶ ಚಟ್ರಮ್ಮನವರ, ಸಫಾರಿ ವಾಹನ ಚಾಲಕ ಫಾರುಕ್ ಇತ್ತೀಚೆಗೆ ಇವುಗಳು ಕೃಷ್ಣಮೃಗ ಅಭಯಾರಣ್ಯದಲ್ಲಿ  ಕಾಣಿಸಿಕೊಂಡಿವೆ. ಬಹಳ ಸುಕ್ಷ್ಮಪಕ್ಷಿಗಳು ಇವುಗಳಾಗಿದ್ದು, ಸಫಾರಿವೇಳೆ ಮರಿಗಳೊಂದಿಗೆ ಆಗಾಗ ಕಾಣಿಸುತ್ತವೆ ಎಂದರು.
ಗ್ರೇಟ್ ಇಂಡಿಯನ್ ಬಸ್ಟರ್ ಪಕ್ಷಿಗಳು ಈ ಕೃಷ್ಣಮೃಗ ಅಭಯಾರಣ್ಯದಿಂದ ಕಣ್ಮರೆಯಾದ ನಂತರ ಅಪರೂಪದ ಮರುಭೂಮಿ ಪಕ್ಷಿಯಾಗಿರುವ (ಸ್ಯಾಂಡ್‌ಗ್ರೋಜ್) “ಕಲ್ಲುಗೌಜಲು” ಪಕ್ಷಿಗಳು ಕಾಣಿಸಿಕೊಂಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ ಎನ್ನುಬಹದು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ರಾಣೇಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲುಪಕ್ಷಿ” ಪತ್ತೆ
ಹಾವೇರಿ: ಜಿಲ್ಲೆಯ ಹೆಸರಾಂತ ಕೃಷ್ಣಮೃಗ ಅಭಯಾರಣ್ಯದಲ್ಲಿ ಅಪರೂಪದ “ಕಲ್ಲು ಗೌಜಲು” ಪಕ್ಷಿಗಳು ಪತ್ತೆಯಾಗಿವೆ.(ಸ್ಯಾಂಡ್ ಗ್ರೋಜ್) ಫೆ.೬ರಂದು ಗುರುವಾರ ಬೆಳಿಗ್ಗೆ ಕೃಷ್ಣ ಅಭಯಾರಣಕ್ಕೆ ಸಪಾರಿಗೆ ತೆರಳಿದ್ದ ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ, ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಅವರ ಕ್ಯಾಮರಾಕ್ಕೆ ಮೂರು “ಕಲ್ಲು ಗೌಜಲು” ಪಕ್ಷಿಗಳು ಸೆರೆಸಿಕ್ಕಿವೆ.
ಅಭಯಾರಣ್ಯದ ಸಫಾರಿವಾಹನದಲ್ಲಿ ತೆರಳುತ್ತಿದ್ದ ವೇಳೆ ಕಲ್ಲು ಗೌಜಲು ಪಕ್ಷಿಗಳು ಕಂಡಿವೆ. ಅಭಯಾರಣ್ಯದ ಒಣಗಿದ ಹುಲ್ಲಿನಲ್ಲಿ ಆಹಾರ ಅರಸುತ್ತಾ ಓಡಾಡುತ್ತಿದ್ದ ಮೂರು ಕಲ್ಲು ಗೌಜಲು ಪಕ್ಷಿಗಳು ಅರ್ಧಗಂಟೆಗೂ ಹೆಚ್ಚುಕಾಲ ಆಹಾರ ಅರಸಿವೆ. ಇವು ಹೆಚ್ಚು ದೂರದ ವರೆಗೂ ಹಾರಬಲ್ಲವು. ಹೆಚ್ಚಾಗಿ ಗಂಡು-ಹೆಣ್ಣು ಜತೆ ಯಾಗಿ, ಕೆಲವೊಮ್ಮೆ ಗುಂಪಾಗಿಯು ಸಹ ಇರುತ್ತವೆ.
ಬಂಜರು ವಾಸ!: ಕಲ್ಲುಗೌಜಲು ಹಕ್ಕಿಗಳು ಬಂಜರು ಪ್ರದೇಶಗಳಲ್ಲಿ ವಾಸಿಸಿದರೂ ದಿನಕ್ಕೆರಡು ಬಾರಿ ನೀರು ಕುಡಿಯಲು ಹತ್ತಿರದ ಯಾವುದಾದರೂ-ಕೊಳ, ತೊರೆ ಗಳಿಗೆ ಭೇಟಿಕೊಡುತ್ತವೆ. ಬೇಟೆಗಾರರು ಬೇಟೆಯಾಡಲು ಆಗದಷ್ಟು ಇವು ಬಲು ಸೂಕ್ಷ್ಮ ಮತಿಗಳು. ನೀರಿಗೆ ಬಾಯಿಕ್ಕುವ ಮುನ್ನ ಇವು ಕೊಳದಿಂದ ನೂರಾರು ಗಜಗಳ ದೂರದಲ್ಲೇ ಇಳಿದು ಶತ್ರುಗಳಿದ್ದಾರೋ ಏನೋ ಎಂದು ಕಾಯುತ್ತವೆ. ಯಾರೂ ಇಲ್ಲ ಎಂದು ಮನವರಿಕೆಯಾದ ಮೇಲೆ ಇವು ನೀರು ಕುಡಿಯಲು ಧಾವಿಸುತ್ತವೆ. ಕೆಲವು ಬಗೆಯ ಪಕ್ಷಿಗಳಲ್ಲಿ ವಲಸೆ ಹೋಗುವ ಕ್ರಮವೂ ಇದೆ.
ಸಾಧಾರಣವಾಗಿ ೯”_೧೬” ಉದ್ದಕ್ಕೆ ಬೆಳೆಯುತ್ತದೆ. ಇದಕ್ಕೆ ಪುಷ್ಟವಾದ ದೇಹವಿದೆ. ದೇಹದ ಬಣ್ಣ ಬೂದು,ಕಂದು. ಅಲ್ಲಲ್ಲಿ ಕಿತ್ತಳೆ, ಕೆಂಗಂದು, ಕಪ್ಪು,ಬಿಳಿಯ ಬಣ್ಣದ ಮಚ್ಚೆಗಳಿವೆ. ಇದರಿಂದಾಗಿ ಹಕ್ಕಿಯ ಬಣ್ಣ ಪರಿಸರದ ಬಣ್ಣದೊಂದಿಗೆ ಮಿಳಿತವಾಗಿ ಹಕ್ಕಿಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪಾರಿವಾಳಕ್ಕಿರುವಂಥ ಕತ್ತು ಮತ್ತು ತಲೆ, ಮೋಟಾದ ಕಾಲುಗಳು, ಚಿಕ್ಕದಾದ ಚೂಪಾದ ಕೊಕ್ಕು, ಉದ್ದನೆಯ ಹಾಗೂ ಚೂಪಾದ ರೆಕ್ಕೆ ಮತ್ತು ಬಾಲ_ಇವು ಕಲ್ಲುಗೌಜಲು ಹಕ್ಕಿಯ ಪ್ರಮುಖ ಲಕ್ಷಣಗಳು. ಈ ಹಕ್ಕಿಗಳು ಸಾಮಾನ್ಯವಾಗಿ ಗುಂಪುಗಳಲ್ಲಿಯೇ ಇರುತ್ತವೆ. ಹಾರುವುದು ಕಡಿಮೆ, ನೆಲದ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಓಡಾಡುತ್ತವೆ. ಆದರೆ ಮಾನವ ಹಾಗೂ ಇತರ ಶತ್ರುಗಳ ಸುಳಿವು ತಿಳಿದೊಡನೆಯೇ ವೇಗವಾಗಿ ಹಾರಿಹೋಗುತ್ತವೆ. ಇವು ಬಹಳ ಪುಕ್ಕಲು ಸ್ವಭಾವದ ಅಲ್ಲದೆ ಬಹು ಎಚ್ಚರಿಕೆಯ ಹಕ್ಕಿಗಳೆಂದು ಹೆಸರಾಗಿವೆ. ಸಣ್ಣ ಕಾಯಿಗಳು, ಕಾಳುಗಳು, ಮೊಗ್ಗುಗಳು ಹಾಗೂ ಸಣ್ಣಪುಟ್ಟ ಕೀಟಗಳು ಇವುಗಳ ಆಹಾರ.
ಕೃಷ್ಣಮೃಗ ಅಭಯಾರಣ್ಯದಲ್ಲಿ ಮೂರು ಸ್ಯಾಂಡ್ ಗ್ರೋಜ್ ಪಕ್ಷಿಗಳಿದ್ದು ಇವುಗಳನ್ನು ಗುರುತಿಸುವುದು ಬಲು ಕಷ್ಟದ ಕೆಲಸ. ಇವುಗಳನ್ನು ಗುರುತಿಸುವುದು ಸುಲಭವಲ್ಲ. ಇವು ಮರದ ಮೇಲೆ ಕುಳಿತುಕೊಳ್ಳುವ ಬದಲು ಹುಲ್ಲುಗಳ ನಡುವೆ, ಕಲ್ಲುಗಳ ನಡುವೆ, ಮಣ್ಣಿನ ಹೆಂಟೆಗಳಲ್ಲಿ ಕುಳಿತುಕೊಳ್ಳುವ ಕಾರಣಕ್ಕೆ ಮಣ್ಣು-ಮರಳಿನ ಬಣ್ಣಹೊಂದಿರುವ ಇವುಗಳು ಮಣ್ಣಿನ ಹೆಂಟೆಯೋ ಅಥವಾ ಪಕ್ಷಿಯೋ ವ್ಯತ್ತಾಸ ಗೊತ್ತಾಗದು.
ಮರುಭೂಮಿ ಪಕ್ಷಿ: (ಸ್ಯಾಂಡ್‌ಗ್ರೋಜ್) “ಕಲ್ಲು ಗೌಜಲು” ಪಕ್ಷಿಗಳಲ್ಲಿ ಒಟ್ಟು ಸುಮಾರು ೧೬ ಪ್ರಭೇದಗಳಿವೆ. ಇವು ಆಫ್ರಿಕ ಹಾಗೂ `ಮಡಗಾಸ್ಕರ್, ದಕ್ಷಿಣ ಯುರೋಪ್, ದಕ್ಷಿಣ ಹಾಗೂ ಮಧ್ಯ ಏಶಿಯಾದ ಮರಳುಗಾಡುಗಳಲ್ಲಿ ಕಂಡುಬರುತ್ತವೆ. ಚಳಿಗಾಲದಲ್ಲಿ ಇವುಗಳು ಇಲ್ಲಿಗೆ ವಲಸೆ ಬಂದಿರುವ ಸಾಧ್ಯತೆಗಳಿವೆ.
ಮೂರುಪಕ್ಷಿಗಳಲ್ಲಿ ಒಂದು ಹೆಣ್ಣು, ಇನ್ನೊಂದು ಗಂಡು,ಒಂದು ಮರಿ ಇರುವ ಹಾಗೆ ಗೋಚರಿಸಿದವು. ಈ ಪಕ್ಷಿಗಳು. ಕೆಲವೊಮ್ಮೆ ಹತ್ತಿರ ಹೋಗುವವರೆವಿಗೂ ಸುಮ್ಮನಿದ್ದು ತುಂಬಾ ಹತ್ತಿರವಾದಾಗ ಸದ್ದು ಮಾಡಿ ಪಾರಿವಾಳಧ ಹಾಗೆ ರೆಕ್ಕೆ ಬಡಿಯುತ್ತಾ ಹಾರುತ್ತವೆ.   ಈಬಗ್ಗೆ ಮಾಹಿತಿ ನೀಡಿದ ರಾಣೇಬೆನ್ನೂರು ಉಪ ವಲಯ ಅರಣ್ಯಾಧಿಕಾರಿ ಸರೇಶ ಚಟ್ರಮ್ಮನವರ, ಸಫಾರಿ ವಾಹನ ಚಾಲಕ ಫಾರುಕ್ ಇತ್ತೀಚೆಗೆ ಇವುಗಳು ಕೃಷ್ಣಮೃಗ ಅಭಯಾರಣ್ಯದಲ್ಲಿ  ಕಾಣಿಸಿಕೊಂಡಿವೆ. ಬಹಳ ಸುಕ್ಷ್ಮಪಕ್ಷಿಗಳು ಇವುಗಳಾಗಿದ್ದು, ಸಫಾರಿವೇಳೆ ಮರಿಗಳೊಂದಿಗೆ ಆಗಾಗ ಕಾಣಿಸುತ್ತವೆ ಎಂದರು.
ಗ್ರೇಟ್ ಇಂಡಿಯನ್ ಬಸ್ಟರ್ ಪಕ್ಷಿಗಳು ಈ ಕೃಷ್ಣಮೃಗ ಅಭಯಾರಣ್ಯದಿಂದ ಕಣ್ಮರೆಯಾದ ನಂತರ ಅಪರೂಪದ ಮರುಭೂಮಿ ಪಕ್ಷಿಯಾಗಿರುವ (ಸ್ಯಾಂಡ್‌ಗ್ರೋಜ್) “ಕಲ್ಲುಗೌಜಲು” ಪಕ್ಷಿಗಳು ಕಾಣಿಸಿಕೊಂಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ ಎನ್ನುಬಹದು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...