ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ “ಕಾಡು-ಮೇಡು” ಕೃತಿಗೆ ಆಯ್ಕೆ
ಹಾವೇರಿ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಕೊಡ ಮಾಡುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿನ “ರಾಷ್ಟ್ರೀಯ ಪುಸ್ತಕ ಪ್ರಶಸ್ತಿ”ಗೆ ಹಾವೇರಿಯ ಹಿರಿಯ ಪತ್ರಕರ್ತ, ಲೇಖಕ, ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ಪ್ರೇಮಿ ಮಾಲತೇಶ ಅಂಗೂರ ಅವರ “ಕಾಡು ಮೇಡು” ಕೃತಿ ಆಯ್ಕೆಯಾಗಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಅರ್ಜುನ ಗೊಳಸಂಗಿ ತಿಳಿಸಿದ್ದಾರೆ. ರಾಯಚೂರಿನಲ್ಲಿ ೨೮ ಹಾಗೂ ೨೯ ನೇ ಜೂನ್ ೨೦೨೫ ರಂದು ನಡೆಯುವ ೧೧ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂಗೂರ ಅವರ ’ಕಾಡು-ಮೇಡು’ ಓದುಗರನ್ನು ಗಮನ ಸೆಳೆದ ಕೃತಿಯಾಗಿದ್ದು, ಈಗಾಗಲೇ ದ್ವಿತೀಯ ಮುದ್ರಣ ಕಂಡಿದೆ. ’ಕಾಡು-ಮೇಡು’ ಹೆಸರೇ ಹೇಳುವಂತೆ ಈ ಕೃತಿಯಲ್ಲಿ ಕಾಡಿನಲ್ಲಿಯ ವನ್ಯಜೀವಿಗಳ ಕುರಿತಾದ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಿವೆ. ಹಾವೇರಿಯ ಸುತ್ತಮುತ್ತಲ ಕಾಡು, ಕೆರೆ, ಬೆಟ್ಟ-ಗುಡ್ಡಗಳಲ್ಲಿಯ ವನ್ಯ ಜೀವಿಗಳ ಕುರಿತಾಗಿ, ಅವುಗಳ ವೈಜ್ಞಾನಿಕ ಹೆಸರು, ಉಪಯೋಗಗಳು ಮತ್ತು ಅದಕ್ಕಿರುವ ಮಹತ್ವವನ್ನು ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೃತಿಯ ಮಹತ್ವವನ್ನು ತಿಳಿದು ದ.ಸಾ.ಪ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಹಾವೇರಿ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಕೊಡ ಮಾಡುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿನ “ರಾಷ್ಟ್ರೀಯ ಪುಸ್ತಕ ಪ್ರಶಸ್ತಿ”ಗೆ ಹಾವೇರಿಯ ಹಿರಿಯ ಪತ್ರಕರ್ತ, ಲೇಖಕ, ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ಪ್ರೇಮಿ ಮಾಲತೇಶ ಅಂಗೂರ ಅವರ “ಕಾಡು ಮೇಡು” ಕೃತಿ ಆಯ್ಕೆಯಾಗಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಅರ್ಜುನ ಗೊಳಸಂಗಿ ತಿಳಿಸಿದ್ದಾರೆ. ರಾಯಚೂರಿನಲ್ಲಿ ೨೮ ಹಾಗೂ ೨೯ ನೇ ಜೂನ್ ೨೦೨೫ ರಂದು ನಡೆಯುವ ೧೧ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂಗೂರ ಅವರ ’ಕಾಡು-ಮೇಡು’ ಓದುಗರನ್ನು ಗಮನ ಸೆಳೆದ ಕೃತಿಯಾಗಿದ್ದು, ಈಗಾಗಲೇ ದ್ವಿತೀಯ ಮುದ್ರಣ ಕಂಡಿದೆ. ’ಕಾಡು-ಮೇಡು’ ಹೆಸರೇ ಹೇಳುವಂತೆ ಈ ಕೃತಿಯಲ್ಲಿ ಕಾಡಿನಲ್ಲಿಯ ವನ್ಯಜೀವಿಗಳ ಕುರಿತಾದ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಿವೆ. ಹಾವೇರಿಯ ಸುತ್ತಮುತ್ತಲ ಕಾಡು, ಕೆರೆ, ಬೆಟ್ಟ-ಗುಡ್ಡಗಳಲ್ಲಿಯ ವನ್ಯ ಜೀವಿಗಳ ಕುರಿತಾಗಿ, ಅವುಗಳ ವೈಜ್ಞಾನಿಕ ಹೆಸರು, ಉಪಯೋಗಗಳು ಮತ್ತು ಅದಕ್ಕಿರುವ ಮಹತ್ವವನ್ನು ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೃತಿಯ ಮಹತ್ವವನ್ನು ತಿಳಿದು ದ.ಸಾ.ಪ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.