ರೈತ ಆತ್ಮಹತ್ಯೆಯಲ್ಲಿ ಹಾವೇರಿಜಿಲ್ಲೆಗಿದೆ ರಾಜ್ಯದಲ್ಲಿ  ಪ್ರಥಮ ಸ್ಥಾನ

Date:

ಕಳೆದ ವರ್ಷಅತಿ ವ್ಯಷ್ಟಿ ಯಿಂದ ಬೆಳೆದ ಬೆಳೆ ನೀರು ಪಾಲಾಗಿರುವುದು.

ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ-ಹಾವೇರಿಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ೨೧೫ ರೈತರು ಆತ್ಮಹತ್ಯೆ!
ರೈತ ಆತ್ಮಹತ್ಯೆಯಲ್ಲಿ ಹಾವೇರಿಜಿಲ್ಲೆಗಿದೆ ರಾಜ್ಯದಲ್ಲಿ  ಪ್ರಥಮ ಸ್ಥಾನ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೆ ವಿಜಯನಗರದಲ್ಲಿ  ಎರಡು ವರ್ಷಗಳ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ನಡೆಸಿತು. ಇತ್ತ ಕಳೆದ ಎರಡು ವರ್ಷಗಳಲ್ಲಿ ಕೃಷಿ ಪ್ರಧಾನ ಜಿಲ್ಲೆಯಾದ ಹಾವೇರಿಯಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಅತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ಕಳೆದ ಎರಡು ವರ್ಷಗಳಲ್ಲಿ ಹಾವೇರಿಜಿಲ್ಲೆಯಲ್ಲಿ ೨೧೫ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೇ.೩೦ರಂದು ನಡೆದ ಸಭೆಯಲ್ಲಿ ಬೆಳಕಿಗೆ ಬಂದಿದೆ.
೨೦೨೫ರ ಮೇ ೩೦ರಂದು ಸಿಎಂ ಸಿದ್ದರಾಮಯ್ಯ ಅವರು ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಕಂದಾಯ ಇಲಾಖೆಯು ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ಒದಗಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಹಾವೇರಿಜಿಲ್ಲೆಯಲ್ಲಿ ಎನ್ನುವ ಮಾಹಿತಿ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿದೆ.
೨೦೨೨ರಿಂದ ಮೇ.೨೭-೨೦೨೫ರವರೆಗೆ ನಡೆದ ರೈತ ಆತ್ಮಹತ್ಯೆಗಳ ವಿವರ: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಜಿಲ್ಲೆಯಲ್ಲಿ ನದಿಪಾತ್ರದ ಹೊಲಗದ್ದೆಗಳನ್ನು ಹೊರತು ಪಡಿಸಿದರೇ ಬಹುತೇಕ ಮಳೆಯಾಶ್ರಿತ ಬೇಸಾಯವನ್ನು ರೈತರು ನಂಬಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ೨೦೨೨-೨೩ರಲ್ಲಿ ೧೦೪, ೨೦೨೩-೨೪- ೧೦೪, ೨೦೨೪- ಏಪ್ರೀಲ್ ೧ ರಿಂದ  ೨೦೨೫ ಮೇ ೨೭ರವರೆಗೆ ಹಾವೇರಿ ಜಿಲ್ಲೆಯೊಂದರಲ್ಲೇ  ೧೨೮ ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ೧೧೧ ಪ್ರಕರಣಗಳನ್ನು ಅರ್ಹ ಪ್ರಕರಣಗಳು ಎಂದು ಕಂದಾಯ ಇಲಾಖೆಯು ಹೇಳಿದೆ.
ಜಿಲ್ಲೆಯಲ್ಲಿ ರೈತರನ್ನು ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿ ಕಾಡಿದೆ.  ಮುಂಗಾರು-ಹಿಂಗಾರು ಹಂಗಾಮಿನ ಬೆಳೆಗಳು ರೈತನ ಕೈಹಿಡಿಯದ ಕಾರಣ, ಅಧಿಕ ಬೆಳೆ ಹಾನಿಯಾಗಿದ್ದು,  ಕೃಷಿ ಸೇರಿದಂತೆ ಇತರೇ ಖರ್ಚುಗಳಿಗೆ ಮಾಡಿದ ಸಾಲ ಅದರ ಬಡ್ಡಿ, ಚಕ್ರ ಬಡ್ಡಿ ಸಾಲಬಾಧೆ  ರೈತರ ಅತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ.
ಸತತ ಐದು ವರ್ಷಗಳ ಹಿಂದೆ ಬರಗಾಲಕ್ಕೆ ನಲುಗಿದ್ದ ಜಿಲ್ಲೆಯ ಅನ್ನದಾತ, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾನೆ. ೨೦೨೦ರಲ್ಲಿ ೮೪, ೨೦೨೧ರಲ್ಲಿ ೧೧೧ ಹಾಗೂ ೨೦೨೨ರಲ್ಲಿ ೧೧೩, ೨೦೨೨-೨೩ರಲ್ಲಿ ೧೦೪, ೨೦೨೩-೨೪ ರಲ್ಲಿ ೧೦೪, ೨೦೨೪-  ಏಪ್ರೀಲ್ ೧ ರಿಂದ  ೨೦೨೫ ಮೇ ೨೭ರವರೆಗೆ ೧೧೧ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
೨೦೧೫ರಲ್ಲಿ ಮಂಡ್ಯ ಬಿಟ್ಟರೆ ರಾಜ್ಯದಲ್ಲಿ ಹಾವೇರಿಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಮಾಡಿಕೊಂಡಿರುವ ಕುಖ್ಯಾತಿ ಹಾವೇರಿಜಿಲ್ಲೆಗೆ ಸಂದಿದೆ.  ನಿರಂತರ ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವಾಡಿಕೆ ಮಳೆಗಿಂತ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆಗಳು ಜಲಾವೃತಗೊಂಡು, ಫಸಲುಗಳು ನೀರಿನಲ್ಲೇ
ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವಾಡಿಕೆ ಮಳೆಗಿಂತ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆಗಳು ಜಲಾವೃತಗೊಂಡು, ಫಸಲುಗಳು ನೀರಿನಲ್ಲೇ ಕೊಳೆತು ಹೋದವು. ಕೆಲವು ಕಡೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಕೀಟಬಾಧೆಯಿಂದ ಬೆಳೆಗಳು ಕಮರಿ ಹೋಗಿವೆ. ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೇ ನಿತ್ಯವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ವರದಿಗಳು ಆತಂಕ ಸೃಷ್ಟಿಸಿವೆ.
ಒಂದು ಎಕರೆ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ ಎಕರೆಗೆ ಎರಡು ಕ್ವಿಂಟಲ್ ಮೆಕ್ಕೆಜೋಳ ಬರುತ್ತಿಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ಬೆಳೆ ಹಾನಿ ಪರಿಹಾರ ಕೊಡುತ್ತಿಲ್ಲ. ಹೀಗಾಗಿ ರೈತರು ಬ್ಯಾಂಕು, ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ “ಪ್ರತಿ ವರ್ಷ ಬೆಳೆ ಹಾನಿಯಾದರೆ ಸಾಲದ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸಾಲ ತೀರಿಸುವುದು ಅಸಾಧ್ಯವಾಗುವುದರಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ವಿಶೇಷ ಯೋಜನೆ ರೂಪಿಸಬೇಕು’ ಎನ್ನುವುದು ರೈತರ ಆಗ್ರಹವಾಗಿದೆ.
ರೈತನ ಜೀವನ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೆ ರೈತ ಹಾಕಿದ ಬಂಡವಾಳ ಮಣ್ಣು ಪಾಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದಿನದ ೨೪ ಗಂಟೆ ವಿದ್ಯುತ್ ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕಳಪೆ ಬೀಜಗಳಿಂದ ರೈತನ ಉತ್ಪಾದನೆ ಕಡಿಮೆಯಾಗುತ್ತಿದೆ. ಇಳುವರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

’ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ’

ಸರ್ಕಾರ ರೈತಪರ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಗೆ ಮುಂದಾಗಬೇಕು. ಆದರೆ ಸರ್ಕಾರ ರೂಪಿಸಿರುವ ರೈತಪರ ಯೋಜನೆಗಳು ಸರಿಯಾಗಿ ಅರ್ಹ ರೈತರಿಗೆ ತಲುಪುತ್ತಿಲ್ಲ’. ರೈತರಿಗೆ ೫ಲಕ್ಷರೂ ಬಡ್ಡಿ ರಹಿತ ಸಾಲ ಸಿಗುತ್ತಿಲ್ಲ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಆಗ್ರಹಿಸುತ್ತಲೇ ಬಂದಿದ್ದೇವೆ. ಸರ್ಕಾರ ತಕ್ಷಣ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು. ಆತ್ಮಹತ್ಯೆ ಹಾದಿ ಹಿಡಿದಿರುವ ಅನ್ಯದಾತರಲ್ಲಿ ಭರವಸೆ ಮೂಡಿಸುವ ಮೂಲಕ  ’ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ  ರಾಮಣ್ಣ ಕೆಂಚಳ್ಳೇರ.

ರೈತರ ಸಮಸ್ಯೆಗೆ ಸರ್ಕಾರದ ಸ್ಪಂದನೆಯಿಲ್ಲ’

ರೈತರ ಸಮಸ್ಯೆಗಳಿಗೆ ಪೂರಕವಾಗಿ ಸರ್ಕಾರದ ಸ್ಪಂದನೆಯಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತನ ಬದುಕು ಕತ್ತಲಾಗುತ್ತದೆ. ಉತ್ತಮ ಬೆಳೆ ಬಂದಾಗ ಬೆಂಬಲ ಬೆಲೆಯಿಲ್ಲದೇ ರೈತ ಹತಾಶೆಗೊಳಾಗಾಗುತ್ತಿದ್ದಾನೆ. ಸರ್ಕಾರ ಬೆಳೆಗೆ ಬೆಲೆ ನಿಗದಿಪಡಿಸುತ್ತದೆ, ಆದರೆ ಉತ್ಪನ್ನವನ್ನು ಖರೀದಿಸುವುದಿಲ್ಲ’. ಮುಂಗಾರು ಇರಲಿ ಹಿಂಗಾರು ಇರಲಿ ಬಿತ್ತನೆ ಬೀಜ, ರಸ ಗೊಬ್ಬರಕ್ಕೆ ರೈತನ ಪರದಾಟ ತಪ್ಪುವುದಿಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ರೈತನ ಕುಟುಂಬಕ್ಕೆ ರೈತರನ್ನು ಹೊರತುಪಡಿಸಿ ಚುನಾಯಿತರು, ಶಾಸಕರು, ಸಚಿವರು ಸಾಂತನ ಸಹ ಹೇಳುವುದಿಲ್ಲ. ಸರ್ಕಾರ ನೀಡುವ ೫ಲಕ್ಷರೂ ಪರಿಹಾರವನ್ನು ಅನೇಕ ದಾಖಲೆಗಳ ಪರಿಶೀಲನೆಯ ನಂತರ ನೀಡಲಾಗುತ್ತದೆ. ’ರೈತರ ಸಮಸ್ಯೆಗೆ ಸರ್ಕಾರದ ಸ್ಪಂದನೆಯಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಾವೇರಿಯ ಪ್ರಗತಿಪರ ಕೃಷಿಕ ಶಿವಯೋಗಿ ಬೆನ್ನೂರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಕಳೆದ ವರ್ಷಅತಿ ವ್ಯಷ್ಟಿ ಯಿಂದ ಬೆಳೆದ ಬೆಳೆ ನೀರು ಪಾಲಾಗಿರುವುದು.

ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ-ಹಾವೇರಿಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ೨೧೫ ರೈತರು ಆತ್ಮಹತ್ಯೆ!
ರೈತ ಆತ್ಮಹತ್ಯೆಯಲ್ಲಿ ಹಾವೇರಿಜಿಲ್ಲೆಗಿದೆ ರಾಜ್ಯದಲ್ಲಿ  ಪ್ರಥಮ ಸ್ಥಾನ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೆ ವಿಜಯನಗರದಲ್ಲಿ  ಎರಡು ವರ್ಷಗಳ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ನಡೆಸಿತು. ಇತ್ತ ಕಳೆದ ಎರಡು ವರ್ಷಗಳಲ್ಲಿ ಕೃಷಿ ಪ್ರಧಾನ ಜಿಲ್ಲೆಯಾದ ಹಾವೇರಿಯಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಅತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ಕಳೆದ ಎರಡು ವರ್ಷಗಳಲ್ಲಿ ಹಾವೇರಿಜಿಲ್ಲೆಯಲ್ಲಿ ೨೧೫ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೇ.೩೦ರಂದು ನಡೆದ ಸಭೆಯಲ್ಲಿ ಬೆಳಕಿಗೆ ಬಂದಿದೆ.
೨೦೨೫ರ ಮೇ ೩೦ರಂದು ಸಿಎಂ ಸಿದ್ದರಾಮಯ್ಯ ಅವರು ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಕಂದಾಯ ಇಲಾಖೆಯು ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ಒದಗಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಹಾವೇರಿಜಿಲ್ಲೆಯಲ್ಲಿ ಎನ್ನುವ ಮಾಹಿತಿ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿದೆ.
೨೦೨೨ರಿಂದ ಮೇ.೨೭-೨೦೨೫ರವರೆಗೆ ನಡೆದ ರೈತ ಆತ್ಮಹತ್ಯೆಗಳ ವಿವರ: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಜಿಲ್ಲೆಯಲ್ಲಿ ನದಿಪಾತ್ರದ ಹೊಲಗದ್ದೆಗಳನ್ನು ಹೊರತು ಪಡಿಸಿದರೇ ಬಹುತೇಕ ಮಳೆಯಾಶ್ರಿತ ಬೇಸಾಯವನ್ನು ರೈತರು ನಂಬಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ೨೦೨೨-೨೩ರಲ್ಲಿ ೧೦೪, ೨೦೨೩-೨೪- ೧೦೪, ೨೦೨೪- ಏಪ್ರೀಲ್ ೧ ರಿಂದ  ೨೦೨೫ ಮೇ ೨೭ರವರೆಗೆ ಹಾವೇರಿ ಜಿಲ್ಲೆಯೊಂದರಲ್ಲೇ  ೧೨೮ ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ೧೧೧ ಪ್ರಕರಣಗಳನ್ನು ಅರ್ಹ ಪ್ರಕರಣಗಳು ಎಂದು ಕಂದಾಯ ಇಲಾಖೆಯು ಹೇಳಿದೆ.
ಜಿಲ್ಲೆಯಲ್ಲಿ ರೈತರನ್ನು ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿ ಕಾಡಿದೆ.  ಮುಂಗಾರು-ಹಿಂಗಾರು ಹಂಗಾಮಿನ ಬೆಳೆಗಳು ರೈತನ ಕೈಹಿಡಿಯದ ಕಾರಣ, ಅಧಿಕ ಬೆಳೆ ಹಾನಿಯಾಗಿದ್ದು,  ಕೃಷಿ ಸೇರಿದಂತೆ ಇತರೇ ಖರ್ಚುಗಳಿಗೆ ಮಾಡಿದ ಸಾಲ ಅದರ ಬಡ್ಡಿ, ಚಕ್ರ ಬಡ್ಡಿ ಸಾಲಬಾಧೆ  ರೈತರ ಅತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ.
ಸತತ ಐದು ವರ್ಷಗಳ ಹಿಂದೆ ಬರಗಾಲಕ್ಕೆ ನಲುಗಿದ್ದ ಜಿಲ್ಲೆಯ ಅನ್ನದಾತ, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾನೆ. ೨೦೨೦ರಲ್ಲಿ ೮೪, ೨೦೨೧ರಲ್ಲಿ ೧೧೧ ಹಾಗೂ ೨೦೨೨ರಲ್ಲಿ ೧೧೩, ೨೦೨೨-೨೩ರಲ್ಲಿ ೧೦೪, ೨೦೨೩-೨೪ ರಲ್ಲಿ ೧೦೪, ೨೦೨೪-  ಏಪ್ರೀಲ್ ೧ ರಿಂದ  ೨೦೨೫ ಮೇ ೨೭ರವರೆಗೆ ೧೧೧ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
೨೦೧೫ರಲ್ಲಿ ಮಂಡ್ಯ ಬಿಟ್ಟರೆ ರಾಜ್ಯದಲ್ಲಿ ಹಾವೇರಿಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಮಾಡಿಕೊಂಡಿರುವ ಕುಖ್ಯಾತಿ ಹಾವೇರಿಜಿಲ್ಲೆಗೆ ಸಂದಿದೆ.  ನಿರಂತರ ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವಾಡಿಕೆ ಮಳೆಗಿಂತ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆಗಳು ಜಲಾವೃತಗೊಂಡು, ಫಸಲುಗಳು ನೀರಿನಲ್ಲೇ
ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವಾಡಿಕೆ ಮಳೆಗಿಂತ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆಗಳು ಜಲಾವೃತಗೊಂಡು, ಫಸಲುಗಳು ನೀರಿನಲ್ಲೇ ಕೊಳೆತು ಹೋದವು. ಕೆಲವು ಕಡೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಕೀಟಬಾಧೆಯಿಂದ ಬೆಳೆಗಳು ಕಮರಿ ಹೋಗಿವೆ. ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೇ ನಿತ್ಯವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ವರದಿಗಳು ಆತಂಕ ಸೃಷ್ಟಿಸಿವೆ.
ಒಂದು ಎಕರೆ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ ಎಕರೆಗೆ ಎರಡು ಕ್ವಿಂಟಲ್ ಮೆಕ್ಕೆಜೋಳ ಬರುತ್ತಿಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ಬೆಳೆ ಹಾನಿ ಪರಿಹಾರ ಕೊಡುತ್ತಿಲ್ಲ. ಹೀಗಾಗಿ ರೈತರು ಬ್ಯಾಂಕು, ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ “ಪ್ರತಿ ವರ್ಷ ಬೆಳೆ ಹಾನಿಯಾದರೆ ಸಾಲದ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸಾಲ ತೀರಿಸುವುದು ಅಸಾಧ್ಯವಾಗುವುದರಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ವಿಶೇಷ ಯೋಜನೆ ರೂಪಿಸಬೇಕು’ ಎನ್ನುವುದು ರೈತರ ಆಗ್ರಹವಾಗಿದೆ.
ರೈತನ ಜೀವನ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೆ ರೈತ ಹಾಕಿದ ಬಂಡವಾಳ ಮಣ್ಣು ಪಾಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದಿನದ ೨೪ ಗಂಟೆ ವಿದ್ಯುತ್ ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕಳಪೆ ಬೀಜಗಳಿಂದ ರೈತನ ಉತ್ಪಾದನೆ ಕಡಿಮೆಯಾಗುತ್ತಿದೆ. ಇಳುವರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

’ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ’

ಸರ್ಕಾರ ರೈತಪರ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಗೆ ಮುಂದಾಗಬೇಕು. ಆದರೆ ಸರ್ಕಾರ ರೂಪಿಸಿರುವ ರೈತಪರ ಯೋಜನೆಗಳು ಸರಿಯಾಗಿ ಅರ್ಹ ರೈತರಿಗೆ ತಲುಪುತ್ತಿಲ್ಲ’. ರೈತರಿಗೆ ೫ಲಕ್ಷರೂ ಬಡ್ಡಿ ರಹಿತ ಸಾಲ ಸಿಗುತ್ತಿಲ್ಲ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಆಗ್ರಹಿಸುತ್ತಲೇ ಬಂದಿದ್ದೇವೆ. ಸರ್ಕಾರ ತಕ್ಷಣ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು. ಆತ್ಮಹತ್ಯೆ ಹಾದಿ ಹಿಡಿದಿರುವ ಅನ್ಯದಾತರಲ್ಲಿ ಭರವಸೆ ಮೂಡಿಸುವ ಮೂಲಕ  ’ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ  ರಾಮಣ್ಣ ಕೆಂಚಳ್ಳೇರ.

ರೈತರ ಸಮಸ್ಯೆಗೆ ಸರ್ಕಾರದ ಸ್ಪಂದನೆಯಿಲ್ಲ’

ರೈತರ ಸಮಸ್ಯೆಗಳಿಗೆ ಪೂರಕವಾಗಿ ಸರ್ಕಾರದ ಸ್ಪಂದನೆಯಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತನ ಬದುಕು ಕತ್ತಲಾಗುತ್ತದೆ. ಉತ್ತಮ ಬೆಳೆ ಬಂದಾಗ ಬೆಂಬಲ ಬೆಲೆಯಿಲ್ಲದೇ ರೈತ ಹತಾಶೆಗೊಳಾಗಾಗುತ್ತಿದ್ದಾನೆ. ಸರ್ಕಾರ ಬೆಳೆಗೆ ಬೆಲೆ ನಿಗದಿಪಡಿಸುತ್ತದೆ, ಆದರೆ ಉತ್ಪನ್ನವನ್ನು ಖರೀದಿಸುವುದಿಲ್ಲ’. ಮುಂಗಾರು ಇರಲಿ ಹಿಂಗಾರು ಇರಲಿ ಬಿತ್ತನೆ ಬೀಜ, ರಸ ಗೊಬ್ಬರಕ್ಕೆ ರೈತನ ಪರದಾಟ ತಪ್ಪುವುದಿಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ರೈತನ ಕುಟುಂಬಕ್ಕೆ ರೈತರನ್ನು ಹೊರತುಪಡಿಸಿ ಚುನಾಯಿತರು, ಶಾಸಕರು, ಸಚಿವರು ಸಾಂತನ ಸಹ ಹೇಳುವುದಿಲ್ಲ. ಸರ್ಕಾರ ನೀಡುವ ೫ಲಕ್ಷರೂ ಪರಿಹಾರವನ್ನು ಅನೇಕ ದಾಖಲೆಗಳ ಪರಿಶೀಲನೆಯ ನಂತರ ನೀಡಲಾಗುತ್ತದೆ. ’ರೈತರ ಸಮಸ್ಯೆಗೆ ಸರ್ಕಾರದ ಸ್ಪಂದನೆಯಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಾವೇರಿಯ ಪ್ರಗತಿಪರ ಕೃಷಿಕ ಶಿವಯೋಗಿ ಬೆನ್ನೂರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...