ಶಿಗ್ಗಾಂವ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ
ಹಾವೇರಿ: ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮ ಪತ್ರ ಸಲ್ಲಿಕೆಯ ಮುನ್ನಾ ದಿನವಾದ ಗುರುವಾರ ಸಂಜೆ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಯನ್ನಾಗಿ ಯಾಸೀರಖಾನ್ ಪಠಾಣ ಅವರ ಹೆಸರನ್ನು ಅಂತಿಮಗೊಳಿಸಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಯಾಸೀರಖಾನ್ ಪಠಾಣ ಇದೀಗ ಉಪಚುನಾವಣೆಗೆ ಕೈ ಟಿಕೆಟ್ ಪಡೆಯುವಲ್ಲಿ ಯಶಸ್ಸುಕಂಡಿದ್ದಾರೆ. ನಾಮಪತ್ರಸಲ್ಲಿಕೆಗೆ ಕಡೆಯದಿನವಾದ ಅ.೨೫ರ ಶುಕ್ರವಾರ ಪಠಾಣ ನಾಮಪತ್ರ ಸಲ್ಲಿಸಲಿದ್ದಾರೆ.
೨೩ರಲ್ಲಿ ತಂದೆ ಎದುರಾಳಿ,೨೪ರಲ್ಲಿ ಪುತ್ರ ಎದುರಾಳಿ: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸೀರ್ ಖಾನ್ ಪಠಾಣ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದರು. ಆ ವೇಳೆ ಬೊಮ್ಮಾಯಿ ಅವರಿಗೆ ೯೦೦೭೩ ಮತಗಳು ಚಲಾವಣೆಯಾಗಿದ್ದವು. ಪಠಾಣ ಅವರಿಗೆ ೬೩೭೩೨ಮತಗಳು ಚಲಾವಣೆಯಾಗಿದ್ದವು. ಅಂತಿಮವಾಗಿ ಪಠಾಣ ಅವರು ೩೫೩೪೧ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಬಸವರಾಜ ಬೊಮ್ಮಾಯಿ ಅವರು ಹಾವೇರಿಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ನಂತರ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತೆರವಾಗಿರುವ ಶಿಗ್ಗಾಂವ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸೀರ್ ಖಾನ್ ಪಠಾಣಗೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಎದುರಾಳಿಯಾಗಿದ್ದಾರೆ.
ಯಾಸೀರ್ ಖಾನ್ ಪಠಾಣ ಪರಿಚಯ: ಯಾಸೀರ್ ಖಾನ್ ಪಠಾಣ ಬಿಎಎಲ್ಎಲ್ಬಿ ಪದವಿಧರರಾಗಿದ್ದು, ಕ್ರೀಡಾಪಟುವಾಗಿ ಇವರು ಹೆಸರುಮಾಡಿದ್ದಾರೆ. ಇವರು ವಾಣಿಜ್ಯೋದ್ಯಮಿಯಾಗಿ, ಕೃಷಿಕರಾಗಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ಇವರು ನಿರ್ವಹಿಸಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ ಪಡೆದಿದ್ದ ಇವರು ಇದೀಗ ನಡೆಯುತ್ತಿರುವ ಶಿಗ್ಗಾಂವ ಉಪಚುನಾವಣೆಗೆ ಟಿಕೆಟ್ ಪಡೆಯಲು ತೀವೃ ಪೈಪೋಟಿಯ ನಡುವೆ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ಸು ಕಂಡಿರುವ ಇವರು ಚುನಾವಣೆಯಲ್ಲಿ ಯಶಸ್ಸು ಸಾಧಿಸುವರೇ? ಕಾದು ನೋಡಬೇಕಿದೆ.
ಶಿಗ್ಗಾಂವ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ
Date:
ಶಿಗ್ಗಾಂವ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ
ಹಾವೇರಿ: ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮ ಪತ್ರ ಸಲ್ಲಿಕೆಯ ಮುನ್ನಾ ದಿನವಾದ ಗುರುವಾರ ಸಂಜೆ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಯನ್ನಾಗಿ ಯಾಸೀರಖಾನ್ ಪಠಾಣ ಅವರ ಹೆಸರನ್ನು ಅಂತಿಮಗೊಳಿಸಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಯಾಸೀರಖಾನ್ ಪಠಾಣ ಇದೀಗ ಉಪಚುನಾವಣೆಗೆ ಕೈ ಟಿಕೆಟ್ ಪಡೆಯುವಲ್ಲಿ ಯಶಸ್ಸುಕಂಡಿದ್ದಾರೆ. ನಾಮಪತ್ರಸಲ್ಲಿಕೆಗೆ ಕಡೆಯದಿನವಾದ ಅ.೨೫ರ ಶುಕ್ರವಾರ ಪಠಾಣ ನಾಮಪತ್ರ ಸಲ್ಲಿಸಲಿದ್ದಾರೆ.
೨೩ರಲ್ಲಿ ತಂದೆ ಎದುರಾಳಿ,೨೪ರಲ್ಲಿ ಪುತ್ರ ಎದುರಾಳಿ: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸೀರ್ ಖಾನ್ ಪಠಾಣ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದರು. ಆ ವೇಳೆ ಬೊಮ್ಮಾಯಿ ಅವರಿಗೆ ೯೦೦೭೩ ಮತಗಳು ಚಲಾವಣೆಯಾಗಿದ್ದವು. ಪಠಾಣ ಅವರಿಗೆ ೬೩೭೩೨ಮತಗಳು ಚಲಾವಣೆಯಾಗಿದ್ದವು. ಅಂತಿಮವಾಗಿ ಪಠಾಣ ಅವರು ೩೫೩೪೧ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಬಸವರಾಜ ಬೊಮ್ಮಾಯಿ ಅವರು ಹಾವೇರಿಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ನಂತರ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತೆರವಾಗಿರುವ ಶಿಗ್ಗಾಂವ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸೀರ್ ಖಾನ್ ಪಠಾಣಗೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಎದುರಾಳಿಯಾಗಿದ್ದಾರೆ.
ಯಾಸೀರ್ ಖಾನ್ ಪಠಾಣ ಪರಿಚಯ: ಯಾಸೀರ್ ಖಾನ್ ಪಠಾಣ ಬಿಎಎಲ್ಎಲ್ಬಿ ಪದವಿಧರರಾಗಿದ್ದು, ಕ್ರೀಡಾಪಟುವಾಗಿ ಇವರು ಹೆಸರುಮಾಡಿದ್ದಾರೆ. ಇವರು ವಾಣಿಜ್ಯೋದ್ಯಮಿಯಾಗಿ, ಕೃಷಿಕರಾಗಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ಇವರು ನಿರ್ವಹಿಸಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ ಪಡೆದಿದ್ದ ಇವರು ಇದೀಗ ನಡೆಯುತ್ತಿರುವ ಶಿಗ್ಗಾಂವ ಉಪಚುನಾವಣೆಗೆ ಟಿಕೆಟ್ ಪಡೆಯಲು ತೀವೃ ಪೈಪೋಟಿಯ ನಡುವೆ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ಸು ಕಂಡಿರುವ ಇವರು ಚುನಾವಣೆಯಲ್ಲಿ ಯಶಸ್ಸು ಸಾಧಿಸುವರೇ? ಕಾದು ನೋಡಬೇಕಿದೆ.