ಶಿಗ್ಗಾಂವ ವಿಧಾನಸಭಾ ಉಪ
ಚುನಾವಣೆ: ಅಂತಿಮ ಕಣದಲ್ಲಿ ೮ ಅಭ್ಯರ್ಥಿಗಳು
ಹಾವೇರಿ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಣದಲ್ಲಿ ಅಂತಿಮವಾಗಿ ಎಂಟು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಅಕ್ಟೋಬರ್ ೩೦ರಂದು ೧೧ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದರು.
ಅಂತಿಮವಾಗಿ ಭಾರತೀಯ ಜನತಾ ಪಾರ್ಟಿಯಿಂದ ಭರತ ಬೊಮ್ಮಾಯಿ, ಇಂಡಿಯನ್ ನ್ಯಾಷನಲ್
ಕಾಂಗ್ರೆಸ್ನಿಂದ ಪಠಾಣ ಯಾಸೀರ ಅಹ್ಮದಖಾನ, ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ)ದಿಂದ
ಖಾಜಾಮೊಹಿದ್ದೀನ ಗುಡಗೇರಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರವಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ
ಡಾ.ಜಿ.ಹೆಚ್. ಇಮ್ರಾಪೂರ, ಶಿದ್ದಪ್ಪ ಹೊಸಳ್ಳಿ, ಎಸ್.ಎಸ್.ಪಾಟೀಲ ಮತ್ತು ಸಾತಪ್ಪ ನೀಲಪ್ಪ ದೇಸಾಯಿ
ಅವರು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣೆ: ಯಾರಿಗೆ ಯಾವ ಚಿಹ್ನೆ?
ಹಾವೇರಿ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ
ಅಂತಿಮವಾಗಿ ಕಣದಲ್ಲಿರುವ ೮ ಅಭ್ಯರ್ಥಿಗ
ಳಿಗೆ ವಿವಿಧ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.
ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಿರುವ ಭರತ ಬೊಮ್ಮಾಯಿ ಅವರಿಗೆ (ಕಮಲ), ಇಂಡಿಯನ್
ನ್ಯಾಷನಲ್ ಕಾಂಗ್ರೆಸ್
ಗ್ರೆಸ್ನಿಂದ ಸ್ಪರ್ಧಿಸಿರುವ ಪಠಾಣ ಯಾಸೀರ ಅಹ್ಮದಖಾನ ಅವರಿಗೆ (ಕೈ), ಸೋಸಿಯಾಲಿಸ್ಟ್
ಪಾರ್ಟಿ(ಇಂಡಿಯಾ)ದಿಂದ ಸ್ಪರ್ಧಿಸಿರುವ ಖಾಜಾಮೊಹಿದ್ದೀನ ಗುಡಗೇರಿ ಅವರಿಗೆ (ಕಬ್ಬು ರೈತ), ಕರ್ನಾಟಕ ರಾಷ್ಟ್ರದ
ಸಮಿತಿಯಿಂದ ಸ್ಪರ್ಧಿಸಿರುವ ರವಿ ಕೃಷ್ಣಾರೆಡ್ಡಿ ಅವರಿಗೆ (ಸೀಟಿ (ವ್ಹಿಜಲ್), ಪಕ್ಷೇತರ ಅಭ್ಯರ್ಥಿಗಳಾಗಿ
ಸ್ಪರ್ಧಿಸಿರುವ ಡಾ.ಜಿ.ಹೆಚ್. ಇಮ್ರಾಪೂರ ಅವರಿಗೆ (ಹಲಸಿನ ಹಣ್ಣು), ಶಿದ್ದಪ್ಪ ಹೊಸಳ್ಳಿ ಅವರಿಗೆ (ಕೊಳಲು),
ಎಸ್.ಎಸ್.ಪಾಟೀಲ ಅವರಿಗೆ (ಏಳು ಕಿರಣಗಳಿರುವ ಪೆನ್ನಿನ ನಿಬ್) ಮತ್ತು ಸಾತಪ್ಪ ನೀಲಪ್ಪ ದೇಸಾಯಿ
ಅವರಿಗೆ (ಆಟೋ ರಿಕ್ಷಾ) ಚಿಹ್ನಗಳನ್ನು ಹಂಚಿಕೆ ಮಾಡಲಾಗಿದೆ.