ಸಂಜಯಗಾಂಧಿ ಸಾಮಾಜಿಕ ಕಳಕಳಿ ಶ್ಯಾಘನೀಯ:ಡಿ.ಎಸ್.ಮಾಳಗಿ
ಹಾವೇರಿ :ದಲಿತ ಸಮುದಾಯಗಳ ಯುವ ನಾಯಕರು ಹೆಚ್ಚು ಬೆಳೆಯಬೇಕು. ಅವರ ಬೆಳೆವಣೆಗೆಗೆ ಹಿರಿಯರ ಮಾರ್ಗದರ್ಶನ, ಸಲಹೆ ಸೂಚನೆಗಳು ಸದಾ ಇರಲಿದೆ ಎಂದು ಲಿಡ್ಕರ್ ಉಪಾಧ್ಯಕ್ಷರಾದ ಡಿ. ಎಸ್. ಮಾಳಗಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮಾಜದ ಜಿಲ್ಲಾಧ್ಯಕ್ಷರಾದ ಸಂಜಯಗಾಂಧಿ ಸಂಜೀವಣ್ಣನವರ ಅವರ ಹುಟ್ಟುಹಬ್ಬದ ನಿಮಿತ್ಯವಾಗಿ ಡಿಎಸ್ಎಸ್ ಹಾಗೂ ಸಮಾಜದ ವತಿಂದ ಅವರನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ನಮ್ಮ ಸಮಾಜದ ಜನತೆ ಸರ್ಕಾರದ ಸೌಲಭ್ಯಗಳನ್ನು ಪಡೆದು ಎಲ್ಲಾ ರಂಗದಲ್ಲಿ ಮುಂದೆಬರಬೇಕು. ಯುವ ನಾಯಕ ಸಂಜಯಗಾಂಧಿ ಸಂಜೀವಣ್ಣನವರ ನಿರಂತರವಾಗಿ ಹೋರಾಟ ಮಾಡುತ್ತಾ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ .ಅವನಿಗೆ ದೇವರು ಆಯುಷ್ಯ ಆರೋಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ನಾವು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು .ನಮ್ಮ ಯುವ ಮಿತ್ರರು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕು.ಸರ್ಕಾರದ ಸ್ಥಾನಮಾನಗಳನ್ನು ಪಡೆದು ಸಮಾಜದ ಕೆಲಸಕ್ಕೆ ಶ್ರಮವಹಿಸಬೇಕೆಂದರು.
ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ನನ್ನ ಜನ್ಮ ದಿನ ಗೌರವಿಸಿ ಸನ್ಮಾನಿಸಿದ್ದು ತುಂಬಾ ಸಂತೋಷವಾಗಿದೆ. ತಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎನ್ ಎನ್ ಗಾಳೆಮ್ಮನವರ,ಮಲ್ಲಪ್ಪ ಕಡಕೊಳ, ಶಿವರಾಜ ಹರಿಜನ,ಶ್ರೀಕಾಂತ ಗಡ್ಡಿ, ಮಾರುತಿ ಸೊಟ್ಟಪ್ಪನವರ, ಹನುಮಂತಪ್ಪ ಸೊಟ್ಟಪ್ಪನವರ, ಮಂಜುನಾಥ ಮಡಿವಾಳರ,ಶಿವಬಸಪ್ಪ ಸೊಸೈಟಿ, ಗಿರೀಶ ಬ್ಯಾಡಗಿ,ನಿರಂಜನ ಬಳೆಗಾರ,ಈರಪ್ಪ ಹರಿಜನ ಸೇರಿದಂತೆ ಅನೇಕರಿದ್ದರು.