ಸಂತೆ ಶುಲ್ಕ ಟೆಂಡ‌ರ್ ನಲ್ಲಿ ನಿಯಮ ಉಲ್ಲಂಘನೆ- ಹಾವೇರಿ ಪ್ರಥಮ ಪ್ರಜೆಯ ಸದಸ್ಯತ್ವ ರದ್ದತಿಗೆ ಮಾಜಿ ಸದಸ್ಯಇಟಗಿ ಒತ್ತಾಯ

Date:

 

 

ಸಂತೆ ಶುಲ್ಕ ಟೆಂಡ‌ರ್ ನಲ್ಲಿ ನಿಯಮ ಉಲ್ಲಂಘನೆ- ಹಾವೇರಿ ಪ್ರಥಮ ಪ್ರಜೆಯ ಸದಸ್ಯತ್ವ ರದ್ದತಿಗೆ ಮಾಜಿ ಸದಸ್ಯಇಟಗಿ ಒತ್ತಾಯ
ಹಾವೇರಿ : ಇಲ್ಲಿನ . ನಗರಸಭೆ ವ್ಯಾಪ್ತಿಯ ೨೦೨೫-೨೬ನೇ ಸಾಲಿನ ೧೨ ತಿಂಗಳ ಅವಧಿಯ ದೈನಂದಿನ ಮತ್ತು ವಾರದ ಸಂತೆ ನೆಲಬಾಡಿಗೆ ಶುಲ್ಕ ಹಾಗೂ ಬೈಲು ಜಾಗ ಅಂಗಡಿಗಳಿಂದ ನೆಲ ಸವಕಳಿ ಶುಲ್ಕ ವಸೂಲಿಗೆ ಕರೆಯಲಾಗಿದ್ದ ಟೆಂಡರ್
ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರ ಮೇಲೆ ಕ್ರಮ ಜರುಗಿಸಿ ಅವರ ಸದಸ್ಯತ್ವ ರದ್ದುಗೊಳಿಸುವಂತೆ ನಗರಸಭೆಯ ಮಾಜಿ ಸದಸ್ಯ ವೆಂಕಂಟೇಶ ಇಟಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಶುಕ್ರವಾರ ಮನವಿ ಅರ್ಪಿಸಿದ್ದಾರೆ.
ಸಂತೆ ಶುಲ್ಕ ವಸೂಲಾತಿಗಾಗಿ
ಮಾ. ೨೭ರಂದು ಬೆಳಿಗ್ಗೆ ೧೦ ಗಂಟೆಗೆ ನಡೆದ ಹರಾಜಿನಲ್ಲಿ ಯಶಸ್ವಿ ಟೆಂಡರದಾರ ಶರಣಪ್ಪ ಮಾಳಗಿ ನಿಯಮಾನುಸಾರ ನಡೆದುಕೊಳ್ಳದೇ ಇದ್ದಾಗ್ಯೂ ಕಾನೂನು ಬಾಹಿರವಾಗಿ ಸದರಿಯವನಿಗೆ ಸಂತೆ ಶುಲ್ಕ ವಸೂಲಿ ಮಾಡಲು ಅನುಮತಿಸಿ ಅವಕಾಶ ನೀಡಿದ್ದು, ಶರಣಪ್ಪ ಶಶಿಕಲಾ ಮಾಳಗಿ ಇವರ ಹತ್ತಿರದ ಸಂಬಂಧಿಕರಾಗಿದ್ದು, ನಗರಸಭೆ ಅಧ್ಯಕ್ಷ ರ ಬಗ್ಗೆ ಹಾಗೂ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಶಶಿಕಲಾ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಮನವಿಯಲ್ಲಿ ಇಟಗಿ ಆಗ್ರಹಿಸಿದ್ದಾರೆ.
ಸಂತೆ ಶುಲ್ಕ ವಸೂಲಾತಿಗಾಗಿ ನಡೆದ ಬಹಿರಂಗ ಹರಾಜಿನಲ್ಲಿ
ವೆಂಕಟೇಶ ಇಟಗಿ ಸಹ ೧ಲಕ್ಷರೂ ಆರಂಭಿಕ ಶುಲ್ಕವನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಒಟ್ಟು ೯ ಜನ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜು ಪ್ರಕ್ರಿಯೆ ಕೊನೆಗೊಳ್ಳುವುದರೊಳಗಾಗಿ ಶರಣಪ್ಪ ಮಾಳಗಿ ಇವರು ಅತೀ ಹೆಚ್ಚು ಅಂದರೆ ೨೯ಲಕ್ಷರೂ ಗಳಿಗೆ ಹರಾಜು ಕೂಗಿದ್ದರಿಂದ ಶರಣಪ್ಪ ಮಾಳಗಿ ಇವರು ಟೆಂಡರದಾರನಾಗಿ ಹೊರಹೊಮ್ಮಿದ್ದು, ಇಟಗಿ ೨ನೇ ಅತೀ ಹೆಚ್ಚು ೨೮.೬೦ ಯಶಸ್ವಿ
ಲಕ್ಷರೂ ಹರಾಜು ಕೂಗಿ ೨ನೇ ಅತೀ ಹೆಚ್ಚು ಹರಾಜು ಕೂಗಿದ ಬಿಡ್ಡದಾರನಾಗಿದ್ದರು.
ನಗರಸಭೆ ಮಾ.೧೩ ರಂದು ಹೊರಡಿಸಿದ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಷರತ್ತಿನ ಪೈಕಿ ಷರತ್ತು ೪ರ ಪ್ರಕಾರ ಮಂಜೂರಾದ ದಿನದಂದು ಹರಾಜು ಮೊತ್ತದ ಅರ್ಧ ಶೇಕಡಾ ೫೦% ಭಾಗದಷ್ಟು ಹಣವನ್ನು ಪಾವತಿಮಾಡಿ ರಶೀದಿ ಪಡೆಯುವುದು ಮತ್ತು ಉಳಿದ ಅರ್ಧ ಹಣವನ್ನು ೧೫ ದಿನಗಳೊಳಗಾಗಿ ಭರಣಾ‌ ಮಾಡತಕ್ಕದ್ದು ಎಂದು ಷರತ್ತು ವಿಧಿಸಿದ್ದು, ಹರಾಜು ಆದ ೨೪ ಗಂಟೆಯ ನಂತರ ೨೦೦/-ಗಳ ಛಾಪಾಕಾಗದದ ಮೇಲೆ ತಮ್ಮ ಒಪ್ಪಿಗೆ ಪತ್ರ ಹಾಗೂ ಭದ್ರತೆಗಾಗಿ ಆಸ್ತಿಯ ಉತಾರ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಶರತ್ತು ೪ನೇದ್ದನ್ನು ಸ್ಪಷ್ಟವಾಗಿ . ಉಲ್ಲಂಘಿಸಿದ್ದು , ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದಾಗ್ಯೂ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ.
ಟೆಂಡರ ಪ್ರಕ್ರಿಯೆ ಮುಕ್ತಾಯವಾಗಿ ೩ ತಿಂಗಳುಗಳು ಗತಿಸುತ್ತಾ ಬಂದರು. ಶರಣಪ್ಪ ಮಾಳಗಿ ಈವರೆಗೂ ನಗರಸಭೆಗೆ ಯಾವುದೇ ಸಂತೆ ಶುಲ್ಕದ ಹರಾಜಿನ ಹಣವನ್ನು ಭರಣಾ ಮಾಡದೇ ಕಾನೂನುಬಾಹಿರವಾಗಿ ಇವತ್ತಿಗೂ ಸಂತೆ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಪೌರಾಯುಕ್ತರಿಗೆ ಮತ್ತು ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಾಗ್ಯೂ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಇವರು ಬಿಡ್ಡರ ಮಾಳಗಿ ಇವರ ಸಂಬಂಧಿಕರು ಇರುವುದರಿಂದ ನಗರಸಭೆ ಅಧ್ಯಕ್ಷರು ಪೌರಾಯುಕ್ತರ ಮೇಲೆ ಪ್ರಭಾವ ಬೀರಿ ಯಾವುದೇ ಕ್ರಮ ಜರುಗಿಸದಂತೆ ನೋಡಿಕೊಂಡಿ ದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ನನ್ನಿಂದ ತಪ್ಪಾಗಿದ್ದರೇ ನಾಳೆಯೇ ಅಧ್ಯಕ್ಷಸ್ಥಾನ-ಸದಸ್ಯತ್ವಕ್ಕೆ ರಾಜೀನಾಮೆ
ಹಾವೇರಿ ಸಂತೆ ಶುಲ್ಕ ಟೆಂಡರ್‌ಗೂ ನನಗೂ ಯಾವುದೇ ಸಂಬಂಧವೇ ಇಲ್ಲ, ಮೇಲಾಗಿ‌ಮಾಳಗಿ ಎನ್ನುವ ಅಡ್ಡಹೆಸರಿನವರು ಸಾಕಷ್ಟು ಜನರಿದ್ದಾರೆ. ಸಂತೆ ಶುಲ್ಕ ಟೆಂಡ‌ರ್ ಪಡೆದಿರುವ ಶರಣಪ್ಪ ಮಾಳಗಿ ನನಗೆ ದೂರದಸಂಬಂಧಿಯಾಗಿದ್ದಾರೆ. ನನ್ನ ಮೇಲೆ ಮಾಜಿ ನಗರಸಭಾ ಸದಸ್ಯ ವೆಂಕಟೇಶ ಇಟಗಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸಂತೆ ಶುಲ್ಕ ಟೆಂಡರ್ ಪ್ರಕ್ರಿಯೆ ನಡೆಸುವವರು ನಗರಸಭೆಯ ಅಧಿಕಾರಿಗಳು, ಅವರು ನಿಯಮಗಳನ್ನು ಪಾಲಿಸಬೇಕು. ಇದಕ್ಕೂ ನನಗೂ ಸಂಬಂಧವಿಲ್ಲ. ನನ್ನಿಂದ ತಪ್ಪಾಗಿದ್ದರೇ ನಾಳೆಯೇ ಅಧ್ಯಕ್ಷ ಸ್ಥಾನಕ್ಕೆ-ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ನಗರಸಭೆಯಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here

Subscribe

spot_imgspot_img

Popular

 

 

ಸಂತೆ ಶುಲ್ಕ ಟೆಂಡ‌ರ್ ನಲ್ಲಿ ನಿಯಮ ಉಲ್ಲಂಘನೆ- ಹಾವೇರಿ ಪ್ರಥಮ ಪ್ರಜೆಯ ಸದಸ್ಯತ್ವ ರದ್ದತಿಗೆ ಮಾಜಿ ಸದಸ್ಯಇಟಗಿ ಒತ್ತಾಯ
ಹಾವೇರಿ : ಇಲ್ಲಿನ . ನಗರಸಭೆ ವ್ಯಾಪ್ತಿಯ ೨೦೨೫-೨೬ನೇ ಸಾಲಿನ ೧೨ ತಿಂಗಳ ಅವಧಿಯ ದೈನಂದಿನ ಮತ್ತು ವಾರದ ಸಂತೆ ನೆಲಬಾಡಿಗೆ ಶುಲ್ಕ ಹಾಗೂ ಬೈಲು ಜಾಗ ಅಂಗಡಿಗಳಿಂದ ನೆಲ ಸವಕಳಿ ಶುಲ್ಕ ವಸೂಲಿಗೆ ಕರೆಯಲಾಗಿದ್ದ ಟೆಂಡರ್
ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರ ಮೇಲೆ ಕ್ರಮ ಜರುಗಿಸಿ ಅವರ ಸದಸ್ಯತ್ವ ರದ್ದುಗೊಳಿಸುವಂತೆ ನಗರಸಭೆಯ ಮಾಜಿ ಸದಸ್ಯ ವೆಂಕಂಟೇಶ ಇಟಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಶುಕ್ರವಾರ ಮನವಿ ಅರ್ಪಿಸಿದ್ದಾರೆ.
ಸಂತೆ ಶುಲ್ಕ ವಸೂಲಾತಿಗಾಗಿ
ಮಾ. ೨೭ರಂದು ಬೆಳಿಗ್ಗೆ ೧೦ ಗಂಟೆಗೆ ನಡೆದ ಹರಾಜಿನಲ್ಲಿ ಯಶಸ್ವಿ ಟೆಂಡರದಾರ ಶರಣಪ್ಪ ಮಾಳಗಿ ನಿಯಮಾನುಸಾರ ನಡೆದುಕೊಳ್ಳದೇ ಇದ್ದಾಗ್ಯೂ ಕಾನೂನು ಬಾಹಿರವಾಗಿ ಸದರಿಯವನಿಗೆ ಸಂತೆ ಶುಲ್ಕ ವಸೂಲಿ ಮಾಡಲು ಅನುಮತಿಸಿ ಅವಕಾಶ ನೀಡಿದ್ದು, ಶರಣಪ್ಪ ಶಶಿಕಲಾ ಮಾಳಗಿ ಇವರ ಹತ್ತಿರದ ಸಂಬಂಧಿಕರಾಗಿದ್ದು, ನಗರಸಭೆ ಅಧ್ಯಕ್ಷ ರ ಬಗ್ಗೆ ಹಾಗೂ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಶಶಿಕಲಾ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಮನವಿಯಲ್ಲಿ ಇಟಗಿ ಆಗ್ರಹಿಸಿದ್ದಾರೆ.
ಸಂತೆ ಶುಲ್ಕ ವಸೂಲಾತಿಗಾಗಿ ನಡೆದ ಬಹಿರಂಗ ಹರಾಜಿನಲ್ಲಿ
ವೆಂಕಟೇಶ ಇಟಗಿ ಸಹ ೧ಲಕ್ಷರೂ ಆರಂಭಿಕ ಶುಲ್ಕವನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಒಟ್ಟು ೯ ಜನ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜು ಪ್ರಕ್ರಿಯೆ ಕೊನೆಗೊಳ್ಳುವುದರೊಳಗಾಗಿ ಶರಣಪ್ಪ ಮಾಳಗಿ ಇವರು ಅತೀ ಹೆಚ್ಚು ಅಂದರೆ ೨೯ಲಕ್ಷರೂ ಗಳಿಗೆ ಹರಾಜು ಕೂಗಿದ್ದರಿಂದ ಶರಣಪ್ಪ ಮಾಳಗಿ ಇವರು ಟೆಂಡರದಾರನಾಗಿ ಹೊರಹೊಮ್ಮಿದ್ದು, ಇಟಗಿ ೨ನೇ ಅತೀ ಹೆಚ್ಚು ೨೮.೬೦ ಯಶಸ್ವಿ
ಲಕ್ಷರೂ ಹರಾಜು ಕೂಗಿ ೨ನೇ ಅತೀ ಹೆಚ್ಚು ಹರಾಜು ಕೂಗಿದ ಬಿಡ್ಡದಾರನಾಗಿದ್ದರು.
ನಗರಸಭೆ ಮಾ.೧೩ ರಂದು ಹೊರಡಿಸಿದ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಷರತ್ತಿನ ಪೈಕಿ ಷರತ್ತು ೪ರ ಪ್ರಕಾರ ಮಂಜೂರಾದ ದಿನದಂದು ಹರಾಜು ಮೊತ್ತದ ಅರ್ಧ ಶೇಕಡಾ ೫೦% ಭಾಗದಷ್ಟು ಹಣವನ್ನು ಪಾವತಿಮಾಡಿ ರಶೀದಿ ಪಡೆಯುವುದು ಮತ್ತು ಉಳಿದ ಅರ್ಧ ಹಣವನ್ನು ೧೫ ದಿನಗಳೊಳಗಾಗಿ ಭರಣಾ‌ ಮಾಡತಕ್ಕದ್ದು ಎಂದು ಷರತ್ತು ವಿಧಿಸಿದ್ದು, ಹರಾಜು ಆದ ೨೪ ಗಂಟೆಯ ನಂತರ ೨೦೦/-ಗಳ ಛಾಪಾಕಾಗದದ ಮೇಲೆ ತಮ್ಮ ಒಪ್ಪಿಗೆ ಪತ್ರ ಹಾಗೂ ಭದ್ರತೆಗಾಗಿ ಆಸ್ತಿಯ ಉತಾರ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಶರತ್ತು ೪ನೇದ್ದನ್ನು ಸ್ಪಷ್ಟವಾಗಿ . ಉಲ್ಲಂಘಿಸಿದ್ದು , ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದಾಗ್ಯೂ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ.
ಟೆಂಡರ ಪ್ರಕ್ರಿಯೆ ಮುಕ್ತಾಯವಾಗಿ ೩ ತಿಂಗಳುಗಳು ಗತಿಸುತ್ತಾ ಬಂದರು. ಶರಣಪ್ಪ ಮಾಳಗಿ ಈವರೆಗೂ ನಗರಸಭೆಗೆ ಯಾವುದೇ ಸಂತೆ ಶುಲ್ಕದ ಹರಾಜಿನ ಹಣವನ್ನು ಭರಣಾ ಮಾಡದೇ ಕಾನೂನುಬಾಹಿರವಾಗಿ ಇವತ್ತಿಗೂ ಸಂತೆ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಪೌರಾಯುಕ್ತರಿಗೆ ಮತ್ತು ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಾಗ್ಯೂ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಇವರು ಬಿಡ್ಡರ ಮಾಳಗಿ ಇವರ ಸಂಬಂಧಿಕರು ಇರುವುದರಿಂದ ನಗರಸಭೆ ಅಧ್ಯಕ್ಷರು ಪೌರಾಯುಕ್ತರ ಮೇಲೆ ಪ್ರಭಾವ ಬೀರಿ ಯಾವುದೇ ಕ್ರಮ ಜರುಗಿಸದಂತೆ ನೋಡಿಕೊಂಡಿ ದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ನನ್ನಿಂದ ತಪ್ಪಾಗಿದ್ದರೇ ನಾಳೆಯೇ ಅಧ್ಯಕ್ಷಸ್ಥಾನ-ಸದಸ್ಯತ್ವಕ್ಕೆ ರಾಜೀನಾಮೆ
ಹಾವೇರಿ ಸಂತೆ ಶುಲ್ಕ ಟೆಂಡರ್‌ಗೂ ನನಗೂ ಯಾವುದೇ ಸಂಬಂಧವೇ ಇಲ್ಲ, ಮೇಲಾಗಿ‌ಮಾಳಗಿ ಎನ್ನುವ ಅಡ್ಡಹೆಸರಿನವರು ಸಾಕಷ್ಟು ಜನರಿದ್ದಾರೆ. ಸಂತೆ ಶುಲ್ಕ ಟೆಂಡ‌ರ್ ಪಡೆದಿರುವ ಶರಣಪ್ಪ ಮಾಳಗಿ ನನಗೆ ದೂರದಸಂಬಂಧಿಯಾಗಿದ್ದಾರೆ. ನನ್ನ ಮೇಲೆ ಮಾಜಿ ನಗರಸಭಾ ಸದಸ್ಯ ವೆಂಕಟೇಶ ಇಟಗಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸಂತೆ ಶುಲ್ಕ ಟೆಂಡರ್ ಪ್ರಕ್ರಿಯೆ ನಡೆಸುವವರು ನಗರಸಭೆಯ ಅಧಿಕಾರಿಗಳು, ಅವರು ನಿಯಮಗಳನ್ನು ಪಾಲಿಸಬೇಕು. ಇದಕ್ಕೂ ನನಗೂ ಸಂಬಂಧವಿಲ್ಲ. ನನ್ನಿಂದ ತಪ್ಪಾಗಿದ್ದರೇ ನಾಳೆಯೇ ಅಧ್ಯಕ್ಷ ಸ್ಥಾನಕ್ಕೆ-ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ನಗರಸಭೆಯಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ ಹಾವೇರಿ:...

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ ಹಾವೇರಿ; ಬಮೂಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ...